Andolana originals

ದೇವಾಲಯ ಕಾಮಗಾರಿ ವೇಳೆ ಬೆಳ್ಳಿ ನಾಣ್ಯಗಳು ಪತ್ತೆ!

ತಾಯೂರಿನ ದೇಗುಲದಲ್ಲಿ 2 ಶತಮಾನದ ಹಿಂದಿನ ನಾಣ್ಯಗಳು ಗೋಚರ

• ಶ್ರೀಧರ್ ಆರ್.ಭಟ್
ನಂಜನಗೂಡು: ತಾಲ್ಲೂಕಿನ ತಾಯೂರಿನ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲದಲ್ಲಿ 18ನೇ ಶತಮಾನದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಅತ್ಯಂತ ಶಿಥಿಲವಾಗಿರುವ ಈ ದೇಗುಲದ ಪುನರ್ ನಿರ್ಮಾಣ ಕಾಮಗಾರಿ ಮಾಡುವಾಗಸುಮಾರು 29 ಬೆಳ್ಳಿ ನಾಣ್ಯಗಳು ದೊರೆತಿವೆ.

ಮುಜರಾಯಿ ಇಲಾಖೆಗೆ ಸೇರಿದ, ವರುಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ತಾಯೂರು ಗ್ರಾಮದ ವರದರಾಜ ಸ್ವಾಮಿ ದೇವಾಲಯ ಹಾಗೂ ಲಕ್ಕಿ ವರದರಾಜಸ್ವಾಮಿ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ 2.75 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಕಾಮಗಾರಿ ನಡೆಸುವಾಗ ನಾಣ್ಯಗಳು ಕಂಡು ಬಂದಿವೆ. ಶುಕ್ರವಾರ ಸಂಜೆ ಲಕ್ಷ್ಮೀ ವರದ ಈ ರಾಜ ದೇವಾಲಯದ ಗರ್ಭ ಗುಡಿಯ ಹಿಂದಿನ ಗೋಡೆಯೊಂದಿಗೆ ಚಾವಣಿ ಕೆಡವಿದಾಗ 4 ನಾಣ್ಯಗಳು ಗೋಚರವಾಗಿವೆ.

ಅಪರೂಪದ ನಾಣ್ಯಗಳನ್ನು ಕಂಡ ಗುತ್ತಿಗೆದಾರ ಸಿದ್ದರಾಜು ಹಾಗೂ ಕೆಲಸಗಾರರು ತಕ್ಷಣ ಅದನ್ನು ಶಿಲ್ಪಿ ಸುಕೇತರ ಗಮನಕ್ಕೆ ತಂದಾಗ ಅವರು ಅದನ್ನು ಪರಿಕ್ಷೀಸಿ ಪರಿಕ್ಷೀಸಿ ಇದು ಶತಮಾನಗಳ ಹಿಂದಿನ ಬೆಳ್ಳಿ ನಾಣ್ಯ ಎಂಬುದನ್ನು ಖಚಿತಪಡಿಸಿದ್ದಾರೆ.

ನಂತರ ಸಿದ್ದರಾಜು, ಗ್ರಾಮದ ಹಿರಿಯರು ಈ ವಿಚಾರವನ್ನು ಬಿಳಿಗೆರೆ ಠಾಣೆ ಪೊಲೀಸರು ಮತ್ತು ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿಯೇ ತಾಲೂರಿಗೆ ದೌಡಾಯಿಸಿ ಪೊಲೀಸರ ಭದ್ರತೆಯಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ ಶನಿವಾರ ಮಧ್ಯಾಹ್ನದವರೆಗೆ ನಡೆಸಿದ ಹುಡುಕಾಟದಲ್ಲಿ 29 ನಾಣ್ಯಗಳು ಪತ್ತೆಯಾಗಿದ್ದು, ಮತ್ತೆ ಹುಡುಕಾಟ ಮುಂದುವರಿದಿದೆ. ಬಿಳಿಗೆರೆ ಪೊಲೀಸ್ ಠಾಣೆಯ ಅಧಿಕಾರಿ ನಾಗರಾಜ ಅವರ ಸಮಕ್ಷಮದಲ್ಲಿ ಅದನ್ನು ಸುಪರ್ದಿಗೆ ಪಡೆದ ಅಧಿಕಾರಿಗಳು ಆ 29 ನಾಣ್ಯಗಳನ್ನು ಮಹಜರು ಮಾಡಿ ನ್ಯಾಯಾಲಯಕ್ಕೆ ಒಪ್ಪಿಸುವ ಕ್ರಮಕ್ಕೆ ಮುಂದಾದರು.

ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ತಾಯೂರಿನ ಈ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯ ವೇಳೆ ಪತ್ತೆಯಾಗಿರುವ ಈ ಎಲ್ಲ ನಾಣ್ಯಗಳು 18ನೇ ಶತಮಾನದವುಗಳಾಗಿದ್ದು ಇಂಗ್ಲೆಂಡಿನ ಮಹಾರಾಣಿಯ ವಿಕ್ಟೋರಿಯಾ ಚಿತ್ರಗಳನ್ನು ಈ ನಾಣ್ಯದ ಒಂದು ಬದಿಗೆ ಅಚ್ಚು ಹಾಕಲಾಗಿದೆ.

ಇವುಗಳು ಗೋಡೆಯ ಒಳಗಿದ್ದವೆ ಅಥವಾ ಮೇಲ್ತಾವಣಿಯಲ್ಲಿದ್ದವೆ? ಇಷ್ಟೇ ನಾಣ್ಯಗಳನ್ನು ಅಲ್ಲಿ ಇಡಲಾಗಿತ್ತೇ? ಅಥವಾ ದೇವಾಲಯದ ಉಳಿದ ಭಾಗಗಳಲ್ಲಿ ಇನ್ನೂ ನಾಣ್ಯಗಳನ್ನು ಹುದುಗಿರಿಸಿರಬಹುದೇ ಎಂಬ ಜಿಜ್ಞಾಸೆ ಪುರಾತತ್ವ ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಉಂಟಾಗಿದ್ದು, ಮುಂದಿನ ಕಾಮಗಾರಿಯನ್ನು ಇನ್ನಷ್ಟು ಜಾಗ್ರತೆಯಿಂದ ನಡೆಸುವಂತಾಗಿದೆ.

ಇದು ದೇವರಿಗೆ ಸೇರಿದ ವಸ್ತು. ಅದನ್ನು ಜೋಪಾನವಾಗಿಸುವ ಹೊಣೆಗಾರಿಕೆ ನಮ್ಮದಾಗಿದೆ.
ಸಿದ್ದರಾಜು, ದೇವಾಲಯದ ಕಾಮಗಾರಿಗಳ ಗುತ್ತಿಗೆದಾರ

ಈ ನಾಣ್ಯಗಳನ್ನು ಮಹಜರು ಮಾಡಿ ಸಂರಕ್ಷಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ.
ನಾಗರಾಜು, ಸಹಾಯಕ ಪೊಲೀಸ್ ಅಧಿಕಾರಿ, ಬಿಳಿಗೆರೆ ಠಾಣೆ

1881ರ ಮೊಹರು ಹೊಂದಿರುವ ಅಂದಿನ ಇಂಗ್ಲೆಂಡಿನ ವಿಕ್ಟೋರಿಯಾ ಮಹಾರಾಣಿಯವರ ಚಿತ್ರವಿರುವ ಅಪರೂಪದ ನಾಣ್ಯಗಳು ಇವಾಗಿವೆ.
ಸುಕೇತ್, ಶಿಲ್ಪಿ

ಈ ನಾಣ್ಯಗಳ ಕುರಿತಂತೆ ಈಗಾಗಲೇ ಬಿಳಿಗೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಅವರು ನ್ಯಾಯಾಲಯಕ್ಕೆ ಒಪ್ಪಿಸಿದ ನಂತರ ಕರ್ನಾಟಕ ಪುರಾತತ್ವ ಇಲಾಖೆಯ ಕಾನೂನಿನ ಅನ್ವಯ ಪುರಾತತ್ವ ಇಲಾಖೆ ಈ ಎಲ್ಲ ನಾಣ್ಯಗಳನ್ನು ವಶಕ್ಕೆ ಪಡೆದು ಸಂರಕ್ಷಿಸುತ್ತದೆ.

ಮಂಜುಳಾ, ಡಿಡಿ, ಪುರಾತತ್ವ ಇಲಾಖೆ

ಶುಕ್ರವಾರ ಸಂಜೆ ಲಕ್ಷ್ಮೀವರದರಾಜ ದೇವಾಲಯದ ಗರ್ಭ ಗುಡಿಯ ಹಿಂದಿನ ಗೋಡೆ, ಚಾವಣಿ ಕೆಡವಿದಾಗ ಮೊದಲಿಗೆ 4 ನಾಣ್ಯಗಳು ಪತ್ತೆ.
ಮಾಹಿತಿ ಪಡೆದು ಶುಕ್ರವಾರ ರಾತ್ರಿಯೇ ತಾಲೂರಿಗೆ ದೌಡಾಯಿಸಿದ ಪುರಾತತ್ವ ಇಲಾಖೆ ಅಧಿಕಾರಿಗಳು
ಪೊಲೀಸ್ ಭದ್ರತೆಯಲ್ಲಿ ಶನಿವಾರ ಮಧ್ಯಾಹ್ನದವರೆಗೆ ನಡೆಸಿದ ಹುಡುಕಾಟದಲ್ಲಿ ಮತ್ತೆ 29 ನಾಣ್ಯಗಳು ಪತ್ತೆಯಾಗಿದ್ದು, ಇನ್ನೂ ಮುಂದುವರಿದ ಹುಡುಕಾಟ
ನಾಣ್ಯದ ಒಂದು ಮುಖದಲ್ಲಿ ಇಂಗ್ಲೆಂಡಿನ ವಿಕ್ಟೋರಿಯಾ ಮಹಾರಾಣಿಯ ಚಿತ್ರ ಅಚ್ಚು
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ

ಆಂದೋಲನ ಡೆಸ್ಕ್

Recent Posts

ಚಂದ್ರಗ್ರಹಣದ ವೇಳೆ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಸಮಯ ಬದಲಾವಣೆ

ಮಂಗಳೂರು: ಮಾರ್ಚ್.‌3ರಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ದರ್ಶನ ಸಮಯ…

18 mins ago

ಎರಡು ಕ್ಷೇತ್ರದ ಉಪಚುನಾವಣೆ: ಸಿಎಂ, ಡಿಸಿಎಂ ಮಹತ್ವದ ಸಭೆ

ಬೆಂಗಳೂರು: ಕಾಂಗ್ರೆಸ್‌ ಶಾಸಕರ ನಿಧನದ ಕಾರಣ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಶೀಘ್ರದಲ್ಲೇ ದಿನಾಂಕ ಘೋಷಣೆ ಆಗಲಿದೆ.…

38 mins ago

ಶಾಸಕರ ಡಿನ್ನರ್‌ ಮೀಟಿಂಗ್‌: ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಿಷ್ಟು.!

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಬಣದ ಕೆಲ ಶಾಸಕರು ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್‌ ಮೀಟಿಂಗ್‌ ನಡೆಸಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಈ…

58 mins ago

ಮಾರ್ಚ್.‌3ರಂದು ರಕ್ತಚಂದ್ರಗ್ರಹಣ: ರಾಜ್ಯದಲ್ಲಿ 25 ನಿಮಿಷ ಗ್ರಹಣ ಗೋಚರ

ಬೆಂಗಳೂರು: ಮಾರ್ಚ್.‌3ರಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ ಮಾಸದ ಹುಣ್ಣಿಮೆಯ…

1 hour ago

ಮಡಿಕೇರಿ| ಯುವಕರ ಮೇಲೆ ಹಲ್ಲೆ ಪ್ರಕರಣ: ಎಲ್ಲಾ ಆರೋಪಿಗಳ ಬಂಧನ

ಮಡಿಕೇರಿ: ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮದ ಕುರಿತು ನಿನ್ನೆ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದ ಗೌತಮ್‌ ಎಂಬಾತನ…

2 hours ago

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಮೈಸೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಮಾರ್ಚ್.‌17ರವರೆಗೂ ನಡೆಯಲಿದೆ. ಮೈಸೂರು ಜಿಲ್ಲೆಯಲ್ಲಿ 35,835 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,…

2 hours ago