ಓದುಗರ ಪತ್ರ
ಇತ್ತೀಚಿನ ದಿನಗಳಲ್ಲಿ ಸತಿ-ಪತಿ ಸಂಬಂಧ ವಿಚ್ಛೇದನದಲ್ಲಿ ಕೊನೆಯಾಗುತ್ತಿರುವುದು ಮಾಮೂಲಿ ಎನ್ನುವಂತಾಗಿದೆ. ಅನೈತಿಕ ಸಂಬಂಧಗಳಿಂದ ಬೇರೆ ಆಗುತ್ತಿರುವ ಹಲವು ಪ್ರಕರಣಗಳು ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದೆ.
ಸತಿ-ಪತಿಗಳೆಂದರೆ ಜೀವನದ ಸಂಸಾರ ಬಂಡಿಯಲ್ಲಿರುವ ಎರಡು ಗಾಲಿಗಳಂತೆಎಂದು ನಮ್ಮ ಹಿರಿಯರು ಹೇಳಿದ್ದಾರೆ. ಈ ಬಂಡಿಯಲ್ಲಿ ಒಂದು ಗಾಲಿ ಮುರಿದರೂ ಜೀವನ ಎಂಬ ಸಂಸಾರದ ಬಂಡಿ ಹಾದಿ ತಪ್ಪುತ್ತದೆ. ಪ್ರಪಂಚದಲ್ಲಿ ಎಲ್ಲಕ್ಕಿಂತ ದೊಡ್ಡ ಸಂಬಂಧ ಅಂದರೆ ಅದು ಸತಿ-ಪತಿ ಸಂಬಂಧ. ಅಂತಹ ಸಂಬಂಧವನ್ನು ಇತ್ತೀಚಿನ ದಿನಗಳಲ್ಲಿ ವಾಕ್ ಸ್ವಾತಂತ್ರ್ಯದ ನೆಪವೊಡ್ಡಿ ಅರ್ಥ ಹೀನ ಮಾಡುತ್ತಿರುವುದು ಅವಿವೇಕಿತನ.
ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧದಿಂದ ಹೆಂಡತಿ ಆತ್ಮಹತ್ಯೆ, ಪ್ರಿಯಕರನಿಗಾಗಿ ಗಂಡ ಮಕ್ಕಳ ಹತ್ಯೆಗೆ ಸಂಚು, ಅಕ್ರಮ ಸಂಬಂಧಕ್ಕೆಬೇಸತ್ತು ಹೆಂಡತಿಯ ರುಂಡವನ್ನು ಬೇರ್ಪಡಿಸಿದ ಪತಿ, ಪ್ರಿಯಕರನ ಜತೆ ಓಡಿ ಹೋದ ಪತ್ನಿ ಇಂತಹ ವಿಚಾರಗಳಿಂದ ಸತಿ-ಪತಿ ಸಂಬಂಧ ಹದಗೆಟ್ಟು ಈ ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಸತಿ-ಪತಿಗಳು ಈ ವಿಷಯವಾಗಿ ವಿಚಾರ ಮಾಡಿ ಅನ್ಯೋನ್ಯತೆಯಿಂದ ಬಾಳುವ ಮೂಲಕ ಪವಿತ್ರ ಬಾಂಧವ್ಯವನ್ನು ಕಾಪಾಡಬೇಕಾಗಿದೆ.
– ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು
ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…
ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…
ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…
ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…
ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…