Andolana originals

ಅರಮನೆ ಅಂಗಳದಲ್ಲಿ ಆಸನ ವ್ಯವಸ್ಥೆ ಕಡಿತ

ಕೆ.ಬಿ.ರಮೇಶನಾಯಕ

ಕಳೆದ ವರ್ಷ ಅDiಕ ಜನರಿಗೆ ಅವಕಾಶ ಕಲ್ಪಿಸಲು ಹೆಚ್ಚಿಸಿದ್ದ ಆಸನ ಸೌಲಭ್ಯ

ಸಿಎಂ ಸೂಚನೆಯಂತೆ ಬಾರಿ ೧೧ ಸಾವಿರಕ್ಕೂ ಹೆಚ್ಚು ಆಸನಗಳ ಕಡಿತ

ವಿವಿಐಪಿ, ವಿಐಪಿ ಪಾಸ್ಗಳ ವಿತರಣೆಯಲ್ಲೂ ಬಿಗಿ ಕ್ರಮಕ್ಕೆ ಸೂಚನೆ 

ಮೈಸೂರು: ವಿಜಯದಶಮಿ ಮೆರವಣಿಗೆಯ ವೀಕ್ಷಣೆಗೆ ಅರಮನೆ ಆವರಣದಲ್ಲಿ ಹೆಚ್ಚಿನ ಆಸನಗಳನ್ನು ಕಲ್ಪಿಸಿ ಗೊಂದಲ ವಾಗುತ್ತಿದ್ದನ್ನು ತಡೆಯಲು ಮುಂದಾಗಿರುವ ಜಿಲ್ಲಾಡಳಿತ, ಈ ಬಾರಿ ಬರೋಬ್ಬರಿ ೧೧ ಸಾವಿರಕ್ಕೂ ಹೆಚ್ಚು ಆಸನಗಳನ್ನು ಕಡಿತ ಮಾಡಲು ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಬಾರಿ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಕಲ್ಪಿಸುವಾಗ ವಿವಿಐಪಿ, ವಿಐಪಿ ಆಸನಗಳು ಸೇರಿದಂತೆ ಎಲ್ಲಾ ರೀತಿಯ ಪಾಸ್‌ಗಳ ಪ್ರಮಾಣ ತಗ್ಗಲಿದೆ. ಹಂಚಿಕೆ ಮಾಡುವ ಪಾಸ್‌ಗಳಿಗಷ್ಟೇ ಆಸನ ವ್ಯವಸ್ಥೆ ಮಾಡಿಸಿ ಯಾವುದೇ ಗೊಂದಲ ಇಲ್ಲದಂತೆ ಅಚ್ಚುಕಟ್ಟಾಗಿ ನೋಡಿಕೊಳ್ಳಲು ಈ ಬಾರಿ ಅಗತ್ಯ ಕ್ರಮಕ್ಕೆ ಸಜ್ಜಾಗಿದೆ.  ಅಚ್ಚುಕಟ್ಟಾಗಿ ನೋಡಿಕೊಳ್ಳಲು ಈ ಬಾರಿ ಅಗತ್ಯ ಕ್ರಮಕ್ಕೆ ಸಜ್ಜಾಗಿದೆ.

ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇನ್ನಿಲ್ಲದ ಪೈಪೋಟಿ ನೀಡಿ ದಸರಾ ಪಾಸ್ ಪಡೆದುಕೊಳ್ಳುವುದರಿಂದ ಸಾಕಷ್ಟು ಒತ್ತಡ ಇರುತ್ತದೆ. ಪಾಸ್ ಪಡೆದುಕೊಂಡು ಅರಮನೆಯಲ್ಲಿ ಕುಳಿತು ನೋಡಬೇಕೆಂಬ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಪಾಸ್‌ಗಳ ಬೇಡಿಕೆ ಹೆಚ್ಚಾಗಿತ್ತು. ಅದರಂತೆ, ವರ್ಷದಿಂದ ವರ್ಷಕ್ಕೆ ಅರಮನೆ ಆವರಣದಲ್ಲಿ ಆಸನಗಳ ವ್ಯವಸ್ಥೆಯ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಬರುವ ಮೂಲಕ ಪಾಸ್ ವಿತರಣೆ ಮಾಡಲಾಗುತ್ತಿತ್ತು. ಹಾಗಾಗಿ, ಗೊಂದಲ ಉಂಟಾಗುತ್ತಿತ್ತು.

೨೦೨೩ರಲ್ಲಿ ೩೮,೦೦೦ ಪಾಸ್‌ಗಳನ್ನು ವಿತರಣೆ ಮಾಡಲಾಗಿದ್ದರೆ, ೨೦೨೪ರಲ್ಲಿ ವಿವಿಐಪಿ, ವಿಐಪಿ ಸೇರಿದಂತೆ ಎಲ್ಲ ಕೆಟಗರಿಗಳ ಪಾಸ್‌ಗಳನ್ನು ಹೆಚ್ಚಿಸಿ ೫೯,೬೦೦ ಪಾಸ್‌ಗಳನ್ನು ವಿತರಿಸಲಾಗಿತ್ತು. ಪಾಸ್‌ಗಳ ಸಂಖ್ಯೆ ಜಾಸ್ತಿ ಮಾಡಿದ್ದರಿಂದಾಗಿ ಆನೆಗಳನ್ನು ಕೋಡಿ ಸೋಮೇಶ್ವರ ದೇವಸ್ಥಾನ ಮಾರ್ಗವಾಗಿ ಕರೆ ತರಲಾಗಿತ್ತು. ಅರಮನೆ ಒಳಗೆ ಹೆಚ್ಚಿನ ಪಾಸ್ ವಿತರಣೆ ಮಾಡಿದ್ದರಿಂದ ಸಾಕಷ್ಟು ಸಮಸ್ಯೆ, ಅವ್ಯವಸ್ಥೆ ಉಂಟಾಯಿತೆಂದು ಅನೇಕ ಜನಪ್ರತಿನಿಧಿಗಳು ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಪರಾಮರ್ಶಿಸಿ ಸಿಎಂ ಗಮನಕ್ಕೆ ತಂದಿದ್ದರು. ಸಿಎಂ ಸೂಚನೆ ಮೇರೆಗೆ ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ಆಸನಗಳ ಸಂಖ್ಯೆ ಕಡಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

೧೧,೬೦೦ ಆಸನಗಳು ಕಡಿಮೆ: ಕಳೆದ ವರ್ಷ ೫೯,೦೦೦ ಆಸನಗಳ ವ್ಯವಸ್ಥೆ ಮಾಡಿದ್ದರೆ, ಈ ಬಾರಿ ೧೧,೬೦೦ ಆಸನಗಳನ್ನು ಕಡಿಮೆಗೊಳಿಸಿ ೪೮,೦೦೦ ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಳೆದ ವರ್ಷ ವಿವಿಐಪಿ, ವಿಐಪಿಗಳಿಗೆ ೫ ಸಾವಿರ ಆಸನಗಳನ್ನು ನಿಗದಿಪಡಿಸಿದ್ದರೆ, ಈ ಬಾರಿ ತಲಾ ಒಂದು ಸಾವಿರ ಆಸನ ಕಡಿಮೆ ಮಾಡ ಲಾಗುತ್ತಿದೆ. ಅದೇ ರೀತಿ ಇ ಎನ್ ಕ್ಲೋಸರ್‌ನಿಂದ ಡಬ್ಲ್ಯೂ ಎನ್ ಕ್ಲೋಸರ್‌ವರೆಗೆ ಕನಿಷ್ಠ ೫೦೦ ರಿಂದ ೧ ಸಾವಿರ ಆಸಗಳಿಗೆ ಕಡಿವಾಣ ಹಾಕಲಾಗಿದೆ. ಆಸನ ಕಲ್ಪಿಸುವ ಜಾಗಗಳಿದ್ದರೂ ಶಾಮಿಯಾನ ಹಾಕಿ ಚೇರ್‌ಗಳನ್ನು ಹಾಕುತ್ತಿಲ್ಲದ್ದನ್ನು ಮನಗಂಡಿರುವ ಅಧಿಕಾರಿಗಳು ಈ ಬಾರಿ ಅಂತಹ ಕಡೆಗಳಲ್ಲಿ ಅಂದರೆ ಯು ಎನ್‌ಕ್ಲೋಸರ್‌ನಲ್ಲಿ ೨ಸಾವಿರ, ವಿ ಎನ್‌ಕ್ಲೋಸರ್‌ನಲ್ಲಿ ೨ ಸಾವಿರ, ಡಬ್ಲ್ಯೂ ಎನ್ ಕ್ಲೋಸರ್‌ನಲ್ಲಿ ೧ಸಾವಿರ ಸೀಟುಗಳನ್ನು ಸೃಜಿಸಲು ಮುಂದಾಗಿದ್ದಾರೆ

” ಜಂಬೂಸವಾರಿ ಮೆರವಣಿಗೆ ವೀಕ್ಷಣೆಗಾಗಿ ಕಳೆದ ವರ್ಷ ನಿಗದಿಪಡಿಸಿದ್ದ ಆಸನಗಳಿಗಿಂತ ಈ ಬಾರಿ ಒಂದಿಷ್ಟು ಕಡಿತಗೊಳಿಸಲಾಗಿದೆ. ಅರಮನೆ ಆವರಣದಲ್ಲಿ ಈ ಬಾರಿ ಆಸನಗಳ ವ್ಯವಸ್ಥೆಯಲ್ಲಿ ಯಾವುದೇ ಲೋಪ ಆಗದಂತೆ ಗಮನಹರಿಸಲಾಗುವುದು. ಹತ್ತು ಸಾವಿರಕ್ಕೂ ಹೆಚ್ಚು ಆಸನಗಳನ್ನು ಕಡಿಮೆ ಮಾಡುತ್ತಿರುವುದರಿಂದ ಸುಗಮವಾಗಿ ವೀಕ್ಷಣೆ ಮಾಡಲು ಸಾಧ್ಯವಾಗಲಿದೆ.”

-ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು

” ಮುಖ್ಯಮಂತ್ರಿಗಳ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಆಸನಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಜನಪ್ರತಿನಿಧಿಗಳು ನೀಡಿದ ಅಭಿಪ್ರಾಯ, ಸಲಹೆಯನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನ ಕೈಗೊಂಡಿದ್ದರು. ಅದರಂತೆ ನಾವು ಕ್ರಮಕೈಗೊಳ್ಳುತ್ತಿದ್ದೇವೆ.”

ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

ಆಂದೋಲನ ಡೆಸ್ಕ್

Recent Posts

ಪ್ರೀತ್ಸೆ ಅಂತ ಹಿಂದೆ ಬಿದ್ದ ಪ್ರೇಮಿ : ಅಪ್ರಾಪ್ತೆ ನೇಣಿಗೆ ಶರಣು

ನಂಜನಗೂಡು : ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಗೆ ಒತ್ತಾಯಿಸಿ ಮದುವೆ ಆಗುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನಲೆ ವಿಧ್ಯಾರ್ಥಿನಿ…

32 mins ago

ಚಾಮರಾಜ ಕ್ಷೇತ್ರದಲ್ಲೇ ಮನೆ, ಕಚೇರಿ ತೆರೆಯುವೆ : ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು : ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ರಾಷ್ಟ್ರ ಮಟ್ಟಕ್ಕೆ ಹೋಗಲಿಲ್ಲ ಅಂದ್ರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಆಗುತ್ತಾ?…

1 hour ago

ಅಭಿವೃದ್ಧಿಯಲ್ಲಿ ಸಿಎಂ ವಿಫಲ : ಸಂಸದ ಯದುವೀರ್‌

ಮೈಸೂರು : ರಾಜ್ಯದಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೇಗೆಲ್ಲಾ ಅನುಷ್ಠಾನ…

1 hour ago

ರಂಗಾಯಣ | ಜ.11ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ; 24 ನಾಟಕಗಳ ಪ್ರದರ್ಶನ

ಮೈಸೂರು : ರಂಗಾಯಣದ ಮಹತ್ವಾಕಾಂಕ್ಷೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ‘ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ’ ಆಶಯದಡಿ ಜ.11 ರಿಂದ…

2 hours ago

ಕೋರ್ಟ್‌ನಿಂದ ತಡೆಯಾಜ್ಞೆ ತಂದು ರಾಜಕಾರಣ ಮಾಡ್ತಿಲ್ಲ : ಪ್ರತಾಪ್‌ ಸಿಂಹ ವಿರುದ್ಧ ಮಾಜಿ ಶಾಸಕ ಎಲ್‌.ನಾಗೇಂದ್ರ ಕಿಡಿ

ಮೈಸೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ನಿನ್ನೆ(ಜ.6) ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಂಸದ ಪ್ರತಾಪ್…

2 hours ago

ದೇವರಾಜ ಅರಸು ಅವರಿಗೆ ಸಿದ್ದರಾಮಯ್ಯ ಸಾಟಿ ಇಲ್ಲ: ಎಂಎಲ್‌ಸಿ ಎಚ್.ವಿಶ್ವನಾಥ್‌

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸುತ್ತಿಗೆ ಹಿಡಿದುಕೊಂಡು ಕೂತಿದೆ. ಯಾವಾಗ ಹೊಡೆಯುತ್ತದೆಯೋ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು…

5 hours ago