Andolana originals

ಓದುಗರ ಪತ್ರ: ನಗದು ರಹಿತ ಚಿಕಿತ್ಸೆ ಎಲ್ಲ ಸರ್ಕಾರಿ ನೌಕರರಿಗೂ ಸಿಗಲಿ

ರಾಜ್ಯ ಸರ್ಕಾರದ ವತಿಯಿಂದ ಕೆಎಸ್‌ಆರ್‌ಟಿಸಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಆರೋಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯನವರು ಇತ್ತೀಚೆಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಈ ಯೋಜನೆಯ ಮೂಲಕ ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ. ಈ ಯೋಜನೆಯಡಿ ಸಾರಿಗೆ ನೌಕರರು ಹಾಗೂ ಅವರ ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದ್ದು, ಇದರಿಂದ ಸಾರಿಗೆ ನೌಕರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಇರುವ ಎಲ್ಲ ಸರ್ಕಾರಿ ಆಸ್ಪತ್ರೆಗಳು ಹಾಗೂ ೨೫೦ ಖಾಸಗಿ ಆಸ್ಪತ್ರೆಗಳೊಂದಿಗೆ ಸರ್ಕಾರ ಒಡಬಂಡಿಕೆ ಮಾಡಿ ಕೊಂಡಿದೆ. ಈ ಸೌಲಭ್ಯವನ್ನು ಸರ್ಕಾರ ಎಲ್ಲ ಇಲಾಖೆಗಳ ನೌಕರರಿಗೂ ವಿಸ್ತರಿಸಬೇಕು ಎಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿದೆ. ಆದ್ದರಿಂದ ಈ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯನ್ನು ರಾಜ್ಯ ಸರ್ಕಾರ ಎಲ್ಲ ನೌಕರರಿಗೂ ವಿಸ್ತರಿಸಿದರೆ ಅನುಕೂಲವಾಗಲಿದೆ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

 

AddThis Website Tools
andolana

Recent Posts

ಕುಡುಕರಿಂದ ಕಾಪಾಡಿ.. ಪುಂಡರ ಹಾವಳಿ ತಪ್ಪಿಸಿ..ಕುಡುಕರಿಂದ ಕಾಪಾಡಿ.. ಪುಂಡರ ಹಾವಳಿ ತಪ್ಪಿಸಿ..

ಕುಡುಕರಿಂದ ಕಾಪಾಡಿ.. ಪುಂಡರ ಹಾವಳಿ ತಪ್ಪಿಸಿ..

ಪೊಲೀಸರ ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳನ್ನು ಬಿಚ್ಚಿಟ್ಟ ಸ್ಥಳೀಯರು ಮೈಸೂರು: ಗಾಂಜಾ, ಎಂಡಿಎನ್ ಇತರೆ ಮಾದಕ ವಸ್ತುಗಳ ಸೇವನೆಗೆ ಬ್ರೇಕ್ ಹಾಕಿ..,…

42 mins ago
ಸಮಾಜವಾದಿ ಸಿದ್ದರಾಮಯ್ಯಗೆ ಅಂಬೇಡ್ಕರ್‌ವಾದಿ ಎಚ್‌ಸಿಎಂ ಸಾಥ್ಸಮಾಜವಾದಿ ಸಿದ್ದರಾಮಯ್ಯಗೆ ಅಂಬೇಡ್ಕರ್‌ವಾದಿ ಎಚ್‌ಸಿಎಂ ಸಾಥ್

ಸಮಾಜವಾದಿ ಸಿದ್ದರಾಮಯ್ಯಗೆ ಅಂಬೇಡ್ಕರ್‌ವಾದಿ ಎಚ್‌ಸಿಎಂ ಸಾಥ್

ಎಂದೂ ಮುಕ್ಕಾಗದ ಸಿದ್ದರಾಮಯ್ಯ- ಎಚ್‌.ಸಿ.ಮಹದೇವಪ್ಪ ಅವರ 40 ವರ್ಷಗಳ ಸ್ನೇಹ ಸಮಾಜವಾದಿ ಸಿದ್ಧಾಂತದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂಬೇಡ್ಕರ್ ವಾದಿ,…

1 hour ago
ರಾಜ್ಯಗಳ ಸಾರ್ವಭೌಮತ್ವದ ಮನ್ನಣೆ: ಕೇಂದ್ರಕ್ಕೆ ತಮಿಳುನಾಡು ಸಡ್ಡುರಾಜ್ಯಗಳ ಸಾರ್ವಭೌಮತ್ವದ ಮನ್ನಣೆ: ಕೇಂದ್ರಕ್ಕೆ ತಮಿಳುನಾಡು ಸಡ್ಡು

ರಾಜ್ಯಗಳ ಸಾರ್ವಭೌಮತ್ವದ ಮನ್ನಣೆ: ಕೇಂದ್ರಕ್ಕೆ ತಮಿಳುನಾಡು ಸಡ್ಡು

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ರಾಜ್ಯ ಸರ್ಕಾಗಳು ತನ್ನ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎನ್ನುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ…

4 hours ago

ಉತ್ತರ ಕೊಡಗಿನಲ್ಲಿ ಸುಗ್ಗಿ ಸಂಭ್ರಮದ ವಿಶಿಷ್ಟಹಬ್ಬ

ಗ್ರಾಮಗಳ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಲಕ್ಷ್ಮೀ ಕಾಂತ್ ಕೊಮಾರಪ್ಪ ಸೋಮವಾರಪೇಟೆ: ಉತ್ತರ ಕೊಡಗಿನ ಗ್ರಾಮೀಣ ಭಾಗಗಳಲ್ಲಿ…

4 hours ago

ಓದುಗರ ಪತ್ರ | ಗೊಂದಲದ ಗೂಡಾಗಿರುವ ಜಾತಿ ಗಣತಿ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಮಂಡನೆ ಆಗಿರುವ ಸುಮಾರು ಹತ್ತು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಸಾಮಾಜಿಕ, ಆರ್ಥಿಕ…

5 hours ago

ಓದುಗರ ಪತ್ರ | ಮರಗಳ ತೆರವು ಪರಿಸರಕ್ಕೆ ಮಾರಕ

ಮೈಸೂರಿನ ಹೈದರಾಲಿ ರಸ್ತೆಯಲ್ಲಿದ್ದ ೪೦ಕ್ಕೂ ಹೆಚ್ಚು ಮರಗಳನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಕಡಿದುರುಳಿಸಿರುವುದು ಬೇಸರದ ಸಂಗತಿ. ವಾತಾವರಣವನ್ನು ತಂಪಾಗಿಡಲು ನಗರ…

5 hours ago