Andolana originals

ಓದುಗರ ಪತ್ರ: ಸ್ಟ್ಯಾನ್ಲಿ ಜಾತ್ಯತೀತ ನಿಲುವು ಪ್ರಶ್ನಾತೀತ

ಆ.೨೫ರಂದು ‘ಆಂದೋಲನ’ ದಿನಪತ್ರಿಕೆಯಲ್ಲಿ ಮೈಸೂರು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟಾ ನ್ಲಿಯವರೊಡನೆ ನಡೆಸಿದ ಸಂದರ್ಶನ ಪ್ರಕಟವಾಗಿದ್ದು, ಸಂದರ್ಶನದಲ್ಲಿ ಮಾತನಾಡಿರುವ ಸ್ಟಾ ನ್ಲಿಯವರ ಆ ಮಾತುಗಳಲ್ಲಿ ಸ್ಪಷ್ಟವಾದ ನುಡಿ, ಎದೆಗಾರಿಕೆಯ ಮಾತು, ಪ್ರಾಮಾಣಿಕತೆಯ ದಿಟ್ಟತನ, ಜಾತ್ಯತೀತತೆಯ ನಿಲುವು, ಸಾಮಾಜಿಕ ಕಳಕಳಿ ಗೋಚರಿಸುತ್ತಿವೆ. ೨೫ ವರ್ಷಗಳ ಗೆಳೆತನದಲ್ಲಿ ನಾನು ಕಂಡಂತೆ ಸ್ಟ್ಯಾನ್ಲಿ ಯಾವ ಧರ್ಮಕ್ಕೂ ಅಂಟಿಕೊಂಡ ವ್ಯಕ್ತಿಯಲ್ಲ. ತನ್ನ ಹುಟ್ಟು ಕ್ರೆ ಸ್ತ ಧರ್ಮವಾದರೂ ನಮಗೆ ಸ್ಟ್ಯಾನ್ಲಿ ಎಂದೂ ಕ್ರಿಶ್ಚಿಯನ್ ಆಗಿ ಕಂಡೇ ಇಲ್ಲ. ಅಪ್ಪಟ ಭಾರತೀಯ ಎಂಬುದು ಅವರ ವ್ಯಕ್ತಿತ್ವದಲ್ಲಿ ಮತ್ತು ಹೋರಾಟದ ಬದುಕಿನಲ್ಲಿ ಎದ್ದು ಕಾಣುತ್ತದೆ. ಅನ್ಯಾಯವಾಗಿದೆ ಎಂದು ಕಂಡುಬಂದರೆ ಅವರು ಯಾವುದೇ ಪ್ರಭಾವಿ ರಾಜಕಾರಣಿಯಾಗಿರಲಿ, ಯಾವುದೇ ಧರ್ಮದ ಗುರುಗಳಾಗಿರಲಿ ಅದ್ಯಾವುದನ್ನೂ ಲೆಕ್ಕಿಸದೇ ನ್ಯಾಯಕ್ಕಾಗಿ ಹೋರಾಡುವ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು.

ಕೆಲವು ಮತಾಂಧರು ಸ್ಟಾ ನ್ಲಿಯವರನ್ನು ಕ್ರೆ ಸ್ತ ಧರ್ಮದಿಂದ ಗುರುತಿಸಿ ಅವಹೇಳನವಾಗಿ ಮಾತನಾಡುವುದು ಸರಿಯಲ್ಲ. ‘ನಿಂದಿಸುವವರೇ ನಮ್ಮ ಬಂಧುಕುಲ, ಆ ಹಂದಿಗಳೊಡನೆ ನಮಗೇನು ಛಲ’ ಎಂದು ತಮ್ಮ ಹೋರಾಟದ ಪ್ರಾಮಾಣಿಕ ಬದುಕಿನ ಬಂಡಿಯು ಎಲ್ಲಿಯೂ ನಿಲ್ಲದಂತೆ ಮುನ್ನಡೆಯುತ್ತಾ ನೊಂದ ಜೀವಗಳಿಗೆ ನ್ಯಾಯದೊರಕಿಸಲು ಪ್ರಯತ್ನಿಸುತ್ತಾ ಅವರು ಬದುಕು ಕಟ್ಟಿಕೊಡಲು ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿರುವ ಜೋಡಿ ‘ಸ್ಟಾ ನ್ಲಿ ಪರಶು’ ಈ ಇಬ್ಬರೂ ಗೆಳೆಯರ ಸಾಮಾಜಿಕ ಕಳಕಳಿಗೆ ಈ ಸಮಾಜ ಎಂದಿಗೂ ಋಣಿಯಾಗಿರಬೇಕು.

– ಈ.ಧನಂಜಯ ಎಲಿಯೂರು, ಮೈಸೂರು

ಆಂದೋಲನ ಡೆಸ್ಕ್

Recent Posts

ಊಹಾ ಪತ್ರಿಕೋದ್ಯಮ ಬಿಟ್ಟು, ಸತ್ಯವನ್ನೇ ಬರೆಯಿರಿ : ಪತ್ರಕರ್ತರಿಗೆ ಮುಖ್ಯಮಂತ್ರಿ ಸಲಹೆ

ಬೆಂಗಳೂರು : ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…

11 mins ago

ಕೈ ಸಾಲವಾಗಿ 25 ಕೋಟಿ ನೀಡುವ ಆಮಿಷ : ಹುಬ್ಬಳ್ಳಿಯ ವ್ಯಕ್ತಿಗೆ ಮೈಸೂರಿನ ಐವರಿಂದ ಲಕ್ಷಾಂತರ ರೂ. ವಂಚನೆ

ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ…

22 mins ago

ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯ : ನಾಗಲಕ್ಷ್ಮೀ ಚೌಧರಿ

ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…

1 hour ago

ಮಹಿಳೆಯರೊಂದಿಗೆ ಪೊಲೀಸ್ ಠಾಣೆಯಲ್ಲಿ ಗೌರವಯುತವಾಗಿ ವರ್ತಿಸಿ : ನಾಗಲಕ್ಷ್ಮೀ ಚೌಧರಿ

ಮೈಸೂರು : ಪೊಲೀಸ್ ಠಾಣೆಯಲ್ಲಿ ಮಹಿಳೆಯುರು ದೂರು ದಾಖಲಿಸಲು ಅಥವಾ ಯಾವುದೇ ರೀತಿಯ ಮಾಹಿತಿ ಪಡೆಯಲು ಬಂದಾಗ ಅವರೊಂದಿಗೆ ಗೌರವಯುತವಾಗಿ…

2 hours ago

ಸದ್ಯದಲ್ಲೇ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಯುಎಲ್ಎಂಎಸ್

• ವಿಧಾನಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾಹಿತಿ • ಇ-ಆಸ್ತಿ ತಂತ್ರಾಂಶದಲ್ಲಿ ಯಾವುದೇ ತೊಡಕಿಲ್ಲ ವಿಧಾನಸಭೆ : ಸದ್ಯದಲ್ಲೇ…

2 hours ago

ಎಲ್‌ಪಿಜಿ ಸಿಲಿಂಡರ್‌ ಅಭಾವಕ್ಕೇನು ಕಾರಣ? ಇಂಧನ ಸಚಿವಾಲಯ ಹೇಳೋದೇನು?

ಹೊಸದಿಲ್ಲಿ : ಇರಾನ್-ಇಸ್ರೇಲ್‌,ಅಮೆರಿಕ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಇಂಧನ ಬಿಕ್ಕಟ್ಟು ಎದುರಾಗುವು ಸಂಭವ ಇದ್ದು, ಡಿಸೇಲ್‌,ಪೆಟ್ರೋಲ್‌ ಮತ್ತು ಅಡುಗೆ ಅನಿಲ…

3 hours ago