Andolana originals

ಹರಾಜಾಗಿದ್ದ ನಿವೇಶನ ಮತ್ತೊಬ್ಬರಿಗೆ ಮಂಜೂರು

ಕೆ. ಬಿ. ರಮೇಶನಾಯಕ
ಮೈಸೂರು: ೫೦:೫೦ ಅನುಪಾತದಡಿ ನಿವೇಶನ ಹಂಚಿಕೆ ಹಗರಣದಿಂದ ದೊಡ್ಡ ಸದ್ದು ಮಾಡುತ್ತಿ ರುವ ಮುಡಾದಲ್ಲಿ ಒಂದಿಲ್ಲೊಂದು ಅಕ್ರಮ ಹೊರ ಬರುತ್ತಲೇ ಇದ್ದು, ಇ-ಹರಾಜಿನಲ್ಲಿ ಖರೀದಿಸಿದ್ದ ಮುಡಾ ಕ್ರಯಪತ್ರ ಮಾಡಿಕೊಟ್ಟಿ ದ್ದರೂ, ಮತ್ತೊಬ್ಬರಿಗೆ ಅದನ್ನೇ ಬದಲಿ ನಿವೇಶನ ವನ್ನಾಗಿಯೂ ಮಂಜೂರು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಡಾ ಅಧಿಕಾರಿಗಳ ಕೈ ಚಳಕದಿಂದಾಗಿ ಇಂತಹದೊಂದು ಅಕ್ರಮ ನಡೆದಿದ್ದು, ಒಂದೇ ನಿವೇಶನಕ್ಕಾಗಿ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ದ ಮಾಲೀಕ ಹಾಗೂ ಬದಲಿ ನಿವೇಶನ ವನ್ನಾಗಿಯೂ ಪಡೆದುಕೊಂಡಿರುವ ನಿವೇಶನ ದಾರರು ಹೋರಾಟ ಮಾಡುವಂತಾಗಿದೆ.

ನಗರದ ದಟ್ಟಗಳ್ಳಿಯ ನಿವಾಸಿ ಟಿ. ಪಿ. ಸುಹಾಸ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಽಕಾರವು ನಿರ್ಮಿಸಿರುವ ಲಲಿತಾದ್ರಿಪುರ (ದಕ್ಷಿಣ) ಬಡಾವಣೆಯಲ್ಲಿ ಸಂಖ್ಯೆ ೧೨೮೦ರ ನಿವೇಶನವನ್ನು ೨೦೨೨ರ ಮಾರ್ಚ್ ೧೮ರಂದು ಮುಡಾ ಇ-ಹರಾಜಿ ನಲ್ಲಿ ಭಾಗವಹಿಸಿ ಖರೀದಿಸಿದ್ದರು.

ನಂತರ, ಮುಡಾಕ್ಕೆ ನಿವೇಶನದ ಮೊತ್ತ ೮೨. ೧೭ ಲಕ್ಷ ರೂ. ಪಾವತಿಸಿದ ಮೇಲೆ ೨೦೨೨ ಡಿ. ೨೬ ರಂದು ಕ್ರಯಪತ್ರ ಮಾಡಲಾಗಿದೆ. ಆಯುಕ್ತರು, ವಿಶೇಷ ತಹಸಿಲ್ದಾರ್ ಕ್ರಯಪತ್ರಕ್ಕೆ ಸಹಿ ಮಾಡಿದ ನಂತರ ನಿವೇಶನ ಖಾತಾ, ಕಂದಾಯ ಪತ್ರ ಪಡೆದುಕೊಂಡಿದ್ದಾರೆ.

ನಂತರ, ಸುಹಾಸ್ ನಿವೇಶನದ ದಾಖಲೆಗಳನ್ನು ಹಾಜರುಪಡಿಸಿ ಬ್ಯಾಂಕಿನಲ್ಲಿ ಸಾಲವನ್ನೂ ಪಡೆದಿ ದ್ದಾರೆ. ಈ ವೇಳೆ ಉದ್ಯೋಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ವಾಪಸ್ ಮೈಸೂರಿಗೆ ಬಂದು ನಿವೇಶನ ವನ್ನು ಶುಚಿಗೊಳಿಸಿ ಮನೆ ಕಟ್ಟುವ ಕಾರ್ಯಕ್ಕೆ ಸಿದ್ಧತೆ ಆರಂಭಿಸಿದಾಗಲೇ ಅವರಿಗೆ ಅಚ್ಚರಿ ಕಾದಿತ್ತು. ಇದೇ ಸಂಖ್ಯೆಯ ನಿವೇಶನವನ್ನು ಮುಡಾ ಅಽಕಾರಿಗಳು ಡಾ. ಕುಮಾರ್ ಎಂಬವರಿಗೆ ಬದಲಿ ನಿವೇಶನವ ನ್ನಾಗಿ ಮಂಜೂರು ಮಾಡಿದ್ದಾರೆ.

ಡಾ. ಕುಮಾರ್ ಅವರಿಗೆ ಬೇರೆ ಜಾಗದಲ್ಲಿ ಬದಲಿ ನಿವೇಶನ ಮಂಜೂರು ಮಾಡಿಕೊಡ ಬೇಕಾದ ಅಧಿಕಾರಿಗಳು ೨೦೨೨ರಲ್ಲಿ ಇ-ಹರಾಜಿ ನಲ್ಲಿ ಮಾರಾಟ ಮಾಡಲಾಗಿರುವ ನಿವೇಶನ ಎಂಬುದನ್ನು ಪರಿಶೀಲಿಸದೆ ಕಣ್ಮುಚ್ಚಿ ಕೊಂಡು ೨೦೨೩ ಜೂನ್ ನಲ್ಲಿ ಬದಲಿ ನಿವೇಶನವನ್ನಾಗಿ ನೀಡಿರುವುದರಿಂದ ಈಗ ಇಬ್ಬರೂ ಸಮಸ್ಯೆ ಎದುರಿಸುವಂತಾಗಿದೆ. ಇ-ಹರಾಜಿನಲ್ಲಿ ಖರೀದಿಸಿರುವ ನಿವೇಶನವನ್ನು ತಮಗೆ ಬದಲಿ ನಿವೇಶನವಾಗಿ ಮಂಜೂರಾತಿ ಮಾಡಿಕೊಡಲಾಗಿದ್ದು, ಬೇರೆ ನಿವೇಶನ ಅಲಾಟ್ ಮೆಂಟ್ ಮಾಡಿಸುವಂತೆ ಕುಮಾರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೀಗ ಈ ವಿಚಾರಣೆಯು ನ್ಯಾಯಾಲಯದಲ್ಲಿ ಇದೆ.

ಬ್ಯಾಂಕಿಗೆ ೧೩ ಲಕ್ಷ ರೂ. ಬಡ್ಡಿ: ಇ-ಹರಾಜಿನಲ್ಲಿ ಖರೀದಿ ಮಾಡಲು ೮೨ ಲಕ್ಷ ರೂಪಾಯಿ ಪಾವತಿಸಿರುವ ಟಿ. ಪಿ. ಸುಹಾಸ್ ಅವರು ಎಚ್‌ಡಿಎ-ಸಿ ಬ್ಯಾಂಕಿಗೆ ನಿವೇಶನದ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದುಕೊಂಡಿದ್ದಾರೆ. ಬ್ಯಾಂಕ್ ಸಾಲಕ್ಕೆ ಎರಡು ವರ್ಷಗಳಿಂದ ೧೩ ಲಕ್ಷ ರೂಪಾಯಿ ಬಡ್ಡಿ ಕಟ್ಟಿರುವ ಮಾಲೀಕರಿಗೆ ನಿವೇಶನದ ಗೊಂದಲ ದೊಡ್ಡ ಆತಂಕವನ್ನುಂಟು ಮಾಡಿ ಕೊಟ್ಟಿದೆ. ಡಾ. ಕುಮಾರ್ ಅವರು ನ್ಯಾಯಾಲಯದ ಮೊರೆ ಹೋಗಿರುವ ಕಾರಣ ತಮಗೆ ಕ್ರಯಪತ್ರ ಮಾಡಿಕೊಟ್ಟಿದ್ದರೂ ಮನೆ ಕಟ್ಟಿಸಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ.

 

ಆಂದೋಲನ ಡೆಸ್ಕ್

Recent Posts

ವಾಹನ ದಟ್ಟನೆ : ಸುಗಮ ಸಂಚಾರಕ್ಕೆ ರೈಲ್ವೆ ಅಂಡರ್‌ ಬ್ರಿಡ್ಜ್‌ ವಿಸ್ತರಿಸಲು ಮನವಿ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು…

8 hours ago

ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲು ಸಂಚಾರ

ಮೈಸೂರು : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು- ಜಲ್ಪೈಗುರಿ ಜಂಕ್ಷನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್…

9 hours ago

ಯಮುನಾ ನದಿಯಲ್ಲಿ ಮುಳುಗಿದ ಪ್ರವಾಸಿಗರ ದೋಣಿ ; 6 ಮಂದಿ ಸಾವು, ಹಲವರು ನಾಪತ್ತೆ

ಮಥುರಾ : ಬೃಂದಾವನದ ಕೇಶಿ ಘಾಟ್ ಸಮೀಪ ಯಮುನಾ ನದಿಯಲ್ಲಿ ಪ್ರವಾಸಿಗರಿಂದ ತುಂಬಿದ ದೋಣಿ ಪಲ್ಟಿಯಾಗಿ ಆರು ಮಂದಿ ಸ್ಥಳದಲ್ಲೇ…

9 hours ago

ಹಡಗುಗಳ ಮೇಲಿನ ಶುಲ್ಕ ನಿಲ್ಲಿಸಿ ; ಇರಾನ್‌ಗೆ ಟ್ರಂಪ್ ಸೂಚನೆ

ಟೆಹ್ರಾನ್ : ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಶುಲ್ಕ ವಿಧಿಸುತ್ತಿದ್ದರೆ, ಅದು ತಕ್ಷಣವೇ ಅದನ್ನು ನಿಲ್ಲಿಸಬೇಕು…

10 hours ago

ನಂಜನಗೂಡು | ದೇವರಾಯಶೆಟ್ಟಿಪುರದಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ

ಮಲ್ಕುಂಡಿ : ರಾತ್ರಿ ವೇಳೆ ರಸ್ತೆ ಮಧ್ಯೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ದೇವರಾಯಶೆಟ್ಟಿಪುರ ಗ್ರಾಮದಿಂದ ಹುರ ಗ್ರಾಮಕ್ಕೆ ತೆರಳುವ ಮುಖ್ಯ…

10 hours ago

ಹನೂರು | ಪ್ರತ್ಯೇಕ ಮನೆಕಳ್ಳತನ ; ಐವರ ಬಂಧನ

ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…

12 hours ago