Andolana originals

ಕಣ್ಣಾಯಿಸಿದಷ್ಟೂ ವಿಸ್ತಾರ ತೊಣ್ಣೂರು ಕೆರೆ

• ಎಸ್.ನಾಗಸುಂದ‌

ಪಾಂಡವಪುರ ತಾಲ್ಲೂಕಿನ ತೊಂಡನೂರಿನಲ್ಲಿರುವ ಸುಂದರ ಪ್ರವಾಸಿ ತಾಣ ತೊಣ್ಣೂರು ಕೆರೆ. ಈ ಕೆರೆಯು ಯದುಗಿರಿ ಬೆಟ್ಟದ ಬುಡದಲ್ಲಿದೆ. ತೊಣ್ಣೂರು ಕೆರೆಯು ಸುಮಾರು 1000 ವರ್ಷಗಳ ಹಿಂದೆ ಶ್ರೀ ರಾಮಾನುಜಾಚಾರ್ಯ ಅವರ ಆಶಯದಂತೆ 2150 ಎಕರೆ ವಿಶಾಲ ಜಾಗದಲ್ಲಿ ನಿರ್ಮಾಣವಾಗಿದೆ.

ಇದು ಒಂದು ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗವಾದ್ದರಿಂದ ಸಂಜೆಯ ಸೂರ್ಯಾಸ್ಥದ ರಮಣೀಯ ದೃಶ್ಯ ನೋಡಲು, ಮೇಲುಕೋಟೆ, ತೆಂಗಿನಕಲ್ಲು ಬೆಟ್ಟ, ಕುಂತಿಬೆಟ್ಟ ಸುತ್ತಾಡಲು ಸಾಕಷ್ಟು ಜನ ಬರುತ್ತಾರೆ.


ಕೆರೆಯ ಸುತ್ತ ಮುತ್ತ ವೆಂಕಟರಮಣ, ನಂಬಿ ನಾರಾಯಣ, ಪಾರ್ಥಸಾರಥಿ, ವೇಣುಗೋಪಾಲ, ಯೋಗನರಸಿಂಹ ಮತ್ತು ರಾಮಾನುಜಾಚಾರ್ಯರ ದೇವಾಲಯಗಳಿವೆ. ಈ ಕೆರೆಯು ಪಾಂಡವಪುರದಿಂದ 8 ಕಿ.ಮೀ. ದೂರ, ಬೆಂಗಳೂರಿನಿಂದ 130 ಕಿ.
ಮೀ., ಮೇಲುಕೋಟೆಯಿಂದ 25 ಕಿ.ಮೀ. ಹಾಗೂ ಮೈಸೂರಿನಿಂದ 30 ಕಿ.ಮೀ. ದೂರವಿದ್ದು, ಸಾರಿಗೆ ಬಸ್ ಸೌಲಭ್ಯವಿದೆ.

ನೀಲಿ ಜಲದ ಸೌಂದರ್ಯ, ತೊಣ್ಣೂರು ಸರೋವರದ ಸುಂದರವಾದ ಪರಿಸರ ಖುಷಿ ಕೊಡುತ್ತದೆ. ಜೊತೆಗೆ ಇಲ್ಲಿರುವ ಕ್ಷಣಾಂಭಿಕಾ ದೇವಾಲಯದ ಮುಂದೆ ಕಣ್ಣು ಹಾಯಿಸಿದಷ್ಟು ದೂರದ ವರೆಗೆ ಕಾಣುವ ಗದ್ದೆಗಳ ಹಸಿರ ತಂಪು ಇಲ್ಲಿನ ವಿಶೇಷ. ಸರೋವರದ ಪ್ರದೇಶವು ಟಿಪ್ಪು ಗುಹೆಗಳನ್ನು ಒಳಗೊಂಡಿದೆ, ಪದ್ಮಗಿರಿ ಬೆಟ್ಟವು ಆಮೆ ಮಾದರಿಯ ಬಂಡೆಯನ್ನು ಹೊಂದಿದೆ, ರಾಮಾನುಜ ಗಂಗೆ, ಒಂದು ಸಣ್ಣ ಜಲಪಾತ ನೋಡುಗರಿಗೆ ಆಹ್ಲಾದ ನೀಡುತ್ತದೆ.

ಆಂದೋಲನ ಡೆಸ್ಕ್

Recent Posts

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಡಿಕೆಶಿ

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಸದಾಶಿವನಗರದಲ್ಲಿರುವ ತಮ್ಮ…

1 hour ago

80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…

2 hours ago

ಓದುಗರ ಪತ್ರ: ಮಹಿಳಾ ಸಿಬ್ಬಂದಿ ಲಂಚದ ಮಸಿ ಅಂಟಿಸಿಕೊಳ್ಳದಂತೆ ಎಚ್ಚರ ವಹಿಸಬೇಕು

ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…

3 hours ago

ಓದುಗರ ಪತ್ರ: ಅಡಕೆ ಬೆಳೆಗಾರರ ಹಿತವೂ ಮುಖ್ಯವಲ್ಲವೇ?

ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…

3 hours ago

ಓದುಗರ ಪತ್ರ: ಈ ಬಾರಿಯ ದಸರಾ ಉದ್ಘಾಟನೆಗೆ ಹೆಚ್.ಡಿ.ದೇವೇಗೌಡರನ್ನು ಆಯ್ಕೆಮಾಡಲಿ

ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…

3 hours ago

ಮೈಸೂರು ಸ್ವಚ್ಛವಾಗಿಡಲು ಜನರಿಗೆ ಕೆಲ ಅಭ್ಯಾಸ ಅಗತ್ಯ

ಟಿ.ಕೆ.ಹರೀಶ್ ಮನೆ ಮುಂದಿನ ರಸ್ತೆಯ ಕಸ ವಿಲೇವಾರಿಗೆ ನಾಗರಿಕರು ಜಾಗೃತರಾಗಬೇಕು ಮೈಸೂರು ಎಂದರೆ ಕೇವಲ ಒಂದು ನಗರವಲ್ಲ. ಅದು ಕರ್ನಾಟಕದ…

3 hours ago