ಓದುಗರ ಪತ್ರ
ಓ ನನ್ನ ಒಲವಿನ ‘ಆಂದೋಲನ’
ಓ ನನ್ನ ಒಲವಿನ
ಬೆಳಗಿನ ಆಂದೋಲನ,
ನೋಡ ನೋಡುತ್ತಲೇ ನಿನಗೆ ಈಗ
ತುಂಬಿತು ಬರೋಬ್ಬರಿ ವರ್ಷ ೫೩
ಅದಕ್ಕೆ ನಿನಗೀಗ ಹುಟ್ಟುಹಬ್ಬ
ನನಗೂ ಕಲಿಸಿಕೊಟ್ಟೆಯಲ್ಲ..
ಕಟ್ಟುವುದ ಪುಟ್ಟ ಪುಟ್ಟ ಕಬ್ಬ !
ಎನಿತು ಬಣ್ಣಿಸಲಿ ನಿನ್ನ ಹಾಡು-ಪಾಡು…
ಮೈಸೂರಿನಲ್ಲಿ ಮಲ್ಲಿಗೆಯಂತೆ ಅರಳಿದ
ನಿನ್ನ ವೃತ್ತಿ ಪ್ರೀತಿ..
ದಿನೇ ದಿನೇ ಬೆಳೆದೆ ಮಂಡ್ಯ, ಹಾಸನ,
ಕೊಡಗು ಚಾ. ನಗರ…ಆವೃತ್ತಿಯಾಗಿ!
ದನಿ ಇಲ್ಲದವರಿಗೆ ದನಿಯಾದೆ
ನಿಲ್ದಾಣದಿ ನಿಂತವರಿಗೆ ನೆರಳಾದೆ
ಅಯ್ಯೋ ಎಂದವರಿಗೆ ಆಸರೆಯಾದೆ
ಒಂದೇ ಎರಡೇ..!
ನಿನ್ನ ಸಾರ್ಥಕ ಪಯಣಕ್ಕೆ
ನನ್ನ ಕೋಟಿ ಕೋಟಿ ನಮನ
ಹೇಳು,ನಿನ್ನ ಎಳೆಯ ಗೆಳೆಯ
ನಾನೇನು ಮಾಡಬಲ್ಲೆ ?
ನಿತ್ಯ ಮರೆಯದೆ ನಿನ್ನ ಓದಬಲ್ಲೆ !
– ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು
ಕೊಡಗು : ಕಳೆದ ಕೆಲ ದಿನಗಳಿಂದ ಉಪಟಳ ನೀಡುವ ಜತೆಗೆ ವ್ಯಕ್ತಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಕಾಡಾನೆಯನ್ನು…
ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ…
ಬೆಂಗಳೂರು : ಸಾಹಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ, ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ ಮಾರಕವಾಗಲಿದೆ…
ಬೆಂಗಳೂರು : ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…
ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ…
ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…