Andolana originals

ಸಮ್ಮೇಳನದಲ್ಲಿ ಕಂಡ ಮುಖಗಳು

  • ಕೀರ್ತಿ

ಸಾಹಿತ್ಯ ಸಮ್ಮೇಳನದ ಮೂರೂ ದಿನಗಳು ಇವರನ್ನು ಭೇಟಿಯಾಗುತ್ತಲೇ ಇದ್ದೆ. ತಿಂದವರ ಊಟದ ಎಲೆಗಳನ್ನು ತೆಗೆಯುತ್ತಾ, ತಮಿಳು ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ದೂರದ ತಮಿಳುನಾಡಿನಿಂದ ಕೆಲಸಕ್ಕೆಂದು ಬಂದ ಚಿನ್ನಮ್ಮ, ಶಾಂತಿ, ಶಾಂತ ಮತ್ತು ಅಂಜಲಿ ಅವರೊಂದಿಗೆ ಮಾತುಕತೆಗೆಂದು ನಿಂತೆ. ಈ ನಾಲ್ವರೂ ತಮಿಳುನಾಡಿನವರೇ ಆದರೂ ಒಬ್ಬರಿಗೊಬ್ಬರು ಅಷ್ಟು ಪರಿಚಿತರಲ್ಲ.

ಆದರೆ ಸ್ವಾವಲಂಬಿ ಸೂತ್ರ ಕೊಂಡಿಯಂತೆ ಬೆಸೆದಿದೆ. ‘ಮನೇಲಿ ಕುತ್ಕೊಂಡಿದ್ರೆ ಹತ್ತು ರೂಪಾಯಿ ಯಾರು ಕೊಡ್ತಾರೆ? ’ ಎಂಬ ಧೀಶಕ್ತಿ ರೂಪಗಳು’ ಇವರು. ಮೊದಲೆಲ್ಲ ಆಚೀಚೆ ಮನೆಯ ಕೆಲಸಕ್ಕೆ ಹೋಗುತ್ತಲೇ ದಿನ ದೂಡುತ್ತಿದ್ದರು. ತಮ್ಮ ದೈನಂದಿನ ಖರ್ಚನ್ನು ಹೊಂದಿಸಿಕೊಳ್ಳಬೇಕೆಂಬ ಕಾರಣಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಇವರಿಗೆಲ್ಲ ಮಕ್ಕಳ ಓದಿಗೆಂದೋ, ಮದುವೆಗೆಂದೋ, ಇಲ್ಲಾ, ಮನೆ ಕಟ್ಟುವ ಸಲುವಾಗಿ ಮಾಡಿದ ಸಾಲವೆಲ್ಲ ಬೆನ್ನ ಮೇಲೆ ಬಿದ್ದು ಹೊರೆಯಾದಾಗಲೋ ಹೆಚ್ಚಿನ ದುಡಿಮೆ ಅನಿವಾರ್ಯವಾಯಿತು.

ಈಗಲೂ ತಿಂಗಳು ಪೂರ್ತಿ ಕೆಲಸವಿರುತ್ತದೆ. ಕೆಲಸದಿಂದ ಬೆಸೆದ ಬಾಂಧವ್ಯ ಇವರದು. ಐದು ವರ್ಷಗಳಿಂದ ಕರ್ನಾಟಕಕ್ಕೆ ಬರುತ್ತಿದ್ದುದರಿಂದ ಕನ್ನಡ ಭಾಷೆ ಪರಿಚಯವಾಯಿತು. ‘ಕೆಲ್ಸ ಮಾಡಕ್ಕೂ ಭಾಷೆ ಕಲೀಬೇಕು’ ಎಂದ ಶಾಂತಿಯಮ್ಮನ ಮಾತಿಗೆ ಮೂವರೂ ಹೌದೆಂದರು. ಚಿನ್ನಮ್ಮ ಅವರಂತೂ ಒಂದು ಹೆಜ್ಜೆ ಮುಂದೆ ಬಂದು, ’ಏನಾದ್ರು ಬೈದ್ರೂ ಗೊತ್ತಾಗಿ ಬಿಡುತ್ತೆ’ ಎನ್ನುತ್ತಾ ಪಿಸುಗುಟ್ಟಿ ನಕ್ಕರು.

ಸಾಹಿತ್ಯ ಸಮ್ಮೇಳನದ ಮೂರೂ ದಿನಗಳೂ ಬೆಳಿಗ್ಗೆ ಆರು ಗಂಟೆಗೆ ಶುರುವಾಗುತ್ತಿದ್ದ ಕೆಲಸ ಮುಗಿಯುತ್ತಿದ್ದದ್ದು, ರಾತ್ರಿ ಹನ್ನೊಂದು ಗಂಟೆಗೆ. ಮತ್ತೆ ಎಲ್ಲೋ ಹೊರಗಡೆ ಹೋಗಿಲ್ಲವಾ ಎಂದರೆ ‘ಜನ ಬರ್ತಾನೇ ಇರ್ತಾರೆ. ಬಿಟ್ಟು ಹೋಗೋಕ್ಕಾಗಲ್ಲ’ ಎಂದರು. ಮುಂದುವರಿದು ‘ಈ ಪ್ರೋಗ್ರಾಂ ಏನು ಅಂತ ಗೊತ್ತಾ? ’ ಎಂದು ಕೇಳಿದೆ. ಗೆಳತಿಯರೆಲ್ಲ ಮುಖ ನೋಡಿ ನಕ್ಕರು. ಅರ್ಥವಾಗಿ ನಾನೂ ನಕ್ಕೆ. ಊಟದ ಕೌಂಟರಿನ ಹಿಂಭಾಗದ ಜಾಗವೊಂದರಲ್ಲಿ ಉಳಿದು, ಸಮ್ಮೇಳನದ ಮೂರೂ ದಿನಗಳನ್ನು ಕಳೆದಿದ್ದಾರೆ.

ಜನಜಂಗುಳಿಯನ್ನು ಕಂಡ ಮೊದಲ ದಿನ ಇದೇನಿದು ಎಂದು ಅಚ್ಚರಿಪಟ್ಟಿದ್ದರು. ಎರಡನೇ ದಿನದ ಹೊತ್ತಿಗೆ ಜನರ ಓಡಾಟವನ್ನೆಲ್ಲ ನೋಡಿ, ಇದು ನಮ್ಮ ಊರೇ ಆಗಿದ್ರೆ ಎಷ್ಟು ಚಂದವಿರುತ್ತಿತ್ತು ಎಂದು ಅಂಜಲಿಯಮ್ಮ ಫಿಲ್ಟರ್ ಇಲ್ಲದೆ ಮಾತಾಡುತ್ತಿದ್ದರೆ, ಅವರ ಉಳಿದ ಗೆಳತಿಯರು ಮೂರನೇ ದಿನ ಎಲ್ಲ ಕಡೆ ಸುತ್ತಾಡುವ ಉಪಾಯವನ್ನು ರೂಪಿಸುತ್ತಿದ್ದರು. ಸಮ್ಮೇಳನದ ಕಡೆಯ ದಿನ ಜನರ ನಡುವೆ ಅವರೆಲ್ಲೂ ಕಾಣಲೇ ಇಲ್ಲ. ಕಂಡರೋ ಇಲ್ಲವೋ ಎಂದು ಕೇಳುವುದಕ್ಕೂ ಆಗಲಿಲ್ಲ. ಶಾಂತಿ, ಅಂಜಲಿ ಮತ್ತು ಚಿನ್ನಮ್ಮರು ಕನ್ನಡವನ್ನು ತುಸು ಮಟ್ಟಿಗೆ ಅರ್ಥವಾಗುವಂತೆ ಮಾತಾಡುತ್ತಿದ್ದರು. ಶಾಂತಮ್ಮನಿಗೆ ಮಾತ್ರ ಕನ್ನಡ ಭಾಷೆ ತಿಳಿದಿರಲಿಲ್ಲ. ನನಗೋ ತಮಿಳು ಭಾಷೆಯ ಒಂದು ಪದವೂ ಗೊತ್ತಿಲ್ಲ! ಭಾಷೆಯ ಹಂಗಿಲ್ಲದೆ, ಕುಶಲೋಪರಿಗಳನ್ನು ವಿಚಾರಿಸಿಕೊಳ್ಳುತ್ತಿದ್ದೆವು. ‘ಎತ್ತಣ ಸಾಹಿತ್ಯ ಎತ್ತಣ ಬಾಂಧವ್ಯ’

 

andolana

Recent Posts

ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿ | ರಾಹುಲ್‌ ಗಾಂಧಿ ಹಾಗೂ ಅಶ್ವಿನ್‌ ವೈಷ್ಣವ್‌ ನಡುವೆ ಟ್ವಿಟ್‌ ವಾರ್…

ಹೊಸದಿಲ್ಲಿ : ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಡುವೆ ಕರ್ನಾಟಕದಲ್ಲಿ ಉದ್ಯೋಗ…

41 mins ago

ಚಿತ್ರದುರ್ಗ ಬಸ್‌ ದುರಂತ | ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ಸಿಗೂ ಬೆಂಕಿ : ಕೂದಲೆಳೆ ಅಂತರದಲ್ಲಿ ಪವಾಡಸದೃಶ ಪಾರು!

ಬೆಂಗಳೂರು : ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದ ಮಾರ್ಗದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ…

59 mins ago

ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ನಾನು ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ. ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದೇನೆ. ನಾನು ಸ್ಟೇಜ್ ಮೇಲೆ ಕೂತು…

2 hours ago

ನಾಳೆ ದೆಹಲಿಗೆ ತೆರಳಲಿದ್ದಾರೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಲಿದ್ದಾರೆ. ಡಿಸೆಂಬರ್‌.27ರಂದು ದೆಹಲಿಯ ಇಂದಿರಾ…

2 hours ago

ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಹುಲಿ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ದೇಪಾಪುರ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಬೋನಿಗೆ ಬಿದ್ದಿದೆ. ಹುಲಿಯನ್ನು ನೋಡಲು…

3 hours ago

ರಾಜ್ಯದಲ್ಲಿ ಬೆಳಗಿನ ವೇಳೆ ದಟ್ಟ ಮಂಜು: ಹವಾಮಾನ ತಜ್ಞರು ಹೇಳಿದ್ದಿಷ್ಟು.!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ ದಟ್ಟವಾದ…

3 hours ago