Andolana originals

ಪ್ರತಿಯೊಬ್ಬರ ಆರೋಗ್ಯಕ್ಕೂ ಕ್ರೀಡೆ ಬೇಕೇ ಬೇಕು: ಆರ್.ನಾಗೇಶ

ಎಸ್.ಎಸ್.ಭಟ್

‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ಮನದಿಂಗಿತ ಹಂಚಿಕೊಂಡ ಹಿರಿಜೀವ 

ನಂಜನಗೂಡು: ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕಾದರೆ, ಯಾವುದಾದರೊಂದು ಕ್ರೀಡೆಯನ್ನು ಅಭ್ಯಾಸ ಮಾಡಲೇಬೇಕು. ಆರೋಗ್ಯಕ್ಕೆ ಕ್ರೀಡೆ ಮುಖ್ಯ ಎಂದು ಮೈಸೂರು ನಗರದ ಕಾಸ್ಮೋಪಾಲಿಟಿನ್ ಕ್ಲಬ್‌ನ ಹಿರಿಯ ಸದಸ್ಯ, ೮೧ ವರ್ಷದ ಆರ್. ನಾಗೇಶ ಅಭಿಪ್ರಾಯಪಟ್ಟರು.

ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಈ ಸಾಲಿನ ರಾಜ್ಯ ಮಟ್ಟದ ಹಿರಿಯರ ವಿಭಾಗದ ಈಜು ಸ್ಪರ್ಧೆಯಲ್ಲಿ ಕಾಸ್ಮೊಪಾಲಿಟಿನ್ ಕ್ಲಬ್ ಪರವಾಗಿ ಸ್ಪರ್ಧಿಸಿದ ಅವರು, ೫ ಚಿನ್ನದ ಪದಕ ಹಾಗೂ ೧ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ‘ಆಂದೋಲನ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ.

ಆಂದೋಲನ: ಇಲ್ಲಿಯವರೆಗೆ ಎಷ್ಟು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀರಿ?

ನಾಗೇಶ: ಇದೇ ಮೊದಲ ಸ್ಪರ್ಧೆ; ಮೊದಲ ಬಹುಮಾನ ಪಡೆದಿದ್ದೇನೆ.

ಆಂದೋಲನ: ಈಜಿನಲ್ಲಿ ತಮಗೆ ಎಷ್ಟು ವರ್ಷಗಳ ಅನುಭವ ಇದೆ?

ನಾಗೇಶ: ನನ್ನ ಇಳಿವಯಸ್ಸಿನಲ್ಲಿ ಅಂದರೆ ೫೦ನೇ ವರ್ಷದಲ್ಲಿ ಈಜು ಕಲಿತೆ. ಇದರಲ್ಲಿ ೩೦ ವರ್ಷಗಳ ಅನುಭವ ಇದೆ. ಪ್ರತಿನಿತ್ಯ ೩೦ ನಿಮಿಷಗಳಿಂದ ೧ ಗಂಟೆ ಸಮಯದವರೆಗೆ ಈಜಾಡುತ್ತಿದ್ದೆ .

ಆಂದೋಲನ: ನಿತ್ಯ ಎಷ್ಟು ಗಂಟೆ ಈಜುಗಾರಿಕೆ ಅಭ್ಯಾಸ ಮಾಡುತ್ತೀರಿ?

ನಾಗೇಶ: ಕಳೆದ ೩೦ ವರ್ಷಗಳಿಂದ ಪ್ರತಿದಿನ ಈಜಾಡುತ್ತಿದ್ದೆ. ಈಗ ವೈದ್ಯರ ಸಲಹೆ ಮೇರೆಗೆ ವಾರದಲ್ಲಿ ಒಂದೆರಡು ಬಾರಿ ಮಾತ್ರ ಈಜಾಡುತ್ತೇನೆ.

ಆಂದೋಲನ: ನಿಮ್ಮ ಮೊದಲ ಪ್ರಯತ್ನಕ್ಕೇ ಚಿನ್ನದ ಬಹುಮಾನ ದಕ್ಕಿದೆ. ಇದರ ಬಗ್ಗೆ ಏನು ಹೇಳುತ್ತೀರಿ?

ನಾಗೇಶ: ನಿಜ, ಈ ಪದಕ ಪಡೆಯಲು ಕಾಸ್ಮೋಪಾಲಿಟನ್ ಕ್ಲಬ್‌ನ ಈಜು ತರಬೇತುದಾರ ಜಗದೀಶ ಅವರು ನೀಡಿದ ಸೂರ್ತಿಯೇ ಕಾರಣ. ಅವರು ಹುರಿದುಂಬಿಸದಿದ್ದರೆ ನಾನು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರಲಿಲ್ಲ. ಮೊದಲ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗ ನನ್ನ ಸೂರ್ತಿ ಮತ್ತಷ್ಟು ಹೆಚ್ಚಾಯಿತು. ಅಂತಾರಾಷ್ಟ್ರೀಯ ಈಜು ಪಂದ್ಯಾವಳಿಯಲ್ಲಿ ಭಾಗಿಯಾಗುವ ಹುಮ್ಮಸ್ಸು ಈಗ ನನ್ನದಾಗಿದೆ.

ಆಂದೋಲನ: ಈಜುಗಾರಿಕೆ ಬಗ್ಗೆ ಕಿರಿಯರಿಗೆ ಏನು ಸಂದೇಶ ಕೊಡುವುದಕ್ಕೆ ಬಯಸುತ್ತೀರಿ?

ನಾಗೇಶ: ಈಜು ಆರೋಗ್ಯಕ್ಕೆ ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಈಜು ಕಲಿಯಬೇಕು ಅಥವಾ ನಿತ್ಯ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಆಂದೋಲನ: ನೀವು ಈಜು ಕಲಿತಿದ್ದು ಎಲ್ಲಿ ?

ನಾಗೇಶ: ಸಿಸಿ ಹಾಗೂ ಸ್ಪೋರ್ಟ್ಸ್ ಕ್ಲಬ್ ಸದಸ್ಯನಾದ ನಾನು, ಮೈಸೂರು ನಗರದ ಸದರ್ನ್ ಹಾಗೂ ವಿಶ್ವವಿದ್ಯಾಲಯದ ಈಜುಕೊಳಗಳಲ್ಲಿ ಕಲಿತೆ.

ಆಂದೋಲನ ಡೆಸ್ಕ್

Recent Posts

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

4 mins ago

ಮೈಶುಗರ್‌ ಶಾಲಾ ಶಿಕ್ಷಕರಿಗೆ ನೆರವಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…

29 mins ago

ಸಮಾನತೆ ತರಲೆಂದೇ ಗ್ಯಾರಂಟಿ ಯೋಜನೆಗೆ ಕೋಟಿಗಟ್ಟಲೇ ಹಣ ಖರ್ಚಿ ಮಾಡ್ತಿರೋದು: ಸಿಎಂ ಸಿದ್ದರಾಮಯ್ಯ

ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…

55 mins ago

ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಚಾಲನೆ

ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್‌ ಮುಂದೆ…

1 hour ago

ಮೈಸೂರು| ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…

1 hour ago

ಪುರಾವೆ ಇಲ್ಲದೇ ಯಾರ ಮೇಲೂ ತನಿಖೆ ಮಾಡಲ್ಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…

2 hours ago