ಆರು ದಿನಗಳ ವೈಭವದ ಜಾತ್ರಾ ಮಹೋತ್ಸವ
ಮೈಸೂರು: ಕಪಿಲಾ ನದಿ ತೀರದ ಸುತ್ತೂರಿನಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ೬ ದಿನಗಳ ಕಾಲ ನಡೆದ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಸಮ್ಮಿಲನವಾಗಿದ್ದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಗಳವರ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ತೆರೆ ಬಿದ್ದಿತು.
ಒಂದು ವಾರದಿಂದ ಲಕ್ಷೋ ಪಲಕ್ಷ ಜನರು ಆಗಮಿಸಿ ಜಾತ್ರೆಯ ಸಡಗರದಲ್ಲಿ ಭಾಗಿಯಾದರು.
ಅಂದಾಜು ೨೦ರಿಂದ ೨೫ ಲಕ್ಷ ಮಂದಿ ದಾಸೋಹದ ಸವಿ ಸವಿದರು. ಮಹಾ ದಾಸೋಹಕ್ಕೆ ಅಡುಗೆ ಸಿದ್ಧ ಪಡಿಸಿದ ಬಾಣಸಿಗರು, ಉಣ ಬಡಿಸಲು ನೆರವಾದ ಸ್ವಯಂ ಸೇವಕರ ಶ್ರಮ ಮೆಚ್ಚುಗೆಗೆ ಪಾತ್ರವಾಯಿತು.
ಸಹಸ್ರ ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ಸುತ್ತೂರಿನಲ್ಲಿ ಈ ಬಾರಿ ೨೬ರಿಂದ ೩೧ರವರೆಗೆ ಆಯೋಜಿಸಿದ್ದ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆಧ್ಯಾತ್ಮಿಕತೆ, ಕೃಷಿ, ಶೈಕ್ಷಣಿಕ ಹಾಗೂ ವೈಜ್ಞಾನಿಕ ವಿಚಾರಗಳ ಬಗ್ಗೆ ಅರಿವು ಪಡೆದುಕೊಂಡರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳೂ ಅಚ್ಚುಕಟ್ಟಾಗಿ ನಡೆದವು.
ಈ ಬಾರಿ ನಡೆದ ಸಾಮೂಹಿಕ ವಿವಾಹದಲ್ಲಿ ೧೫೫ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದರಲ್ಲಿ ಎಲ್ಲ ಸಮುದಾಯದ ಜೋಡಿಗಳೂ ಇದ್ದವು. ಇದರಲ್ಲಿ ಅಂತರ್ಜಾತಿಯ ೨೩ ಜೋಡಿ, ಅಂತರ್ ಧರ್ಮೀಯ ೧ ಜೋಡಿ, ತಮಿಳುನಾಡಿನ ೧೭ ಜೋಡಿಗಳು ಇದ್ದದ್ದು ವಿಶೇಷ ವಾಗಿತ್ತು.
ಕೃಷಿ ಮೇಳ ಜಾತ್ರೆಗೆ ಆಕರ್ಷಣೆ ತಂದುಕೊಟ್ಟಿದ್ದಲ್ಲದೆ, ಸಾರ್ವಜನಿಕರ ಮೆಚ್ಚುಗೆಯನ್ನೂ ಪಡೆದುಕೊಂಡಿತು. ೫೪ನೇ ದನಗಳ ಜಾತ್ರೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿ ಇನ್ನಿತರ ಜಿಲ್ಲೆಗಳಿಂದ ಹಳ್ಳೀಕಾರ್ ತಳಿಗಳ ರಾಸುಗಳು ಪಾಲ್ಗೊಂಡು ಗಮನ ಸೆಳೆದಿದ್ದವು. ಇದಲ್ಲದೆ, ಸಾಂಸ್ಕೃತಿಕ ಮೇಳ, ಭಜನಾ ಮೇಳ, ಕುಸ್ತಿ, ಗಾಳಿಪಟ, ದೋಣಿ ವಿಹಾರ, ದೇಸಿ ಆಟಗಳು ಮೊದಲಾದ ಹತ್ತು ಹಲವು ಕಾರ್ಯಕ್ರಮ ಗಳು ನೋಡುಗರನ್ನು ರಂಜಿಸಿದ್ದವು. ಲಕ್ಷದೀಪೋತ್ಸವ ದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡರೆ, ತೆಪ್ಪೋತ್ಸವ ದಿನದಂದು ಅಂದಾಜು ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾತಂಡಗಳು ಮನಮೋಹಕ ನೃತ್ಯದ ಮೂಲಕ ಸಹಸ್ರಾರು ಜನರ ಮನತಣಿಸಲು ಸಫಲವಾದವು.
ಚಿತ್ರಸಂತೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್, ರಾಯಚೂರು, ಹಂಪಿ, ಮೈಸೂರು, ಬೆಂಗಳೂರು, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹೊರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದ ೧೩೦ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಅತ್ಯುತ್ತಮ ಮತ್ತು ಅಪರೂಪದ ಕೃತಿಗಳನ್ನು ಪ್ರದರ್ಶನ ಮಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಯೋಜಿಸಿದ್ದ ವಸ್ತುಪ್ರದರ್ಶನ, ವಿದ್ಯಾರ್ಥಿಗಳ ಮಲ್ಲಕಂಬ ಕಸರತ್ತು ರೈತರು, ಸಾರ್ವಜನಿಕರನ್ನು ಆಕರ್ಷಿಸಿತು.
ಕೊನೆಯ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ ಜಾತ್ರಾ ಮಹೋತ್ಸವದ ಸಂಭ್ರಮ ಇಮ್ಮಡಿಗೊಳಿಸುವಂತೆ ಮಾಡಿದರು. ಜಾತ್ರೆಗೆ ಆಗಮಿಸಿದ್ದ ಜನರಿಗೆ ಊಟ, ತಿಂಡಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡ ಮಠದ ಹಿತೈಷಿಗಳು, ಆರು ದಿಗಳ ಕಾಲ ಜಾತ್ರೆಯ ಸಂಭ್ರಮ ಸವಿದ ಜನರು ಶುಕ್ರವಾರ ಭಾರದ ಮನಸ್ಸಿನಿಂದಲೇ ತವರಿನತ್ತ ತೆರಳಿದರು.
ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ…
ಬೆಳಗಾವಿ: ಪೊಲೀಸ್ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…
ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ಎಂದು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಬಾಂಬ್…
ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಯ…
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ವರಾಹ ಗೇಟ್ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸಾರ್ವಜನಿಕರು ಆಗಮಿಸುವ…
ಬೆಳಗಾವಿ: ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ದ್ವೇಷ ಭಾಷಣ ಮಾಡದೇ…