Andolana originals

ಖಾಸಗಿ ನಿವೇಶನಗಳ ಖಾತೆ ಪ್ರಕ್ರಿಯೆ ಜೋರು

  • ಮುಡಾದಿಂದ ಹಸ್ತಾಂತರಗೊಂಡ ಬಡಾವಣೆಗಳ ನಿವೇಶನದಾರರಿಂದ ಅರ್ಜಿ
  • ಅಕ್ರಮ, ಅವ್ಯವಹಾರಕ್ಕೆ ದಾರಿಯಾಗದಂತೆ ದಾಖಲೆಗಳ ಮೇಲೆ ನಿಗಾ
  • ಮುಡಾದಿಂದ ಇನ್ನೂ ೨೫ ಸಾವಿರ ಖಾಸಗಿ ನಿವೇಶನಗಳ ದಾಖಲೆ ಸಲ್ಲಿಕೆ ಮುಂದುವರಿಕೆ

ಕೆ. ಬಿ. ರಮೇಶನಾಯಕ
ಮೈಸೂರು: ಮುಡಾದಲ್ಲಿ ನಿವೇಶನದಾರರಿಗೆ ಖಾತೆ ಮಾಡಿಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಸ್ಥಳೀಯ ಸಂಸ್ಥೆಗಳಿಗೆ ಖಾಸಗಿ ಬಡಾವಣೆಗಳನ್ನು ಹಸ್ತಾಂತರ ಮಾಡಿದ ಮೇಲೆ ಮೈಸೂರು ನಗರಪಾಲಿಕೆ ಸೇರಿದಂತೆ ನಾಲ್ಕು ಪಪಂ, ಒಂದು ನಗರಸಭೆಯಲ್ಲಿ ಖಾತೆ ಪ್ರಕ್ರಿಯೆ ಜೋರಾಗಿದ್ದು, ಮೂರ‍್ನಾಲ್ಕು ವರ್ಷಗಳಿಂದ ಆದಾಯ ಇಲ್ಲದೆ ಸೊರಗಿದ್ದ ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ದಾರಿಯಾಗಿದೆ.

ಹೂಟಗಳ್ಳಿ ನಗರಸಭೆಯಾದ ಮೇಲೆ ಇದುವರೆಗೂ ೫೦ ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ನಾಲ್ಕು ಪಟ್ಟಣ ಪಂಚಾಯಿತಿಗಳಲ್ಲಿ ಕನಿಷ್ಠ ೨೫ ಕೋಟಿ ರೂ. ನಿಂದ ೪೦ ಕೋಟಿ ರೂ. ಗಳವರೆಗೆ ಆದಾಯ ಸಂಗ್ರಹವಾಗಿದೆ. ಈಗ ಮನೆಗಳು ಮತ್ತು ನಿವೇಶನಗಳಿಗೆ ಖಾತೆ ಪ್ರಕ್ರಿಯೆ ಆರಂಭಿಸಿರುವುದರಿಂದ ಮತ್ತಷ್ಟು ಆದಾಯದ ನಿರೀಕ್ಷೆ ಹೊಂದಲಾಗಿದೆ. ಮೈಸೂರು ನಗರದ ಹೊರವಲಯದ ಗ್ರಾಪಂಗಳನ್ನು ಮೇಲ್ದರ್ಜೇಗೇರಿಸಿ ಬೋಗಾದಿ, ಕಡಕೊಳ, ರಮ್ಮನಹಳ್ಳಿ, ಶ್ರೀರಾಂಪುರವನ್ನು ಪಟ್ಟಣ ಪಂಚಾಯಿತಿ, ಹೂಟಗಳ್ಳಿಯನ್ನು ನಗರಸಭೆಯನ್ನಾಗಿ ರಚಿಸಿ ಆಡಳಿತಾಽಕಾರಿಗಳನ್ನು ನೇಮಕ ಮಾಡಲಾಗಿತ್ತು.

ಪ್ರಾರಂಭದಲ್ಲಿ ಮೂಲಸೌಕರ್ಯ ಒದಗಿಸಲು ಅನು ದಾನದ ಕೊರತೆ ಎದುರಿಸುತ್ತಿದ್ದ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ, ನೀರಿನ ತೆರಿಗೆ ಮೊದಲಾದ ಮೂಲಗಳಿಂದ ಆದಾಯ ಸಂಗ್ರಹಿಸಿಕೊಂಡು ನಿರ್ವಹಣೆ ಮಾಡುವಲ್ಲಿ ಸುಸ್ತಾಗಿದ್ದವು. ಇದರ ನಡುವೆ ಸರ್ಕಾರ ಒಂದಿಷ್ಟು ಅನುದಾನದಿಂದ ನೀಡಿದ್ದರಿಂದ ಅಗತ್ಯ ಸೌಕರ್ಯಗಳನ್ನು ಒದಗಿಸುವುದಕ್ಕೆ ಸೀಮಿತವಾಗಿತ್ತು. ಆದರೆ, ಮುಡಾ ಹಗರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಡಾ ಆಯುಕ್ತ ಎ. ಎನ್. ರಘುನಂದನ್ ಅವರು ಖಾತೆ ಮಾಡುವ ಪ್ರಕ್ರಿಯೆಗೆ ಬ್ರೇಕ್ ಹಾಕಿ, ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಿದ್ದರು.

೭೫೦ ಬಡಾವಣೆಗಳ ನಿವೇಶನಗಳಿಗೆ ಖಾತೆ: ಮುಡಾ ದಿಂದ ಅನುಮೋದನೆಗೊಂಡಿರುವ ೭೫೦ ಖಾಸಗಿ ಬಡಾವಣೆಗಳನ್ನು ಹಸ್ತಾಂತರಿಸುತ್ತಿದ್ದಂತೆ ಅರ್ಜಿದಾರರಿಗೆ ಖಾತೆ ಮಾಡಿಕೊಡುವ ಕೆಲಸ ನಡೆಯುತ್ತಿದೆ. ಅಂದಾಜಿನ ಪ್ರಕಾರ ಈತನಕ ೨೦ ಸಾವಿರ ನಿವೇಶನಗಳ ದಾಖಲೆಗಳನ್ನು ಬೋಗಾದಿ, ಕಡಕೊಳ, ರಮ್ಮನಹಳ್ಳಿ, ಶ್ರೀರಾಂಪುರವನ್ನು ಪಟ್ಟಣ ಪಂಚಾಯಿತಿ, ಹೂಟಗಳ್ಳಿ ನಗರಸಭೆಗೆ ಸಲ್ಲಿಸಿದ್ದು, ಬಾಕಿ ೨೫ ಸಾವಿರ ದಾಖಲೆಗಳನ್ನು ನಿತ್ಯ ರವಾನಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗಿದೆ.

ದಿನಕ್ಕೆ ೪೦ ಖಾತೆ: ಖಾತೆಗಾಗಿ ಪ್ರತಿನಿತ್ಯ ನೂರಾರು ಅರ್ಜಿಗಳು ಸಲ್ಲಿಕೆಯಾದರೂ ದಿನಕ್ಕೆ ೪೦ ಖಾತೆಗಳನ್ನು ಮಾತ್ರ ಮಾಡಲು ಶಕ್ತವಾಗಿದೆ. -ಲಾನುಭವಿಯು ಕೊಡುವ ಸ್ಕ್ಯಾನ್ ಮಾಡಿ, ಅಪ್‌ಲೋಡ್ ಮಾಡಬೇಕು. ಹಾಗಾಗಿ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಶ್ರೀರಾಂಪುರ ಪಪಂ ಮುಖ್ಯಾಽಕಾರಿ ಸುರೇಶ್.

ಫಲಾನುಭವಿಗಳು ಅರ್ಜಿ ಸಲ್ಲಿಸಿದ ತಕ್ಷಣ ಸಿಬ್ಬಂದಿ ಮೇಲೆ ಒತ್ತಡ ಹೇರುತ್ತಾರೆ. ಕಾಯಲು ಸಿದ್ಧವಿಲ್ಲ ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ದಾಖಲೆಗಳತ್ತ ನಿಗಾ: ಮುಡಾದಲ್ಲಿ ನಡೆದಿರುವ ನಕಲಿ ದಾಖಲೆಗಳ ಸೃಷ್ಟಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸ್ಥಳೀಯ ಸಂಸ್ಥೆಗಳು ಅಕ್ರಮಕ್ಕೆ ದಾರಿಯಾಗದಂತೆ ನಿಗಾ ಇಟ್ಟಿದ್ದಾರೆ. ಖಾತೆಗೆ ಅರ್ಜಿ ಸಲ್ಲಿಸುವ ಅರ್ಜಿದಾರನ ಪ್ರತಿಯೊಂದು ದಾಖಲೆಯೂ ನಿಖರವಾಗಿದ್ದರೆ ಮಾತ್ರ ಖಾತೆ ಮಾಡಿಕೊಡಲಾಗುತ್ತದೆ. ಇದರಿಂದಾಗಿ -ಲಾನುಭವಿ ಹೆಸರಿನಲ್ಲಿ ಮಧ್ಯವರ್ತಿಗಳ ಹಾವಳಿಗೂ ಕಡಿವಾಣಬಿದ್ದಿದೆ.

ಖಾತೆಗೆ ದಿನಕ್ಕೆ ನೂರು ಅರ್ಜಿಗಳು ಬಂದರೂ ನಾವು ೫೦ ಖಾತೆ ಮಾಡಲು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದಕ್ಕೆ ಸಮಯ ಹಿಡಿಯಲಿದೆ. ಖಾಸಗಿ ಬಡಾವಣೆಗಳ ಹಸ್ತಾಂತರವಾದ ಮೇಲೆ ವರ್ಕ್‌ಲೋಡ್ ಜಾಸ್ತಿಯಾಗಿದೆ. -ಸುರೇಶ್, ಮುಖ್ಯಾಧಿಕಾರಿ, ಶ್ರೀರಾಂಪುರ ಪಪಂ.

ಆಂದೋಲನ ಡೆಸ್ಕ್

Recent Posts

ಕೇರಳ ಸಿಎಂ, ಕೆ.ಸಿ.ವೇಣುಗೋಪಾಲ್‌ ಜೊತೆ ವೇದಿಕೆ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಕೇರಳ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಅಕ್ರಮ ಒತ್ತುವರಿ ತೆರವು ಸಂಬಂಧಪಟ್ಟಂತೆ ಅನಪೇಕ್ಷಣೀಯವಾದಂತಹ ಹೇಳಿಕೆ ನೀಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ…

12 mins ago

ಹೊಸ ವರ್ಷಾಚರಣೆ: ಮೈಸೂರಿಗೆ ಲಗ್ಗೆಯಿಟ್ಟ ಪ್ರವಾಸಿಗರು

ಮೈಸೂರು: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ನ್ಯೂ ಇಯರ್‌ ಆಚರಿಸಲು ಪ್ರವಾಸಿಗರು ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ. ಜಗತ್ಪ್ರಸಿದ್ಧ ಮೈಸೂರು ಅರಮನೆಗೆ…

27 mins ago

ವಾಲ್ಮೀಕಿ ನಿಗಮ ಹಗರಣ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ

ಬಳ್ಳಾರಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ಸಿಬಿಐ ಶಾಕ್‌ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್‌…

45 mins ago

ಪೈರಸಿ ವಿರುದ್ಧ ನಟ ಜಗ್ಗೇಶ್‌ ಸಮರ: ಓರ್ವನ ಬಂಧನ

ಬೆಂಗಳೂರು: ಪೈರಸಿ ವಿರುದ್ಧ ನವರಸ ನಾಯಕ ಜಗ್ಗೇಶ್‌ ಸಮರ ಸಾರಿದ್ದು, ಕೋಣ ಸಿನಿಯಾ ಪೈರಸಿ ವಿರುದ್ಧ ಚಂದ್ರಾ ಲೇಔಟ್‌ ಪೊಲೀಸ್‌…

2 hours ago

ಹೊಸ ವರ್ಷ ಆಚರಣೆಗೆ ಮಂಡ್ಯ ಜಿಲ್ಲೆ ಸಜ್ಜು: ಕಾವೇರಿ ತೀರದಲ್ಲಿ ನಿಷೇಧಾಜ್ಞೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹೊಸ ವರ್ಷ ಆಚರಣೆಗೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಪೊಲೀಸ್‌ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರಮುಖವಾಗಿ…

2 hours ago

ವೈವಿಧ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು: ಸಿಎಂ ಸಿದ್ದರಾಮಯ್ಯ

ಕೇರಳ(ತಿರುವನಂತಪುರ): ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ…

2 hours ago