Andolana originals

ಪೋಸ್ಟರ್‌ಗಳ ಹಾವಳಿ; ತಂಗುದಾಣಗಳು ವಿರೂಪ

ಬಸ್ ನಿಲ್ದಾಣಕ್ಕೆ ಪೋಸ್ಟರ್ ಅಂಟಿಸಿ ಸೌಂದರ್ಯ ಹಾಳು

ಪೋಸ್ಟರ್ ಅಂಟಿಸಿದವರ ವಿರುದ್ಧ ಕಾನೂನು ಕ್ರಮ, ದಂಡ, ಶೀಘ್ರ ಬಸ್ ನಿಲ್ದಾಣಗಳ ಸ್ವಚ್ಛತೆ

ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಸ್ವಚ್ಛತೆ ಕಾಪಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಪಾರಂಪರಿಕತೆಯನ್ನು ಬಿಂಬಿಸುವ ಪ್ರಯಾಣಿಕರ ತಂಗುದಾಣಗಳಲ್ಲಿ ಜಾಹೀರಾತು ಗಳು ಹಾಗೂ ಕಾರ್ಯಕ್ರಮಗಳ ಪೋಸ್ಟರ್‌ಗಳನ್ನು ಅಂಟಿಸಿ ವಿರೂಪಗೊಳಿಸಲಾಗಿದೆ.

ನಗರದ ವಿವಿಧ ಭಾಗಗಳಲ್ಲಿರುವ ತಂಗುದಾಣಗಳ ಹೊರಗೆ ಹಾಗೂ ಒಳಭಾಗದಲ್ಲಿ ರಾಜಕಾರಣಿಗಳು, ಮುಖಂಡರ ಹುಟ್ಟುಹಬ್ಬ, ರಾಜಕೀಯ ಪಕ್ಷಗಳ ರ‍್ಯಾಲಿ, ಜತ್ರಾ ಮಹೋತ್ಸವಗಳು, ಉದ್ಯೋಗ, ಪಿ.ಜಿ.ಗಳ ಮಾಹಿತಿ, ಮನೆ ಯಿಂದಲೇ ಕೆಲಸ ಮಾಡಿ, ತಿಗಣೆಯಿಂದ ಮುಕ್ತಿ ಮುಂತಾದ ಹಲವಾರು ಪೋಸ್ಟರ್‌ಗಳು ಹಾಗೂ ಮಾಹಿತಿ ಗಳಿರುವ ಭಿತ್ತಿಪತ್ರಗಳು, ಕರಪತ್ರಗಳನ್ನು ಅನುಮತಿ ಇಲ್ಲದೆ ಅಂಟಿಸಲಾಗುತ್ತಿದೆ.

ಹೀಗೆ ತಂಗುದಾಣಗಳಲ್ಲಿ ಅಂಟಿಸಿರುವ ಈ ಕರಪತ್ರಗಳು ಹಾಗೂ ಬಿತ್ತಿಪತ್ರಗಳಿಂದ ತಂಗುದಾಣಗಳ ಸೌಂದರ್ಯ, ಸ್ವಚ್ಛತೆ ಹಾಳಾಗುತ್ತಿದೆ. ಇಲ್ಲಿ ಪೋಸ್ಟರ್ ಅಂಟಿಸುವವರ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇದ್ದೇ ಇರುತ್ತದೆ ಆದರೂ ಅವರ ಬಗ್ಗೆ ಪಾಲಿಕೆ ಕ್ರಮ ಏಕೆ ಜರುಗಿಸುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ.

ಇಂಥ ಬಸ್ ನಿಲ್ದಾಣಗಳನ್ನು ನೋಡುತ್ತಿದ್ದರೆ ಅಸಹ್ಯ ಆಗುತ್ತದೆ. ಕೆಲವರು ಬೀಡ ಹಾಕಿಕೊಂಡು ಬಸ್ ನಿಲ್ದಾಣದ ಗೋಡೆಗೆ ಉಗುಳಿರುವುದು ಅಸಹ್ಯ ಹುಟ್ಟಿಸುತ್ತಿದೆ. ಮೈಸೂರು ನಗರಕ್ಕೆ ಬರುವ ಪ್ರವಾಸಿಗರು ಇದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಾರೆ. ಮೈಸೂರು ಜನತೆಯ ಬಗ್ಗೆ ಅವರಿಗೆ ಒಂದು ರೀತಿಯ ಕೀಳು ಭಾವನೆ ಮೂಡುತ್ತಿದೆ. ಬಸ್ ನಿಲ್ದಾಣ ಗಳಲ್ಲಿರುವ ಕೆಲ ಜಾಹೀರಾತುಗಳು ಕೆಲವೇ ಕೆಲವರಿಗೆ ಉಪಯುಕ್ತವಾಗಿರ ಬಹುದು. ಆದರೆ ಈ ಪೋಸ್ಟರ್‌ಗಳನ್ನು ಅಂಟಿಸುವ ಮೊದಲು ಅನುಮತಿ ಪಡೆದುಕೊಂಡಲ್ಲಿ ಅದಕ್ಕಾಗಿ ಒಂದು ನಿರ್ದಿಷ್ಟ ಸ್ಥಳ ಸೂಚಿಸಬಹುದು, ಇದು ಒಂದು ಒಳ್ಳೆಯ ಶಿಸ್ತಿನ ಕ್ರಮ ಎಂದರೆ ತಪ್ಪಾಗಲಾರದು.

ನಗರದ ಸೌಂದರ್ಯ ಹದಗೆಡಿಸುತ್ತಿರುವ ಇಂಥ ಬಸ್ ತಂಗುದಾಣಗಳನ್ನು ಪಾಲಿಕೆ ಸ್ವಚ್ಛಗೊಳಿಸಿ ಪೋಸ್ಟರ್ ಅಂಟಿಸು ವವರಿಗೆ ಕಾನೂನು ರೀತಿ ದಂಡ ವಿಽಸಲಿ ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ಸುಂದರವಾದ ಬಸ್ ತಂಗುದಾಣಗಳು ನಗರ ಸೌಂದರ್ಯಕ್ಕೆ ಮೆರುಗು ನೀಡುವುದರಲ್ಲಿ ಅನುಮಾನವಿಲ್ಲ. ಆದರೆ ವಿರೂಪಗೊಳ್ಳುತ್ತಿರುವ ಬಸ್ ತಂಗುದಾಣಗಳು ಸ್ವಚ್ಛ ನಗರಿ ಎಂಬ ಬಿರುದು ಗಳಿಸಲು ಅಡ್ಡಿಯಾಗಿವೆ ಎನ್ನುವುದು ಸತ್ಯ.

” ನಮ್ಮ ಹೆಲ್ತ್‌ ಇನ್ಸ್‌ಪೆಕ್ಟರ್‌ಗಳಿಗೆ ಈಗಾಗಲೇ ಬಸ್ ನಿಲ್ದಾಣದಲ್ಲಿ ಅಂಟಿಸಿರುವ ಪೋಸ್ಟರ್ಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ಕುಂಭಮೇಳದಲ್ಲಿ ಅಧಿಕಾರಿಗಳು ಭಾಗವಹಿಸುತ್ತಿರುವುದರಿಂದ ಅಲ್ಲಿಂದ ಬಂದ ಕೂಡಲೇ ತೆರವು ಮಾಡಿಸುತ್ತೇವೆ. ಪೋಸ್ಟರ್ ಅಂಟಿಸಿರುವವರಿಗೆ ನೋಟಿಸ್ ಕಳುಹಿಸಿ ದಂಡವನ್ನೂ ವಿಧಿಸಲಾಗುತ್ತದೆ.”

? ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ

ಆಂದೋಲನ ಡೆಸ್ಕ್

Recent Posts

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ | ರಾಮಮಂದಿರ ಅಕ್ರಮ ಮಂಕಾಗಿಸಿದ ಬಿಜೆಪಿ ಭವಿಷ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗೆಗೆ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಇಚ್ಛೆಯ ಈಡೇರಿಕೆಗಾಗಿ ಹರಕೆ ಹೊತ್ತವರು , ದಾನ…

11 mins ago

ಭಾನುವಾರದ ಹಾಡುಪಾಡು | ಈಗ ಕೇರಳದಲ್ಲೂ ಫ್ರೀ ಬಸ್ ಪ್ರಿಯದರ್ಶಿನಿ

ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ…

47 mins ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…

1 hour ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…

2 hours ago

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

18 hours ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

20 hours ago