Andolana originals

ಜಂಬೂ ಸವಾರಿಗೆ ಮೆರುಗು ತಂದ ಕಲಾ ತಂಡಗಳು .

‘ದೇಶ ವಿದೇಶಗಳ ಪ್ರವಾಸಿಗರಿಗೆ ಕಲೆ, ಸಂಸ್ಕೃತಿ ಪರಿಚಯಿಸಿದ ಕಲಾವಿದರು

ಮೈಸೂರು: ಕಿವಿಗಪ್ಪಳಿಸುವ ತಮಟೆ, ನಗಾರಿ ಸದ್ದು… ಗಾಳಿಯಲ್ಲಿ ತೇಲಿಬಂದ ನಾದಸ್ವರ, ಡೊಳ್ಳು ಕುಣಿತದ ಝಲಕ್… ಏಣಿ ಮೇಲೆ ಪೂಜಾ ಕುಣಿತ,, ಬುಡಕಟ್ಟು ಮಹಿಳೆಯರ ಹಕ್ಕಿ ಪಿಕ್ಕಿ ನೃತ್ಯ… ಬೆಂಕಿಯ ಉಂಡೆಗಳನ್ನು ಉಗುಳಿದ ಸಾಹಸಿಗರು.

ಹೀಗೆ ಸಾಂಸ್ಕೃತಿಕ ನಗರಿ ಮೈಸೂರಿನ ರಾಜ ಮಾರ್ಗದಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಲೆಗಳ ವೈಭೋಗದ ಸಿರಿ ಗರಿಬಿಚ್ಚಿತು. ವಿವಿಧ ಕಲಾಸಂಸ್ಕೃತಿಯ ಸಿರಿತನದ ದಿಬ್ಬಣ ಲಕ್ಷಾಂತರ ಜನರ ಕಣ್ಣು ಕೋರೈಸಿತು. ಬರೋಬ್ಬರಿ 90ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ ಕಲಾವಿದರು ಜಂಬೂಸವಾರಿಗೆ ಕಳೆತಂದರು.

ನಂದಿಧ್ವಜಕ್ಕ ಪೂಜೆ ಸಲ್ಲಿಕೆಯಾಗುತ್ತಿದ್ದಂತೆ ಅರಮನೆ ಅಂಗಳದಲ್ಲಿ ಜಂಬೂಸವಾರಿ ಮೆರವಣಿಗೆ ಆರಂಭಗೊಂಡಿತು. ಜಂಬೂ ಸವಾರಿಗೆ ಹಿಮ್ಮೇಳದಂತೆ ಕಲಾವಿದರು ಮಳೆ ಬಿಸಿಲನ್ನೂ ಲೆಕ್ಕಿಸದೇ ಕುಣಿದು ಕುಪ್ಪಳಿಸಿದರು.

ವೀರಗಾಸೆ: ಕೈಯಲ್ಲಿ ಒಂದು ಕತ್ತಿ ಗುರಾಣಿ ಹಿಡಿದ ವೀರಗಾಸೆ ಕಲಾವಿದರು ಕುಣಿಯುತ್ತಿದ್ದರೆ ನೆರೆದಿದ್ದ ಪ್ರೇಕ್ಷಕರ ಎದೆ ಝಲ್ಲಿಂದಿತು.

ನವಿಲಿನ ನೃತ್ಯ ವೀಕ್ಷಣೆ: ಬೆಂಗಳೂರಿನ ಶ್ರೀ ಕೃಷ್ಣ ಜಾನಪದ ನವಿಲು ನೃತ್ಯ ಕಲಾತಂಡವು ನವಿಲಿನ ನೃತ್ಯವನ್ನು ಪ್ರಸ್ತುತಪಡಿಸಿ ಎಲ್ಲರ ಗಮನಸೆಳೆಯಿತು. ನವಿಲಿನ ನಡೆಯನ್ನೇ ಅನುಕರಿಸುವ ಈ ನೃತ್ಯದಲ್ಲಿ ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಹುಲಿ ವೇಷ ಕುಣಿತ, ಹುಲಿ ವೇಷಧಾರಿಗಳು ಗಗಿರಕಿ ಹೊಡೆಯುತ್ತಾ, ಕುಪ್ಪಳಿಸುತ್ತಾ, ಲಾಗ ಹಾಕುತ್ತಾ, ಪದೇ ಪದೇ ಪ್ರೇಕ್ಷಕರ ಬಳಿ ಬಂದು ರಂಜಿಸಿದರು.

ಏಣಿ ಮೇಲೆ ಪೂಜಾ ಕುಣಿತ: ಮೈಸೂರು, ಮಂಡ್ಯ ಜಿಲ್ಲೆಗಳ ವಿವಿಧ ಕಲಾ ತಂಡಗಳು ಪ್ರಸ್ತುತ ಪಡಿಸಿದ ಪೂಜಾ ಕುಣಿತವನ್ನು ಸಹಸ್ರಾರು ಜನರು ಕತ್ತುಂಬಿಕೊಂಡರು. ಏಣಿ ಮೇಲೆ ಹತ್ತಿ ಪ್ರದರ್ಶಿಸಿದ ಪೂಜಾ ಕುಣಿತ ರೋಚಕವಾಗಿತ್ತು.

ದೈವಿ ಶಕ್ತಿಯನ್ನು ಸಾರುವ ಸೋಮನ ಕುಣಿತ, ಕೇರಳದ ಕಾಸರಗೋಡಿನ ಆದಿಶಕ್ತಿ ಕಲಾಕ್ಷೇತ್ರದ ಕೋಳಿನೃತ್ಯ ಎಲ್ಲರ ಗಮನ ಸೆಳೆಯಿತು.

ಬೆಂಕಿಯೊಂದಿಗೆ ಕಲಾವಿದರ ಸರಸ: ಐದಾರು ಕಲಾವಿದರು ಬಾಯಿಯಲ್ಲಿ ಸೀಮೆ ಎಣ್ಣೆ ತುಂಬಿಕೊಂಡು ಬೆಂಕಿ ಉಗುಳುತ್ತಿದ್ದರು. ಬೆಂಕಿಯ ಜ್ವಾಲೆ ಆಕಾಶದತ್ತ ಚಿಮ್ಮುತ್ತಿದ್ದಂತೆಯೇ ಸಭಿಕರ ಸಾಲಿನಲ್ಲಿ ಕುಳಿತ ಕೆಲವರು ಆಶ್ಚರ್ಯಚಕಿತರಾದರೆ, ಇನ್ನೂ ಕೆಲವರು ಗಾಬರಿಗೊಂಡರು.

ಮೆರುಗು ತಂದ ಕಲಾ ತಂಡಗಳು:
ಚಾಮರಾಜನಗರ, ಮಂಡ್ಯ, ಶಿರಾದ ಕಲಾತಂಡಗಳ ಕೊಂಬುಕಹಳೆ, ಮೈಸೂರಿನ ವಿದ್ಯಾರಣ್ಯಪುರ, ಜೆ.ಪಿ.ನಗರ, ನಂಜನಗೂಡು ತಂಡಗಳ ಬೀಸು ಕಂಸಾಳೆ, ತಿ.ನರಸೀಪುರದ ಬೀಡನಹಳ್ಳಿ, ಪಾಂಡವಪುರದ ಸುಂಕಾತೊಣ್ಣೂರಿನ ಪಟಕುಣಿತ, ಕೋಲಾರದ ಕೀಲು ಕುದುರೆ, ಶಿರವಾಳದ ಕೋಲಾಟ, ಹಾಸನ ಜಿಲ್ಲೆಯ ಪನ್ನಸಮುದ್ರದ ಚಿಟ್‌ಮೇಳ, ರಾಯಚೂರಿನ ಅಮದಿಹಾಳದ ವೃದ್ದರು ನಡೆಸಿದ ಕಣಿ ವಾದನ ಮನ ರಂಜೆಸಿತು.

ಬಾಗಲಕೋಟೆಯ ಹೂವಿನ ನೃತ್ಯದ ಮೈಸೂರಿನ ತಮಟೆ ನಗಾರಿಯ ಅಬ್ಬರ, ಸ್ಥಳೀಯ ಕಲಾವಿದರ ಯಕ್ಷಗಾನ ಗೊಂಬೆಯ ಗಾಂಭೀರ್ಯ, ಯಾದಗಿರಿ, ವಿಜಯನಗರ, ಬೀದರ್, ಕಲಬುರ್ಗಿ ಜಿಲ್ಲೆಯ ಲಂಬಾಣಿ ಸಾಂಪ್ರದಾಯಿಕ ಲಂಬಾಣಿ ನೃತ್ಯದ ಸಿರಿ ಮೇಳೈಸಿತು.

ಕೋಲಾರ, ದಾವಣಗೆರೆ ತಂಡದ ಕಮಟೆ ವಾದನದ ಹಿನ್ನಲೆ ಸಂಗೀತ, ಕೊಪ್ಪಳ, ಸಂಡೂರಿನ ತಂಡದ ಹಗಲುವೇಷದಲ್ಲಿ ಶ್ರೀರಾಮ, ಲಕ್ಷ್ಮಣ, ಹನುಮಂತನ ದರ್ಶನವಾಯಿತು. ಗೋಕಾಕ್ ತಂಡದ ದಟ್ಟಿ ಕುಣಿತ, ಉಡುಪಿಯ ಕುಡುಬಿ ಜಾನಪದ ನೃತ್ಯ ಆಕರ್ಷಕವಾಗಿತ್ತು.

ಭಟ್ಕಳದ ಗೊಂಡರ ಢಕ್ಕೆ ಸೊಗಸು, ತಲಕಾಡಿನ ಚಿಲಿಪಿಲಿ ಗೊಂಬೆ ಪ್ರದರ್ಶನದ ಕಚಗುಳಿ, ನಂಜನಗೂಡು ತಾಲ್ಲೂಕು ತಾಯೂರಿನ ಮರಗಾಲು ಕುಣಿತ, ಮದ್ದೂರಿನ ದೊಣ್ಣೆವರಸೆ ಆಕರ್ಷಣೀಯವಾಗಿತ್ತು.

ರಾಮದುರ್ಗ, ಧಾರವಾಡದ ಜಗ್ಗಲಿಗೆ ಮೇಳ, ಯಳಂದೂರಿನ ಗೇರ್ ನೃತ್ಯ, ಅರಸೀಕರೆ, ವಿಜಯನಗರದ ನಂದಿಕೋಲು, ಚಳ್ಳಕೆರೆಯ ಉರುವ ವಾದ್ಯ ಇಲ್ಲಿ ಸಂಭ್ರಮವನ್ನು ಹಿಗ್ಗಿಸಿತು. ಸೋಮವಾರಪೇಟೆಯ ಲೆನಾಡು ಸುಗ್ಗಿ ಕುಣಿತ, ವಿರಾಜಪೇಟೆಯ ಕೊಡವರ ನೃತ್ಯ ಜನಸಮೂಹವನ್ನು ರಂಜಿಸಿತು.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಹಕ್ಕಿ-ಪಿಕ್ಕಿ ಬುಡಕಟ್ಟು ಮಹಿಳೆಯರ ಹಕ್ಕಿ-ಪಿಕ್ಕಿ ನೃತ್ಯ, ಮೈಸೂರಿನ ನಾಸಿಕ್ ಡೋಲು, ಕೊಪ್ಪಳ, ಬಾಗಲಕೋಟೆ, ಗದಗ ಜಿಲ್ಲೆಗಳ ಕರಡಿ ಮಜಲು, ಬಾಗಲಕೋಟೆ, ಅಥಣಿಯ ಝಾಂಜ್ ಪಥಕ್ ನೃತ್ಯ,
ಯಾದಗಿರಿ, ರಾಯಚೂರು, ದಾವಣಗೆರೆ, ಸಾಗರ, ಶಿಕಾರಿಪುರ ತಂಡದ ಡೊಳ್ಳು ಕುಣಿತ ರೋಮಾಂಚನ ತಂದಿತು.

ಮಲೆಮಹದೇಶ್ವರರನ್ನು ಸ್ಮರಿಸುವ ಚಾಮರಾಜನಗರದ ಗೊರವರ ಕುಣಿತ, ಡೊಳ್ಳುಕುಣಿತ ಮನ ಸೆಳೆಯಿತು. ನಾಗಮಂಗಲದ ಮೂಡಲಪಾಯ ಯಕ್ಷಗಾನ ನೃತ್ಯ, ವಿಜಯಪುರದ ಸತ್ತಿಗೆ ಕುಣಿತ, ರಾಮನಗರದ ಕರಗ ನೃತ್ಯ, ಸುಳ್ಯದ ಕಂಗೀಲು ನೃತ್ಯ ಜನಾಕರ್ಷಣೆಯಾಗಿತ್ತು.

ಅನ್ಯರಾಜ್ಯಗಳ ಕಲೆಯ ದರ್ಶನ:
ಅನ್ಯ ರಾಜ್ಯಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಲಾ ಶ್ರೀಮಂತಿಕೆ ಕೂಡ ಅನಾವರಣಗೊಂಡಿತು. ಕೇರಳದ ಸಿಂಗಾರಿ ಮೇಳಂ, ತಮಿಳುನಾಡಿನ ಕರಗಂ, ಕಪಾಡಿ ರಾಜಸ್ಥಾನದ ಜಾಕ್ರೀ ನೃತ್ಯ, ಉತ್ತರಖಂಡದ ತಡಿಯಾದಲ್ಲಾ ನೃತ್ಯ, ಹರಿಯಾಣದ ಫೆಗ್, ಗೂಮೆರ್ ನೃತ್ಯ ಆಕರ್ಷಿಸಿದವು. ಕೋಲಾರ ಜಿಲ್ಲೆಯ ಗಾರುಡಿ ಗೊಂಬೆ ನರ್ತನ ಮನ ಸೆಳೆಯಿತು.

ಆಂದೋಲನ ಡೆಸ್ಕ್

Recent Posts

ಪೈರಸಿ ಬಗ್ಗೆ ಮತ್ತೊಮ್ಮೆ ಖಡಕ್‌ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್‌

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್‌ ಚಿತ್ರಕ್ಕೂ ಪೈರಸಿ…

29 mins ago

ಜೆಡಿಎಸ್‌ ಜೊತೆ ಮೈತ್ರಿ ವಿಚಾರ: ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದ ವಿಜಯೇಂದ್ರ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಕಷ್ಟ ಎಂದು ಮಾಜಿ ಎಚ್‌ಡಿಡಿ ಹೇಳಿಕೆ ಕುರಿತು ಬಿಜೆಪಿ…

53 mins ago

ಹೆಸರುಘಟ್ಟ ನೈಸರ್ಗಿಕ ಹುಲ್ಲುಗಾವಲು ಸಂರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…

2 hours ago

ಕಾಸರಗೋಡು| ಹಳಿ ದಾಟುವಾಗ ರೈಲು ರಿಕ್ಕಿ: ಕೊಡಗು ಮೂಲದ ಯುವಕ ಸಾವು

ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ…

2 hours ago

ಉತ್ತರ ಪ್ರದೇಶದಂತೆ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆ ಧ್ವಂಸ: ಕರ್ನಾಟಕದ ವಿರುದ್ಧ ಪಿಣರಾಯಿ ವಿಜಯನ್‌ ಆಕ್ರೋಶ

ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಕಾಂಗ್ರೆಸ್‌ ಸರ್ಕಾರದ…

3 hours ago

ಮೈಸೂರು | ಹೀಲಿಯಂ ಸ್ಫೋಟ ಪ್ರಕರಣ: ಶವಗಾರದಲ್ಲಿ ಮೃತ ಲಕ್ಷ್ಮಿಯ ಕುಟುಂಬಸ್ಥರ ಆಕ್ರಂದನ

ಮೈಸೂರು: ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಫೋಟ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಲಕ್ಷ್ಮಿ ಅವರ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಸುದ್ದಿ…

3 hours ago