ಆತ್ಮಬಲ ಅಸ್ತ್ರದಿಂದ ಬ್ರಿಟಿಷರ ಮಣಿಸಿದ ಗಾಂಧಿ
ಗಾಂಧಿಜಿ ಕಲ್ಪನೆಯ ಸರ್ವೋದಯ ಸಮಾಜದಲ್ಲಿ ಎಲ್ಲರೂ ಸ್ವತಂತ್ರವಾಗಿರುತ್ತಾರೆ. ಇಲ್ಲಿ ಜಾತಿ, ವರ್ಗ, ಶೋಷಣೆ ಯಾವುದೂ ಇರುವುದಿಲ್ಲ. ಎಲ್ಲರೂ ಸಮಾನ ಅವಕಾಶ ತತ್ವಕ್ಕನುಗುಣವಾಗಿ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಾರೆ. ಈ ಸಮಾಜದಲ್ಲಿ ಮನುಷ್ಯ ಸಮಾಜದ ಕೇಂದ್ರ ಬಿಂದುವಾಗಿದ್ದು, ಸಮಾಜವು ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿಗೆ ಬದಲಾಗಿ ಸಾಂಕ ಹಿತಾಸಕ್ತಿಯನ್ನು ಗುರಿಯಲ್ಲಿಟ್ಟುಕೊಂಡು ನಡೆಯುತ್ತದೆ. ಸರ್ವೋದಯ ಸಮಾಜದಲ್ಲಿ ನೈತಿಕ ಮಾನವನ ನಿರ್ಮಾಣ ಸರ್ವೋದಯದ ಮುಖ್ಯ ಗುರಿಯಾಗಿದೆ.
ಮಹಾತ್ಮ ಗಾಂಧಿಜಿಯವರು ಭಾರತದ ಸ್ವಾತಂತ್ರ್ಯ ಚಳವಳಿಯ ಅಗ್ರಮಾನ್ಯ ನಾಯಕರು. ೧೯೧೯ರಿಂದ ೧೯೪೭ರವರೆಗಿನ ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕತ್ವವನ್ನು ಗಾಂಧಿಜಿ ವಹಿಸಿದ್ದರು. ಹೀಗಾಗಿ, ಆ ಕಾಲವನ್ನು ಗಾಂಧಿ ಯುಗ ಎಂದು ಕರೆಯಲಾಗಿದೆ. ಸಶಸ ಬಲದಿಂದ ರಾಜ್ಯ ಕಟ್ಟಿದ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಸತ್ಯಾಗ್ರಹ ಎಂಬ ಆತ್ಮಬಲದಿಂದ ಮಣಿಸಿದ ಧಿರೋತ್ತಮರು ಗಾಂಧಿಜಿ. ಅವರ ಜೀವನದ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದಿನ ಪೀಳಿಗೆ ಮುನ್ನಡೆಯಬೇಕಿದೆ.
ಸಂಜನ ಕೆ.ಎನ್., ೯ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಕಲ್ಲಹಳ್ಳಿ, ಮಂಡ್ಯ(ದಕ್ಷಿಣ ವಲಯ)
ಗಾಂಧಿಜಿ ಆದರ್ಶಗಳ ಪ್ರಸ್ತುತತೆ ಹೆಚ್ಚಾಗಿದೆ:
ನನ್ನ ದೃಷ್ಟಿಯಲ್ಲಿ ಗಾಂಧಿಜಿಯವರ ಮಹತ್ವ ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಲ್ಲ. ಅವರು ಸ್ವಚ್ಛತೆ, ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ, ಅಸ್ಪೃಶ್ಯತೆ ನಿರ್ಮೂಲನೆ, ಧಾರ್ಮಿಕ ಸಾಮರಸ್ಯ ಹಾಗೂ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದರು. ಅವರ ಸರಳ ಜೀವನ ಮತ್ತು ಉನ್ನತ ಚಿಂತನೆಗಳು ಪ್ರತಿಯೊಬ್ಬರಿಗೂ ಆದರ್ಶವಾಗಿವೆ. ನಮಗೆ ಕಷ್ಟ ಬಂದಾಗಲೂ ಸತ್ಯದ ಮಾರ್ಗವನ್ನು ಬಿಡಬಾರದು ಎಂಬ ಪಾಠವನ್ನು ಅವರು ಕಲಿಸಿದ್ದಾರೆ. ಇಂದಿನ ಸಮಾಜದಲ್ಲಿ ಗಾಂಧೀಜಿಯವರ ಆದರ್ಶಗಳ ಅಗತ್ಯ ಇನ್ನಷ್ಟು ಹೆಚ್ಚಾಗಿದೆ. ನನ್ನ ಕಣ್ಣಲ್ಲಿ ಗಾಂಧಿಜಿ ಎಂದರೆ ಭಾರತದ ಹೆಮ್ಮೆ, ವಿಶ್ವದ ಶಾಂತಿಯ ಸಂಕೇತ ಮತ್ತು ಮಾನವೀಯ ಮೌಲ್ಯಗಳ ಶಾಶ್ವತ ಆದರ್ಶ. ಅವರ ಜೀವನ ಮತ್ತು ತತ್ವಗಳು ಎಂದೆಂದಿಗೂ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ದಾರಿದೀಪವಾಗಿವೆ.
ತನೋಜ್ ಎನ್., ೯ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಹಾಲಹಳ್ಳಿ ಬಡಾವಣೆ, ಮಂಡ್ಯ
ಉತ್ತಮ ಜೀವನ ಮೌಲ್ಯ ಕಲಿಸಿದ ಗಾಂಧೀಜಿ: ಮಹಾತ್ಮ ಗಾಂಧೀಜಿ ಅವರ ವ್ಯಕ್ತಿತ್ವವು ಸರಳತೆ, ವಿನಯ, ಸಹನೆ, ಕರುಣೆ ಮತ್ತು ಸೇವಾ ಮನೋಭಾವದಿಂದ ಕೂಡಿತ್ತು. ಅವರು ಕೇವಲ ರಾಜಕೀಯ ನಾಯಕರಾಗಿರದೇ ಸಮಾಜ ಸುಧಾರಕ, ಚಿಂತಕ, ಲೇಖಕ ಹಾಗೂ ಮಹಾನ್ ಮಾನವತಾವಾದಿಯಾಗಿದ್ದರು. ಅವರ ಆದರ್ಶಗಳು ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದು, ಯುವಜನತೆ ಅವರ ಜೀವನವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕಾಗಿದೆ. ಮಹಾತ್ಮ ಗಾಂಧೀಜಿ ಅವರು ಭಾರತದ ಇತಿಹಾಸದಲ್ಲಿ ಅಜರಾಮರ ವ್ಯಕ್ತಿಯಾಗಿದ್ದಾರೆ. ಅವರು ನಮಗೆ ಸ್ವಾತಂತ್ರ್ಯವನ್ನು ಮಾತ್ರ ತಂದುಕೊಡಲಿಲ್ಲ. ಉತ್ತಮ ಜೀವನ ನಡೆಸುವ ಮೌಲ್ಯಗಳನ್ನು ಕಲಿಸಿದರು. ಅವರ ಜೀವನವು ಸತ್ಯ, ಅಹಿಂಸೆ, ತ್ಯಾಗ, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶ ಪ್ರೇಮದ ಜೀವಂತ ಉದಾಹರಣೆಯಾಗಿದೆ. ಅವರು ತೋರಿಸಿದ ಮಾರ್ಗವು ಇಂದಿಗೂ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಪ್ರೇರಣೆಯಾಗಿದೆ.
ಅನುಷ ಆರ್., ೧೦ನೇ ತರಗತಿ, ಜೆಎಸ್ಎಸ್ ಪ್ರೌಢಶಾಲೆ, ರಾಘವೇಂದ್ರ ನಗರ, ಮೈಸೂರು
ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…
ರೋಹಿಣಿ ಸಂಗಪ್ಪ ದಳವಾಯಿ ಮೈಸೂರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಜನಸೇವಕಿ ಯಶೋಧರಾ ದಾಸಪ್ಪ. ತಮ್ಮ ದಿಟ್ಟ ನಿಲುವು,…
ನಲವತ್ತು ವರುಷಗಳ ಕೆಳಗೆ ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಈಗ ಇರುವುದಕ್ಕಿಂತ ಬಹಳ ಕಡಿಮೆಯಾಗಿತ್ತು. ತಾವು ಮದುವೆಯಾದವರಾಗಿದ್ದರೂ, ಬ್ರಹ್ಮಚಾರಿಗಳೆಂದು ನಟಿಸುವುದು…
ಭೇರ್ಯ ಮಹೇಶ್ ಮಳೆ ಅಭಾವದಿಂದ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ, ರೈತರಿಗೆ ಸಾಕಷ್ಟು ನಷ್ಟ ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ…
ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…