Andolana originals

ಓದುಗರ ಪತ್ರ: ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸಿ

ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ ಪುಸ್ತಕಗಳು ಮತ್ತು ನೋಟ್ ಪುಸ್ತಕಗಳಷ್ಟೇ ಅಲ್ಲದೆ ಊಟದ ಬಾಕ್ಸ್, ನೀರಿನ ಬಾಟಲಿಯನ್ನೂ ತೆಗೆದುಕೊಂಡು ಹೋಗಬೇಕಿದೆ. ಇದು ಶಾಲಾಮಕ್ಕಳಿಗೆ ಅನಿವಾರ್ಯವೆನಿಸಿದೆ.ಎಳೆಯ ಮಕ್ಕಳ ಬೆನ್ನುಗಳಿಗೆ ಭಾರ ಕಡಿಮೆ ಮಾಡುವುದು ಇಂದಿನ ಅಗತ್ಯವೂ ಆಗಿದೆ.ಈ ವಿಷಯವಾಗಿ ಶಿಕ್ಷಣ ಆಸಕ್ತರು ಚಿಂತನೆ ನಡೆಸಬೇಕಿದೆ. ಪಠ್ಯ ಪುಸ್ತಕಗಳನ್ನು ಎರಡು ಪ್ರತ್ಯೇಕ ಭಾಗಗಳಾಗಿ ವಿಂಗಡಿಸಿ ಎರಡು ಬೇರೆ ಬೇರೆ ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸುವುದು. ಉದಾಹರಣೆಗೆ, ಒಂದು ವಿಷಯದ ಪುಸ್ತಕದಲ್ಲಿ ೨೦ ಅಧ್ಯಾಯಗಳು ಇದ್ದರೆ, ಮೊದಲ ೧೦ ಅಧ್ಯಾಯ ಒಳಗೊಂಡ ಪುಸ್ತಕ ಭಾಗ ೧, ಉಳಿದ ೧೦ ಅಧ್ಯಾಯಗಳ ಪುಸ್ತಕ ಭಾಗ..೨ ಎಂದು ಎರಡು ಪುಸ್ತಕಗಳನ್ನು ಮುದ್ರಿಸುವುದು. ಮೊದಲ ಭಾಗದ ಪಠ್ಯ ಕ್ರಮ ಮುಗಿಯುವವರೆಗೆ ಮಕ್ಕಳು ಭಾಗ..೧ ಪುಸ್ತಕಗಳನ್ನು ಮಾತ್ರ ಕೊಂಡೊಯ್ಯುವುದು. ಅದಾದ ಬಳಿಕ ಭಾಗ..೨ ಪುಸ್ತಕಗಳನ್ನು ಕೊಂಡೊಯ್ಯಬಹುದು. ಇದನ್ನು ಅನುಸರಿಸಿದರೆ ಶಾಲಾ ಮಕ್ಕಳ ಬ್ಯಾಗ್ ಗಳ ಭಾರವನ್ನು ಅರ್ಧದಷ್ಟು ಕಡಿಮೆ ಮಾಡಲು ಸಾಧ್ಯ. ಪುಸ್ತಕ ಎರಡು ಭಾಗ ಮುದ್ರಿಸಲು ಸ್ವಲ್ಪ ಹೆಚ್ಚು ಖರ್ಚು ತಗಲಿದರೂ, ಮಕ್ಕಳಿಗೆ ಇದರಿಂದ ಹೊರೆ ಕಡಿಮೆ ಆಗುವುದರಿಂದ ಆಗುವ ಲಾಭಕ್ಕೆ ಹೋಲಿಸಿದರೆ ಆ ಖರ್ಚು ನಗಣ್ಯ. ಈ ಸಲಹೆಯನ್ನು ಶಿಕ್ಷಣ ಇಲಾಖೆಯವರು ಪರಿಶೀಲಿಸಬೇಕಿದೆ.

– -ಲಕ್ಷ್ಮಣ್ ಗೊರ್ಲಕಟ್ಟೆ ,ಬೋಗಾದಿ, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಉದ್ಯೋಗ ನೇಮಕಾತಿ ಯಾವಾಗ?

ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…

9 mins ago

ಓದುಗರ ಪತ್ರ: ಉದ್ಯೋಗ ವಯೋಮಿತಿ ಹೆಚ್ಚಳ ಸ್ವಾಗತಾರ್ಹ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…

11 mins ago

ಇಂದು ಕೇರಳ ಬೈತೂರು ದೇವಾಲಯದ ಪತ್ತೂಟ

ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ  ಹಬ್ಬಕ್ಕೆ  ಅಗತ್ಯ ಸಿದ್ಧತೆ  ವಿರಾಜಪೇಟೆ: ಕೇರಳ ಹಾಗೂ…

14 mins ago

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್ ಒತ್ತುವರಿ

ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ  ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…

18 mins ago

ಶಾಲಾ ಮಕ್ಕಳಿಗೆ ಪಾದರಕ್ಷೆ ಭಾಗ್ಯ!

‘ವಿದ್ಯಾವಿಕಾಸ’ ಯೋಜನೆಯಡಿ ಅಗತ್ಯವಿದ್ದರೆ ಚಪ್ಪಲಿ ನೀಡಲು ಸಿದ್ಧತೆ  ಮೈಸೂರು: ‘ವಿದ್ಯಾವಿಕಾಸ’ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ೧೦ನೇ…

24 mins ago

ಇಂದು ಹಾಸನದಲ್ಲಿ ಜಾ.ದಳ ಬೆಳ್ಳಿ ಮಹೋತ್ಸವ

ಭೇರ್ಯ ಮಹೇಶ್‌  ಸಮಾವೇಶಕ್ಕೆ ಬೃಹತ್ ವೇದಿಕೆ ನಿರ್ಮಾಣ; ೧ ಲಕ್ಷ ಆಸನಗಳ ವ್ಯವಸ್ಥೆ ಹಾಸನ: ಜಾ.ದಳ ಪ್ರಾದೇಶಿಕ ಪಕ್ಷದ ಬೆಳ್ಳಿ…

30 mins ago