ಮೈಸೂರಿನಲ್ಲಿ ಜೂ.೨೧ರಂದು ನಡೆದ ಯೋಗ ದಿನಾಚರಣೆ, ರಾಜಕೀಯ ಹೇಗೆ ಒಂದು ಶ್ರೇಷ್ಠ ಆಚರಣೆಯ ಅಂತರಾಳವನ್ನು ವಶಪಡಿಸಿಕೊಳ್ಳಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನದಂತಿತ್ತು.
ಯೋಗದ ಉಪಯೋಗಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ನಡೆಯಬೇಕಾದ ಈ ಕಾರ್ಯಕ್ರಮ ರಾಜಕೀಯ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ವಿಷಾದನೀಯ.
ಯೋಗ ಪ್ರದರ್ಶನಕ್ಕೆ ಮುಂಜಾನೆ ಸಮಯ ಸೂಕ್ತ, ಆದರೆ ಯೋಗ ದಿನಾಚರಣೆಯಂದು ರಾಜಕೀಯ ಅತಿಥಿಗಳ ಆಗಮನಕ್ಕಾಗಿ ಕಾಲಹರಣ ಮಾಡಲಾಯಿತು. ಕಾರ್ಯಕ್ರಮದ ಸಮಯವನ್ನು ಯೋಗದ ತಾತ್ವಿಕತೆಯಡಿ ರೂಪಿಸದೆ, ರಾಜಕೀಯ ನಾಯಕರ ಸಮಯಾನುಸಾರ ಆಯ್ಕೆ ಮಾಡಲಾಗಿತ್ತು. ರಾಜಕೀಯ ನಾಯಕರು ಆಗಮಿಸಿ ಬೆಳಿಗ್ಗೆ ೭.೩೦ರ ವೇಳೆಗೆ ಯೋಗ ಆರಂಭವಾಗುವ ಹೊತ್ತಿಗೆ ಭಾಗವಹಿಸಿದ್ದವರ ಉತ್ಸಾಹ ಕಡಿಮೆಯಾಗಿತ್ತು.
ಯೋಗದ ನಿಜವಾದ ಉದ್ದೇಶ ಈ ಎಲ್ಲಾ ಅವ್ಯವಸ್ಥೆಯ ಮಧ್ಯೆ ಮರೆಯಾಗಿ ಹೋಯಿತು. ರಾಜಕೀಯ ನಾಯಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಯೋಗ ದಿನಾಚರಣೆಯ ಮಹತ್ವವನ್ನು ಮರೆತಿದ್ದು ದುರದೃಷ್ಟಕರ.
-ಡಾ. ಅರುಣಾ ಆದರ್ಶ್
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…
ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…
ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…
ಮಂಡ್ಯ: ರಾಜ್ಯದಲ್ಲಿ ಕೆಆರ್ಎಸ್ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಡ್ಯಾಂನಿಂದ…
ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…