Andolana originals

ಓದುಗರ ಪತ್ರ: ಸ್ಟ್ಯಾನ್ಲಿ ಜಾತ್ಯತೀತ ನಿಲುವು ಪ್ರಶ್ನಾತೀತ

ಆ.೨೫ರಂದು ‘ಆಂದೋಲನ’ ದಿನಪತ್ರಿಕೆಯಲ್ಲಿ ಮೈಸೂರು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟಾ ನ್ಲಿಯವರೊಡನೆ ನಡೆಸಿದ ಸಂದರ್ಶನ ಪ್ರಕಟವಾಗಿದ್ದು, ಸಂದರ್ಶನದಲ್ಲಿ ಮಾತನಾಡಿರುವ ಸ್ಟಾ ನ್ಲಿಯವರ ಆ ಮಾತುಗಳಲ್ಲಿ ಸ್ಪಷ್ಟವಾದ ನುಡಿ, ಎದೆಗಾರಿಕೆಯ ಮಾತು, ಪ್ರಾಮಾಣಿಕತೆಯ ದಿಟ್ಟತನ, ಜಾತ್ಯತೀತತೆಯ ನಿಲುವು, ಸಾಮಾಜಿಕ ಕಳಕಳಿ ಗೋಚರಿಸುತ್ತಿವೆ. ೨೫ ವರ್ಷಗಳ ಗೆಳೆತನದಲ್ಲಿ ನಾನು ಕಂಡಂತೆ ಸ್ಟ್ಯಾನ್ಲಿ ಯಾವ ಧರ್ಮಕ್ಕೂ ಅಂಟಿಕೊಂಡ ವ್ಯಕ್ತಿಯಲ್ಲ. ತನ್ನ ಹುಟ್ಟು ಕ್ರೆ ಸ್ತ ಧರ್ಮವಾದರೂ ನಮಗೆ ಸ್ಟ್ಯಾನ್ಲಿ ಎಂದೂ ಕ್ರಿಶ್ಚಿಯನ್ ಆಗಿ ಕಂಡೇ ಇಲ್ಲ. ಅಪ್ಪಟ ಭಾರತೀಯ ಎಂಬುದು ಅವರ ವ್ಯಕ್ತಿತ್ವದಲ್ಲಿ ಮತ್ತು ಹೋರಾಟದ ಬದುಕಿನಲ್ಲಿ ಎದ್ದು ಕಾಣುತ್ತದೆ. ಅನ್ಯಾಯವಾಗಿದೆ ಎಂದು ಕಂಡುಬಂದರೆ ಅವರು ಯಾವುದೇ ಪ್ರಭಾವಿ ರಾಜಕಾರಣಿಯಾಗಿರಲಿ, ಯಾವುದೇ ಧರ್ಮದ ಗುರುಗಳಾಗಿರಲಿ ಅದ್ಯಾವುದನ್ನೂ ಲೆಕ್ಕಿಸದೇ ನ್ಯಾಯಕ್ಕಾಗಿ ಹೋರಾಡುವ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು.

ಕೆಲವು ಮತಾಂಧರು ಸ್ಟಾ ನ್ಲಿಯವರನ್ನು ಕ್ರೆ ಸ್ತ ಧರ್ಮದಿಂದ ಗುರುತಿಸಿ ಅವಹೇಳನವಾಗಿ ಮಾತನಾಡುವುದು ಸರಿಯಲ್ಲ. ‘ನಿಂದಿಸುವವರೇ ನಮ್ಮ ಬಂಧುಕುಲ, ಆ ಹಂದಿಗಳೊಡನೆ ನಮಗೇನು ಛಲ’ ಎಂದು ತಮ್ಮ ಹೋರಾಟದ ಪ್ರಾಮಾಣಿಕ ಬದುಕಿನ ಬಂಡಿಯು ಎಲ್ಲಿಯೂ ನಿಲ್ಲದಂತೆ ಮುನ್ನಡೆಯುತ್ತಾ ನೊಂದ ಜೀವಗಳಿಗೆ ನ್ಯಾಯದೊರಕಿಸಲು ಪ್ರಯತ್ನಿಸುತ್ತಾ ಅವರು ಬದುಕು ಕಟ್ಟಿಕೊಡಲು ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿರುವ ಜೋಡಿ ‘ಸ್ಟಾ ನ್ಲಿ ಪರಶು’ ಈ ಇಬ್ಬರೂ ಗೆಳೆಯರ ಸಾಮಾಜಿಕ ಕಳಕಳಿಗೆ ಈ ಸಮಾಜ ಎಂದಿಗೂ ಋಣಿಯಾಗಿರಬೇಕು.

– ಈ.ಧನಂಜಯ ಎಲಿಯೂರು, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

6 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

6 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

6 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

6 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

7 hours ago