Andolana originals

ಆಟೋಟದಲ್ಲಿ ಪಾಲ್ಗೊಂಡ ಮಕ್ಕಳಿಗೆ ಊಟವೇ ಇಲ್ಲ!

ನಂಜನಗೂಡು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಗಮಿಸಿದ ಮಕ್ಕಳ ಪರದಾಟ

ಎಸ್.ಎಸ್.ಭಟ್‌ 

ನಂಜನಗೂಡು: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಊಟವೂ ಇಲ್ಲ, ಕುಡಿಯಲು ನೀರೂ ಇಲ್ಲ. ಅವರು ಹಸಿದುಕೊಂಡೇ ಆಟವಾಡಬೇಕು, ಇಲ್ಲವೇ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇಂಥ ಸನ್ನಿವೇಶ ಕಂಡುಬಂದಿದ್ದು ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ. ಮಕ್ಕಳಿಗೆ ಊಟದ ವ್ಯವಸ್ಥೆ ಇಲ್ಲವಾದರೂ ಅವರನ್ನು ಕರೆ ತಂದ ಶಿಕ್ಷಕರಿಗೆ ಮಾತ್ರ ಉಟದ ವ್ಯವಸ್ಥೆ ಇತ್ತು.

ಹೋಬಳಿ ಮಟ್ಟದಲ್ಲಿ ವಿಜೇತರಾದ ಮಕ್ಕಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲು ಮಂಗಳವಾರ ನಗರದ ಬಾಲಕರ ಕಿರಿಯ ಕಾಲೇಜು, ರೋಟರಿ ಶಾಲೆ, ಕಾರ್ಮೆಲ್ ಶಾಲೆ, ಯುನಿಟಿ ಶಾಲೆ ಹಾಗೂ ಬಸವನಪುರದ ಶಾಲೆಗಳ ಆವರಣದಲ್ಲಿ ವಾಲಿಬಾಲ್, ಥ್ರೋಬಾಲ್, ಟೆನ್ನಿಸ್, ಖೋ ಖೋ,  ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.

ಐದು ಕಡೆ ನಡೆದ ಪಂದ್ಯಾವಳಿಗಳಲ್ಲಿ ಹೋಬಳಿಯನ್ನು ಪ್ರತಿನಿಧಿಸುವ ಸುಮಾರು ೧,೨೫೦ಕ್ಕೂ ಹೆಚ್ಚು ಕ್ರೀಡಾ ಪ್ರತಿಭೆಗಳು ಹಾಗೂ ೩೦೦ ಜನ ಶಿಕ್ಷಕರು ಭಾಗಿಯಾಗಿ ಪಂದ್ಯಾವಳಿಯನ್ನು ನಡೆಸಿದರು. ಹೋಬಳಿಯಿಂದ ಗೆದ್ದು ತಾಲ್ಲೂಕು ಮಟ್ಟದಲ್ಲಿ ಆಡವಾಡಲು ಬಂದ ೭ರಿಂದ ೧೪ ವರ್ಷ ವಯಸ್ಸಿನ ಈ ಚಿಣ್ಣರು ಅನ್ನ, ನೀರಿಲ್ಲದೆ ಬಸವಳಿದಿದ್ದು ಮಾತ್ರ ಶಿಕ್ಷಣ ಇಲಾಖೆಯ ದುಸ್ಥಿತಿಗೆ ಸಾಕ್ಷಿಯಾದಂತಿತ್ತು.

ಮಕ್ಕಳಿಗೆ ಊಟದ ವ್ಯವಸ್ಥೆ ಮಾಡದ ತಾಲ್ಲೂಕು ಶಿಕ್ಷಣ ಇಲಾಖೆ ನಗರದ ಪ್ರತಿಭಾವಂತ ಬಾಲಕಿಯರ ವಸತಿ ಶಾಲೆಯಲ್ಲಿ ಕ್ರೀಡಾ ಶಿಕ್ಷಕರಿಗಾಗಿ ೩೫೦ ಜನರಿಗೆ ೪೦ ಕೆಜಿ ಅಕ್ಕಿಯಲ್ಲಿ ಆಹಾರ ಸಿದ್ಧಪಡಿಸಿ ತರಿಸಿಕೊಂಡಿದ್ದು ಮಾತ್ರ ಸೋಜಿಗವಾಗಿತ್ತು. ತಾಲ್ಲೂಕನ್ನು ಪ್ರತಿನಿಧಿಸುವವರಿಗೆ ಕನಿಷ್ಠ ಊಟದ ವ್ಯವಸ್ಥೆಯಾದರೂ ಬೇಡವೇ? ಎಂದು ಹೆಸರು ಹೇಳಲು ಇಚ್ಛಿಸದ ದೈಹಿಕ ಶಿಕ್ಷಕರೊಬ್ಬರು ಪ್ರಶ್ನಿಸಿದರು.

ಮಕ್ಕಳ ಖಾತೆಗೆ ಹಣ ಹಾಕುವವರು ಯಾರು? ಮಕ್ಕಳಿಗೆ ಹಣ ನೀಡುವುದಾದರೆ ಶಿಕ್ಷಕರಿಗೂ ಟಿಎ, ಡಿಎ ಇರ ಬೇಕಲ್ಲ ಎಂದು ಹೇಳಿದ್ದಕ್ಕೆ, ಅವರಿಗೂ ನೀಡಲಾಗುತ್ತದೆ ಎಂದ ಬಿಇಒ, ಹಾಗಾದರೆ ಮಕ್ಕಳಿಗಿಲ್ಲದ ಊಟದ ವ್ಯವಸ್ಥೆ ಸರ್ಕಾರಿ ವಸತಿ ಶಾಲೆಯಲ್ಲಿ ಮಾಡಿದ್ದು ಏಕೆ ಎಂದಾಗ ಮಹೇಶ ಮೌನಕ್ಕೆ ಶರಣಾದರು.

” ಬೆಳಗಿನ ಜಾವವೇ ಬಂದೆವು. ಊಟ ತಿಂಡಿ ಏನೂ ಇಲ್ಲ. ಇಲ್ಲಿ ಊಟದ ವ್ಯವಸ್ಥೆ ಇರುತ್ತದೆ ಎಂದು ಖಾಲಿ ಜೇಬಿನಲ್ಲಿ ಬಂದೆವು. ಈಗ ಆಟದಲ್ಲೂ ಸೋತು ಹಸಿದ ಒಡಲಿನಲ್ಲೇ ಊರಿಗೆ ತಲುಪಬೇಕಾಗಿದೆ.”

-ಗ್ರಾಮೀಣ ಪ್ರದೇಶದ ಮಕ್ಕಳು

” ಶಿಕ್ಷಣ ಇಲಾಖೆಯಲ್ಲಿ ಇದಕ್ಕೆ ಯಾವುದೇ ಹಣವಿಲ್ಲ. ಕ್ರೀಡೆಯಾಡಲು ಬಂದ ಪ್ರತಿ ಮಕ್ಕಳ ಖಾತೆಗೆ ಬಸ್ ಚಾರ್ಜ್ ಸಹಿತ ತಲಾ ೫೦ ರೂ. ಪಾವತಿಸುವುದರಿಂದ ಅವರನ್ನು ಕರೆ ತಂದ ಶಿಕ್ಷಕರೇ ಮಕ್ಕಳ ಊಟ-ತಿಂಡಿ ವ್ಯವಸ್ಥೆ ನೋಡಿಕೊಳ್ಳಬೇಕು.”

-ಮಹೇಶ, ಕ್ಷೇತ್ರ ಶಿಕ್ಷಣಾಧಿಕಾರಿ

ಆಂದೋಲನ ಡೆಸ್ಕ್

Recent Posts

ಜಲಜೀವನ್‌ ಮಿಷನ್‌ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ

ಮಂಡ್ಯ: ಜಲಜೀವನ್‌ ಮಿಷನ್‌ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ…

9 mins ago

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಮಕ್ಕಳ ಮನಸ್ಸು ಗೆದ್ದ “ಸೂರ್ಯ–ಚಂದ್ರ” ಮಕ್ಕಳ ನಾಟಕ

ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ”…

19 mins ago

ಜನವರಿ.16ರಂದು ದೆಹಲಿಗೆ ಹೋಗುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಜನವರಿ.16ರಂದು ನಾನು ದೆಹಲಿಗೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ…

1 hour ago

ಥೈಲ್ಯಾಂಡ್‌ನಲ್ಲಿ ರೈಲಿನ ಮೇಲೆ ಬೃಹತ್‌ ಕ್ರೇನ್‌ ಬಿದ್ದು 22 ಪ್ರಯಾಣಿಕರು ಸಾವು

ಥೈಲ್ಯಾಂಡ್‌ನ ಈಶಾನ್ಯದಲ್ಲಿ ಕ್ರೇನ್‌ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು…

3 hours ago

ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಹಾಸನ: ಅಂಗಡಿಯಲ್ಲಿ ವ್ಯಾಪಾರ ಮಾಡುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಪ್ರವೀಣ್(‌45)…

3 hours ago

ಮಂಡ್ಯ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಯೋಧ ಸಾವು

ಮಂಡ್ಯ: ಮಹಾರಾಷ್ಟ್ರ ರಾಜ್ಯದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.…

3 hours ago