‘ಆಂದೋಲನ’ದೊಂದಿಗೆ ಅಭಿಪ್ರಾಯ ಹಂಚಿಕೊಂಡ ಸಾರ್ವಜನಿಕರು, ಪ್ರವಾಸಿಗರು
ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರವೇಶ ದರ ಪರಿಷ್ಕರಣೆ ಮಾಡುವ ಕುರಿತು ಸರ್ಕಾರದಿಂದ ಆದೇಶವಾಗಿದ್ದು, ಮೃಗಾಲಯ ಪ್ರಾಧಿಕಾರ ಈ ಕುರಿತು ಈಗಾಗಲೇ ಕ್ರಮಕೈಗೊಂಡಿದೆ. ಮೃಗಾಲಯದ ಪ್ರವೇಶ ದರವನ್ನು ಶೇ.೨೦ರಷ್ಟು ಏರಿಕೆ ಮಾಡಲು ನಿರ್ಧಾರ ಕೈಗೊಂಡಿದ್ದು, ಆ.೧ರಿಂದ ಅಧಿಕೃತವಾಗಿ ಹೊಸ ದರ ಜಾರಿಗೆ ಬರಲಿದೆ. ಮೃಗಾಲಯ ಪ್ರಾಧಿಕಾರದ ಈ ತೀರ್ಮಾನದ ಬಗ್ಗೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಸಂಬಂಧ ‘ಆಂದೋಲನ’ದೊಂದಿಗೆ ಪ್ರವಾಸಿಗರು, ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
” ಈಗಿನ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹಣ ತುಂಬಿಸಲು ಮೃಗಾಲಯ ಪ್ರವೇಶ ದರವನ್ನು ಶೇ.೨೦ರಷ್ಟು ಏರಿಕೆ ಮಾಡಿದೆ. ಇದು ಸರಿಯಲ್ಲ.”
-ಮೀನಾಕ್ಷಿ ಕುಮಾರ್, ದಟ್ಟಗಳ್ಳಿ, ಮೈಸೂರು
” ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮತು ಹೊರ ರಾಜ್ಯಗಳಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ದಸರಾ ಸಮಯ ಬಿಟ್ಟು ಬೇರೆ ದಿನಗಳಲ್ಲಿ ಅದರ ಬಗ್ಗೆ ಚರ್ಚಿಸಿ ದರ ಹೆಚ್ಚಿಸಬೇಕೋ ಬೇಡವೋ ಎಂಬುದರ ಬಗ್ಗೆ ಗಮನಹರಿಸಲಿ.”
-ಶಿಲ್ಪಶ್ರೀ ಬೈಸಾನಿ
” ದಸರಾ ಮಹೋತ್ಸವದ ವೇಳೆ ಮೃಗಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿರುವುದು ಒಂದೆಡೆಯಾದರೆ, ನಿರ್ವಹಣೆ ವೆಚ್ಚದ ನೆಪವೊಡ್ಡಿ ಮೃಗಾಲಯ ಪ್ರವೇಶ ದರ ಏರಿಕೆ ಮಾಡಿರುವುದು ಸರಿಯಲ್ಲ.”
-ಶಶಿಕಲಾ, ವಿಜಯನಗರ
” ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ, ಮತ್ತೊಂದೆಡೆ ಮೃಗಾಲಯದ ಪ್ರವೇಶ ದರವನ್ನೂ ಹೆಚ್ಚು ಮಾಡಿರುವುದರಿಂದ ರಾಜ್ಯ ಸರ್ಕಾರ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಧಿಕಾರಿಗಳು ಎಚ್ಚೆತ್ತುಕೊಂಡರೆ ಒಳಿತು.”
-ಸಿದ್ದರಾಜು, ಎಚ್.ಡಿ.ಕೋಟೆ
” ಮೃಗಾಲಯ ಪ್ರವೇಶ ದರವನ್ನು ಶೇ.೨೦ರಷ್ಟು ಏರಿಕೆ ಮಾಡಲು ನಿರ್ಧರಿಸಿರುವುದರಿಂದ ಅರಮನೆ, ಕಾರಂಜಿಕೆರೆ ಹಾಗೂ ಮೃಗಾಲಯ ವೀಕ್ಷಿಸುವವರ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತವಾಗಿದೆ. ದರ ಹೆಚ್ಚಳ ಖಂಡನೀಯ.”
-ಪ್ರಸನ್ನ ಸಂತೇಕಡೂರು, ಜೆ.ಪಿ.ನಗರ
” ಜನರಿಗೆ ರಾಜ್ಯ ಸರ್ಕಾರದ ಸಾಲು ಸಾಲು ದರ ಏರಿಕೆ ಬಿಸಿ ತಟ್ಟುತ್ತಿದೆ. ಬಸ್ ಟಿಕೆಟ್ ದರ, ನಂದಿನಿ ಹಾಲಿನ ದರ, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಇದೀಗ ಮೃಗಾಯಲ ಪ್ರವೇಶ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ”
-ಲಿಖಿತ್ರಾಜ್ ಅರಸ್, ಅರಕಲಗೂಡು
” ಮೈಸೂರು ಮೃಗಾಲಯದ ಆದಾಯ ಉತ್ತಮವಾಗಿದ್ದರೂ ಪ್ರವೇಶ ದರ ಏರಿಕೆಯಿಂದ ಪ್ರವಾಸಿಗರಿಗೆ ಹೊರೆಯಾಗಲಿದೆ. ಇದರಿಂದ ಮೃಗಾಲಯಕ್ಕೆ ಭೇಟಿ ನೀಡುವವವರ ಸಂಖ್ಯೆಯ ಮೇಲೂ ಪರಿಣಾಮ ಬೀರಲಿದೆ.”
-ಮಲ್ಲಮ್ಮ, ಎರಡನೇ ಹಂತ, ವಿಜಯನಗರ
” ಮೃಗಾಲಯ ಪ್ರಾಣಿಗಳ ನಿರ್ವಹಣೆಗೆ ಸರ್ಕಾರ ಅನುದಾನ ನೀಡಬೇಕು. ಆದರೆ, ಸರ್ಕಾರದ ಬಳಿ ಹಣವಿಲ್ಲ, ಇದನ್ನು ಸರಿದೂಗಿಸಲು ಪ್ರವೇಶ ದರ ಏರಿಕೆ ಮಾಡಿರುವುದು ಪ್ರಾಣಿಗಳನ್ನು ನೋಡಲು ಬರುವವರ ಆಸೆಗೆ ತಣ್ಣೀರು ಎರಚಿದಂತಾಗುತ್ತದೆ.”
-ಇಂದ್ರಾಣಿ, ಗಿರಿದರ್ಶಿನಿ ಬಡಾವಣೆ
ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…
ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ…
ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ ಒಂಬತ್ತು ಸಾವಿರ ಕ್ಯುಸೆಕ್ಸ್ ಕಾವೇರಿ ನದಿ ನೀರು ಹರಿಸಬೇಕಾಗಿರುವುದು ಅಘಾತಕಾರಿ ಸಂಗತಿಯಾಗಿದೆ.…
ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ…
ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ…
ನವೀನ್ ಡಿಸೋಜ ಕೊಡಗಿನಲ್ಲಿ ಇಲ್ಲಿಯವರೆಗೆ ಶೇ.೩೭ರಷ್ಟು ಮಳೆ ಕೊರತೆ; ಭರದಿಂದ ಸಾಗಿದ ಬಿತ್ತನೆ ಕಾರ್ಯ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ…