Andolana originals

ಕಾವೇರಿ ನೀರಾವರಿ ನಿಗಮದಲ್ಲಿ ಸಂಬಳದ ಸಂಕಷ್ಟ

ಶ್ರೀಧರ್ ಆರ್ ಭಟ್

೧,೫೦೦ ಕ್ಕೂ ಹೆಚ್ಚು ಸಿಬ್ಬಂದಿಗೆ ೩ ತಿಂಗಳಿಂದ ವೇತನವಿಲ್ಲ 

ಸಂಸಾರ ನಿರ್ವಹಣೆಯ ದಾರಿ ತೋರದೆ ಕಂಗಾಲು

ರಾಜ್ಯ ಸರ್ಕಾರದತ್ತ ಚಾತಕ ಪಕ್ಷಿಯಂತೆ ನೋಡುತ್ತಿರುವ ಸಿಬ್ಬಂದಿ

ಮೈಸೂರು: ಸಂಬಳಕ್ಕಾಗಿ ಕಾಯುತ್ತಿರುವ ಕಾವೇರಿ ನೀರಾವರಿ ನಿಗಮದ ೧,೫೦೦ಕ್ಕೂ ಹೆಚ್ಚು ಸಿಬ್ಬಂದಿ… ಕಟ್ಟಡ ದುರಸ್ತಿಗೆ ಸುಣ್ಣ ಬಣ್ಣಕ್ಕೆ ಹಣವಿದೆ, ಆದರೆ ಸಿಬ್ಬಂದಿ ಸಂಬಳಕ್ಕೆ ಮಾತ್ರ ದುಡ್ಡಿಲ್ಲ! ರೈತರ ಜಮೀನುಗಳಿಗೆ ನೀರು ಹರಿಸುವ ಇವರಿಗೆ ವೇತನ ಇಲ್ಲದೆ ಗುಟುಕು ನೀರು ಕುಡಿಯಬೇಕಾದ ದುಸ್ಥಿತಿ ಎದುರಾಗಿದೆ.

ರಾಜ್ಯದ ಅತ್ಯಂತ ಪ್ರಮುಖ ನೀರಾವರಿ ನಿಗಮಗಳಲ್ಲಿ ಒಂದಾಗಿರುವ ಹತ್ತು ಜಿಲ್ಲೆಗಳ ವ್ಯಾಪ್ತಿಯ ಕಾವೇರಿ ನೀರಾವರಿ ನಿಗಮದ ಶೋಚನೀಯ ಸ್ಥಿತಿ ಇದು.

ಹಳೇ ಮೈಸೂರು ಭಾಗದ ಹತ್ತು ಜಿಲ್ಲೆಗಳನ್ನೊಳಗೊಂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿ ಗಳು, ಸಾವಿರಾರು ಸಿಬ್ಬಂದಿ ತಿಂಗಳ ಸಂಬಳ ಇಂದು ಬರುತ್ತದೆ… ನಾಳೆ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ.

ಮಾರ್ಚ್ ತಿಂಗಳಲ್ಲಿ ದಿನ ಕಳೆದುಹೋದರೂ ಅವರ ಸಂಬಳ ಇನ್ನೂ ಬಂದೇ ಇಲ್ಲ. ಭತ್ತ ಬೆಳೆಯಲು ಅನ್ನದಾತನ ಭೂಮಿಗೆ ನಾಲೆಗಳಿಂದ ನೀರು ಹರಿಸುವ ಜವಾಬ್ದಾರಿಯುತ ಕಾರ್ಯದಲ್ಲಿ ತೊಡಗಿಕೊಂಡಿರುವ ನಿಗಮದ ಪ್ರಧಾನ ನಿರ್ದೇಶಕರಿಂದ ಹಿಡಿದು ಸ್ವಚ್ಛತಾ ಸಿಬ್ಬಂದಿಗಳವರೆಗೂ ಕಳೆದ ಮೂರು ತಿಂಗಳುಗಳಿಂದಲೂ ಸಂಬಳ ಬಂದಿಲ್ಲ. ಸರ್ಕಾರಿ ಕೆಲಸ ಆಗಿರುವುದರಿಂದ ತಿಂಗಳಾಯಿತು ಎಂದರೆ ಸಂಬಳವಂತೂ ಗ್ಯಾರಂಟಿ ಎಂದು ಆರಾಮವಾಗಿದ್ದ ನಿಗಮದ ಅಧಿಕಾರಿಗಳು ಸಂಬಳ ಬಾರದೆ ಕಂಗಾಲಾಗಿದ್ದಾರೆ. ದವಸ ಧಾನ್ಯ ಖರೀದಿಸಿರುವ ಅಂಗಡಿಯವರು, ಹಾಲಿನವರು, ಮನೆ ಕೆಲಸದವರು, ತರಕಾರಿಯವರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಬಾಕಿ ಅಥವಾ ವೇತನ ಪಾವತಿ ಮಾಡುತ್ತಿದ್ದವರು, ಈಗ ಅವರೆಲ್ಲರಿಗೂ ಹಣ ಕೊಡಲು ಆಗದೆ ಪರದಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಸಂಬಳ ತಡವಾಗಿದೆ. ಮುಂದಿನ ತಿಂಗಳು ಪಾವತಿ ಗ್ಯಾರಂಟಿ ಎಂದು ಜನವರಿ, ಫೆಬ್ರವರಿಯಲ್ಲಿ ಪ್ರಯಾಸಪಟ್ಟು ಸಮಜಾಯಿಷಿ ನೀಡಿದ ಅವರನ್ನು ಒಪ್ಪಿಸಿ ನಿಟ್ಟುಸಿರುಬಿಟ್ಟಿದ್ದರಂತೆ. ಆದರೆ, ಈ ತಿಂಗಳು ಕೂಡ ಪಗಾರ ಬಾರದೆ ಕಂಗಾಲಾಗಿದ್ದಾರೆ.

ನಮ್ಮ ಮೇಲಾಧಿಕಾರಿಗಳು ಹೇಗೋ ಜೀವನ ನಡೆಸುತ್ತಾರೆ. ಆದರೆ ಸಂಸಾರ ನಿರ್ವಹಣೆಯನ್ನು ಸರಿದೂಗಿಸಲು ತಿಂಗಳ ಸಂಬಳವನ್ನೇ ನಂಬಿಕೊಂಡಿರುವ ನಮ್ಮ ಪಾಡೇನು? ಎಂಬುದಾಗಿ ಸಿಬ್ಬಂದಿ ಅಲವತ್ತುಕೊಳ್ಳುತ್ತಾರೆ.

ನಿಗಮದಲ್ಲಿ ಇದೇ ಮೊದಲ ಬಾರಿಗೆ ಸಂಬಳ ಇಷ್ಟು ತಡವಾಗುತ್ತಿದೆ. ಆದರೆ, ನಮ್ಮ ಗೋಳು ಕೇಳುವವರಾರು ಎಂದು ಸಿಬ್ಬಂದಿ ಪರಿತಪಿಸುತ್ತಿದ್ದಾರೆ. ನಮ್ಮ ನೋವಿನ ಸುದ್ದಿಯನ್ನು ಪ್ರಕಟಿಸಿ, ಅದನ್ನು ನೋಡಿಯಾದರೂ ರಾಜ್ಯ ಸರ್ಕಾರ ನಮಗೆ ಸಂಬಳವನ್ನು ನೀಡಲಿ ಎಂದು ಆಶಿಸುವ ಸಿಬ್ಬಂದಿ, ಆದರೆ ನಮ್ಮ ಹೆಸರನ್ನು ಮಾತ್ರ ಪ್ರಕಟಿಸಬೇಡಿ ಎನ್ನುತ್ತಾರೆ.

ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಮಂಡ್ಯ, ರಾಮನಗರ, ಕನಕಪುರ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಗಮದ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ನೀರಾವರಿ ನಿಗಮದಲ್ಲಿ ಹಾಲಿ ಇರುವ ೧,೫೪೨ ಜನರಿಗೆ ಮಾಸಿಕ ಸಂಬಳದ ಮೊತ್ತ ಅಂದಾಜು ೧೫ ಕೋಟಿ ರೂ.ಗೂ ಹೆಚ್ಚು ಬಿಡುಗಡೆಯಾಗಬೇಕಿದೆ.

ಆಂದೋಲನ ಡೆಸ್ಕ್

Recent Posts

ಮಹಿಳೆಯರೊಂದಿಗೆ ಪೊಲೀಸ್ ಠಾಣೆಯಲ್ಲಿ ಗೌರವಯುತವಾಗಿ ವರ್ತಿಸಿ : ನಾಗಲಕ್ಷ್ಮೀ ಚೌಧರಿ

ಮೈಸೂರು : ಪೊಲೀಸ್ ಠಾಣೆಯಲ್ಲಿ ಮಹಿಳೆಯುರು ದೂರು ದಾಖಲಿಸಲು ಅಥವಾ ಯಾವುದೇ ರೀತಿಯ ಮಾಹಿತಿ ಪಡೆಯಲು ಬಂದಾಗ ಅವರೊಂದಿಗೆ ಗೌರವಯುತವಾಗಿ…

36 mins ago

ಸದ್ಯದಲ್ಲೇ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಯುಎಲ್ಎಂಎಸ್

• ವಿಧಾನಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾಹಿತಿ • ಇ-ಆಸ್ತಿ ತಂತ್ರಾಂಶದಲ್ಲಿ ಯಾವುದೇ ತೊಡಕಿಲ್ಲ ವಿಧಾನಸಭೆ : ಸದ್ಯದಲ್ಲೇ…

53 mins ago

ಎಲ್‌ಪಿಜಿ ಸಿಲಿಂಡರ್‌ ಅಭಾವಕ್ಕೇನು ಕಾರಣ? ಇಂಧನ ಸಚಿವಾಲಯ ಹೇಳೋದೇನು?

ಹೊಸದಿಲ್ಲಿ : ಇರಾನ್-ಇಸ್ರೇಲ್‌,ಅಮೆರಿಕ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಇಂಧನ ಬಿಕ್ಕಟ್ಟು ಎದುರಾಗುವು ಸಂಭವ ಇದ್ದು, ಡಿಸೇಲ್‌,ಪೆಟ್ರೋಲ್‌ ಮತ್ತು ಅಡುಗೆ ಅನಿಲ…

1 hour ago

ಮೈಸೂರು ಕುಡಿವ ನೀರು, ಒಳಚರಂಡಿ ವ್ಯವಸ್ಥೆಗೆ 800 ಕೋಟಿ ರೂ. : ಸಚಿವ ಬೈರತಿ ಸುರೇಶ್

ವಿಧಾನಸಭೆ : ಸಾಂಸ್ಕೃತಿಕ ನಗರ ಮೈಸೂರಿನ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ…

2 hours ago

ಸಿಲಿಂಡರ್‌ಗಳ ಮೇಲೆ ಕಳ್ಳರ ಕಣ್ಣು!

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದ ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಮಧ್ಯೆ ಸಿಲಿಂಡರ್‌ ಕಳ್ಳತನ ಸಹ ಹೆಚ್ಚಾಗಿದ್ದು…

3 hours ago

ಇರಾನ್‌ ನೂತನ ಸುಪ್ರೀಂ ಲೀಡರ್‌ಗೆ ಕಾಲು ಕಟ್‌, ಕೋಮಾಗೆ ಜಾರಿದ ಮೊಜ್ತಾಬಾ? ದಾಳಿ ಬಗ್ಗೆ ಸಿಗದ ಸ್ಪಷ್ಟನೆ

ಟೆಹ್ರಾನ್ : ಇರಾನ್- ಇಸ್ರೇಲ್‌,‌ ಅಮೆರಿಕಾ ಯುದ್ಧ ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದು, ತಂದೆ ಸಾವಿನ ಬಳಿಕ ನೇಮಕಗೊಂಡ ಇರಾನ್‌ ಸುಪ್ರೀಂ…

3 hours ago