Andolana originals

ಕಣ್ಣಾಯಿಸಿದಷ್ಟೂ ವಿಸ್ತಾರ ತೊಣ್ಣೂರು ಕೆರೆ

• ಎಸ್.ನಾಗಸುಂದ‌

ಪಾಂಡವಪುರ ತಾಲ್ಲೂಕಿನ ತೊಂಡನೂರಿನಲ್ಲಿರುವ ಸುಂದರ ಪ್ರವಾಸಿ ತಾಣ ತೊಣ್ಣೂರು ಕೆರೆ. ಈ ಕೆರೆಯು ಯದುಗಿರಿ ಬೆಟ್ಟದ ಬುಡದಲ್ಲಿದೆ. ತೊಣ್ಣೂರು ಕೆರೆಯು ಸುಮಾರು 1000 ವರ್ಷಗಳ ಹಿಂದೆ ಶ್ರೀ ರಾಮಾನುಜಾಚಾರ್ಯ ಅವರ ಆಶಯದಂತೆ 2150 ಎಕರೆ ವಿಶಾಲ ಜಾಗದಲ್ಲಿ ನಿರ್ಮಾಣವಾಗಿದೆ.

ಇದು ಒಂದು ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗವಾದ್ದರಿಂದ ಸಂಜೆಯ ಸೂರ್ಯಾಸ್ಥದ ರಮಣೀಯ ದೃಶ್ಯ ನೋಡಲು, ಮೇಲುಕೋಟೆ, ತೆಂಗಿನಕಲ್ಲು ಬೆಟ್ಟ, ಕುಂತಿಬೆಟ್ಟ ಸುತ್ತಾಡಲು ಸಾಕಷ್ಟು ಜನ ಬರುತ್ತಾರೆ.


ಕೆರೆಯ ಸುತ್ತ ಮುತ್ತ ವೆಂಕಟರಮಣ, ನಂಬಿ ನಾರಾಯಣ, ಪಾರ್ಥಸಾರಥಿ, ವೇಣುಗೋಪಾಲ, ಯೋಗನರಸಿಂಹ ಮತ್ತು ರಾಮಾನುಜಾಚಾರ್ಯರ ದೇವಾಲಯಗಳಿವೆ. ಈ ಕೆರೆಯು ಪಾಂಡವಪುರದಿಂದ 8 ಕಿ.ಮೀ. ದೂರ, ಬೆಂಗಳೂರಿನಿಂದ 130 ಕಿ.
ಮೀ., ಮೇಲುಕೋಟೆಯಿಂದ 25 ಕಿ.ಮೀ. ಹಾಗೂ ಮೈಸೂರಿನಿಂದ 30 ಕಿ.ಮೀ. ದೂರವಿದ್ದು, ಸಾರಿಗೆ ಬಸ್ ಸೌಲಭ್ಯವಿದೆ.

ನೀಲಿ ಜಲದ ಸೌಂದರ್ಯ, ತೊಣ್ಣೂರು ಸರೋವರದ ಸುಂದರವಾದ ಪರಿಸರ ಖುಷಿ ಕೊಡುತ್ತದೆ. ಜೊತೆಗೆ ಇಲ್ಲಿರುವ ಕ್ಷಣಾಂಭಿಕಾ ದೇವಾಲಯದ ಮುಂದೆ ಕಣ್ಣು ಹಾಯಿಸಿದಷ್ಟು ದೂರದ ವರೆಗೆ ಕಾಣುವ ಗದ್ದೆಗಳ ಹಸಿರ ತಂಪು ಇಲ್ಲಿನ ವಿಶೇಷ. ಸರೋವರದ ಪ್ರದೇಶವು ಟಿಪ್ಪು ಗುಹೆಗಳನ್ನು ಒಳಗೊಂಡಿದೆ, ಪದ್ಮಗಿರಿ ಬೆಟ್ಟವು ಆಮೆ ಮಾದರಿಯ ಬಂಡೆಯನ್ನು ಹೊಂದಿದೆ, ರಾಮಾನುಜ ಗಂಗೆ, ಒಂದು ಸಣ್ಣ ಜಲಪಾತ ನೋಡುಗರಿಗೆ ಆಹ್ಲಾದ ನೀಡುತ್ತದೆ.

ಆಂದೋಲನ ಡೆಸ್ಕ್

Recent Posts

ಅಂಗನವಾಡಿಗಳಿಗೆ ೬ ತಿಂಗಳಿಂದ ಬಾರದ ಮೊಟ್ಟೆ ಹಣ!

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…

58 mins ago

‘ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಕ್ರಮಕೈಗೊಳ್ಳಬೇಕು’

ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…

1 hour ago

ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಪರದಾಟ

ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…

1 hour ago

ವರ್ಷಾಂತ್ಯ: ಗರಿಗೆದರದ ಮೈಸೂರು ಪ್ರವಾಸೋದ್ಯಮ

ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…

1 hour ago

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

10 hours ago