ಓದುಗರ ಪತ್ರ
ಮಂಡ್ಯ ನಗರಕ್ಕೆ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ೨೦೧೨ರಲ್ಲಿ ರಾಜ್ಯ ಸರ್ಕಾರ ಹನ್ನೊಂದು ಹೊಸ ಬಸ್ಗಳನ್ನು ಖರೀದಿಸಿತು. ಕೆಲವು ಕಾಲ ನಗರ ಬಸ್ಗಳು ಕಾರ್ಯ ನಿರ್ವಹಿಸಿದವು. ಬಹುಶಃ ನಷ್ಟದಲ್ಲಿ ಇದ್ದ ಕಾರಣ ಈ ನಗರ ಸಾರಿಗೆ ಬಸ್ ಸೌಲಭ್ಯವನ್ನು ನಿಲ್ಲಿಸಲಾಯಿತು.
ಆದರೆ ಅದೇ ನಗರ ಸಾರಿಗೆ ಬಸ್ಗಳು ಮಂಡ್ಯದಿಂದ ಪಾಂಡವಪುರ, ತಿ. ನರಸೀಪುರ, ಬನ್ನೂರು ಮುಂತಾದ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಈಗ ಮಂಡ್ಯ ನಗರದ ವ್ಯಾಪ್ತಿ ವಿಸ್ತಾರವಾಗಿದ್ದು, ೩೫ ವಾರ್ಡ್ಗಳನ್ನು ಹೊಂದಿರುವ ನಗರವಾಗಿದೆ. ನೆಹರು ನಗರ, ಸುಭಾಷ್ ನಗರ, ವಿದ್ಯಾನಗರ, ಬಂದೀಗೌಡ ಬಡಾವಣೆ, ಚಾಮುಂಡೇಶ್ವರಿ ನಗರ, ಶಂಕರ ನಗರ, ಕಾವೇರಿ ನಗರ, ವಿಶ್ವೇಶ್ವರಯ್ಯ ನಗರ, ವಿವೇಕಾನಂದ ನಗರ, ಸ್ವರ್ಣಸಂದ್ರ, ಆರ್ಕೆಶ್ವರ ನಗರ, ಅಸಿಟೇಟ್ ಟೌನ್, ಇಂಡುವಾಳು ಮುಂತಾದ ಬಡಾವಣೆಗಳು ಮಂಡ್ಯ ನಗರ ವ್ಯಾಪ್ತಿಯಲ್ಲಿ ಇವೆ.
ಇದರೊಂದಿಗೆ ಸುತ್ತಮುತ್ತಲಿನ ಸಾತನೂರು ಬಡಾವಣೆ, ದ್ವಾರಕ ನಗರ, ಚಿಕ್ಕಮಂಡ್ಯ, ಶಂಕರಪುರ, ಕೋಣಹಳ್ಳಿ, ಕಲ್ಲಹಳ್ಳಿ, ಕ್ಯಾತಂಗೆರೆ, ಹೊಸಹಳ್ಳಿ, ರಾಮನಹಳ್ಳಿ, ಗುತ್ತಲು, ಶ್ರೀನಿವಾಸಪುರ, ಶ್ರೀರಾಮ ನಗರ, ನಾಡ ಪ್ರಭು ಕೆಂಪೇಗೌಡ ಲೇಔಟ್ ಮುಂತಾದ ಬಡಾವಣೆಗಳು ಮಂಡ್ಯ ನಗರಕ್ಕೆ ಸಮೀಪದಲ್ಲೇ ಇವೆ. ಈ ಬಡಾವಣೆಗಳಲ್ಲಿ ವಾಸವಾಗಿರುವ ನಾಗರಿಕರು ನಗರ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಯ ಬಡಾವಣೆಗೆ ಹೋಗಿ ಬರಲು ಪರಿತಪಿಸುತ್ತಿದ್ದಾರೆ. ಅನುಕೂಲಸ್ಥರು ಆಟೋಗಳನ್ನು ಬಳಸುತ್ತಿದ್ದಾರೆ. ಆದರೆ ಬಡವರು ನಡೆದೇ ಹೋಗುವುದು ಅನಿವಾರ್ಯವಾಗಿದೆ. ಮಂಡ್ಯದಿಂದ ಚಿಕ್ಕ ಮಂಡ್ಯ- ಕೊಮ್ಮೇರಹಳ್ಳಿ – ಸಾತನೂರು ಬೆಟ್ಟ (ನರಸಿಂಹಸ್ವಾಮಿ ಬೆಟ್ಟ ) ಉಮ್ಮಡಹಳ್ಳಿ – ಶ್ರೀನಿವಾಸಪುರ ಮಾರ್ಗ, ಮಂಡ್ಯ – ಹೊಸಹಳ್ಳಿ -ಕಾರಸವಾಡಿ -ಮೊತ್ತಹಳ್ಳಿ -ಕ್ಯಾತಂಗೆರೆ ಹೀಗೆ ಸರ್ವೆ ಮಾಡಿ ನಗರ ಸಾರಿಗೆ ಮಾರ್ಗ ಗಳನ್ನು ಗುರುತಿಸಿ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಅಗತ್ಯವಿದೆ.
ಮಂಡ್ಯ ಕೇಂದ್ರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ಹನಕೆರೆ ಪಕ್ಕದ ನಂದಿನಿ ಹಾಲಿನ ಡೇರಿವರೆಗೆ ಹಾಗೂ ಮೈಸೂರು ಕಡೆಗಿನ ತೂಬಿನಕೆರೆ ಸಮೀಪದ ಕೈಗಾರಿಕಾ ಕೇಂದ್ರ ಮತ್ತು ನಾಗಮಂಗಲ-ಕೆರಗೋಡು ಮಾರ್ಗದಲ್ಲಿ ಗೋಪಾಲಪುರ-ಕೊಮ್ಮೇರ ಹಳ್ಳಿವರೆಗೆ, ಬೆಸಗರಹಳ್ಳಿ ಮಾರ್ಗದಲ್ಲಿ ಕೀಲಾರದವರಗೆ ಕೆ. ಎಂ. ದೊಡ್ಡಿ ಮಾರ್ಗದಲ್ಲಿ ಗುತ್ತಲು, ಭೂತನಹೊಸೂರು, ಇತ್ತ ಹೊಸಹಳ್ಳಿ ಮಂಗಲದವರೆಗೆ ಸಂತೆ ಕಸಲಗೆರೆ, ಬನ್ನೂರು ಮಾರ್ಗದಲ್ಲಿ ಬೇವಿನಹಳ್ಳಿ, ಕೊತ್ತತ್ತಿವರೆಗೆ ನಗರ ಬಸ್ ವ್ಯವಸ್ಥೆ ಮಾಡಬಹುದು. ಮಂಡ್ಯದ ಶಾಸಕರಾದ ರವಿಕುಮಾರ್ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಇತ್ತ ಗಮನಹರಿಸಿ ಮಂಡ್ಯ ನಗರಕ್ಕೆ ಮತ್ತೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.
-ಸಿ. ಸಿದ್ದರಾಜು ಆಲಕೆರೆ, ಮಂಡ್ಯ
ಮಂಡ್ಯ: ಮನೆಯ ಮುಂದಿನ ನೀರಿನ ಸಂಪ್ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ…
ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಗೂಡ್ಸ್ ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್…
ಬೆಟ್ಟದಪುರ: ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಎಸ್.ಟಿ.ಆನಂದ್ (೬೦)…
ಗುಂಡ್ಲುಪೇಟೆ: ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಫ್ರಾನ್ಸ್ ಮತ್ತು ಸ್ಲೊವಾಕಿಯಾಕ್ಕೆ ಒಂದು ವಾರದ ಭೇಟಿಗಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ…
ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ…