ಎಸ್.ಎಸ್.ಭಟ್
ನಂಜನಗೂಡು: ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿನ ಕಲಾ ವೈಭವ ಕಲಾಸಕ್ತರೂ ಸೇರಿದಂತೆ ಎಲ್ಲರ ಮನಸೂರೆಗೊಂಡಿತು.
ಅನೇಕ ವರ್ಷಗಳಿಂದ ಜಾತ್ರೋತ್ಸವದ ಅಂಗಳದಲ್ಲಿ ನಡೆಯುತ್ತಿದ್ದ ಚಿತ್ರಸಂತೆಗೆ ಈ ಬಾರಿ ಹೊಸ ಕಾಯಕಲ್ಪ ನೀಡುವುದರೊಂದಿಗೆ ಆಧುನಿಕ ಯುಗಕ್ಕೆ ಬಾಗಿಲು ತೆರೆದುಕೊಳ್ಳುವಂತೆ ‘ಕಲಾವೈಭವ’ ಎಂಬ ಶಿರೋನಾಮೆಯನ್ನಿಟ್ಟು ಆರಂಭಿಸಲಾದ ಕಲಾಪ್ರದರ್ಶನ ವಸ್ತುಪ್ರದರ್ಶನದ ಜನಾಕರ್ಷಣೆಯ ಪ್ರದರ್ಶನವಾಗಿ ಹೊರಹೊಮ್ಮಿದೆ.
೭೬ ಮಳಿಗೆಗಳನ್ನು ಒಳಗೊಂಡ ಈ ಕಲಾವೈಭವದ ಪ್ರದರ್ಶನ ಹಾಗೂ ಮಾರಾಟದಲ್ಲಿ ಮೈಸೂರಿನ ಕಾವಾ, ಜೆಎಸ್ಎಸ್ ಸಂಸ್ಥೆಯ ಹಾಲಬಾವಿಯ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಧಾರವಾಡ, ಗೋಕಾಕ್, ದೂರದ ಬಾಗಲಕೋಟೆ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ೧೩೦ಕ್ಕೂ ಹೆಚ್ಚು ಜನ ಭಾಗಿಯಾಗಿ ಚಿತ್ರಗಳನ್ನು ಬಿಡಿಸುತ್ತಲೇ ಪ್ರದರ್ಶನಕ್ಕಿಟ್ಟು ಆಸಕ್ತರಿಗೆ ಮಾರಾಟವನ್ನು ಮಾಡುತ್ತಿದ್ದಾರೆ.
ಕಲಾವಿದರು ಈ ಕಲಾವೈಭದಲ್ಲಿ ನಮ್ಮ ಪರಂಪರೆಯ ಗ್ರಾಮೀಣ ಕಲೆಗಳೂ ಸೇರಿದಂತೆ ಆಧುನಿಕ ಯುಗದ ಆವಿಷ್ಕಾರವಾದ ಎಐವರೆಗಿನ ವಿವಿಧ ಮಜಲುಗಳನ್ನು ತಮ್ಮ ಕುಂಚದಿಂದ ಬಿಡಿಸುತ್ತಿರುವುದು ಅವರುಗಳ ಕಲಾ ಪ್ರತಿಭೆಗೆ ಸಾಕ್ಷಿಯಾಗಿದೆ.
ಇಂದಿನ ಕಾಲಘಟ್ಟದ ಅನಿವಾರ್ಯ ಸಾಧನಗಳಲ್ಲಿ ಒಂದಾದ ಮೊಬೈಲ್ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದಲ್ಲಿ ಕೆಲವೇ ದಿನಗಳಲ್ಲಿ ಹುಟ್ಟುವ ಮಗುವಿಗೂ ಅನಿವಾರ್ಯವಾಗಬಹುದು ಎಂಬ ಎಚ್ಚರಿಕೆಯ ಸಂದೇಶ ಸಾರುವ ಪ್ರದರ್ಶನ ಕಲಾವೈಭವದ ಹಾಗೂ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದವರೆಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.
5,54,32,314 ಎನ್ಯುಮರೇಷನ್ ಫಾರಂ ಹಂಚಿಕೆ ; ಶೇ.100 ರಷ್ಟು ಡಿಜಿಟಲೀಕರಣ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)…
ಮೈಸೂರು : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು,…
ತಾರಾಪಿತ್ (ಪಶ್ಚಿಮ ಬಂಗಾಳ) : ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ…
ಯಳಂದೂರು : ಚಿರತೆ ದಾಳಿಗೆ ಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಯರಗಂಬಳ್ಳಿ ಗ್ರಾಮದ ಶೋಭಾ ಕೋಂ…
ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…
ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…