Andolana originals

ಪೋಸ್ಟರ್‌ಗಳ ಹಾವಳಿ; ತಂಗುದಾಣಗಳು ವಿರೂಪ

ಬಸ್ ನಿಲ್ದಾಣಕ್ಕೆ ಪೋಸ್ಟರ್ ಅಂಟಿಸಿ ಸೌಂದರ್ಯ ಹಾಳು

ಪೋಸ್ಟರ್ ಅಂಟಿಸಿದವರ ವಿರುದ್ಧ ಕಾನೂನು ಕ್ರಮ, ದಂಡ, ಶೀಘ್ರ ಬಸ್ ನಿಲ್ದಾಣಗಳ ಸ್ವಚ್ಛತೆ

ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಸ್ವಚ್ಛತೆ ಕಾಪಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಪಾರಂಪರಿಕತೆಯನ್ನು ಬಿಂಬಿಸುವ ಪ್ರಯಾಣಿಕರ ತಂಗುದಾಣಗಳಲ್ಲಿ ಜಾಹೀರಾತು ಗಳು ಹಾಗೂ ಕಾರ್ಯಕ್ರಮಗಳ ಪೋಸ್ಟರ್‌ಗಳನ್ನು ಅಂಟಿಸಿ ವಿರೂಪಗೊಳಿಸಲಾಗಿದೆ.

ನಗರದ ವಿವಿಧ ಭಾಗಗಳಲ್ಲಿರುವ ತಂಗುದಾಣಗಳ ಹೊರಗೆ ಹಾಗೂ ಒಳಭಾಗದಲ್ಲಿ ರಾಜಕಾರಣಿಗಳು, ಮುಖಂಡರ ಹುಟ್ಟುಹಬ್ಬ, ರಾಜಕೀಯ ಪಕ್ಷಗಳ ರ‍್ಯಾಲಿ, ಜತ್ರಾ ಮಹೋತ್ಸವಗಳು, ಉದ್ಯೋಗ, ಪಿ.ಜಿ.ಗಳ ಮಾಹಿತಿ, ಮನೆ ಯಿಂದಲೇ ಕೆಲಸ ಮಾಡಿ, ತಿಗಣೆಯಿಂದ ಮುಕ್ತಿ ಮುಂತಾದ ಹಲವಾರು ಪೋಸ್ಟರ್‌ಗಳು ಹಾಗೂ ಮಾಹಿತಿ ಗಳಿರುವ ಭಿತ್ತಿಪತ್ರಗಳು, ಕರಪತ್ರಗಳನ್ನು ಅನುಮತಿ ಇಲ್ಲದೆ ಅಂಟಿಸಲಾಗುತ್ತಿದೆ.

ಹೀಗೆ ತಂಗುದಾಣಗಳಲ್ಲಿ ಅಂಟಿಸಿರುವ ಈ ಕರಪತ್ರಗಳು ಹಾಗೂ ಬಿತ್ತಿಪತ್ರಗಳಿಂದ ತಂಗುದಾಣಗಳ ಸೌಂದರ್ಯ, ಸ್ವಚ್ಛತೆ ಹಾಳಾಗುತ್ತಿದೆ. ಇಲ್ಲಿ ಪೋಸ್ಟರ್ ಅಂಟಿಸುವವರ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇದ್ದೇ ಇರುತ್ತದೆ ಆದರೂ ಅವರ ಬಗ್ಗೆ ಪಾಲಿಕೆ ಕ್ರಮ ಏಕೆ ಜರುಗಿಸುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ.

ಇಂಥ ಬಸ್ ನಿಲ್ದಾಣಗಳನ್ನು ನೋಡುತ್ತಿದ್ದರೆ ಅಸಹ್ಯ ಆಗುತ್ತದೆ. ಕೆಲವರು ಬೀಡ ಹಾಕಿಕೊಂಡು ಬಸ್ ನಿಲ್ದಾಣದ ಗೋಡೆಗೆ ಉಗುಳಿರುವುದು ಅಸಹ್ಯ ಹುಟ್ಟಿಸುತ್ತಿದೆ. ಮೈಸೂರು ನಗರಕ್ಕೆ ಬರುವ ಪ್ರವಾಸಿಗರು ಇದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಾರೆ. ಮೈಸೂರು ಜನತೆಯ ಬಗ್ಗೆ ಅವರಿಗೆ ಒಂದು ರೀತಿಯ ಕೀಳು ಭಾವನೆ ಮೂಡುತ್ತಿದೆ. ಬಸ್ ನಿಲ್ದಾಣ ಗಳಲ್ಲಿರುವ ಕೆಲ ಜಾಹೀರಾತುಗಳು ಕೆಲವೇ ಕೆಲವರಿಗೆ ಉಪಯುಕ್ತವಾಗಿರ ಬಹುದು. ಆದರೆ ಈ ಪೋಸ್ಟರ್‌ಗಳನ್ನು ಅಂಟಿಸುವ ಮೊದಲು ಅನುಮತಿ ಪಡೆದುಕೊಂಡಲ್ಲಿ ಅದಕ್ಕಾಗಿ ಒಂದು ನಿರ್ದಿಷ್ಟ ಸ್ಥಳ ಸೂಚಿಸಬಹುದು, ಇದು ಒಂದು ಒಳ್ಳೆಯ ಶಿಸ್ತಿನ ಕ್ರಮ ಎಂದರೆ ತಪ್ಪಾಗಲಾರದು.

ನಗರದ ಸೌಂದರ್ಯ ಹದಗೆಡಿಸುತ್ತಿರುವ ಇಂಥ ಬಸ್ ತಂಗುದಾಣಗಳನ್ನು ಪಾಲಿಕೆ ಸ್ವಚ್ಛಗೊಳಿಸಿ ಪೋಸ್ಟರ್ ಅಂಟಿಸು ವವರಿಗೆ ಕಾನೂನು ರೀತಿ ದಂಡ ವಿಽಸಲಿ ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ಸುಂದರವಾದ ಬಸ್ ತಂಗುದಾಣಗಳು ನಗರ ಸೌಂದರ್ಯಕ್ಕೆ ಮೆರುಗು ನೀಡುವುದರಲ್ಲಿ ಅನುಮಾನವಿಲ್ಲ. ಆದರೆ ವಿರೂಪಗೊಳ್ಳುತ್ತಿರುವ ಬಸ್ ತಂಗುದಾಣಗಳು ಸ್ವಚ್ಛ ನಗರಿ ಎಂಬ ಬಿರುದು ಗಳಿಸಲು ಅಡ್ಡಿಯಾಗಿವೆ ಎನ್ನುವುದು ಸತ್ಯ.

” ನಮ್ಮ ಹೆಲ್ತ್‌ ಇನ್ಸ್‌ಪೆಕ್ಟರ್‌ಗಳಿಗೆ ಈಗಾಗಲೇ ಬಸ್ ನಿಲ್ದಾಣದಲ್ಲಿ ಅಂಟಿಸಿರುವ ಪೋಸ್ಟರ್ಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ಕುಂಭಮೇಳದಲ್ಲಿ ಅಧಿಕಾರಿಗಳು ಭಾಗವಹಿಸುತ್ತಿರುವುದರಿಂದ ಅಲ್ಲಿಂದ ಬಂದ ಕೂಡಲೇ ತೆರವು ಮಾಡಿಸುತ್ತೇವೆ. ಪೋಸ್ಟರ್ ಅಂಟಿಸಿರುವವರಿಗೆ ನೋಟಿಸ್ ಕಳುಹಿಸಿ ದಂಡವನ್ನೂ ವಿಧಿಸಲಾಗುತ್ತದೆ.”

? ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ

ಆಂದೋಲನ ಡೆಸ್ಕ್

Recent Posts

ಕನ್ನಡ ಭಾಷ ಶಿಕ್ಷಕರ ಪ್ರತ್ಯೇಕ ನೇಮಕಕ್ಕೆ ಸರ್ಕಾರ ಅಸ್ತು ; ಸ್ವಾಗತಾರ್ಹ

ಮೈಸೂರು : ಶಾಲಾ ಶಿಕ್ಷಣ ಇಲಾಖೆಯ ಜಿಪಿಎಸ್‌ಟಿಆರ್ ಹಾಗೂ ಎಚ್‌ಎಸ್‌ಟಿಆರ್ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳನ್ನು ಪ್ರತ್ಯೇಕವಾಗಿ…

3 hours ago

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

7 hours ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

9 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

10 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

11 hours ago

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

14 hours ago