ಎಂ.ಆರ್. ಚಕ್ರಪಾಣಿ
ಸ್ನೇಹಿತರು, ನೆಂಟರಿಷ್ಟರಿಗೆ ಹೋಳಿಗೆ ಊಟ ಹಾಕಿಸಿದ ರೈತ ದಂಪತಿ
ಮದ್ದೂರು: ಹಳ್ಳಿಕಾರ್ ತಳಿಯ ಗಬ್ಬದ ಹಸುವಿಗೆ ರೈತ ಕುಟುಂಬವೊಂದು ಸೀಮಂತ ಮಾಡಿ ಗ್ರಾಮಸ್ಥರು, ಸ್ನೇಹಿತರು, ನೆಂಟರಿಷ್ಟರಿಗೆ ಹೋಳಿಗೆ ಊಟ ಹಾಕಿಸಿ ಗಮನ ಸೆಳೆದಿದೆ.
ತಾಲ್ಲೂಕಿನ ದುಂಡನಹಳ್ಳಿ ಗ್ರಾಮದ ರೈತ ಕುಟುಂಬದ ಮಂಜುಳಾ-ನಾಗೇಶ್ ದಂಪತಿ, ಪುತ್ರ ಡಿ.ಎನ್.ರಘು, ಪುತ್ರಿ ಸಿಂಧು ಹಾಗೂ ಅವರ ಕುಟುಂಬದವರು ಮಹಿಳೆಯರಿಗೆ ಮಾಡುವ ಶಾಸ್ತ್ರೋಕ್ತದಂತೆ ಹಳ್ಳಿಕಾರ್ ಹಸುವಿಗೆ ಸೀಮಂತ ಮಾಡಿರುವುದು ವಿಶಿಷ್ಟವಾಗಿದೆ.
ಮಂಜುಳಾ-ನಾಗೇಶ್ ಕುಟುಂಬ ಮತ್ತು ರಾಸುಗಳ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಇದು ತಂದೆ, ತಾಯಿ ಹಾಗೂ ಮಕ್ಕಳ ಸಂಬಂಧವಿದ್ದಂತೆ. ಹಾಗಾಗಿ ತಮ್ಮ ಮನೆಯ ನೆಚ್ಚಿನ ಹಳ್ಳಿಕಾರ್ ತಳಿಯ ನಾಟಿ ಆಕಳಿಗೆ ಸೀಮಂತ ಮಾಡಿ ಜನರ ಗಮನ ಸೆಳೆದಿದ್ದಾರೆ.
ಹಸುವಿನ ಸೀಮಂತ ಕಾರ್ಯಕ್ರಮ ಕುಟುಂಬದವರ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಸುಮಾರು ೧೨ ತಟ್ಟೆಗಳಲ್ಲಿ ಸೇಬು, ದಾಳಿಂಬೆ, ಕಿತ್ತಳೆ, ವೀಳ್ಯದೆಲೆ, ಬಳೆ, ಹೂ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು, ರವೆ ಉಂಡೆ, ಕಜ್ಜಾಯ, ಮೈಸೂರು ಪಾಕ್, ಒಬ್ಬಟ್ಟು, ಸೇರಿದಂತೆ ವಿಶೇಷ ರೀತಿಯ ಸಿಹಿ ತಿನಿಸುಗಳನ್ನಿಟ್ಟು, ಹಸುವನ್ನು ಮಧುವಣಗಿತ್ತಿಯಂತೆ ಸಿಂಗರಿಸಿ, ಪೂಜೆ ಸಲ್ಲಿಸಿ ಆಗಮಿಸಿದ್ದ ಜನರನ್ನು ಸಂತೋಷಗೊಳಿಸಿತು.
ಮಂಜುಳಾ-ನಾಗೇಶ್ ಮೂಲತಃ ರೈತ ಕುಟುಂಬದವರು. ಇವರು ೨ ಜತೆ ನಾಟಿ, ೭ ಸೀಮೆ ಹಸುಗಳನ್ನು ಸಾಕಿದ್ದಾರೆ. ಮನುಷ್ಯರಿಗೆ ಸೀಮಂತ ಮಾಡುತ್ತೇವೆ, ಪ್ರಾಣಿಗಳಿಗೊ ಮಾಡಿದರೆ ತಪ್ಪೇನು ಎಂದು ಸೀಮಂತ ಕಾರ್ಯಕ್ರಮ ಮಾಡಿ ನೆರೆದವರಿಗೆ ಸಿಹಿಯೂಟ ಉಣಬಡಿಸಿದ್ದಾರೆ.
” ಹಲವಾರು ವರ್ಷಗಳಿಂದ ನಮ್ಮ ಕುಟುಂಬ ಹಸುಗಳನ್ನು ಸಾಕುತ್ತಿದ್ದು, ಹಸುಗಳ ಮೇಲಿನ ಪ್ರೀತಿಯಿಂದ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು ೧೦೦ಕ್ಕೂ ಹೆಚ್ಚು ಜನರಿಗೆ ಹೋಳಿಗೆ ಊಟ ಹಾಕಿಸಿದ್ದೇವೆ. ಹಸುಗಳು ರೈತರಿಗೆ ಮಿತ್ರರಾಗಿರುವ ಕಾರಣ ಸೀಮಂತ ಕಾರ್ಯಕ್ರಮ ಮಾಡಿದ್ದೇವೆ. ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.
ಡಿ.ಎನ್.ರಘು, ಯುವ ರೈತ, ದುಂಡನಹಳ್ಳಿ
” ಭೂಮಿ,ಹೆಣ್ತನ ಮತ್ತು ರಾಸುಗಳ ಶ್ರಮವನ್ನು ಗೌರವಿಸುವ ಒಂದು ವಿಶಿಷ್ಟ ಸಂಪ್ರದಾಯ ಸೀಮಂತ ಕಾರ್ಯಕ್ರಮವಾಗಿದೆ. ಗರ್ಭಿಣಿ ಆಕಳನ್ನು ಸಿಂಗರಿಸಿ, ಹಬ್ಬದ ವಿಶೇಷ ಭಕ್ಷ್ಯ,ಭೋಜ್ಯವನ್ನು ಉಣಬಡಿಸಲಾಯಿತು. ರೈತರು ತಮ್ಮ ರಾಸುಗಳು ಮತ್ತು ಭೂಮಿಯ ಶ್ರಮವನ್ನು ಗೌರವಿಸಲು ಮತ್ತು ಕೃತಜ್ಞತೆ ಸಲ್ಲಿಸಲು ಈ ಸಂಪ್ರದಾಯವನ್ನು ಪಾಲಿಸಬೇಕು”
ಮಂಜುಳಾ-ನಾಗೇಶ್ ರೈತ ದಂಪತಿ
ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್ಟಿಆರ್ ಹಾಗೂ ಎಚ್ಎಸ್ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…
ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…
ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…
ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಿಎಂ ಡಿ.ಕೆ.ಶಿವಕುಮಾರ್…
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…
ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…