Andolana originals

ಓದುಗರ ಪತ್ರ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ಆರ್ಥಿಕ ಶಕ್ತಿಯನ್ನು ಬಲಪಡಿಸಲು ಸಹಕಾರಿಯಾಗಿವೆ ಎಂದರೆ ತಪ್ಪಾಗಲಾರದು. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಒಂದಲ್ಲ ಒಂದು ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿ ಆಗಿದ್ದಾರೆ.

ಆದರೆ ಈ ಗ್ಯಾರಂಟಿ ಯೋಜನೆಗಳು ಜಾರಿಯಾದ ದಿನದಿಂದಲೂ ರಾಜ್ಯಸರ್ಕಾರ ರಾಜ್ಯದ ಜನರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆಯ ‘ಭಾಗ್ಯ’ವನ್ನು ನೀಡುತ್ತಿರುವುದು ದೌರ್ಭಾಗ್ಯದ ಸಂಗತಿ. ಹಾಲು, ವಿದ್ಯುತ್, ಮೆಟ್ರೋ ಪ್ರಯಾಣ ದರ, ಬಸ್ ಪ್ರಯಾಣ ದರ ಹಾಗೂ ತರಕಾರಿಗಳ ದರಗಳು ಸೇರಿದಂತೆ ಜನರು ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ದರ ಏರಿಕೆಯ ಶಾಕ್ ನಿಂದ ಜನತೆ ಬಸವಳಿದಿದ್ದಾರೆ.

ಬದುಕು ಸಾಗಿಸುವುದೇ ದುಸ್ತರವಾಗಿದೆ. ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ವಸ್ತುಗಳ ಬೆಲೆ ಏರಿಸಿ, ಜನರನ್ನು ಹೈರಾಣಾಗಿಸಿದೆ ರಾಜ್ಯದ ಸಾಮಾನ್ಯ ಜನರ ಸ್ಥಿತಿ ನಾಲ್ಕಾಣಿ ಬೆಕ್ಕು ಎಂಟಾಣೆ ಹಾಲು ಕೊಂಡು ಕುಡಿಯುವಂತಾಗಿದೆ. ಇದನ್ನು ಮನಗಂಡು ರಾಜ್ಯಸರ್ಕಾರ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

 – ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

AddThis Website Tools
ಆಂದೋಲನ ಡೆಸ್ಕ್

Recent Posts

ಚಿಣ್ಣರ ಪ್ರತಿಭೆಗೆ ರಂಗಭೂಮಿ ಸಹಕಾರಿ ; ಹೆಚ್.ಜನಾರ್ಧನ್‌

ಮೈಸೂರ : ರಂಗಭೂಮಿ ಮತ್ತು ನಾಟಕಗಳು ಮಕ್ಕಳನ್ನು ಉತ್ತಮ ಮನುಷ್ಯರಾಗಿ ಮಾಡುವ ಕಲಾ ಕೇಂದ್ರಗಳಾಗಿವೆ ಎಂದು ರಂಗಾಯಣದ ಮಾಜಿ ನಿರ್ದೇಶಕ…

2 hours ago

ಜಾತಿಗಣತಿ ವರದಿ | ಇದೊಂದು ಎದುರಾಳಿ ಮಣಿಸುವ ತಂತ್ರ ಎಂದ ಬಿಜೆಪಿ ಶಾಸಕ

ಮೈಸೂರು : ಜಾತಿ ಜನಗಣತಿ ವರದಿ ಮಂಡನೆ ಮೂಲಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ…

3 hours ago

ಅಧಿಕಾರಿಗಳು ರೈತರ ಶ್ರೇಯೋಭಿವೃದ್ದಿಗೆ ಶ್ರಮಿಸಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಸರ್ಕಾರದ ಆಶಯವನ್ನು ಅರಿತು ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಕೃಷಿ ಸಚಿವ (Minister…

3 hours ago

ಬಿಜೆಪಿ ನಾಯಕರು ಮೀಸಲಾತಿ ವಿರೋಧಿಗಳು: ಯತೀಂದ್ರ ಸಿದ್ದರಾಮಯ್ಯ (Yathindra Siddaramaiah)

ಮೈಸೂರು : ರಾಜ್ಯದಲ್ಲಿ ಜಾತಿಗಣತಿ ಬಗ್ಗೆ ಪರ ವಿರೋಧ ಚರ್ಚೆ ವ್ಯಕ್ತವಾಗಿದ್ದು, ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಗಳು ಜಾತಿಗಣತಿಯನ್ನು ವಿರೋಧಿಸಿವೆ. ಸದ್ಯ…

3 hours ago

ಸಾಧಕರ ಸಂದೇಶಗಳನ್ನು ಸಮಾಜಕ್ಕೆ ತಿಳಿಸಲು ಜಯಂತಿಗಳ ಆಚರಣೆ: ಎಡಿಸಿ ಡಾ.ಪಿ ಶಿವರಾಜು

ಅರ್ಥ ಪೂರ್ಣವಾಗಿ ವಿವಿಧ ಜಯಂತಿಗಳ ಆಚರಣೆ ಮೈಸೂರು : ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು…

4 hours ago

ಗಾಳಿ, ಮಳೆಯ ವೇಳೆ ವಿದ್ಯುತ್‌ ಅನಾಹುತ ತಪ್ಪಿಸಲು ಸೆಸ್ಕ್‌ ಸನ್ನದ್ಧ

ವಿದ್ಯುತ್ ಅಪಾಯಗಳ ಬಗ್ಗೆ ಎಚ್ಚರಿಕೆವಹಿಸಲು ಸೂಚನೆ ಮೈಸೂರು : ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಗ್ರಾಹಕರಿಗೆ ಅಡಚಣೆ ರಹಿತವಾದ…

4 hours ago