Andolana originals

ಓದುಗರ ಪತ್ರ: ಮಂಡ್ಯದಲ್ಲಿ ಇದ್ದೂ ಇಲ್ಲದಂತಿರುವ ನಗರ ಸಾರಿಗೆ!

ಮಂಡ್ಯ ನಗರಕ್ಕೆ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ೨೦೧೨ರಲ್ಲಿ ರಾಜ್ಯ ಸರ್ಕಾರ ಹನ್ನೊಂದು ಹೊಸ ಬಸ್ಗಳನ್ನು ಖರೀದಿಸಿತು. ಕೆಲವು ಕಾಲ ನಗರ ಬಸ್ಗಳು ಕಾರ್ಯ ನಿರ್ವಹಿಸಿದವು. ಬಹುಶಃ ನಷ್ಟದಲ್ಲಿ ಇದ್ದ ಕಾರಣ ಈ ನಗರ ಸಾರಿಗೆ ಬಸ್ ಸೌಲಭ್ಯವನ್ನು ನಿಲ್ಲಿಸಲಾಯಿತು.

ಆದರೆ ಅದೇ ನಗರ ಸಾರಿಗೆ ಬಸ್‌ಗಳು ಮಂಡ್ಯದಿಂದ ಪಾಂಡವಪುರ, ತಿ. ನರಸೀಪುರ, ಬನ್ನೂರು ಮುಂತಾದ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಈಗ ಮಂಡ್ಯ ನಗರದ ವ್ಯಾಪ್ತಿ ವಿಸ್ತಾರವಾಗಿದ್ದು, ೩೫ ವಾರ್ಡ್‌ಗಳನ್ನು ಹೊಂದಿರುವ ನಗರವಾಗಿದೆ. ನೆಹರು ನಗರ, ಸುಭಾಷ್ ನಗರ, ವಿದ್ಯಾನಗರ, ಬಂದೀಗೌಡ ಬಡಾವಣೆ, ಚಾಮುಂಡೇಶ್ವರಿ ನಗರ, ಶಂಕರ ನಗರ, ಕಾವೇರಿ ನಗರ, ವಿಶ್ವೇಶ್ವರಯ್ಯ ನಗರ, ವಿವೇಕಾನಂದ ನಗರ, ಸ್ವರ್ಣಸಂದ್ರ, ಆರ್ಕೆಶ್ವರ ನಗರ, ಅಸಿಟೇಟ್ ಟೌನ್, ಇಂಡುವಾಳು ಮುಂತಾದ ಬಡಾವಣೆಗಳು ಮಂಡ್ಯ ನಗರ ವ್ಯಾಪ್ತಿಯಲ್ಲಿ ಇವೆ.

ಇದರೊಂದಿಗೆ ಸುತ್ತಮುತ್ತಲಿನ ಸಾತನೂರು ಬಡಾವಣೆ, ದ್ವಾರಕ ನಗರ, ಚಿಕ್ಕಮಂಡ್ಯ, ಶಂಕರಪುರ, ಕೋಣಹಳ್ಳಿ, ಕಲ್ಲಹಳ್ಳಿ, ಕ್ಯಾತಂಗೆರೆ, ಹೊಸಹಳ್ಳಿ, ರಾಮನಹಳ್ಳಿ, ಗುತ್ತಲು, ಶ್ರೀನಿವಾಸಪುರ, ಶ್ರೀರಾಮ ನಗರ, ನಾಡ ಪ್ರಭು ಕೆಂಪೇಗೌಡ ಲೇಔಟ್ ಮುಂತಾದ ಬಡಾವಣೆಗಳು ಮಂಡ್ಯ ನಗರಕ್ಕೆ ಸಮೀಪದಲ್ಲೇ ಇವೆ. ಈ ಬಡಾವಣೆಗಳಲ್ಲಿ ವಾಸವಾಗಿರುವ ನಾಗರಿಕರು ನಗರ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಯ ಬಡಾವಣೆಗೆ ಹೋಗಿ ಬರಲು ಪರಿತಪಿಸುತ್ತಿದ್ದಾರೆ. ಅನುಕೂಲಸ್ಥರು ಆಟೋಗಳನ್ನು ಬಳಸುತ್ತಿದ್ದಾರೆ. ಆದರೆ ಬಡವರು ನಡೆದೇ ಹೋಗುವುದು ಅನಿವಾರ್ಯವಾಗಿದೆ. ಮಂಡ್ಯದಿಂದ ಚಿಕ್ಕ ಮಂಡ್ಯ- ಕೊಮ್ಮೇರಹಳ್ಳಿ – ಸಾತನೂರು ಬೆಟ್ಟ (ನರಸಿಂಹಸ್ವಾಮಿ ಬೆಟ್ಟ ) ಉಮ್ಮಡಹಳ್ಳಿ – ಶ್ರೀನಿವಾಸಪುರ ಮಾರ್ಗ, ಮಂಡ್ಯ – ಹೊಸಹಳ್ಳಿ -ಕಾರಸವಾಡಿ -ಮೊತ್ತಹಳ್ಳಿ -ಕ್ಯಾತಂಗೆರೆ ಹೀಗೆ ಸರ್ವೆ ಮಾಡಿ ನಗರ ಸಾರಿಗೆ ಮಾರ್ಗ ಗಳನ್ನು ಗುರುತಿಸಿ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಅಗತ್ಯವಿದೆ.

ಮಂಡ್ಯ ಕೇಂದ್ರದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಿಂದ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ಹನಕೆರೆ ಪಕ್ಕದ ನಂದಿನಿ ಹಾಲಿನ ಡೇರಿವರೆಗೆ ಹಾಗೂ ಮೈಸೂರು ಕಡೆಗಿನ ತೂಬಿನಕೆರೆ ಸಮೀಪದ ಕೈಗಾರಿಕಾ ಕೇಂದ್ರ ಮತ್ತು ನಾಗಮಂಗಲ-ಕೆರಗೋಡು ಮಾರ್ಗದಲ್ಲಿ ಗೋಪಾಲಪುರ-ಕೊಮ್ಮೇರ ಹಳ್ಳಿವರೆಗೆ, ಬೆಸಗರಹಳ್ಳಿ ಮಾರ್ಗದಲ್ಲಿ ಕೀಲಾರದವರಗೆ ಕೆ. ಎಂ. ದೊಡ್ಡಿ ಮಾರ್ಗದಲ್ಲಿ ಗುತ್ತಲು, ಭೂತನಹೊಸೂರು, ಇತ್ತ ಹೊಸಹಳ್ಳಿ ಮಂಗಲದವರೆಗೆ ಸಂತೆ ಕಸಲಗೆರೆ, ಬನ್ನೂರು ಮಾರ್ಗದಲ್ಲಿ ಬೇವಿನಹಳ್ಳಿ, ಕೊತ್ತತ್ತಿವರೆಗೆ ನಗರ ಬಸ್ ವ್ಯವಸ್ಥೆ ಮಾಡಬಹುದು. ಮಂಡ್ಯದ ಶಾಸಕರಾದ ರವಿಕುಮಾರ್ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಇತ್ತ ಗಮನಹರಿಸಿ ಮಂಡ್ಯ ನಗರಕ್ಕೆ ಮತ್ತೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.

-ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

9 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

9 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

9 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

9 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

9 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

10 hours ago