Andolana originals

ಪ್ರತಿಯೊಬ್ಬರ ಆರೋಗ್ಯಕ್ಕೂ ಕ್ರೀಡೆ ಬೇಕೇ ಬೇಕು: ಆರ್.ನಾಗೇಶ

ಎಸ್.ಎಸ್.ಭಟ್

‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ಮನದಿಂಗಿತ ಹಂಚಿಕೊಂಡ ಹಿರಿಜೀವ 

ನಂಜನಗೂಡು: ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕಾದರೆ, ಯಾವುದಾದರೊಂದು ಕ್ರೀಡೆಯನ್ನು ಅಭ್ಯಾಸ ಮಾಡಲೇಬೇಕು. ಆರೋಗ್ಯಕ್ಕೆ ಕ್ರೀಡೆ ಮುಖ್ಯ ಎಂದು ಮೈಸೂರು ನಗರದ ಕಾಸ್ಮೋಪಾಲಿಟಿನ್ ಕ್ಲಬ್‌ನ ಹಿರಿಯ ಸದಸ್ಯ, ೮೧ ವರ್ಷದ ಆರ್. ನಾಗೇಶ ಅಭಿಪ್ರಾಯಪಟ್ಟರು.

ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಈ ಸಾಲಿನ ರಾಜ್ಯ ಮಟ್ಟದ ಹಿರಿಯರ ವಿಭಾಗದ ಈಜು ಸ್ಪರ್ಧೆಯಲ್ಲಿ ಕಾಸ್ಮೊಪಾಲಿಟಿನ್ ಕ್ಲಬ್ ಪರವಾಗಿ ಸ್ಪರ್ಧಿಸಿದ ಅವರು, ೫ ಚಿನ್ನದ ಪದಕ ಹಾಗೂ ೧ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ‘ಆಂದೋಲನ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ.

ಆಂದೋಲನ: ಇಲ್ಲಿಯವರೆಗೆ ಎಷ್ಟು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀರಿ?

ನಾಗೇಶ: ಇದೇ ಮೊದಲ ಸ್ಪರ್ಧೆ; ಮೊದಲ ಬಹುಮಾನ ಪಡೆದಿದ್ದೇನೆ.

ಆಂದೋಲನ: ಈಜಿನಲ್ಲಿ ತಮಗೆ ಎಷ್ಟು ವರ್ಷಗಳ ಅನುಭವ ಇದೆ?

ನಾಗೇಶ: ನನ್ನ ಇಳಿವಯಸ್ಸಿನಲ್ಲಿ ಅಂದರೆ ೫೦ನೇ ವರ್ಷದಲ್ಲಿ ಈಜು ಕಲಿತೆ. ಇದರಲ್ಲಿ ೩೦ ವರ್ಷಗಳ ಅನುಭವ ಇದೆ. ಪ್ರತಿನಿತ್ಯ ೩೦ ನಿಮಿಷಗಳಿಂದ ೧ ಗಂಟೆ ಸಮಯದವರೆಗೆ ಈಜಾಡುತ್ತಿದ್ದೆ .

ಆಂದೋಲನ: ನಿತ್ಯ ಎಷ್ಟು ಗಂಟೆ ಈಜುಗಾರಿಕೆ ಅಭ್ಯಾಸ ಮಾಡುತ್ತೀರಿ?

ನಾಗೇಶ: ಕಳೆದ ೩೦ ವರ್ಷಗಳಿಂದ ಪ್ರತಿದಿನ ಈಜಾಡುತ್ತಿದ್ದೆ. ಈಗ ವೈದ್ಯರ ಸಲಹೆ ಮೇರೆಗೆ ವಾರದಲ್ಲಿ ಒಂದೆರಡು ಬಾರಿ ಮಾತ್ರ ಈಜಾಡುತ್ತೇನೆ.

ಆಂದೋಲನ: ನಿಮ್ಮ ಮೊದಲ ಪ್ರಯತ್ನಕ್ಕೇ ಚಿನ್ನದ ಬಹುಮಾನ ದಕ್ಕಿದೆ. ಇದರ ಬಗ್ಗೆ ಏನು ಹೇಳುತ್ತೀರಿ?

ನಾಗೇಶ: ನಿಜ, ಈ ಪದಕ ಪಡೆಯಲು ಕಾಸ್ಮೋಪಾಲಿಟನ್ ಕ್ಲಬ್‌ನ ಈಜು ತರಬೇತುದಾರ ಜಗದೀಶ ಅವರು ನೀಡಿದ ಸೂರ್ತಿಯೇ ಕಾರಣ. ಅವರು ಹುರಿದುಂಬಿಸದಿದ್ದರೆ ನಾನು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರಲಿಲ್ಲ. ಮೊದಲ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗ ನನ್ನ ಸೂರ್ತಿ ಮತ್ತಷ್ಟು ಹೆಚ್ಚಾಯಿತು. ಅಂತಾರಾಷ್ಟ್ರೀಯ ಈಜು ಪಂದ್ಯಾವಳಿಯಲ್ಲಿ ಭಾಗಿಯಾಗುವ ಹುಮ್ಮಸ್ಸು ಈಗ ನನ್ನದಾಗಿದೆ.

ಆಂದೋಲನ: ಈಜುಗಾರಿಕೆ ಬಗ್ಗೆ ಕಿರಿಯರಿಗೆ ಏನು ಸಂದೇಶ ಕೊಡುವುದಕ್ಕೆ ಬಯಸುತ್ತೀರಿ?

ನಾಗೇಶ: ಈಜು ಆರೋಗ್ಯಕ್ಕೆ ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಈಜು ಕಲಿಯಬೇಕು ಅಥವಾ ನಿತ್ಯ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಆಂದೋಲನ: ನೀವು ಈಜು ಕಲಿತಿದ್ದು ಎಲ್ಲಿ ?

ನಾಗೇಶ: ಸಿಸಿ ಹಾಗೂ ಸ್ಪೋರ್ಟ್ಸ್ ಕ್ಲಬ್ ಸದಸ್ಯನಾದ ನಾನು, ಮೈಸೂರು ನಗರದ ಸದರ್ನ್ ಹಾಗೂ ವಿಶ್ವವಿದ್ಯಾಲಯದ ಈಜುಕೊಳಗಳಲ್ಲಿ ಕಲಿತೆ.

ಆಂದೋಲನ ಡೆಸ್ಕ್

Recent Posts

ಚಾಮರಾಜನಗರ ಶೂಟೌಟ್‌ ಪ್ರಕರಣ: ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಕೊಡಗು: ಚಾಮರಾಜನಗರದ ಹನೂರಿನಲ್ಲಿ ನಡೆದ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೊಡಗಿನಲ್ಲಿ ಮಾಧ್ಯಮದವರು…

46 mins ago

ಸಿಎಂ ಆದ ಬಳಿಕ ಮೊದಲ ಬಾರಿಗೆ ಕೊಡಗಿಗೆ ಡಿಕೆಶಿ ಭೇಟಿ

ಕೊಡಗು: ಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದು ಕೊಡಗಿಗೆ ಭೇಟಿ ನೀಡಿದ್ದಾರೆ. ಕೊಡಗಿಗೆ ಆಗಮಿಸುತ್ತಿದ್ದಂತೆ ಕೊಡವ ಸಂಪ್ರದಾಯದಂತೆ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕೊಡವತಿಯರು…

2 hours ago

ಕೊಲೆ ಆರೋಪಿ ಪವಿತ್ರಾಗೌಡ ಬೇರೆ ಸೆಲ್‌ಗೆ ಶಿಫ್ಟ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡರನ್ನು ಪರಪ್ಪನ ಅಗ್ರಹಾರದಲ್ಲಿ ಬೇರೆ ಸೆಲ್‌ಗೆ ಶಿಫ್ಟ್‌ ಮಾಡಲಾಗಿದೆ. ಇಬ್ಬರ ಬ್ಯಾರಕ್‌ನಲ್ಲಿದ್ದ…

2 hours ago

ಶೂಟೌಟ್ ಪ್ರಕರಣ: ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಯತ್ನ: ಪೊಲೀಸರ ಲಘು ಲಾಟಿ ಪ್ರಹಾರ, 5 ಮಂದಿ ವಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ…

4 hours ago

ಹನೂರು ಗುಂಡಿನ ದಾಳಿ: ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ ಕುಟುಂಬಸ್ಥರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಖೆ ಅರಣ್ಯದಲ್ಲಿ ನಡೆದ ಗುಂಡಿನ…

4 hours ago

ಕುಶಾಲನಗರ| ಬೀದಿ ನಾಯಿ ದಾಳಿ: ವ್ಯಕ್ತಿಗೆ ಗಾಯ

ಕುಶಾಲನಗರ: ತಾಲ್ಲೂಕಿನ ಕೂಡಿಗೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ವ್ಯಕ್ತಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಹೆಗ್ಗಡಹಳ್ಳಿ ಗ್ರಾಮದ…

5 hours ago