ಓದುಗರ ಪತ್ರ
ಓ ನನ್ನ ಒಲವಿನ ‘ಆಂದೋಲನ’
ಓ ನನ್ನ ಒಲವಿನ
ಬೆಳಗಿನ ಆಂದೋಲನ,
ನೋಡ ನೋಡುತ್ತಲೇ ನಿನಗೆ ಈಗ
ತುಂಬಿತು ಬರೋಬ್ಬರಿ ವರ್ಷ ೫೩
ಅದಕ್ಕೆ ನಿನಗೀಗ ಹುಟ್ಟುಹಬ್ಬ
ನನಗೂ ಕಲಿಸಿಕೊಟ್ಟೆಯಲ್ಲ..
ಕಟ್ಟುವುದ ಪುಟ್ಟ ಪುಟ್ಟ ಕಬ್ಬ !
ಎನಿತು ಬಣ್ಣಿಸಲಿ ನಿನ್ನ ಹಾಡು-ಪಾಡು…
ಮೈಸೂರಿನಲ್ಲಿ ಮಲ್ಲಿಗೆಯಂತೆ ಅರಳಿದ
ನಿನ್ನ ವೃತ್ತಿ ಪ್ರೀತಿ..
ದಿನೇ ದಿನೇ ಬೆಳೆದೆ ಮಂಡ್ಯ, ಹಾಸನ,
ಕೊಡಗು ಚಾ. ನಗರ…ಆವೃತ್ತಿಯಾಗಿ!
ದನಿ ಇಲ್ಲದವರಿಗೆ ದನಿಯಾದೆ
ನಿಲ್ದಾಣದಿ ನಿಂತವರಿಗೆ ನೆರಳಾದೆ
ಅಯ್ಯೋ ಎಂದವರಿಗೆ ಆಸರೆಯಾದೆ
ಒಂದೇ ಎರಡೇ..!
ನಿನ್ನ ಸಾರ್ಥಕ ಪಯಣಕ್ಕೆ
ನನ್ನ ಕೋಟಿ ಕೋಟಿ ನಮನ
ಹೇಳು,ನಿನ್ನ ಎಳೆಯ ಗೆಳೆಯ
ನಾನೇನು ಮಾಡಬಲ್ಲೆ ?
ನಿತ್ಯ ಮರೆಯದೆ ನಿನ್ನ ಓದಬಲ್ಲೆ !
– ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…