ಕಾರ್ಯಾಚರಣೆ ಆರಂಭಿಸಿದ ನಗರಪಾಲಿಕೆ
ಮೈಸೂರು: ನಗರದ ವಿವಿಧ ಬಡಾವಣೆಗಳಲ್ಲಿಒಣಗಿದ ಮರಗಳು ಹಾಗೂ ಅಪಾಯಕಾರಿ ರೆಂಬೆಗಳ ತೆರವಿಗೆ ಮಹಾ ನಗರಪಾಲಿಕೆಯ ತೋಟಗಾರಿಕೆ ವಿಭಾಗ ಕಾರ್ಯಾಚರಣೆ ಆರಂಭಿಸಿದೆ.
‘ಆಂದೋಲನ’ ದಿನಪತ್ರಿಕೆ ನಡೆಸಿದ ‘ಒಣ ಮರ ಜನರು ಹೈರಾಣ’ ಅಭಿಯಾನದಲ್ಲಿ ಫೆ.೨೬ ರಿಂದ ಮಾ.೩ರವರೆಗೆ ಒಣ ಮರಗಳು ಹಾಗೂ ರೆಂಬೆಗಳ ಬಗ್ಗೆ ಸಾರ್ವಜನಿಕರು ನೀಡಿರುವ ದೂರುಗಳು, ಅಭಿಪ್ರಾಯಗಳನ್ನು ಪ್ರಕಟಿಸಲಾಗಿತ್ತು. ಒಣಗಿದ ಅಪಾಯಕಾರಿ ಮರದ ಬೃಹತ್ ರೆಂಬೆಗಳನ್ನು ನಗರಪಾಲಿಕೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಅವರ ಮಾರ್ಗದರ್ಶನದಲ್ಲಿ ತೆರವುಗೊಳಿಸಲಾಗಿದೆ.
ರಾಜೀವನಗರದ ಮುಖ್ಯರಸ್ತೆಯಲ್ಲಿ ಸಂಪೂರ್ಣವಾಗಿ ಒಣಗಿ ನಿಂತಿದ್ದ ದೊಡ್ಡ ಮರದ ಬಗ್ಗೆ ಇಂದ್ರೇಶ್ ಎಂಬವರು ಪತ್ರಿಕೆಗೆ ಫೋಟೊ ಸಹಿತ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಆ ಮರದ ಎ ರೆಂಬೆಗಳನ್ನು ತೆರವು ಮಾಡಲಾಗಿದೆ.
ಪೂರ್ಣವಾಗಿ ತೆರವು ಮಾಡಲು ಅರಣ್ಯ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಆದರೂ ಸಾರ್ವಜನಿಕರ ಹಿತದೃಷ್ಟಿಯಿಂದ ತೆರವು ಮಾಡಲಾಗಿದೆ ಎಂದು ಮೋಹನ್ ತಿಳಿಸಿದರು.
ನಗರದ ವಿವಿಧ ಬಡಾವಣೆಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಕಂಡು ಬಂದಿರುವ ಒಣಗಿದ ರೆಂಬೆಗಳನ್ನು ತೋಟಗಾರಿಕೆ ವಿಭಾಗದ ಸಿಬ್ಬಂದಿ ನಿರಂತರವಾಗಿ ಹುಡುಕಾಡಿ ಏಣಿ ಇರುವ ಜೀಪ್ ಸಹಾಯದಿಂದ ತೆರವು ಮಾಡುತ್ತಿzರೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ರೆಂಬೆಗಳು ಕೂಡ ಒಣಗಲು ಆರಂಭಿಸಿವೆ.
ಕೆಲವು ದೊಡ್ಡ ಮರಗಳಲ್ಲಿ ಅರ್ಧ ಮುರಿದಿರುವ ರೆಂಬೆಗಳೂ ಇವೆ. ಅವು ಸ್ವಲ್ಪ ಹಸಿರಾಗಿ ಕಂಡರೂ ಯಾವ ಗಳಿಗೆಯಲ್ಲಿ ಬೇಕಾದರೂ ಮುರಿದು ಬೀಳುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಸಿಬ್ಬಂದಿ ಹೇಳುತ್ತಾರೆ.
ನಗರದ ಕೆಲವು ಉದ್ಯಾನಗಳಲ್ಲಿ ದಟ್ಟವಾಗಿ ಬೆಳೆದಿರುವ ಮರಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಮುರಿದಿರುವ ರೆಂಬೆಗಳ ಹುಡುಕಾಟ ನಡೆಸಿದ್ದಾರೆ.
ರಸ್ತೆ ಬದಿಯಲ್ಲಿ ಕಂಡುಬಂದ ಅಪಾಯಕಾರಿ ಹಾಗೂ ಒಣಗಿದ ಮರಗಳು ಹರಡಿಕೊಂಡಿರುವ ರೆಂಬೆಗಳನ್ನು ತೆರವು ಮಾಡಿದ್ದೇವೆ ಎಂದು ಹೇಳಿದರು.
” ‘ಆಂದೋಲನ’ ದಿನಪತ್ರಿಕೆ ವರದಿ ಆಧರಿಸಿ ಅರಣ್ಯ ಇಲಾಖೆಗೆ ಪತ್ರ ಬರೆದು ಅನುಮತಿ ಕೋರಿದ್ದೇವೆ. ಈವರೆಗೂ ನಮಗೆ ಅನುಮತಿ ಸಿಕ್ಕಿಲ್ಲ. ಆದರೂ ಯಾವಾಗ ಬೇಕಾದರೂ ಅಪಾಯ ಉಂಟು ಮಾಡುವ ಒಣಗಿರುವ ಮರಗಳ ರೆಂಬೆಗಳನ್ನು ತೆರವು ಮಾಡಿದ್ದೇವೆ. ಅಪಾಯದ ಅಂಚಿನಲ್ಲಿರುವ ಹಲವು ಹಸಿ ಮರಗಳನ್ನು ಅನುಮತಿ ಇಲ್ಲದ ಕಾರಣ, ಹಾಗೆಯೇ ಉಳಿಸಿದ್ದೇವೆ.”
ಮೋಹನ್ ಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಹಾನಗರ ಪಾಲಿಕೆ, ಮೈಸೂರು
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…