Andolana originals

ನಂಜನಗೂಡಿನ ರಸಬಾಳೆ; ಬಂತು ಜೀವಕಳೆ

10 ಹೆಕ್ಟೇರ್‌ನಿಂದ 79.80 ಹೆಕ್ಟೇರ್‌ ಪ್ರದೇಶಕ್ಕೆ ವ್ಯಾಪಿಸಿದ ಬಾಳೆ ಬೆಳೆ

-ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ದಶಕಗಳ ಹಿಂದೆ ಶಾಲಾ ಪಠ್ಯದಲ್ಲಿ (ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತಳೆ…) ಸ್ಥಾನ ಪಡೆದಿದ್ದ ರಸಬಾಳೆ ನಂಜನಗೂಡು ತಾಲ್ಲೂಕಿನ ಪಾರಂಪರಿಕ, ಘನತೆಯ ಬೆಳೆಯಾಗಿತ್ತು. ಕಾಲ ಕ್ರಮೇಣ ಅವಸಾನದ ಅಂಚಿಗೆ ತಲುಪಿತ್ತು. ಈಗ ರಸಬಾಳೆಗೆ ಮತ್ತೆ ಮಾನ್ಯತೆ ಸಿಗುತ್ತಿದ್ದು, ಇತ್ತೀಚೆಗೆ ರಸಬಾಳೆ ಬೆಳೆಯುವ ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದಾರೆ. ದಶಕಗಳಿಂದಲೂ ರಸಬಾಳೆ ಬೆಳೆಯುವ ರೈತರ ಸಂಖ್ಯೆ ಕ್ಷೀಣಿಸಿ ಇನ್ನೇನು ವಿಶಿಷ್ಟ ಪಾರಂಪರಿಕ ಬೆಳೆ ಕಣ್ಮರೆಯಾಗಿ ಬಿಡುತ್ತದೆ ಎಂದುಕೊಂಡಿದ್ದ ಸಂದರ್ಭದಲ್ಲಿ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದಿದೆ.

2019-20ರ ವೇಳೆಗೆ ನಂಜನಗೂಡು ತಾಲ್ಲೂಕಿನಲ್ಲಿ ಕೇವಲ 10 ಹೆಕ್ಟೇರ್ ಪ್ರದೇಶದಲ್ಲಿ15 ಮಂದಿ ರೈತರು ಮಾತ್ರ ರಸಬಾಳೆ ಬೆಳೆಯುತ್ತಿದ್ದರು. ಆದರೆ, 2024-25ನೇ ಸಾಲಿನಲ್ಲಿ 164 ರೈತರು 79.80 ಹೆಕ್ಟೇರ್ ಪ್ರದೇಶದಲ್ಲಿ ರಸಬಾಳೆ ಬೆಳೆಯುತ್ತಿದ್ದು, ಜೀವಕಳೆ ಬಂದಿದೆ.

ರಸಬಾಳೆ ಬೆಳೆಯುವ ವಾತಾವರಣವೇ ಇಲ್ಲ. ಹೀಗಾಗಿ ವಿಶ್ವ ವಿಖ್ಯಾತ ರಸಬಾಳೆ ತಳಿಯನ್ನು ಉಳಿಸುವುದು ಕಷ್ಟ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಇಂತಹ ಕಠಿಣ ಸಮಯದಲ್ಲಿ ಬೆಳೆಯನ್ನುಉತ್ತೇಜಿಸಲು ರಾಜ್ಯ ಸರ್ಕಾರ ವಿಶೇಷ ಕಾಳಜಿ ತೋರಿತು. ಇದರ  ಫಲವಾಗಿ ರಸಬಾಳೆಯು ಹಂತ ಹಂತವಾಗಿ ಸಂರಕ್ಷಣೆಯ ಪ್ರದೇಶ ವಿಸ್ತೀರ್ಣ, ಕೊಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಗೊಂಡಿದೆ.

ದಶಕಗಳಿಂದ 10 ಎಕರೆಗೆ ಸೀಮಿತವಾಗಿದ್ದ ಬೆಳೆಯನ್ನು ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ, ಕೋಡಿನರಸೀಪುರ, ವೀರೇ ದೇವನಪುರ, ತಾಂಡವಪುರ, ಹಗಿನಾವಾಳು, ಹಳೇಪುರ, ಕೂಗಲೂರು, ಕುರಹಟ್ಟಿ, ದೇವೀ ರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತಲೆ, ಚಿನ್ನಂಬಳ್ಳಿ, ಚುಂಚನಹಳ್ಳಿ ಮತ್ತು ಮಾಡ್ರಹಳ್ಳಿ ಗ್ರಾಮಗಳ 79.80 ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದೆ.

ತೋಟಗಾರಿಕೆ ಇಲಾಖೆ, ಇಲವಾಲದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯ, ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನೊಳಗೊಂಡ ತಾಂತ್ರಿಕ ಸಮಿತಿಯ ಸೂಚನೆಗಳಂತೆ ತರಬೇತಿ, ಪ್ರಾತ್ಯಕ್ಷಿಕೆ ಹಾಗೂ ಪನಾಮಾ ರೋಗ ಹತೋಟಿ ಕುರಿತು ಸಲಹೆ ಮಾರ್ಗದರ್ಶನ ನೀಡಲಾಗುತ್ತಿದೆ.

ರಸಬಾಳೆ ಬೆಳೆಯುವ ಪ್ರದೇಶ ವಿಸ್ತರಣೆಯನ್ನು ಪ್ರೋತ್ಸಾಹಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಪ್ರತಿ ಅರ್ಧ ಎಕರೆಗೆ ಶೇ.90 ರಂತೆ 67,311 ಹಾಗೂ ಸಾಮಾನ್ಯ ರೈತರಿಗೆ ಶೇ.75 ರಂತೆ 56,093 ರೂ. ಸಹಾಯ ಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 49 ರೈತರಿಗೆ 9.08 ಹೆ.ಪ್ರದೇಶ ವಿಸ್ತರಣೆಗಾಗಿ 16.83 ಲಕ್ಷ ರೂ. ಸಹಾಯ ಧನ ನೀಡಿದ ಪರಿಣಾಮ ರಸಬಾಳೆ ಬಗ್ಗೆ ರೈತರು ಒಲವು ತೋರಿದ್ದಾರೆ.

ಮೈಸೂರು ಸಂಸ್ಥಾನದ ಕಾಲದಿಂದಲೂ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ವೀಳ್ಯದೆಲೆ ಇಲ್ಲಿನ ಜನರಲ್ಲಿ ಹಾಸು ಹೊಕ್ಕಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅರಮನೆಗೆ ಭೇಟಿ ನೀಡುವ ಗಣ್ಯರು ಹಾಗೂ ವಿದೇಶಿ ಅತಿಥಿಗಳಿಗೆ ರಸಬಾಳೆ, ಅಂಜೂರ ಹಣ್ಣುಗಳನ್ನು ನೀಡಲಾಗುತ್ತಿತ್ತು. ಎರಡನೇ ಬಾರಿಗೆ ಅರಮನೆಗೆ ಬಂದವರು ಮರೆಯದೇ ಈ ಹಣ್ಣುಗಳನ್ನು ಕೇಳಿ ಪಡೆಯುತ್ತಿದ್ದರು. ನಂಜನಗೂಡಿಗೆ ಆಗಮಿಸಿದ ಅತಿಥಿಗಳಿಗೆ ನೀಡುವ ಆತಿಥ್ಯದಲ್ಲಿ ಈ ರಸಬಾಳೆ ಹಣ್ಣಿಗೂ ದೊಡ್ಡ ಸ್ಥಾನ ಇತ್ತು. ಈಗ ಅದೇ ಪರಂಪರೆ ಮುಂದುವರಿಯಲಿದೆ ಎಂಬುದು ರಸಬಾಳೆ ಬೆಳೆಗಾರರ ವಿಶ್ವಾಸವಾಗಿದೆ.

-ಸಿ.ಚಂದ್ರು, ಹಿರಿಯ ಸಹಾಯಕ ನಿರ್ದೇಶಕ, ನಂಜನಗೂಡು ತೋಟಗಾರಿಕೆ ಇಲಾಖೆ.

ಶಾಸಕ ದರ್ಶನ್ ಧ್ರುವನಾರಾಯಣ ಅವರು ಹೆಚ್ಚಿನ ಒತ್ತು ನೀಡಿ ಬಜೆಟ್‌ನಲ್ಲಿ ರಸಬಾಳೆ ಬೆಳೆಗೆ ಅನುದಾನ ಮೀಸಲಿಡಲು ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳೆಗೆ ಸವಲತ್ತು ನೀಡಿದರು. ತೋಟಗಾರಿಕೆ ಇಲಾಖೆ ವತಿಯಿಂದ ಜಾಗೃತಿ ಮೂಡಿಸಿ ಸಬ್ಸಿಡಿ ಹಣದ ಬಗ್ಗೆ ಮಾಹಿತಿ ನೀಡಿದ್ದೆವು. ಹೀಗಾಗಿ ರಸಬಾಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ.

-ಕುರಹಟ್ಟಿ ನಂಜುಂಡಸ್ವಾಮಿ, ರಸಬಾಳೆ ರೈತ.

ಸರ್ಕಾರದ ಪ್ರೋತ್ಸಾಹ ಧನ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಮೂಲಕ ರಸಬಾಳೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ನನಗೆ ಈ ಬಾರಿ ಒಳ್ಳೆಯ ಇಳುವರಿ ಬಂದಿದೆ. ರಸಬಾಳೆ ಬೆಳೆಯ ಉತ್ತೇಜನಕ್ಕೆ ತಾಲ್ಲೂಕು ತೋಟಗಾರಿಕೆಗೆ ಒತ್ತು ನೀಡಿ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿರುವ ಪರಿಣಾಮ ರೈತರ ಸಂಖ್ಯೆ ಅಧಿಕವಾಗಿದೆ.

 

ಆಂದೋಲನ ಡೆಸ್ಕ್

Recent Posts

ಪುರಾವೆ ಇಲ್ಲದೇ ಯಾರ ಮೇಲೂ ತನಿಖೆ ಮಾಡಲ್ಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…

9 mins ago

ಎಚ್.ಡಿ.ಕೋಟೆ: ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳ ಪರದಾಟ

ಎಚ್.ಡಿ.ಕೋಟೆ: ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ…

23 mins ago

ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ವಿಸಿ ಫಾರ್ಮ್‌ನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.…

35 mins ago

ಸರ್ಕಾರದ ವೈಫಲ್ಯದ ವಿರುದ್ಧ ಕೈ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದ್ರೂ ಅಚ್ಚರಿಯಿಲ್ಲ: ವಿಜಯೇಂದ್ರ

ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದರೂ ಅಚ್ಚರಿ ಇಲ್ಲ ಎಂದು…

50 mins ago

ಹುಣಸೂರು| ಗುರುಪುರದ ಬಳಿ ಒಂದು ವರ್ಷದ ಹುಲಿ ಮರಿ ಸೆರೆ

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರದ ಬಳಿಯ ಜಮೀನೊಂದರಲ್ಲಿ ಓಡಾಡುತ್ತಿದ್ದ ಒಂದು ವರ್ಷದ ಹುಲಿ ಮರಿಯನ್ನು ಅರಣ್ಯಾಧಿಕಾರಿಗಳು ಸೆರೆ…

1 hour ago

ಇಡಿಯಿಂದ ನನಗೆ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ರೋಶ

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಹಾಗೂ ಯಂಗ್‌ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್‌ ನೀಡಿದೆ. ಆ ಮೂಲಕ ನಮಗೆ…

2 hours ago