Categories: Andolana originals

ಗೋಕುಲಂ ಪೇ ಅಂಡ್ ಯೂಸ್ ಶೌಚಾಲಯಕ್ಕೆ ಬೀಗ

ದುರಸ್ತಿಗೆ ಗಮನ ಹರಿಸದ ನಗರಪಾಲಿಕೆ ಅಧಿಕಾರಿಗಳು

ಮೈಸೂರು: ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪೇ ಅಂಡ್ ಯೂಸ್ ಶೌಚಾಲಯ ಕಳೆದ ಎಂಟು ತಿಂಗಳಿನಿಂದ ಹಾಳಾಗಿದ್ದು, ಯಾರ ಬಳಕೆಗೂ ಬಾರದಂತಾಗಿದೆ.

ನಗರದ ಗೋಕುಲಂ ಮೂರನೇ ಹಂತದ ಕೆಆರ್‌ಎಸ್ ರಸ್ತೆ ಬದಿಯಲ್ಲಿ ಮೈಸೂರು ನಗರಪಾಲಿಕೆಯಿಂದ ನಿರ್ಮಿಸಿರುವ ಪಾವತಿಸಿ ಉಪಯೋಗಿಸುವ ಶೌಚಾಲಯಕ್ಕೆ ಕಳೆದ ಎಂಟು ತಿಂಗಳಿನಿಂದ ಬೀಗ ಜಡಿಯಲಾಗಿದ್ದು, ಕೊಳಕು ಮನೆ ಮಾಡಿದೆ.

ಗೋಕುಲಂ ರಸ್ತೆ ಮೂಲಕ ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಮಂದಿ ಚಿಕಿತ್ಸೆಗೆ ಆಗಮಿಸುತ್ತಾರೆ. ಆಸ್ಪತ್ರೆಗಳು, ವಿವಿಧ ಇಲಾಖಾ ಕಚೇರಿ ಗಳು ಇಲ್ಲೇ ಇದ್ದು, ಬೇರೆ ಕಡೆಯಿಂದ ಆಗಮಿಸುವ ಜನರಿಗೆ ತಕ್ಷಣದ ಬಳಕೆಗಾಗಿ ಇದ್ದ ಈ ಒಂದು ಶೌಚಾಲಯವೂ ಸದ್ಯ ಮುಚ್ಚಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ.

ಶೌಚಾಲಯವನ್ನು ಪುನರ್‌ ಬಳಕೆಗೆ ಯೋಗ್ಯ ವಾಗುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಹಾಳಾದ ಪಾರ್ಕ್:
ಈ ಶೌಚಾಲಯ ನಿರ್ಮಾಣವಾಗಿರುವ ಜಾಗ ಪಾಕ್‌ ೯ನ ಒಂದು ಭಾಗವಾಗಿದೆ. ಪಾವತಿಸಿ ಬಳಸುವ ಈ ಶೌಚಾಲಯ ಹಿಂಭಾಗದಲ್ಲಿರುವ ಚಿಕ್ಕ ಪಾರ್ಕ್ ಸಂಪೂರ್ಣವಾಗಿ ಹದಗೆಟ್ಟಿದೆ. ಪಾರ್ಕ್ ಬಳಿ ಭಾರೀ ಗಾತ್ರದ ಲಾರಿಗಳನ್ನು ನಿಲ್ಲಿಸಲಾಗುತ್ತಿದ್ದು, ಪಾರ್ಕ್ ಎಂಬುದರ ಕುರುಹೂ ಇಲ್ಲದಂತಾಗಿದೆ.

ಪಾರ್ಕ್‌ ಒಳಭಾಗದಲ್ಲಿ ಅನಗತ್ಯ ಸಸಿಗಲೂ ಬೆಳದು ನಿಂತಿದ್ದು, ಪಾರ್ಕ್‌ ಒಳ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ. ಪರಿಸ್ಥಿತಿ ಹೀಗೇಯೇ ಮುಂದುವರಿದರೆ ಬಡಾವಣೆಯ ಸುತ್ತಲಿನ ಎಲ್ಲಾ ಕಸಗಳು ಇಲ್ಲೇ ಸಂಗ್ರಹವಾಗಲಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಶೌಚಾಲಯ ಮರು ಬಳಕೆ ಸಂಬಂಧ ಟೆಂಡರ್ ಕರೆಯಲಾಗಿತ್ತು. ಅಲ್ಲಿಗೆ ನಮ್ಮ ಅವಧಿ ಮುಗಿದಿತ್ತು. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಮನಕ್ಕೂ ತಂದಿದ್ದೆ. ಮತ್ತೊಮ್ಮೆ ಈ ಬಗ್ಗೆ ಪರಿಶೀಲಿಸಿ ಜನರ ಬಳಕೆಗೆ ತರಲಾಗುವುದು. ಪಾರ್ಕ್‌ನಲ್ಲಿ ಲಾರಿ ನಿಲ್ಲಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು.
ಎಸ್‌ಬಿಎಂ ಮಂಜು, ಮಾಜಿ ಕಾರ್ಪೊರೇಟರ್.

ಶೌಚಾಲಯ ಮರು ಸ್ಥಾಪನೆ ಸಂಬಂಧ ಟೆಂಡರ್‌ ಕಡೆಯಲಾಗಿತ್ತು. ಆದರೆ ಈವರೆಗೆ ಯಾರೂ ಮುಂದೆ ಬಂದಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು.
ಅಶಾದ್ ಉರ್ ರೆಹಮಾನ್ ಷರೀಫ್‌, ನಗರಪಾಲಿಕೆ ಆಯುಕ್ತ.

ಸುಮಾರು ದಿನಗಳಿಂದ ಪಾವತಿಸಿ ಬಳಸುವ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಸ್ಥಳೀಯರಾಗಿ ನಮಗೆ ಪ್ರಯೋಜನವಾಗಿತ್ತು. ಬೇರೆ ಕಡೆಗಳಿಂದ ಬರುವ ಜನರ ಬಳಕೆಗೆ ಉಪಯುಕ್ತವಾಗಿದ್ದ ಈ ಶೌಚಾಲಯ ಮರು ಬಳಕೆಗೆ ಬರಬೇಕು.
ರಾಜೇಶ್ವರಿ, ಗೋಕುಲಂ ನಿವಾಸಿ.

ಬೇರೆ ಊರುಗಳಿಂದ ಆಸ್ಪತ್ರೆಗೆ ಬರುವ ಜನರು, ಲಾರಿ ಚಾಲಕರು, ಇತರೆ ಕೂಲಿ ಕಾರ್ಮಿಕರರಿಗೆ ಉಪಯುಕ್ತವಾಗಿದ್ದ ಈ ಶೌಚಾಲಯ ಮುಚ್ಚಿರುವುದು ನಿಜಕ್ಕೂ ನಷ್ಟ. ತುಂಬಾ ಅಚ್ಚುಕಟ್ಟಾಗಿ ಸಾಗುತ್ತಿದ್ದ ಈ ಶೌಚಾಲಯವನ್ನು ಮತ್ತೆ ಪ್ರಾರಂಭಿಸಬೇಕು.
ಸತೀಶ್, ಅಂಗಡಿ ಮಾಲೀಕರು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

5 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

5 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

6 hours ago

ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…

6 hours ago

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…

7 hours ago

ಮೈಸೂರು: ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ

ಮೈಸೂರು: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಿ ಹಾಗೂ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು…

8 hours ago