Andolana originals

ಕಪಿಲೆಯಲ್ಲಿ ತೇಲುವ ತೆಪ್ಪ ಅತ್ಯಾಕರ್ಷಕ ವಿನೂತನ

ಎಸ್.ಎಸ್.ಭಟ್

ನಂಜನಗೂಡು: ಪ್ರತಿ ವರ್ಷ ಸುತ್ತೂರು ಜಾತ್ರೆಯಲ್ಲಿ ಹೊಸದನ್ನು ಪರಿಚಯಿಸುವ ಸುತ್ತೂರು ಶ್ರೀ ಗಳು ಈ ಬಾರಿ ಶಿವರಾತ್ರೀಶ್ವರ ಜಯಂತಿ ಮಹೋತ್ಸವದ ತೆಪ್ಪೋತ್ಸವಕ್ಕೆಂದು ಅತ್ಯಾಕರ್ಷಕವಾದ ವಿನೂತನ ತೆಪ್ಪವನ್ನು ಸಿದ್ಧಪಡಿಸಿದ್ದು, ಸೋಮವಾರ ಜನಸಾಗರದ ಮಧ್ಯೆ ಈ ವಿನೂತನ ತೆಪ್ಪ ಕಪಿಲಾ ನದಿಯಲ್ಲಿ ಸಂಚರಿಸಲಿದೆ.

ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸೂಚನೆಯ ಮೇರೆಗೆ ಈ ತೆಪ್ಪವನ್ನು ಉತ್ತರ ಕನ್ನಡದ ಮುರುಡೇಶ್ವರದ ಶಿಲ್ಪಿ ಗಂಗಾಧರ ಸಿದ್ಧಪಡಿಸಿದ್ದು ಅದು ಸೋಮವಾರ ಕಪಿಲೆಯಲ್ಲಿ ತೇಲುವ ಮೂಲಕ ಪ್ರೇಕ್ಷಕರ ಕಣ್ತುಂಬಲಿದೆ.

೨೫ ಎಚ್‌ಪಿ ಮೋಟಾರ್‌ನಿಂದ ಚಾಲನೆಗೊಳ್ಳುವ ಈ ತೆಪ್ಪದ ನಾಲ್ಕು ದಿಕ್ಕುಗಳಲ್ಲಿನ ಶಿಲ್ಪಕಲಾ ಕೆತ್ತನೆಗಳಿಂದ ಅತ್ಯಾಕರ್ಷಕ ವಾಗಿದೆ. ಈ ಸುಂದರವಾದ ಈ ತೆಪ್ಪದಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಿಗೆ ತಲಾ ನಾಲ್ಕರಂತೆ ಹದಿನಾರು ನಂದಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಶಿವರಾತ್ರೀಶ್ವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವ ನಡೆಸುವ ಈ ತೇಲುವ ದೇವಾಲಯದಲ್ಲಿ ಸುಮಾರು ೨೦ ಜನರು ನಿಂತುಕೊಳ್ಳಲು ಸ್ಥಳಾವಕಾಶವಿದೆ.

” ೧೭ ಅಡಿ ಎತ್ತರದ ೨೦+೧೮ ಅಡಿ ಅಗಲದ ಈ ತೆಪ್ಪವನ್ನು ೨೫ಕ್ಕೂ ಹೆಚ್ಚು ಅಶ್ವಶಕ್ತಿಯ ಮೋಟಾರ್ ನಿರ್ವಹಿಸುತ್ತಿದ್ದು, ಸುತ್ತೂರು  ಜಾತ್ರೆಯ ಅತ್ಯಂತ ಜನಾಕರ್ಷಣೆಯ ತೆಪ್ಪವಾಗಿ ಕಂಗೊಳಿಸಲಿದೆ.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜನತಂತ್ರಕೆ ಮಾರಕ!

ಜನತಂತ್ರಕೆ ಮಾರಕ! ದೊರಕಬೇಕು ಪ್ರತಿಪ್ರಜೆಗೂ ಘನತೆಯ ಬದುಕು ಸಮಾನ ಅವಕಾಶ ಅದುವೇ ಜನತಂತ್ರದ ಚೆಲುವು! ಕಡಿಮೆಯಾಗಲೇಬೇಕು ಬಡವ-ಬಲ್ಲಿದನ ಅಂತರ ಜನತಂತ್ರಕೆ…

41 mins ago

ಓದುಗರ ಪತ್ರ: ದೇವಸ್ಥಾನ ಅಭಿವೃದ್ಧಿಪಡಿಸಿ

ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯ ಇತಿಹಾಸ ಪ್ರಸಿದ್ಧವಾಗಿದ್ದು, ಸೂಕ್ತ ನಿರ್ವಹಣೆಯಿಲ್ಲದೇ ದೇವಾಲಯದ ಸುತ್ತಲೂ ಗಿಡ ಗಂಟಿಗಳು…

43 mins ago

ಓದುಗರ ಪತ್ರ: ಮೌಲ್ಯಯುತ ರಾಜಕಾರಣಿ ಭೀಮಣ್ಣ ಖಂಡ್ರೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರೂ, ಮಾಜಿ ಸಚಿವರೂ ಆದ ಹಿರಿಯ ರಾಜಕೀಯ ಮುತ್ಸದ್ದಿ, ಭೀಮಣ್ಣ ಖಂಡ್ರೆಯವರ…

45 mins ago

ಓದುಗರ ಪತ್ರ: ಕುಕ್ಕರಹಳ್ಳಿ ಕೆರೆಯ ಬಳಿ ವಿದ್ಯುತ್ ದೀಪ ಬೆಳಗಲಿ

ಮೈಸೂರು ವಿಶ್ವವಿದ್ಯಾನಿಲಯದ ಒಡೆತನದಲ್ಲಿರುವ ಕುಕ್ಕರಹಳ್ಳಿ ಕೆರೆ ಪರಿಸರದಲ್ಲಿ ವಾಯುವಿಹಾರ ಮಾಡುವುದಕ್ಕೆ ಪ್ರತಿದಿನ ನೂರಾರು ಜನರು ಬರುತ್ತಾರೆ. ಕೆಲವು ವಿಶೇಷ ದಿನಗಳಲ್ಲಿ…

47 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಯುಡಿಎಫ್, ಎಲ್ ಡಿಎಫ್ ಜತೆ ಬಿಜೆಪಿ ಓಡಲಿದೆಯೇ?

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಇದು ಧರ್ಮರಾಜಕಾರಣದ ಕಾಲ. ಧರ್ಮ ಮತ್ತು ರಾಜಕಾರಣ ಬೇರೆ ಬೇರೆ. ಇವೆರಡು ಪ್ರತ್ಯೇಕವಾಗಿರಬೇಕು ಎನ್ನುವುದು…

50 mins ago

ಮಡಿಕೇರಿ ನಗರದಲ್ಲಿಲ್ಲ ಸುಸಜ್ಜಿತ ಫುಟ್‌ಪಾತ್‌ ವ್ಯವಸ್ಥೆ

ವಾಹನಗಳು, ಪಾದಚಾರಿಗಳು ಒಂದೇ ಪಥದಲ್ಲಿ ಓಡಾಡುವ ಪರಿಸ್ಥಿತಿ; ಅಗಲೀಕರಣಕ್ಕೆ ಜಾಗದ್ದೇ  ಸಮಸ್ಯೆ ಮಡಿಕೇರಿ: ಮಡಿಕೇರಿ ನಗರದಲ್ಲಿ ಪಾರ್ಕಿಂಗ್ ಸ್ಥಳವಿಲ್ಲದೇ ನಲುಗುತ್ತಿರುವ…

56 mins ago