Andolana originals

ಇದ್ದೂ ಇಲ್ಲದಂತಿರುವ ಕೆಎಸ್‌ಎನ್‌ ಸಮುದಾಯ ಭವನ

ಮಹೇಶ್ ಕಿಕ್ಕೇರಿ

ಸಂಜೆಯಾಗುತ್ತಲೇ ಕುಡುಕರ ಅಡ್ಡೆ ; ಬಡವರ ಕಲ್ಯಾಣ ಕಾರ್ಯಗಳಿಗೆ ತೆರೆಯದ ಬಾಗಿಲು 

ಕಿಕ್ಕೇರಿ: ಕನ್ನಡದ ಪ್ರೇಮಕವಿ, ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸ್ಮರಣಾರ್ಥ ಪಟ್ಟಣದಲ್ಲಿ ನಿರ್ಮಿಲಾಗಿರುವ ಸಮುದಾಯ ಭವನ ಇಂದು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಭೂತ ಬಂಗಲೆಯಂತಾಗಿರುವುದು ಅDiಕಾರಿಗಳ ನಿರ್ಲಕ್ಷ ತೆಗೆ ಸಾಕ್ಷಿಯಾಗಿದೆ.

ಈ ಸಮುದಾಯ ಭವನ ನಿರ್ಮಾಣದ ಉದ್ದೇಶವೇ ಶ್ರೀಸಾಮಾನ್ಯರ ಕಲ್ಯಾಣಕಾರ್ಯಗಳಿಗೆ ಉಪಯುಕ್ತವಾಗಲೆಂದು. ಆದರೆ ಮೂಲ ಉದ್ದೇಶ ಸಫಲವಾಗಿ ಜನರ ಬಳಕೆಯಿಂದ ಪ್ರವರ್ಧಮಾನಕ್ಕೆ ಬರುವ ಹಂತದಲ್ಲೇ ಕೋವಿಡ್-೧೯ ಕಾಲಿರಿಸಿದ ಪರಿಣಾಮ ಸಮುದಾಯ ಭವನಕ್ಕೆ ಬೀಗ ಬಿದ್ದಿತು.

ಇದೇ ನೆಪದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮುದಾಯ ಭವನದ ಬಾಗಿಲು ತೆರೆಯದೆ ಮರೆತು ಕುಳಿತರು. ಇದರ ಪರಿಣಾಮ ಮಂಡ್ಯ ಲೋಕಸಭಾ ಸದಸ್ಯರಾಗಿದ್ದ ಅಂಬರೀಶ್ ಅವರ ಅನುದಾನ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಕವಿ ಕೆ.ಎಸ್. ನರಸಿಂಹಸ್ವಾಮಿ ಸ್ಮರಣಾರ್ಥ ನಿರ್ಮಾಣಗೊಂಡ ಸಮುದಾಯ ಭವನದಲ್ಲಿ ಕೆಲ ವರ್ಷಗಳ ಕಾಲ ಬಡ ಜನರ ಮದುವೆ, ಶುಭ-ಸಮಾರಂಭಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಕೆಲ ಖಾಸಗಿ ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು ದುಬಾರಿ ಶುಲ್ಕ ವಿಽಸಿಬಾಡಿಗೆ ವಸೂಲಿ ಮಾಡುತ್ತಿರುವ ಇಂದಿನ ದಿನಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನ ಬಡಜನರಿಗೆ ಕೈಗೆಟುಕುವ ದರದ ಬಾಡಿಗೆಯಲ್ಲಿ ಮದುವೆ ಮುಂತಾದ ಕಾರ್ಯಗಳಿಗೆ ನೆರವಿಗೆ ಬರುತ್ತಿತ್ತು. ಇದಲ್ಲದೆ ಅನೇಕ ಸಾಂಸ್ಕೃತಿಕ, ಕನ್ನಡಪರ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆಯೂ ಆಗಿತ್ತು.

ಇಂತಹ ಸಮುದಾಯ ಭವನ ಕೋವಿಡ್ ನೆಪದಲ್ಲಿ ಮುಚ್ಚಿಹೋಗಿರುವುದು ದುರಂತವೇ ಸರಿ. ಇದು ಈಗ ಬಯಲು ಶೌಚ ಮಾಡುವವರಿಗೆ, ರಾತ್ರಿಯಾದರೆ ಮದ್ಯಪ್ರಿಯರ ನೆಚ್ಚಿನ ತಾಣವಾಗಿರುವುದು ಕವಿ ನರಸಿಂಹಸ್ವಾಮಿ ಅವರಿಗೆ ಮಾಡುತ್ತಿರುವ ಅಪಮಾನದಂತೆ ಭಾಸವಾಗುತ್ತಿದೆ.

ಊಟದ ಹಾಲ್ ದೂಳು ಹಿಡಿದು ಟೇಬಲ್ ಗಳು ಕಾಣದಂತಾಗಿವೆ. ಶೌಚಾಲಯದಲ್ಲಿ ಗಿಡ ಗಂಟಿ ಬೆಳೆದು ಮುಚ್ಚಿಕೊಂಡಿದ್ದು, ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಪ್ಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದಿದ್ದರೆ ಒಂದು ಕಟ್ಟಡ ಏನಾಗಬಹುದೋ ಅದನ್ನು ಕೆ.ಎಸ್.ನ. ಸಮುದಾಯ ಭವನ ಸಾಕ್ಷೀಕರಿಸುತ್ತಿದೆ.

ಕಿಕ್ಕೇರಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆ ತಮ್ಮ ಮಕ್ಕಳ ಮದುವೆ ಕಾರ್ಯಗಳಿಗೆ, ಸಾಹಿತ್ಯ, ಸಾಂಸ್ಕೃತಿಕ ವಲಯದ ಆಸಕ್ತರು ಕಾರ್ಯಕ್ರಮ ನಡೆಸಲು ಸೂಕ್ತ ಸಭಾ ಭವನ ಹುಡುಕುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೆ. ಎಸ್.ನರಸಿಂಹಸ್ವಾಮಿ ಸಮುದಾಯ ಭವನವನ್ನು ದುರಸ್ತಿಪಡಿಸಿ ಜೀವ ಕಳೆ ತರಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗುವರೇ ಎಂಬ ನಿರೀಕ್ಷೆಯಲ್ಲಿದ್ದಾರೆ .

” ಕಿಕ್ಕೇರಿಯಲ್ಲಿ ಬಡಜನರ ಕೈಗೆಟುಕುವ ದರದಲ್ಲಿ ಒಂದು ಸಮುದಾಯ ಭವನ ಬಾಡಿಗೆಗೆ ದೊರೆಯುತ್ತಿತ್ತು. ಅದ್ಯಾವ ಲಾಬಿ ಕೆಲಸ ಮಾಡಿದೆಯೋ ಗೊತ್ತಿಲ್ಲ. ಕೋವಿಡ್‌ನಲ್ಲಿ ಮುಚ್ಚಿದ ಈ ಸಮುದಾಯ ಭವನವನ್ನು ಇಂದಿಗೂ ತೆರೆಯದೆ ಭೂತ ಬಂಗಲೆಯಂತಾಗಿದೆ. ಈಗಲಾದರೂ ಈ ಭವನದ ಬಾಗಿಲು ತೆರೆದು ಮೈಸೂರು ಮಲ್ಲಿಗೆ ಕವಿ ನರಸಿಂಹಸ್ವಾಮಿ ಅವರ ಹೆಸರುಳಿಸುವ ಕೆಲಸ ಮಾಡಲಿ.”

-ವಡಕಹಳ್ಳಿ ಮಂಜುನಾಥ್

” ನಾನು ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕಿಕ್ಕೇರಿಯಲ್ಲಿ ಒಂದು ಸರ್ಕಾರಿ ಸಮುದಾಯಭವನ ಆಗಲೇಬೇಕೆಂದು ಮಂಜೂರಾತಿ ಮಾಡಿಸಿ, ಸಂಸದರಾಗಿದ್ದ ಅಂಬರೀಶ್ ಅವರಿಂದ ಅನುದಾನ ಪಡೆದು ಕೆ.ಎಸ್.ನರಸಿಂಹಸ್ವಾಮಿ ಸ್ಮರಣಾರ್ಥ ಸಮುದಾಯ ಭವನ ನಿರ್ಮಿಸಲಾಯಿತು. ಆದರೀಗ ಈ ಭವನ ಜನತೆಗೆ ಇದ್ದೂ ಇಲ್ಲದಂತಾಗಿದೆ. ಸಾರ್ವಜನಿಕ, ಖಾಸಗಿ ಕಾರ್ಯಕ್ರಮಗಳಿಗೆ ಉಪಯುಕ್ತವಾಗಿದ್ದ ಈ ಭವನವನ್ನು ಕೋವಿಡ್ ವೇಳೆ ಮುಚ್ಚಿದ್ದು, ಐದು ವರ್ಷಗಳಾದರೂ ತೆರೆಯಲಾಗಿಲ್ಲ. ಇದು ಬೇಸರದ ಸಂಗತಿ.”

-ಸುರೇಶ್, ತಾಪಂ ಮಾಜಿ ಅಧ್ಯಕ್ಷರು, ಕಿಕ್ಕೇರಿ

ಆಂದೋಲನ ಡೆಸ್ಕ್

Recent Posts

ನಿಲ್ಲದ ಚಿನ್ನದ ನಾಗಾಲೋಟ : 1.61ಲಕ್ಷ ರೂ.ತಲುಪಿದ ಬಂಗಾರ

1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ…

5 hours ago

ಯುವಕನ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ…

5 hours ago

ಪಾದಯಾತ್ರೆ ವೇಳೆ ಚಿರತೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ : ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮ

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…

6 hours ago

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣ : ಜಿ.ಟಿ.ದಿನೇಶ್‌ಗೆ ಹೈಕೋರ್ಟ್ ಶಾಕ್

ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…

6 hours ago

ಸಮೀಕ್ಷೆ | ಫೆ.10ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ

ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…

7 hours ago

ಅಕ್ರಮ ರೆಸಾರ್ಟ್‌ ವಿರುದ್ದದ ಅನಿರ್ದಿಷ್ಟ ಪ್ರತಿಭಟನೆ ಅಂತ್ಯ

ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…

7 hours ago