ಓದುಗರ ಪತ್ರ
‘ಪ್ರಜಾಪ್ರಭುತ್ವ ಬೇಡ, ಅರಸೊತ್ತಿಗೆ ಬೇಕು, ಜಾತ್ಯತೀತ ರಾಷ್ಟ್ರಬೇಡ, ಹಿಂದೂ ರಾಷ್ಟ್ರಬೇಕು’ ಎನ್ನುವ ಹೋರಾಟ ನೇಪಾಳದಲ್ಲಿ ತೀವ್ರವಾಗುತ್ತಿದ್ದು, ೧೬ ವರ್ಷಗಳಲ್ಲಿ ೧೪ ಪ್ರಜಾಸತ್ತಾತ್ಮಕ ಸರ್ಕಾರಗಳನ್ನು ನೋಡಿ ರೋಸಿ ಹೋದ ಜನತೆ ಅರಸರ ಆಳ್ವಿಕೆಯಲ್ಲೇ ದೇಶ ಮುನ್ನಡೆಯಲಿ ಎಂದು ಹೋರಾಟಕ್ಕಿಳಿದಿದ್ದಾರೆ. ನಾವು ಪ್ರಜಾಪ್ರಭುತ್ವಕ್ಕೆ ಅರ್ಹರಲ್ಲ, ಪ್ರಜಾಪ್ರಭುತ್ವದ ಓವರ್ ಡೋಸ್ ದೇಶವನ್ನು ನಾಶಪಡಿಸುತ್ತಿದೆ, ರಾಜಕೀಯ ಅಸ್ಥಿರತೆಯಿಂದ ದೇಶದ ಅಭಿವೃದ್ಧಿ ನಿಂತ ನೀರಾಗಿದೆ ಎಂದು ಜನತೆ ಧ್ವನಿ ಎತ್ತಿದ್ದು, ಅವರ ಮನಸ್ಥಿತಿ ಹಳೆ ಗಂಡನ ಪಾದವೇ ಲೇಸು ಎನ್ನುವಂತಾಗಿದೆ. ಭಾರತದಲ್ಲೂ ಕೆಲವು ರಾಜ್ಯಗಳಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಆಡಳಿತ ವೈಖರಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇಲ್ಲೂ ಅಂತಹದೇ ಪರಿಸ್ಥಿತಿ ಎದುರಾಗಬಹುದು ಅನಿಸುತ್ತದೆ.
–ರಮಾನಂದ ಶರ್ಮಾ, ಬೆಂಗಳೂರು
ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…
ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…
ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು…
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…
ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…
ಬುದ್ಧನ ಚಿಂತನೆಗಳನ್ನು ಭಾರತದಿಂದ ಓಡಿಸಿದಂತೆ, ಮಹಾತ್ಮ ಗಾಂಧೀಜಿಯವರನ್ನು ಭಾರತೀಯರ ಮನಸ್ಸಿನಿಂದಿಂದಲೇ ತೆಗೆದುಹಾಕುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕುತಂತ್ರ ಬಯಲಾಗಿದೆ.…