ಓದುಗರ ಪತ್ರ
ಓ ನನ್ನ ಒಲವಿನ ‘ಆಂದೋಲನ’
ಓ ನನ್ನ ಒಲವಿನ
ಬೆಳಗಿನ ಆಂದೋಲನ,
ನೋಡ ನೋಡುತ್ತಲೇ ನಿನಗೆ ಈಗ
ತುಂಬಿತು ಬರೋಬ್ಬರಿ ವರ್ಷ ೫೩
ಅದಕ್ಕೆ ನಿನಗೀಗ ಹುಟ್ಟುಹಬ್ಬ
ನನಗೂ ಕಲಿಸಿಕೊಟ್ಟೆಯಲ್ಲ..
ಕಟ್ಟುವುದ ಪುಟ್ಟ ಪುಟ್ಟ ಕಬ್ಬ !
ಎನಿತು ಬಣ್ಣಿಸಲಿ ನಿನ್ನ ಹಾಡು-ಪಾಡು…
ಮೈಸೂರಿನಲ್ಲಿ ಮಲ್ಲಿಗೆಯಂತೆ ಅರಳಿದ
ನಿನ್ನ ವೃತ್ತಿ ಪ್ರೀತಿ..
ದಿನೇ ದಿನೇ ಬೆಳೆದೆ ಮಂಡ್ಯ, ಹಾಸನ,
ಕೊಡಗು ಚಾ. ನಗರ…ಆವೃತ್ತಿಯಾಗಿ!
ದನಿ ಇಲ್ಲದವರಿಗೆ ದನಿಯಾದೆ
ನಿಲ್ದಾಣದಿ ನಿಂತವರಿಗೆ ನೆರಳಾದೆ
ಅಯ್ಯೋ ಎಂದವರಿಗೆ ಆಸರೆಯಾದೆ
ಒಂದೇ ಎರಡೇ..!
ನಿನ್ನ ಸಾರ್ಥಕ ಪಯಣಕ್ಕೆ
ನನ್ನ ಕೋಟಿ ಕೋಟಿ ನಮನ
ಹೇಳು,ನಿನ್ನ ಎಳೆಯ ಗೆಳೆಯ
ನಾನೇನು ಮಾಡಬಲ್ಲೆ ?
ನಿತ್ಯ ಮರೆಯದೆ ನಿನ್ನ ಓದಬಲ್ಲೆ !
– ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು
ಬೆಂಗಳೂರು: ನಟಿ ಕಾವ್ಯಾಗೌಡ ಹಾಗೂ ಆಕೆಯ ಪತಿ ಸೋಮಶೇಖರ್ ಮೇಲೆ ಪತಿ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ…
ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು ಹಾದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜಧಾನಿ…
ದಾವಣಗೆರೆ: 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ಈ ಕುರಿತು…
ಗದಗ: ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ…
ಉಡುಪಿ: ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು…
ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದ ನೌಕರರಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸದ ದಿನವಾಗಿಸಬೇಕೆಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ…