Andolana originals

ಓದುಗರ ಪತ್ರ: ಸತಿ-ಪತಿಯ ಸಂಬಂಧ ಎತ್ತ ಸಾಗುತ್ತಿದೆ?

ಇತ್ತೀಚಿನ ದಿನಗಳಲ್ಲಿ ಸತಿ-ಪತಿ ಸಂಬಂಧ ವಿಚ್ಛೇದನದಲ್ಲಿ ಕೊನೆಯಾಗುತ್ತಿರುವುದು ಮಾಮೂಲಿ ಎನ್ನುವಂತಾಗಿದೆ. ಅನೈತಿಕ ಸಂಬಂಧಗಳಿಂದ  ಬೇರೆ ಆಗುತ್ತಿರುವ ಹಲವು ಪ್ರಕರಣಗಳು ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದೆ.

ಸತಿ-ಪತಿಗಳೆಂದರೆ ಜೀವನದ ಸಂಸಾರ ಬಂಡಿಯಲ್ಲಿರುವ ಎರಡು ಗಾಲಿಗಳಂತೆಎಂದು ನಮ್ಮ ಹಿರಿಯರು ಹೇಳಿದ್ದಾರೆ. ಈ ಬಂಡಿಯಲ್ಲಿ ಒಂದು ಗಾಲಿ ಮುರಿದರೂ ಜೀವನ ಎಂಬ ಸಂಸಾರದ ಬಂಡಿ ಹಾದಿ ತಪ್ಪುತ್ತದೆ. ಪ್ರಪಂಚದಲ್ಲಿ ಎಲ್ಲಕ್ಕಿಂತ ದೊಡ್ಡ ಸಂಬಂಧ ಅಂದರೆ ಅದು ಸತಿ-ಪತಿ ಸಂಬಂಧ. ಅಂತಹ ಸಂಬಂಧವನ್ನು ಇತ್ತೀಚಿನ ದಿನಗಳಲ್ಲಿ ವಾಕ್ ಸ್ವಾತಂತ್ರ್ಯದ ನೆಪವೊಡ್ಡಿ ಅರ್ಥ ಹೀನ ಮಾಡುತ್ತಿರುವುದು ಅವಿವೇಕಿತನ.

ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧದಿಂದ ಹೆಂಡತಿ ಆತ್ಮಹತ್ಯೆ, ಪ್ರಿಯಕರನಿಗಾಗಿ ಗಂಡ ಮಕ್ಕಳ ಹತ್ಯೆಗೆ ಸಂಚು, ಅಕ್ರಮ ಸಂಬಂಧಕ್ಕೆಬೇಸತ್ತು ಹೆಂಡತಿಯ ರುಂಡವನ್ನು ಬೇರ್ಪಡಿಸಿದ ಪತಿ, ಪ್ರಿಯಕರನ ಜತೆ ಓಡಿ ಹೋದ ಪತ್ನಿ ಇಂತಹ ವಿಚಾರಗಳಿಂದ ಸತಿ-ಪತಿ ಸಂಬಂಧ ಹದಗೆಟ್ಟು ಈ ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಸತಿ-ಪತಿಗಳು ಈ ವಿಷಯವಾಗಿ ವಿಚಾರ ಮಾಡಿ ಅನ್ಯೋನ್ಯತೆಯಿಂದ ಬಾಳುವ ಮೂಲಕ ಪವಿತ್ರ ಬಾಂಧವ್ಯವನ್ನು ಕಾಪಾಡಬೇಕಾಗಿದೆ.

ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು

ಆಂದೋಲನ ಡೆಸ್ಕ್

Recent Posts

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

1 hour ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

2 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

3 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

3 hours ago

ಆಂದೋಲನ ಸಂಪಾದಕೀಯ | ಇಂಧನ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ

ಕೇವಲ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮೂರು ಬಾರಿ ಹೆಚ್ಚಳವಾಗಿದೆ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ…

4 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ.25 ಸೋಮವಾರ

6 hours ago