Chunchanakatte Falls
ಮೇ ತಿಂಗಳಲ್ಲೇ ತುಂಬಿ ಹರಿದ ಕಾವೇರಿ; ಜಲಪಾತ ವೀಕ್ಷಣೆಗೆ ಆಗಮಿಸುತ್ತಿರುವ ಜನರು
ಆನಂದ್ ಹೊಸೂರು
ಹೊಸೂರು: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ರೈತ ಸಮುದಾಯದಲ್ಲಿ ಹರ್ಷ, ಮೇ ತಿಂಗಳಲ್ಲೇ ತುಂಬಿ ಹರಿದ ಕಾವೇರಿ, ಜಲಪಾತದ ರಮಣೀಯ ದೃಶ್ಯ ವೀಕ್ಷಿಸಲು ಬರುತ್ತಿರುವ ಪ್ರವಾಸಿಗರು, ಸೆಲ್ಫಿ ತೆಗೆಯಲು ಮುಗಿಬೀಳುತ್ತಿರುವ ಯುವ ಜನತೆ…
ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಕಂಡು ಬರುತ್ತಿರುವ ರಮಣೀಯ ದೃಶ್ಯ.
ಕೊಡಗಿನಲ್ಲಿ ಹಾಗೂ ನದಿಯ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಮೈದುಂಬಿ ಹರಿಯುತ್ತಿದ್ದು, ಚುಂಚನಕಟ್ಟೆಯಲ್ಲಿ ೨೧ ಸಾವಿರ ಕ್ಯೂಸೆಕ್ಸ್ಗೂ ಅಧಿಕ ಪ್ರಮಾಣದ ನೀರು ಹರಿಯುತ್ತಿರುವ ಕಾರಣ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಕಾವೇರಿ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಈ ನದಿಯ ಕೊನೆಯ ಜಲಪಾತವಾಗಿರುವ ಚುಂಚನಕಟ್ಟೆಯ ಶ್ರೀರಾಮ ದೇವರ ದೇವಸ್ಥಾನದ ಸಮೀಪ ಇರುವ ಧನುಷ್ಕೋಟಿ ಜಲಪಾತ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸಿ ಜಲಧಾರೆಯ ವೈಭವ ಸವಿಯುತ್ತಿದ್ದಾರೆ.
ಮಳೆ ಇಲ್ಲದೆ ತನ್ನ ಸೊಬಗನ್ನು ಕಳೆದುಕೊಂಡಿದ್ದ ಈ ಜಲಪಾತದಲ್ಲಿ ಈಗ ೪೦ಕ್ಕೂ ಹೆಚ್ಚು ಅಡಿ ಎತ್ತರದಿಂದ ನದಿಯ ನೀರು ಬೀಳುತ್ತಾ, ಹಾಲಿನಂತೆ ಉಕ್ಕಿ ಹರಿಯುತ್ತಿರುವುದನ್ನು ಕಾಣಬಹುದಾಗಿದೆ.
ಕಳೆದ ವರ್ಷ ಜೂನ್ ಅಂತ್ಯದಲ್ಲಿ ತುಂಬಿ ಹರಿದಿದ್ದ ಕಾವೇರಿ ಈ ಬಾರಿ ತಿಂಗಳಿಗೂ ಮುಂಚೆಯೇ ತುಂಬಿ ಹರಿಯುತ್ತಿರುವುದು ಪ್ರಕೃತಿ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯ ಜಲಪಾತ ವೀಕ್ಷಣೆ ಮಾಡಲು ಹೆಚ್ಚಿನ ರೀತಿಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಆಂಜನೇಯ ಸ್ವಾಮಿ ಪ್ರತಿಮೆ ಮುಂದೆ ಸೆಲ್ಫಿ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎಂಬಂತೆ ಮುಗಿಬೀಳುತ್ತಿದ್ದಾರೆ.
ಇದೇ ರೀತಿ ನದಿಯ ಕೂದಲೆಳೆ ದೂರದಲ್ಲಿ ಇರುವ ರಾಮಸಮುದ್ರ ಅಣ್ಣೆಕಟ್ಟೆ ಮತ್ತು ಚುಂಚನಕಟ್ಟೆಯಿಂದ ಸುಮಾರು ೭ ಕಿ.ಮೀ ದೂರದಲ್ಲಿರುವ ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಚಾಮರಾಜ ನಾಲೆಯ ಅಣೆಕಟ್ಟೆಯ ಮೇಲೆ ಕಾವೇರಿ ನದಿ ಹರಿಯುವ ದೃಶ್ಯ ನಯನ ಮನೋಹರವಾಗಿದೆ.
” ಜಲಪಾತಗಳು ಮೈದುಂಬಿ ಹರಿಯುವಾಗಲೂ ಜನರನ್ನು ಸೆಳೆಯಲು ಯಾವುದೇ ಪ್ರಚಾರ ಮಾಡದಿರುವುದು ಹಾಗೂ ಪ್ರವಾಸಿಗರಿಗೆ ವಿಚಾರ ತಿಳಿಸದಿರುವುದು ದುರಂತ.”
-ಎಚ್.ಡಿ.ಭಾಸ್ಕರ್, ಹೊಸೂರು ಗ್ರಾಮಸ್ಥರು
” ಚುಂಚನಕಟ್ಟೆ ನಮಗೆ ಬಾಲ್ಯದಿಂದಲೂ ಆಕರ್ಷಣೀಯ ಸ್ಥಳವಾಗಿದ್ದು ಜಲಪಾತ ವೀಕ್ಷಣೆಯೇ ನಮಗೆ ಒಂದು ಅದ್ಭುತ ಅನುಭವ ನೀಡುತ್ತದೆ. ಪ್ರವಾಸಿಗರಿಗೆ ಚುಂಚನಕಟ್ಟೆ ಉತ್ತಮ ಆಯ್ಕೆಯಾಗಲಿದೆ.”
-ರಮೇಶ್, ಪ್ರವಾಸಿ
ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…
ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…
ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…
ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…
ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…