Andolana originals

ಹಳ್ಳಿಕಾರ್ ತಳಿಯ ಹಸುವಿಗೆ ಸೀಮಂತ

ಎಂ.ಆರ್. ಚಕ್ರಪಾಣಿ

ಸ್ನೇಹಿತರು, ನೆಂಟರಿಷ್ಟರಿಗೆ ಹೋಳಿಗೆ ಊಟ ಹಾಕಿಸಿದ ರೈತ ದಂಪತಿ 

ಮದ್ದೂರು: ಹಳ್ಳಿಕಾರ್ ತಳಿಯ ಗಬ್ಬದ ಹಸುವಿಗೆ ರೈತ ಕುಟುಂಬವೊಂದು ಸೀಮಂತ ಮಾಡಿ ಗ್ರಾಮಸ್ಥರು, ಸ್ನೇಹಿತರು, ನೆಂಟರಿಷ್ಟರಿಗೆ ಹೋಳಿಗೆ ಊಟ ಹಾಕಿಸಿ ಗಮನ ಸೆಳೆದಿದೆ.

ತಾಲ್ಲೂಕಿನ ದುಂಡನಹಳ್ಳಿ ಗ್ರಾಮದ ರೈತ ಕುಟುಂಬದ ಮಂಜುಳಾ-ನಾಗೇಶ್ ದಂಪತಿ, ಪುತ್ರ ಡಿ.ಎನ್.ರಘು, ಪುತ್ರಿ ಸಿಂಧು ಹಾಗೂ ಅವರ ಕುಟುಂಬದವರು ಮಹಿಳೆಯರಿಗೆ ಮಾಡುವ ಶಾಸ್ತ್ರೋಕ್ತದಂತೆ ಹಳ್ಳಿಕಾರ್ ಹಸುವಿಗೆ ಸೀಮಂತ ಮಾಡಿರುವುದು ವಿಶಿಷ್ಟವಾಗಿದೆ.

ಮಂಜುಳಾ-ನಾಗೇಶ್ ಕುಟುಂಬ ಮತ್ತು ರಾಸುಗಳ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಇದು ತಂದೆ, ತಾಯಿ ಹಾಗೂ ಮಕ್ಕಳ ಸಂಬಂಧವಿದ್ದಂತೆ. ಹಾಗಾಗಿ ತಮ್ಮ ಮನೆಯ ನೆಚ್ಚಿನ ಹಳ್ಳಿಕಾರ್ ತಳಿಯ ನಾಟಿ ಆಕಳಿಗೆ ಸೀಮಂತ ಮಾಡಿ ಜನರ ಗಮನ ಸೆಳೆದಿದ್ದಾರೆ.

ಹಸುವಿನ ಸೀಮಂತ ಕಾರ್ಯಕ್ರಮ ಕುಟುಂಬದವರ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಸುಮಾರು ೧೨ ತಟ್ಟೆಗಳಲ್ಲಿ ಸೇಬು, ದಾಳಿಂಬೆ, ಕಿತ್ತಳೆ, ವೀಳ್ಯದೆಲೆ, ಬಳೆ, ಹೂ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು, ರವೆ ಉಂಡೆ, ಕಜ್ಜಾಯ, ಮೈಸೂರು ಪಾಕ್, ಒಬ್ಬಟ್ಟು, ಸೇರಿದಂತೆ ವಿಶೇಷ ರೀತಿಯ ಸಿಹಿ ತಿನಿಸುಗಳನ್ನಿಟ್ಟು, ಹಸುವನ್ನು ಮಧುವಣಗಿತ್ತಿಯಂತೆ ಸಿಂಗರಿಸಿ, ಪೂಜೆ ಸಲ್ಲಿಸಿ ಆಗಮಿಸಿದ್ದ ಜನರನ್ನು ಸಂತೋಷಗೊಳಿಸಿತು.

ಮಂಜುಳಾ-ನಾಗೇಶ್ ಮೂಲತಃ ರೈತ ಕುಟುಂಬದವರು. ಇವರು ೨ ಜತೆ ನಾಟಿ, ೭ ಸೀಮೆ ಹಸುಗಳನ್ನು ಸಾಕಿದ್ದಾರೆ. ಮನುಷ್ಯರಿಗೆ ಸೀಮಂತ ಮಾಡುತ್ತೇವೆ, ಪ್ರಾಣಿಗಳಿಗೊ ಮಾಡಿದರೆ ತಪ್ಪೇನು ಎಂದು ಸೀಮಂತ ಕಾರ್ಯಕ್ರಮ ಮಾಡಿ ನೆರೆದವರಿಗೆ ಸಿಹಿಯೂಟ ಉಣಬಡಿಸಿದ್ದಾರೆ.

” ಹಲವಾರು ವರ್ಷಗಳಿಂದ ನಮ್ಮ ಕುಟುಂಬ ಹಸುಗಳನ್ನು ಸಾಕುತ್ತಿದ್ದು, ಹಸುಗಳ ಮೇಲಿನ ಪ್ರೀತಿಯಿಂದ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು ೧೦೦ಕ್ಕೂ ಹೆಚ್ಚು ಜನರಿಗೆ ಹೋಳಿಗೆ ಊಟ ಹಾಕಿಸಿದ್ದೇವೆ. ಹಸುಗಳು ರೈತರಿಗೆ ಮಿತ್ರರಾಗಿರುವ ಕಾರಣ ಸೀಮಂತ ಕಾರ್ಯಕ್ರಮ ಮಾಡಿದ್ದೇವೆ. ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.

ಡಿ.ಎನ್.ರಘು, ಯುವ ರೈತ, ದುಂಡನಹಳ್ಳಿ 

” ಭೂಮಿ,ಹೆಣ್ತನ ಮತ್ತು ರಾಸುಗಳ ಶ್ರಮವನ್ನು ಗೌರವಿಸುವ ಒಂದು ವಿಶಿಷ್ಟ ಸಂಪ್ರದಾಯ ಸೀಮಂತ ಕಾರ್ಯಕ್ರಮವಾಗಿದೆ. ಗರ್ಭಿಣಿ ಆಕಳನ್ನು ಸಿಂಗರಿಸಿ, ಹಬ್ಬದ ವಿಶೇಷ ಭಕ್ಷ್ಯ,ಭೋಜ್ಯವನ್ನು ಉಣಬಡಿಸಲಾಯಿತು. ರೈತರು ತಮ್ಮ ರಾಸುಗಳು ಮತ್ತು ಭೂಮಿಯ ಶ್ರಮವನ್ನು ಗೌರವಿಸಲು ಮತ್ತು ಕೃತಜ್ಞತೆ ಸಲ್ಲಿಸಲು ಈ ಸಂಪ್ರದಾಯವನ್ನು ಪಾಲಿಸಬೇಕು”

ಮಂಜುಳಾ-ನಾಗೇಶ್ ರೈತ ದಂಪತಿ

ಆಂದೋಲನ ಡೆಸ್ಕ್

Recent Posts

ಅಮೆರಿಕ ವಶವಾದ ಇರಾನ್‌ ಹಡಗು ; ಸಶಸ್ತ್ರ ಕಡಲ್ಗಳ್ಳತನ ಎಂದ ಇರಾನ್‌

ವಾಷಿಂಗ್ಟನ್ : ಇರಾನ್ ಧ್ವಜವಿರುವ ಸರಕು ಹಡಗನ್ನು (ಟೂಸ್ಕಾ) ಒಮಾನ್ ಕೊಲ್ಲಿಯಲ್ಲಿ (ಹಾರ್ಮುಜ್ ಜಲಸಂಧಿ ಸಮೀಪ) ನಮ್ಮ ಭದ್ರತಾ ಪಡೆಗಳು…

8 mins ago

ದಲಿತ ಚಿಂತಕ ಧೀಮಂತ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರ ಹೋರಾಟದ ಕತೆ……

‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ಮನದಾಳದ ಮಾತು ಇಲ್ಲಿದೆ ನಿರೂಪಣೆ.. ಆರ್‌.ಟಿ.ವಿಠ್ಠಲಮೂರ್ತಿ ನಾನು…

45 mins ago

ಬಿಸಿ ಗಾಳಿ ; ಸಮವಸ್ತ್ರ ಕಡ್ಡಾಯಗೊಳಿಸದಂತೆ ಜಿಲ್ಲಾಧಿಕಾರಿ ಆದೇಶ

ಚಾಮರಾಜನಗರ : ತೀವ್ರ ಬಿಸಿ ಗಾಳಿ (ಹೀಟ್ ವೇವ್) ಇರುವುದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರಿ…

4 hours ago

ಪಿರಿಯಾಪಟ್ಟಣ : ಈಜಲು ನೀರಿಗಿಳಿದಿ ಯುವಕರಿಬ್ಬರು ಸಾವು

ಪಿರಿಯಾಪಟ್ಟಣ : ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ದೊಡ್ಡ ಹರವೆ ಬಳಿ ನಡೆದಿದೆ. ಪಿರಿಯಾಪಟ್ಟಣದಲ್ಲಿ…

4 hours ago

ನಮ್ಮ ಹಕ್ಕು ಕಸಿಯಲು ಅಮೆರಿಕ ಯಾರು? ; ಟ್ರಂಪ್‌ ವಿರುದ್ಧ ಇರಾನ್‌ ವಾಗ್ದಾಳಿ

ಟೆಹ್ರಾನ್ : ಇರಾನ್‌ನ ಪರಮಾಣು ಯೋಜನೆಯ ಸುತ್ತಲಿನ ಅಂತಾರಾಷ್ಟ್ರೀಯ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು…

4 hours ago

ಕಾವೇರಿ ನದಿಯಲ್ಲಿ ಆರು ಜನ ಸಾವು ; ಸಾವಿಗೀಡಾದವರೆಲ್ಲರೂ ಒಂದೇ ಕುಟುಂಬದವರು

ಕೆ.ಆರ್.ನಗರ : ತಾಲ್ಲೂಕಿನ ಹೊರವಲಯದ ಅರ್ಕೇಶ್ವರ ದೇಗುಲ ಬಳಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಸಾವನ್ನಪ್ಪಿದ ಆರು ಮಂದಿಯೂ ಒಂದೇ…

14 hours ago