Andolana originals

ಬೆಳೆ ಸಮೀಕ್ಷೆಯಲ್ಲಿ ಲೋಪ: ರೈತರಿಗೆ ನಷ್ಟ

• ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಬೆಳೆದಿರುವುದು ಸೂರ್ಯ ಕಾಂತಿ… ಪಹಣಿಯಲ್ಲಿ ನಮೂದಾಗಿರುವುದು ಜೋಳ, ಹತ್ತಿ… ಇಂತಹ ಸಂದಿಗ್ಧತೆಯಿಂದ ರೈತರು ಸೂರ್ಯಕಾಂತಿ ಬೆಂಬಲ ಬೆಲೆಯ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.

ಕೇಂದ್ರಸರ್ಕಾರದಿಂದ ಸೂರ್ಯಕಾಂತಿಗೆ ಬೆಂಬಲ ಬೆಲೆ ನಿಗದಿಯಾಗಿದ್ದು ಸೆ.2ರಿಂದ ಬೆಳೆಗಾರರ ನೋಂದಣಿ ಕಾರ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆರಂಭಗೊಂಡಿದೆ. ರೈತರು ಬೆಂಬಲ ಬೆಲೆ ಪಡೆಯಲು ಮುಂದಾಗಿದ್ದು ಕೆಲವು ದಿನಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.

ಸಾಕಷ್ಟು ರೈತರು ಸೂರ್ಯಕಾಂತಿ ಬೆಳೆದಿದ್ದರೂ ಅವರ ಜಮೀನಿನ ಪಹಣಿ (ಆರ್‌ಟಿಸಿ)ಯಲ್ಲಿ ಜೋಳ, ಹತ್ತಿ ಎಂದು ನಮೂದಾಗಿದೆ. ಪಹಣಿ ಯಲ್ಲಿ ಸೂರ್ಯಕಾಂತಿ ಬೆಳೆ ನಮೂದಾಗಿದ್ದರೆ ಮಾತ್ರ ಖರೀದಿ ಕೇಂದ್ರದಲ್ಲಿ ಸೂರ್ಯಕಾಂತಿ ಖರೀದಿ ಸಾಧ್ಯ. ಇಲ್ಲದಿದ್ದರೆ ಅವಕಾಶವಿಲ್ಲ.

ಹಾಗಾಗಿ ಅಂತಹ ರೈತರು ಸೂರ್ಯಕಾಂತಿ ಬೆಳೆದಿ ದ್ದರೂ ಬೆಂಬಲ ಬೆಲೆಯಿಂದ ವಂಚಿತರಾ ಗುವ ಪರಿಸ್ಥಿತಿ ನಿರ್ಮಾಣವಾಗಿ ನಷ್ಟ ಉಂಟಾಗುತ್ತದೆ. ಇದಕ್ಕೆ ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ನಡೆಸಲು ನೇಮಿಸಿದ ಪಿಆರ್ ಗಳು ನೇರ ಕಾರಣ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಸೂರ್ಯಕಾಂತಿಯನ್ನು ದಲ್ಲಾಳಿಗಳು 3,500 ರೂ. ಗಳಿಗೆ ಖರೀದಿ ಮಾಡುತ್ತಿದ್ದರು. ಖರೀದಿ ಕೇಂದ್ರ ತೆರೆಯುವುದು ಖಚಿತವಾದಂತೆ 4,500 ರೂ.ಗಳಿಗೆ ಖರೀದಿಸಲು ಮುಂದಾಗಿದ್ದಾರೆ. ಆದರೆ, ಕ್ವಿಂಟಾಲ್ ಸೂರ್ಯಕಾಂತಿಗೆ ಬೆಂಬಲ ಬೆಲೆ 7,280 ರೂ. ಗಳಾಗಿವೆ. ವಿಪರ್ಯಾಸ ಎಂದರೆ ರೈತರು ಪಹಣಿ ಯಲ್ಲಿ ಸೂರ್ಯಕಾಂತಿ ಬೆಳೆ ನಮೂದಾಗಿಲ್ಲ.

ಇದರಿಂದ ರೈತರಿಗೆ ಕ್ವಿಂಟಾಲ್‌ಗೆ 2,500 ರೂ. ನಿಂದ 3,000 ರೂ. ನಷ್ಟವಾಗುತ್ತದೆ. ಒಬ್ಬ ರೈತ ಕನಿಷ್ಠ 4-5 ಕ್ವಿಂಟಾಲ್ ಮಾರಾಟ ಮಾಡಿದರೆ ಆತನಿಗೆ 15,000 ರೂ. ನಷ್ಟವಾಗುತ್ತದೆ. ಇದನ್ನು ತುಂಬಿ ಕೊಡುವವರು ಯಾರು? ಎಂಬುದು ರೈತರ ಪ್ರಶ್ನೆ. ಬೆಳೆ ಸಮೀಕ್ಷೆ ನಡೆಸಲು ನಿಯೋಜಿಸಿದ ಪಿಆರ್ ಗಳು ಫಸಲಿನ ತಾಕುಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ. ಆದ್ದರಿಂದಲೇ ಸೂರ್ಯಕಾಂತಿ ಬೆಳೆದಿರುವ ಜಮೀನಿನ ಆರ್‌ಟಿಸಿಯಲ್ಲಿ ಹತ್ತಿ, ಜೋಳ ಎಂದು ನಮೂದಾಗಿದೆ ಎಂಬುದು ರೈತರ ಆರೋಪ. ತಾಲ್ಲೂಕಿನ ಹಸಗೂಲಿ ಗ್ರಾಮದ ಈಶ್ವರಪ್ಪ ತಮಗೆ ಸೇರಿದ ಸರ್ವೆ ಸಂಖ್ಯೆ 95/1, ಮತ್ತು 95/2ರ ಜಮೀನುಗಳಲ್ಲಿ ಪ್ರಸ್ತುತ ಸೂರ್ಯಕಾಂತಿ ಬೆಳೆದಿದ್ದರು. ಕೃಷಿ ಇಲಾಖೆ ನಡೆಸಿದ ಸಮೀಕ್ಷೆ ಬಳಿಕ ಇವರ ಪಹಣಿಯಲ್ಲಿ ಜೋಳ, ಹತ್ತಿ ಎಂದು ನಮೂದಾಗಿದೆ. ಯಾವ ಮಾನದಂಡದಲ್ಲಿ ವಾಸ್ತವ ಬೆಳೆಯನ್ನು ಕೈಬಿಟ್ಟು ಬೇರೊಂದು ಬೆಳೆ ಸೇರಿಸಲಾಗಿದೆ. ಇದರಿಂದ ರೈತನಿಗೆ ಆಗುವ ನಷ್ಟವನ್ನು ಭರಿಸುವವರು ಯಾರು ಎಂದು ರೈತರು ಪ್ರಶ್ನಿಸಿದ್ದಾರೆ.

ಕೋಟ್ಸ್‌))

ಕಷ್ಟಪಟ್ಟು ಬೆಳೆದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಮಾರಲು ಸಾಧ್ಯವಾಗುತ್ತಿಲ್ಲ. ಬೆಳೆ ಸಮೀಕ್ಷೆಯಲ್ಲಿ ದೋಷವಾಗಿದ್ದು ರೈತರು ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ. ಅಂತಹ ರೈತರ ಸೂರ್ಯಕಾಂತಿಯನ್ನು ಖರೀದಿಸಬೇಕು. ಜೊತೆಗೆ ಆರ್‌ಟಿಸಿಯಲ್ಲಿ ಬೆಳೆಯನ್ನು ತಪ್ಪಾಗಿ ನಮೂದಿಸಿರುವುದನ್ನು ಬದಲಿಸಬೇಕು.

-ಸುರೇಶ್, ರೈತರು

‘ಬೆಳೆ ದರ್ಶಕ್ 2024’ ಮುಂಗಾರು ಮಳೆ ಆ್ಯಪ್ ಅನ್ನು ರೈತರು ಸ್ಮಾರ್ಟ್‌ ಫೋನ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಯಾವ ಫಸಲು ನಮೂದಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು. ಕೊಲ್ಲೋತ್ತರ ಮತ್ತು ನಂತರವೂ ಅಗತ್ಯ ಮಾಹಿತಿಯನ್ನು ನೀಡಿ ಬೆಳೆಯನ್ನು ದಾಖಲಿಸಬಹುದು. ಲೋಪವಾಗಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.

-ವೆಂಕಟೇಶ್, ಸಹಾಯಕ ಕೃಷಿ ನಿರ್ದೇಶಕರು, ಗುಂಡ್ಲುಪೇಟೆ.

Mahendra Hasaguli

ಮೂಲತಃ ಗುಂಡ್ಲುಪೇಟೆ ತಾಲ್ಲೂಕು ಹಸಗೂಲಿ ಗ್ರಾಮದವನಾದ ನಾನು ಪ್ರಾಥಮಿಕ ಶಿಕ್ಷಣವನ್ನು ಹೆಗ್ಗಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ಗರಗನಹಳ್ಳಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಮುಗಿಸಿ ಡಿಬಿಜೆಸಿ ಕಾಲೇಜು ಗುಂಡ್ಲುಪೇಟೆಯಲ್ಲಿ ಪಿಯು ವ್ಯಾಸಂಗ, ಜೆಎಸ್‌ಎಸ್‌ನಲ್ಲಿ ಪದವಿ ಮುಗಿಸಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂಎ ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿ, ಒಂದು ವರ್ಷ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿ ಶಿಕ್ಷಣ ಪಡೆದು ಮೊದಲಿಗೆ 2015- 16 ರಲ್ಲಿ ಸಂಜೆದೀಪ ಪತ್ರಿಕೆಯಲ್ಲಿ ವರದಿಗಾರನಾಗಿ 2016-17 ರಲ್ಲಿ ವಿಶ್ವವಾಣಿ ಪತ್ರಿಕೆ ವರದಿಗಾರನಾಗಿ ಹಾಗೂ 2017 ರಿಂದ ಪ್ರಸ್ತುತ ಸಮಯದವರೆಗೂ ಆಂದೋಲನ ಪತ್ರಿಕೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕು ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ,

Recent Posts

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

7 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

7 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

7 hours ago

ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…

8 hours ago

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…

8 hours ago

ಮೈಸೂರು: ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ

ಮೈಸೂರು: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಿ ಹಾಗೂ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು…

9 hours ago