Andolana originals

ದೇವಾಲಯ ಕಾಮಗಾರಿ ವೇಳೆ ಬೆಳ್ಳಿ ನಾಣ್ಯಗಳು ಪತ್ತೆ!

ತಾಯೂರಿನ ದೇಗುಲದಲ್ಲಿ 2 ಶತಮಾನದ ಹಿಂದಿನ ನಾಣ್ಯಗಳು ಗೋಚರ

• ಶ್ರೀಧರ್ ಆರ್.ಭಟ್
ನಂಜನಗೂಡು: ತಾಲ್ಲೂಕಿನ ತಾಯೂರಿನ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲದಲ್ಲಿ 18ನೇ ಶತಮಾನದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಅತ್ಯಂತ ಶಿಥಿಲವಾಗಿರುವ ಈ ದೇಗುಲದ ಪುನರ್ ನಿರ್ಮಾಣ ಕಾಮಗಾರಿ ಮಾಡುವಾಗಸುಮಾರು 29 ಬೆಳ್ಳಿ ನಾಣ್ಯಗಳು ದೊರೆತಿವೆ.

ಮುಜರಾಯಿ ಇಲಾಖೆಗೆ ಸೇರಿದ, ವರುಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ತಾಯೂರು ಗ್ರಾಮದ ವರದರಾಜ ಸ್ವಾಮಿ ದೇವಾಲಯ ಹಾಗೂ ಲಕ್ಕಿ ವರದರಾಜಸ್ವಾಮಿ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ 2.75 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಕಾಮಗಾರಿ ನಡೆಸುವಾಗ ನಾಣ್ಯಗಳು ಕಂಡು ಬಂದಿವೆ. ಶುಕ್ರವಾರ ಸಂಜೆ ಲಕ್ಷ್ಮೀ ವರದ ಈ ರಾಜ ದೇವಾಲಯದ ಗರ್ಭ ಗುಡಿಯ ಹಿಂದಿನ ಗೋಡೆಯೊಂದಿಗೆ ಚಾವಣಿ ಕೆಡವಿದಾಗ 4 ನಾಣ್ಯಗಳು ಗೋಚರವಾಗಿವೆ.

ಅಪರೂಪದ ನಾಣ್ಯಗಳನ್ನು ಕಂಡ ಗುತ್ತಿಗೆದಾರ ಸಿದ್ದರಾಜು ಹಾಗೂ ಕೆಲಸಗಾರರು ತಕ್ಷಣ ಅದನ್ನು ಶಿಲ್ಪಿ ಸುಕೇತರ ಗಮನಕ್ಕೆ ತಂದಾಗ ಅವರು ಅದನ್ನು ಪರಿಕ್ಷೀಸಿ ಪರಿಕ್ಷೀಸಿ ಇದು ಶತಮಾನಗಳ ಹಿಂದಿನ ಬೆಳ್ಳಿ ನಾಣ್ಯ ಎಂಬುದನ್ನು ಖಚಿತಪಡಿಸಿದ್ದಾರೆ.

ನಂತರ ಸಿದ್ದರಾಜು, ಗ್ರಾಮದ ಹಿರಿಯರು ಈ ವಿಚಾರವನ್ನು ಬಿಳಿಗೆರೆ ಠಾಣೆ ಪೊಲೀಸರು ಮತ್ತು ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿಯೇ ತಾಲೂರಿಗೆ ದೌಡಾಯಿಸಿ ಪೊಲೀಸರ ಭದ್ರತೆಯಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ ಶನಿವಾರ ಮಧ್ಯಾಹ್ನದವರೆಗೆ ನಡೆಸಿದ ಹುಡುಕಾಟದಲ್ಲಿ 29 ನಾಣ್ಯಗಳು ಪತ್ತೆಯಾಗಿದ್ದು, ಮತ್ತೆ ಹುಡುಕಾಟ ಮುಂದುವರಿದಿದೆ. ಬಿಳಿಗೆರೆ ಪೊಲೀಸ್ ಠಾಣೆಯ ಅಧಿಕಾರಿ ನಾಗರಾಜ ಅವರ ಸಮಕ್ಷಮದಲ್ಲಿ ಅದನ್ನು ಸುಪರ್ದಿಗೆ ಪಡೆದ ಅಧಿಕಾರಿಗಳು ಆ 29 ನಾಣ್ಯಗಳನ್ನು ಮಹಜರು ಮಾಡಿ ನ್ಯಾಯಾಲಯಕ್ಕೆ ಒಪ್ಪಿಸುವ ಕ್ರಮಕ್ಕೆ ಮುಂದಾದರು.

ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ತಾಯೂರಿನ ಈ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯ ವೇಳೆ ಪತ್ತೆಯಾಗಿರುವ ಈ ಎಲ್ಲ ನಾಣ್ಯಗಳು 18ನೇ ಶತಮಾನದವುಗಳಾಗಿದ್ದು ಇಂಗ್ಲೆಂಡಿನ ಮಹಾರಾಣಿಯ ವಿಕ್ಟೋರಿಯಾ ಚಿತ್ರಗಳನ್ನು ಈ ನಾಣ್ಯದ ಒಂದು ಬದಿಗೆ ಅಚ್ಚು ಹಾಕಲಾಗಿದೆ.

ಇವುಗಳು ಗೋಡೆಯ ಒಳಗಿದ್ದವೆ ಅಥವಾ ಮೇಲ್ತಾವಣಿಯಲ್ಲಿದ್ದವೆ? ಇಷ್ಟೇ ನಾಣ್ಯಗಳನ್ನು ಅಲ್ಲಿ ಇಡಲಾಗಿತ್ತೇ? ಅಥವಾ ದೇವಾಲಯದ ಉಳಿದ ಭಾಗಗಳಲ್ಲಿ ಇನ್ನೂ ನಾಣ್ಯಗಳನ್ನು ಹುದುಗಿರಿಸಿರಬಹುದೇ ಎಂಬ ಜಿಜ್ಞಾಸೆ ಪುರಾತತ್ವ ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಉಂಟಾಗಿದ್ದು, ಮುಂದಿನ ಕಾಮಗಾರಿಯನ್ನು ಇನ್ನಷ್ಟು ಜಾಗ್ರತೆಯಿಂದ ನಡೆಸುವಂತಾಗಿದೆ.

ಇದು ದೇವರಿಗೆ ಸೇರಿದ ವಸ್ತು. ಅದನ್ನು ಜೋಪಾನವಾಗಿಸುವ ಹೊಣೆಗಾರಿಕೆ ನಮ್ಮದಾಗಿದೆ.
ಸಿದ್ದರಾಜು, ದೇವಾಲಯದ ಕಾಮಗಾರಿಗಳ ಗುತ್ತಿಗೆದಾರ

ಈ ನಾಣ್ಯಗಳನ್ನು ಮಹಜರು ಮಾಡಿ ಸಂರಕ್ಷಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ.
ನಾಗರಾಜು, ಸಹಾಯಕ ಪೊಲೀಸ್ ಅಧಿಕಾರಿ, ಬಿಳಿಗೆರೆ ಠಾಣೆ

1881ರ ಮೊಹರು ಹೊಂದಿರುವ ಅಂದಿನ ಇಂಗ್ಲೆಂಡಿನ ವಿಕ್ಟೋರಿಯಾ ಮಹಾರಾಣಿಯವರ ಚಿತ್ರವಿರುವ ಅಪರೂಪದ ನಾಣ್ಯಗಳು ಇವಾಗಿವೆ.
ಸುಕೇತ್, ಶಿಲ್ಪಿ

ಈ ನಾಣ್ಯಗಳ ಕುರಿತಂತೆ ಈಗಾಗಲೇ ಬಿಳಿಗೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಅವರು ನ್ಯಾಯಾಲಯಕ್ಕೆ ಒಪ್ಪಿಸಿದ ನಂತರ ಕರ್ನಾಟಕ ಪುರಾತತ್ವ ಇಲಾಖೆಯ ಕಾನೂನಿನ ಅನ್ವಯ ಪುರಾತತ್ವ ಇಲಾಖೆ ಈ ಎಲ್ಲ ನಾಣ್ಯಗಳನ್ನು ವಶಕ್ಕೆ ಪಡೆದು ಸಂರಕ್ಷಿಸುತ್ತದೆ.

ಮಂಜುಳಾ, ಡಿಡಿ, ಪುರಾತತ್ವ ಇಲಾಖೆ

ಶುಕ್ರವಾರ ಸಂಜೆ ಲಕ್ಷ್ಮೀವರದರಾಜ ದೇವಾಲಯದ ಗರ್ಭ ಗುಡಿಯ ಹಿಂದಿನ ಗೋಡೆ, ಚಾವಣಿ ಕೆಡವಿದಾಗ ಮೊದಲಿಗೆ 4 ನಾಣ್ಯಗಳು ಪತ್ತೆ.
ಮಾಹಿತಿ ಪಡೆದು ಶುಕ್ರವಾರ ರಾತ್ರಿಯೇ ತಾಲೂರಿಗೆ ದೌಡಾಯಿಸಿದ ಪುರಾತತ್ವ ಇಲಾಖೆ ಅಧಿಕಾರಿಗಳು
ಪೊಲೀಸ್ ಭದ್ರತೆಯಲ್ಲಿ ಶನಿವಾರ ಮಧ್ಯಾಹ್ನದವರೆಗೆ ನಡೆಸಿದ ಹುಡುಕಾಟದಲ್ಲಿ ಮತ್ತೆ 29 ನಾಣ್ಯಗಳು ಪತ್ತೆಯಾಗಿದ್ದು, ಇನ್ನೂ ಮುಂದುವರಿದ ಹುಡುಕಾಟ
ನಾಣ್ಯದ ಒಂದು ಮುಖದಲ್ಲಿ ಇಂಗ್ಲೆಂಡಿನ ವಿಕ್ಟೋರಿಯಾ ಮಹಾರಾಣಿಯ ಚಿತ್ರ ಅಚ್ಚು
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ

ಆಂದೋಲನ ಡೆಸ್ಕ್

Recent Posts

ಮೈಸೂರು | ಮಳೆ ಅನಾಹುತ ಎದುರಿಸಲು ಚೆಸ್ಕಾಂ ಸನ್ನದ್ಧ

ಮೈಸೂರು : ಮಳೆಯ ಅನಾಹುತಗಳನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಕೂಡ ಸಿದ್ಧತೆ ಮಾಡಕೊಂಡಿದೆ. ಮೈಸೂರು ನಗರದ ಎಂಟು ಸಬ್ ಡಿವಿಸನ್‌ನಲ್ಲಿ…

2 hours ago

ಮತ್ತೆ ಗ್ರಾಹಕರಿಗೆ ಶಾಕ್ ; ಪೆಟ್ರೋಲ್, ಡೀಸೆಲ್ ದರ 95 ಪೈಸೆ ಹೆಚ್ಚಳ

ಹೊಸದಿಲ್ಲಿ : ಇರಾನ್ ಮೇಲಿನ ಯುದ್ಧದ ನಡುವೆಯೇ ಇಂಧನ ದರಗಳನ್ನು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಕೇಂದ್ರ…

3 hours ago

2008ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್‌

ಸಾರ್ಥಕ ಸೇವೆಯ ಸಮರ್ಪಣೆ ಸಮಾವೇಶದಲ್ಲಿ ಡಿಸಿಎಂ ವಿಶ್ವಾಸ ತುಮಕೂರು: 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ.…

3 hours ago

ಹಕ್ಕು ಪತ್ರ ವಿತರಣೆಯಲ್ಲಿ ದಾಖಲೆ ನಿರ್ಮಾಣ ಮಾಡಿದ ಕಂದಾಯ ಇಲಾಖೆ

ತುಮಕೂರು : ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆ-ಸಾರ್ಥಕ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಏಕಕಾಲಕ್ಕೆ ಕಂದಾಯ ಇಲಾಖೆಯಿಂದ ಅತ್ಯಧಿಕ ಹಕ್ಕು…

3 hours ago

ಸಂಶೋಧನೆಗೆ ಸಂಕಟ | ಶಿಷ್ಯವೇತನಕ್ಕೆ ಆಗ್ರಹಿಸಿ ಮೈ.ವಿ.ವಿ ಸಂಶೋಧಕರ ಪ್ರತಿಭಟನೆ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸಂಶೋಧಕರುಗಳಿಗೆ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಶಿಷ್ಯವೇತನರಹಿತ ಸಂಶೋಧಕರ ಬಳಗದ ವತಿಯಿಂದ ಮೈಸೂರು ವಿ.ವಿ…

3 hours ago

ಪ್ರಶ್ನೆ ಪತ್ರಿಕೆ ಸೋರಿಕೆ | ನೀಟ್‌ ರದ್ದು, ವಿದ್ಯಾರ್ಥಿಗಳ ಆತಹತ್ಯೆಗೆ ಮೋದಿ ಕಾರಣ ; ಸಿಎಂ ಆರೋಪ

ತುಮಕೂರು : ನೀಟ್ ಪರೀಕ್ಷೆ ರದ್ದಾಗಿ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿ, ಹಲವು ವಿದ್ಯಾರ್ಥಿಗಳ ಆತಹತ್ಯೆಗೆ…

4 hours ago