ಎಸ್.ಎಸ್.ಭಟ್
‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ಮನದಿಂಗಿತ ಹಂಚಿಕೊಂಡ ಹಿರಿಜೀವ
ನಂಜನಗೂಡು: ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕಾದರೆ, ಯಾವುದಾದರೊಂದು ಕ್ರೀಡೆಯನ್ನು ಅಭ್ಯಾಸ ಮಾಡಲೇಬೇಕು. ಆರೋಗ್ಯಕ್ಕೆ ಕ್ರೀಡೆ ಮುಖ್ಯ ಎಂದು ಮೈಸೂರು ನಗರದ ಕಾಸ್ಮೋಪಾಲಿಟಿನ್ ಕ್ಲಬ್ನ ಹಿರಿಯ ಸದಸ್ಯ, ೮೧ ವರ್ಷದ ಆರ್. ನಾಗೇಶ ಅಭಿಪ್ರಾಯಪಟ್ಟರು.
ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಈ ಸಾಲಿನ ರಾಜ್ಯ ಮಟ್ಟದ ಹಿರಿಯರ ವಿಭಾಗದ ಈಜು ಸ್ಪರ್ಧೆಯಲ್ಲಿ ಕಾಸ್ಮೊಪಾಲಿಟಿನ್ ಕ್ಲಬ್ ಪರವಾಗಿ ಸ್ಪರ್ಧಿಸಿದ ಅವರು, ೫ ಚಿನ್ನದ ಪದಕ ಹಾಗೂ ೧ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ‘ಆಂದೋಲನ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ.
ಆಂದೋಲನ: ಇಲ್ಲಿಯವರೆಗೆ ಎಷ್ಟು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀರಿ?
ನಾಗೇಶ: ಇದೇ ಮೊದಲ ಸ್ಪರ್ಧೆ; ಮೊದಲ ಬಹುಮಾನ ಪಡೆದಿದ್ದೇನೆ.
ಆಂದೋಲನ: ಈಜಿನಲ್ಲಿ ತಮಗೆ ಎಷ್ಟು ವರ್ಷಗಳ ಅನುಭವ ಇದೆ?
ನಾಗೇಶ: ನನ್ನ ಇಳಿವಯಸ್ಸಿನಲ್ಲಿ ಅಂದರೆ ೫೦ನೇ ವರ್ಷದಲ್ಲಿ ಈಜು ಕಲಿತೆ. ಇದರಲ್ಲಿ ೩೦ ವರ್ಷಗಳ ಅನುಭವ ಇದೆ. ಪ್ರತಿನಿತ್ಯ ೩೦ ನಿಮಿಷಗಳಿಂದ ೧ ಗಂಟೆ ಸಮಯದವರೆಗೆ ಈಜಾಡುತ್ತಿದ್ದೆ .
ಆಂದೋಲನ: ನಿತ್ಯ ಎಷ್ಟು ಗಂಟೆ ಈಜುಗಾರಿಕೆ ಅಭ್ಯಾಸ ಮಾಡುತ್ತೀರಿ?
ನಾಗೇಶ: ಕಳೆದ ೩೦ ವರ್ಷಗಳಿಂದ ಪ್ರತಿದಿನ ಈಜಾಡುತ್ತಿದ್ದೆ. ಈಗ ವೈದ್ಯರ ಸಲಹೆ ಮೇರೆಗೆ ವಾರದಲ್ಲಿ ಒಂದೆರಡು ಬಾರಿ ಮಾತ್ರ ಈಜಾಡುತ್ತೇನೆ.
ಆಂದೋಲನ: ನಿಮ್ಮ ಮೊದಲ ಪ್ರಯತ್ನಕ್ಕೇ ಚಿನ್ನದ ಬಹುಮಾನ ದಕ್ಕಿದೆ. ಇದರ ಬಗ್ಗೆ ಏನು ಹೇಳುತ್ತೀರಿ?
ನಾಗೇಶ: ನಿಜ, ಈ ಪದಕ ಪಡೆಯಲು ಕಾಸ್ಮೋಪಾಲಿಟನ್ ಕ್ಲಬ್ನ ಈಜು ತರಬೇತುದಾರ ಜಗದೀಶ ಅವರು ನೀಡಿದ ಸೂರ್ತಿಯೇ ಕಾರಣ. ಅವರು ಹುರಿದುಂಬಿಸದಿದ್ದರೆ ನಾನು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರಲಿಲ್ಲ. ಮೊದಲ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗ ನನ್ನ ಸೂರ್ತಿ ಮತ್ತಷ್ಟು ಹೆಚ್ಚಾಯಿತು. ಅಂತಾರಾಷ್ಟ್ರೀಯ ಈಜು ಪಂದ್ಯಾವಳಿಯಲ್ಲಿ ಭಾಗಿಯಾಗುವ ಹುಮ್ಮಸ್ಸು ಈಗ ನನ್ನದಾಗಿದೆ.
ಆಂದೋಲನ: ಈಜುಗಾರಿಕೆ ಬಗ್ಗೆ ಕಿರಿಯರಿಗೆ ಏನು ಸಂದೇಶ ಕೊಡುವುದಕ್ಕೆ ಬಯಸುತ್ತೀರಿ?
ನಾಗೇಶ: ಈಜು ಆರೋಗ್ಯಕ್ಕೆ ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಈಜು ಕಲಿಯಬೇಕು ಅಥವಾ ನಿತ್ಯ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಆಂದೋಲನ: ನೀವು ಈಜು ಕಲಿತಿದ್ದು ಎಲ್ಲಿ ?
ನಾಗೇಶ: ಸಿಸಿ ಹಾಗೂ ಸ್ಪೋರ್ಟ್ಸ್ ಕ್ಲಬ್ ಸದಸ್ಯನಾದ ನಾನು, ಮೈಸೂರು ನಗರದ ಸದರ್ನ್ ಹಾಗೂ ವಿಶ್ವವಿದ್ಯಾಲಯದ ಈಜುಕೊಳಗಳಲ್ಲಿ ಕಲಿತೆ.
ಮೈಸೂರು: ಆಷಾಢ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ಯತೀಂದ್ರ…
ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ…
ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…
ನಗರ ಪ್ರದೇಶಗಳ ಹೋಟೆಲ್ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…
ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…