Andolana originals

ಪೋಸ್ಟರ್‌ಗಳ ಹಾವಳಿ; ತಂಗುದಾಣಗಳು ವಿರೂಪ

ಬಸ್ ನಿಲ್ದಾಣಕ್ಕೆ ಪೋಸ್ಟರ್ ಅಂಟಿಸಿ ಸೌಂದರ್ಯ ಹಾಳು

ಪೋಸ್ಟರ್ ಅಂಟಿಸಿದವರ ವಿರುದ್ಧ ಕಾನೂನು ಕ್ರಮ, ದಂಡ, ಶೀಘ್ರ ಬಸ್ ನಿಲ್ದಾಣಗಳ ಸ್ವಚ್ಛತೆ

ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಸ್ವಚ್ಛತೆ ಕಾಪಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಪಾರಂಪರಿಕತೆಯನ್ನು ಬಿಂಬಿಸುವ ಪ್ರಯಾಣಿಕರ ತಂಗುದಾಣಗಳಲ್ಲಿ ಜಾಹೀರಾತು ಗಳು ಹಾಗೂ ಕಾರ್ಯಕ್ರಮಗಳ ಪೋಸ್ಟರ್‌ಗಳನ್ನು ಅಂಟಿಸಿ ವಿರೂಪಗೊಳಿಸಲಾಗಿದೆ.

ನಗರದ ವಿವಿಧ ಭಾಗಗಳಲ್ಲಿರುವ ತಂಗುದಾಣಗಳ ಹೊರಗೆ ಹಾಗೂ ಒಳಭಾಗದಲ್ಲಿ ರಾಜಕಾರಣಿಗಳು, ಮುಖಂಡರ ಹುಟ್ಟುಹಬ್ಬ, ರಾಜಕೀಯ ಪಕ್ಷಗಳ ರ‍್ಯಾಲಿ, ಜತ್ರಾ ಮಹೋತ್ಸವಗಳು, ಉದ್ಯೋಗ, ಪಿ.ಜಿ.ಗಳ ಮಾಹಿತಿ, ಮನೆ ಯಿಂದಲೇ ಕೆಲಸ ಮಾಡಿ, ತಿಗಣೆಯಿಂದ ಮುಕ್ತಿ ಮುಂತಾದ ಹಲವಾರು ಪೋಸ್ಟರ್‌ಗಳು ಹಾಗೂ ಮಾಹಿತಿ ಗಳಿರುವ ಭಿತ್ತಿಪತ್ರಗಳು, ಕರಪತ್ರಗಳನ್ನು ಅನುಮತಿ ಇಲ್ಲದೆ ಅಂಟಿಸಲಾಗುತ್ತಿದೆ.

ಹೀಗೆ ತಂಗುದಾಣಗಳಲ್ಲಿ ಅಂಟಿಸಿರುವ ಈ ಕರಪತ್ರಗಳು ಹಾಗೂ ಬಿತ್ತಿಪತ್ರಗಳಿಂದ ತಂಗುದಾಣಗಳ ಸೌಂದರ್ಯ, ಸ್ವಚ್ಛತೆ ಹಾಳಾಗುತ್ತಿದೆ. ಇಲ್ಲಿ ಪೋಸ್ಟರ್ ಅಂಟಿಸುವವರ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇದ್ದೇ ಇರುತ್ತದೆ ಆದರೂ ಅವರ ಬಗ್ಗೆ ಪಾಲಿಕೆ ಕ್ರಮ ಏಕೆ ಜರುಗಿಸುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ.

ಇಂಥ ಬಸ್ ನಿಲ್ದಾಣಗಳನ್ನು ನೋಡುತ್ತಿದ್ದರೆ ಅಸಹ್ಯ ಆಗುತ್ತದೆ. ಕೆಲವರು ಬೀಡ ಹಾಕಿಕೊಂಡು ಬಸ್ ನಿಲ್ದಾಣದ ಗೋಡೆಗೆ ಉಗುಳಿರುವುದು ಅಸಹ್ಯ ಹುಟ್ಟಿಸುತ್ತಿದೆ. ಮೈಸೂರು ನಗರಕ್ಕೆ ಬರುವ ಪ್ರವಾಸಿಗರು ಇದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಾರೆ. ಮೈಸೂರು ಜನತೆಯ ಬಗ್ಗೆ ಅವರಿಗೆ ಒಂದು ರೀತಿಯ ಕೀಳು ಭಾವನೆ ಮೂಡುತ್ತಿದೆ. ಬಸ್ ನಿಲ್ದಾಣ ಗಳಲ್ಲಿರುವ ಕೆಲ ಜಾಹೀರಾತುಗಳು ಕೆಲವೇ ಕೆಲವರಿಗೆ ಉಪಯುಕ್ತವಾಗಿರ ಬಹುದು. ಆದರೆ ಈ ಪೋಸ್ಟರ್‌ಗಳನ್ನು ಅಂಟಿಸುವ ಮೊದಲು ಅನುಮತಿ ಪಡೆದುಕೊಂಡಲ್ಲಿ ಅದಕ್ಕಾಗಿ ಒಂದು ನಿರ್ದಿಷ್ಟ ಸ್ಥಳ ಸೂಚಿಸಬಹುದು, ಇದು ಒಂದು ಒಳ್ಳೆಯ ಶಿಸ್ತಿನ ಕ್ರಮ ಎಂದರೆ ತಪ್ಪಾಗಲಾರದು.

ನಗರದ ಸೌಂದರ್ಯ ಹದಗೆಡಿಸುತ್ತಿರುವ ಇಂಥ ಬಸ್ ತಂಗುದಾಣಗಳನ್ನು ಪಾಲಿಕೆ ಸ್ವಚ್ಛಗೊಳಿಸಿ ಪೋಸ್ಟರ್ ಅಂಟಿಸು ವವರಿಗೆ ಕಾನೂನು ರೀತಿ ದಂಡ ವಿಽಸಲಿ ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ಸುಂದರವಾದ ಬಸ್ ತಂಗುದಾಣಗಳು ನಗರ ಸೌಂದರ್ಯಕ್ಕೆ ಮೆರುಗು ನೀಡುವುದರಲ್ಲಿ ಅನುಮಾನವಿಲ್ಲ. ಆದರೆ ವಿರೂಪಗೊಳ್ಳುತ್ತಿರುವ ಬಸ್ ತಂಗುದಾಣಗಳು ಸ್ವಚ್ಛ ನಗರಿ ಎಂಬ ಬಿರುದು ಗಳಿಸಲು ಅಡ್ಡಿಯಾಗಿವೆ ಎನ್ನುವುದು ಸತ್ಯ.

” ನಮ್ಮ ಹೆಲ್ತ್‌ ಇನ್ಸ್‌ಪೆಕ್ಟರ್‌ಗಳಿಗೆ ಈಗಾಗಲೇ ಬಸ್ ನಿಲ್ದಾಣದಲ್ಲಿ ಅಂಟಿಸಿರುವ ಪೋಸ್ಟರ್ಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ಕುಂಭಮೇಳದಲ್ಲಿ ಅಧಿಕಾರಿಗಳು ಭಾಗವಹಿಸುತ್ತಿರುವುದರಿಂದ ಅಲ್ಲಿಂದ ಬಂದ ಕೂಡಲೇ ತೆರವು ಮಾಡಿಸುತ್ತೇವೆ. ಪೋಸ್ಟರ್ ಅಂಟಿಸಿರುವವರಿಗೆ ನೋಟಿಸ್ ಕಳುಹಿಸಿ ದಂಡವನ್ನೂ ವಿಧಿಸಲಾಗುತ್ತದೆ.”

? ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಾದರಿಯ ನಡೆ!

ಮಾದರಿಯ ನಡೆ! ಮೊನ್ನೆ ಹುಣಸೂರಿನಲ್ಲಿ ನಡೆದ ದಲಿತರ ದೇವಸ್ಥಾನ ಪ್ರವೇಶ ಸಹಪಂಕ್ತಿ ಭೋಜನ ಮಾದರಿ ನಡೆಯಾಗಿದೆ ನಾಡು-ದೇಶಕೆ! ಪ್ರೇರಣೆಯಾಗಿದೆ ಮೇಲ್ಪಂಕ್ತಿಯಾಗಿದೆ…

13 mins ago

ಓದುಗರ ಪತ್ರ: ಅರಮನೆ ಸುತ್ತಲಿನ ಪಾದಚಾರಿ ಮಾರ್ಗ ದುರಸ್ತಿ ಮಾಡಿ

ಮೈಸೂರಿನ ಅರಮನೆ ವೀಕ್ಷಣೆಗೆ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಅರಮನೆಯ ಸುತ್ತಲೂ ನಿರ್ಮಾಣವಾಗಿರುವ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಚಪ್ಪಡಿ…

15 mins ago

ಓದುಗರ ಪತ್ರ: ಕೆರೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ತುಂಬಿಸಿ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ, ಬೂಕನಕೆರೆ ಹೋಬಳಿಯ ಬಹುಪಾಲು ಪ್ರದೇಶಗಳಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ಆಗದೆ, ಬೆಳೆ…

17 mins ago

ಓದುಗರ ಪತ್ರ: ಕೋಚಿಂಗ್ ದಂಧೆಗೆ ಕಡಿವಾಣ ಹಾಕಿ

ಖಾಸಗಿ ಶಾಲೆಗಳು ೬ನೇ ತರಗತಿಯಿಂದಲೇ ಐಐಟಿ ಮತ್ತು ನೀಟ್ ತರಬೇತಿಯನ್ನು ಕಡ್ಡಾಯಗೊಳಿಸಿವೆ. ೧೧-೧೨ ವರ್ಷದ ಪುಟ್ಟ ಮಕ್ಕಳ ಮೇಲೆ ಸ್ಪರ್ಧಾತ್ಮಕ…

19 mins ago

ಶುಶ್ರೂಷೆ ವೃತ್ತಿಗೆ ಮೆರುಗು ನೀಡಿದ ಫ್ಲಾರೆನ್ಸ್ ನೈಟಿಂಗೇಲ್

ಎನ್.ಹರೀಶ್ ಕುಮಾರ್ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಮುಂಚೂಣಿಯಲ್ಲಿ ಬರುವ ಹೆಸರೆಂದರೆ ಅದು ವೈದ್ಯ ವೃತ್ತಿ. ಆದರೆ ಒಬ್ಬ ರೋಗಿಯು ಗುಣಮುಖ…

4 hours ago

ಜನಮೆಚ್ಚುಗೆ ಗಳಿಸಿದ ರಾಜ್ಯಮಟ್ಟದ ಯಿಫಾ ಹಾಕಿ

ಲಕ್ಷ್ಮೀಕಾಂತ್ ಕೊಮಾರಪ್ಪ ಉತ್ತಮ ಪ್ರದರ್ಶನ ನೀಡಿದ ಎಜಿಒಆರ್‌ಸಿ ತಂಡ ಚಾಂಪಿಯನ್; ಸದರ್ನ್ ಕಮಾಂಡ್ ತಂಡಕ್ಕೆ ದ್ವಿತೀಯ ಬಹುಮಾನ ಸೋಮವಾರಪೇಟೆ: ಸುಮಾರು…

4 hours ago