Andolana originals

ಓದುಗರ ಪತ್ರ: ಏರುತಿಹುದು ಅಗತ್ಯ ವಸ್ತುಗಳ ಬೆಲೆಗಳು

ರಾಜ್ಯ  ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಇದೆ.  ಆಸ್ತಿ ನೋಂದಣಿ ಶುಲ್ಕ, ಛಾಪಾ ಮುದ್ರಾಂಕನ ಶುಲ್ಕ, ಮೆಟ್ರೋ ಪ್ರಯಾಣ ದರ, ಬಸ್ ಪ್ರಯಾಣ ದರ, ವಿದ್ಯುತ್, ಹಾಲು, ಮೊಸರು,  ಡೀಸೆಲ್ ದರಗಳು  ಏರಿಕೆಯಾಗಿವೆ .

ಹಾಲು ಲೀಟರಿಗೆ  ನಾಲ್ಕು ರೂಪಾಯಿ ಜಾಸ್ತಿಯಾದರೆ, ಹೋಟೆಲ್ ನವರು ಒಂದು ಕಪ್ ಕಾಫಿ, ಟೀಗೆ ಕನಿಷ  ಮೂರು ರೂಪಾಯಿ ಏರಿಸುತ್ತಾರೆ.  ಮೊಸರು ಲೀಟರಿಗೆ ನಾಲ್ಕು ರೂ. ಹೆಚ್ಚಾದರೆ,  ಹೋಟೆಲ್ ಊಟದಲ್ಲಿ ನೀಡುವ ಮೊಸರಿಗೆ ಎರಡು ರೂ.  ಜಾಸ್ತಿಯಾಗುತ್ತದೆ.

ಡೀಸೆಲ್ ದರ  ಜಾಸ್ತಿಯಾಗಿದ್ದು,  ಮತ್ತೆ  ಬಸ್ ಪ್ರಯಾಣ ದರ,   ಕ್ಯಾಬ್ ಪ್ರಯಾಣ ದರ ಹಾಗೂ ಸರಕು ಸಾಗಣೆದರಗಳೂ ಜಾಸ್ತಿಯಾಗಲಿದ್ದು,  ಪರೋಕ್ಷವಾಗಿ ಜನ ಸಾಮಾನ್ಯರ ಮೇಲೆಯೇ ದರ ಏರಿಕೆಯ ಬರೆ ಬೀಳಲಿದೆ.  ಹಿಂದೆಲ್ಲಾ  ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಳ ಮಾಡಿದ್ದೇವೆ ಎನ್ನುತ್ತಿದ್ದ ಸಚಿವರೊಬ್ಬರು ಪ್ರಸ್ತುತ ಸರ್ಕಾರ ವೈಜ್ಞಾನಿಕವಾಗಿ  ದರ  ಹೆಚ್ಚಳ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಗತ್ಯ ವಸ್ತುಗಳ ದರ ಏರಿಕೆಯನ್ನು ನೋಡಿದರೆ  ಕವಿ ಕಯ್ಯಾರ  ಕಯ್ಯಾರ ಕಿಞ್ಞಣ್ಣ ರೈ ರವರ ಕವನ ‘ಏರುತಿಹುದು ಹಾರುತಿಹುದು’  ಕವನ ನೆನಪಿಗೆ ಬರುತ್ತದೆ.

– ವಿಜಯ್ ಹೆಮ್ಮಿಗೆ, ಮೈಸೂರು

ಆಂದೋಲನ ಡೆಸ್ಕ್

Recent Posts

ಪಚ್ಚೆದೊಡ್ಡಿ ಗ್ರಾಮಕ್ಕೆ ತ್ರಿಸದಸ್ಯ ಸಮಿತಿ ತಂಡ ಭೇಟಿ

ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…

52 mins ago

ತ್ರಿಪುರ ಸುಂದರಿ ಅಮ್ಮನವರ ಜಾತ್ರೆಗೆ ಸಕಲ ಸಿದ್ಧತೆ

ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…

57 mins ago

ಮತ್ತೆ ಆರಂಭವಾದ ಕೋಟೆ ಪೊಲೀಸ್ ಕ್ಯಾಂಟೀನ್

ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…

1 hour ago

ಗುಬ್ಬಚ್ಚಿ ಶಾಲೆಯಲ್ಲಿ ಬರೀ 12 ವಿದ್ಯಾರ್ಥಿಗಳು!

ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…

1 hour ago

ಕೊಡಗು‌ ಸಿದ್ದಾಪುರ ದರೋಡೆ ಪ್ರಕರಣ ಭೇದಿಸಲು ವಿಶೇಷ ಕಾರ್ಯಪಡೆ ಸಜ್ಜು

ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…

10 hours ago