Andolana originals

ಮೈ ಕೊರೆಯುವ ಚಳಿ ನಲುಗಿದ ಮೈಸೂರು

ಧನರ್ಮಾಸಕ್ಕೆ ಮೊದಲೇ ಚಳಿ ದಾಂಗುಡಿ
ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ದಾಖಲು

ಕೆ.ಬಿ.ರಮೇಶನಾಯಕ
ಮೈಸೂರು : ಜಿಲ್ಲೆಯಲ್ಲಿ ಕಳೆದ ಕೆಲವು ದಿನ ಗಳಿಂದ ಮೈ ಕೊರೆಯುವ ಚಳಿ ಪ್ರಾರಂಭ ಗೊಂಡಿದ್ದು, ದಿಢೀರನೆ ವಾತಾವರಣದಲ್ಲಿ ಉಷ್ಣಾಂಶ ಕುಸಿತ ಕಂಡು ಬಂದಿದೆ. ಶೀತ ಮಾರುತದಿಂದ ಜನರು ಕಂಗಾಲಾಗಿದ್ದಾರೆ.

ನವೆಂಬರ್‌ನಲ್ಲಿ ಆಗಿಂದಾಗ್ಗೆ ಮಳೆ ಹಾಗೂ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳು ತ್ತಿದ್ದ ಹಿನ್ನೆಲೆಯಲ್ಲಿ ಚಳಿ ವಾತಾವರಣ ಕಂಡು ಬರಲಿಲ್ಲ. ಆದರೆ, ಮಳೆ ಹಾಗೂ ಮೋಡ ಕವಿದ ವಾತಾವರಣ ದೂರವಾಗುತ್ತಿದ್ದಂತೆಯೇ ಚಳಿಯು ತೀವ್ರಗೊಳ್ಳಲು ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಕನಿಷ್ಠ ೧೬ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲೂ ಚಳಿ ಅನುಭವವಾಗುತ್ತಿದ್ದು, ಜನರು ಬೆಚ್ಚನೆಯ ಉಡುಪು ಧರಿಸಿ ಸಂಚರಿ ಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜಿಲ್ಲೆಯಲ್ಲಿ ಡಿ. ೧ ರಿಂದ ೩ರವರೆಗೆ ಕನಿಷ್ಠ ೧೬ ರಿಂದ ೧೭ ಹಾಗೂ ಗರಿಷ್ಟ ೨೮ ರಿಂದ ೨೯ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಜಿಲ್ಲೆಯಲ್ಲಿ ಚಳಿಯ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗದವರು ಜಾನುವಾರುಗಳ ರಕ್ಷಣೆ ಹಾಗೂ ಬೆಳೆಗಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧಿಕ್ಷಕ ಡಾ. ಎನ್. ಉಮಾಶಂಕರ್ ಅಗತ್ಯ ಸಲಹೆಗಳನ್ನು ನೀಡಿದ್ದಾರೆ.

ಬೆಳಿಗ್ಗೆ ಕಡಿಮೆ ತಾಪಮಾನ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಳು ಮತ್ತು ಜಾನುವಾರುಗಳಿಗೆ ಶೀತದ ಒತ್ತಡವನ್ನು ಉಂಟು ಮಾಡಬಹುದು. ಹಾಗಾಗಿ ತರಕಾರಿ ಹೊಲಗಳಲ್ಲಿ ಮಣ್ಣಿನ ಉಷ್ಣತೆ ಯನ್ನು ಕಾಪಾಡಿಕೊಳ್ಳಲು ಸಂಜೆ ಲಘು ನೀರಾವರಿ ಒದಗಿಸುವುದು ಉತ್ತಮ. ರಾತ್ರಿಯಲ್ಲಿ ನರ್ಸರಿಗಳು ಮತ್ತು ಎಳೆಯ ಸಸಿಗಳನ್ನು (ಟೊಮೆಟೊ, ಮೆಣಸಿನಕಾಯಿ, ಎಲೆಕೋಸು) ಒಣ ಹುಲ್ಲು ಅಥವಾ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಬೇಕು ಎಂದು ಸಲಹೆ ನೀಡಿದ್ದಾರೆ.

ನೀರಾವರಿ ನಿರ್ವಹಣೆಗೆ ಅಗತ್ಯ ಸಲಹೆ: ಮಳೆಯ ನಿರೀಕ್ಷೆ ಇಲ್ಲದ ಕಾರಣ ೫ ರಿಂದ ೭ ದಿನಗಳಿಗೊಮ್ಮೆ ಬೆಳೆಗಳಿಗೆ ನೀರು ಹಾಕುವುದು ಉತ್ತಮ. ತೇವಾಂಶ

ಮಧ್ಯಮವಾಗಿರುವುದರಿಂದ ಹೆಚ್ಚುವರಿ ನೀರಾವರಿಯನ್ನು ತಪ್ಪಿಸಬೇಕು. ಭತ್ತ (ಹಾಲುಕರೆಯುವ ಹಂತ), ರಾಗಿ, ಕೆಂಪು ಬೇಳೆ ಮತ್ತು ತರಕಾರಿ ಬೆಳೆಗಳಿಗೆ ನೀರಾವರಿಗೆ ಆದ್ಯತೆ ನೀಡಬೇಕು. ಕಳೆ ಕೀಳಲು, ಮಣ್ಣು ತೆಗೆಯಲು ಮತ್ತು ಗೊಬ್ಬರ ಅಥವಾ ಕೀಟನಾಶಕ ಅನ್ವಯಿಕೆಗೆ ಅನುಕೂಲಕರ ಹವಾಮಾನ ಹೊಂದಿದೆ. ಧಾನ್ಯಗಳು, ಅರಿಶಿನ, ಶುಂಠಿ ಮತ್ತು ದ್ವಿದಳ ಧಾನ್ಯಗಳನ್ನು ಕೊಯ್ಲು ಮಾಡಲು ಮತ್ತು ಒಣಗಿಸಲು ಒಣ ಮತ್ತು ಬಿಸಿಲಿನ ವಾತಾವರಣ ಸೂಕ್ತವಾಗಿದೆ.

ಕೊಯ್ಲಿನ ನಂತರದ ನಷ್ಟವನ್ನು ತಪ್ಪಿಸಲು ಉತ್ಪನ್ನಗಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸ ಬೇಕು. ಬಾಳೆ, ತೆಂಗು ಮತ್ತು ಅಡಕೆಯ ಜಲಾನಯನ ಪ್ರದೇಶಗಳ ಸುತ್ತಲೂ ಮಲ್ಚಿಂಗ್ ಮಾಡುವುದರಿಂದ ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಸಹಾಯವಾಗುತ್ತದೆ. ಬಾಳೆ, ಪಪ್ಪಾಯಿ ಮತ್ತು ಸಪೋಟಾದಂತಹ ಹಣ್ಣಿನ ಬೆಳೆಗಳಿಗೆ ನಿಯಮಿತವಾಗಿ ನೀರಾವರಿ ಒದಗಿಸಬೇಕು. ಗಾಳಿಯ ಪ್ರಸರಣವನ್ನು ಸುಧಾರಿಸಲು ಅನಗತ್ಯ ಚಿಗುರುಗಳನ್ನು ಕತ್ತರಿಸಬೇಕು.

ಚಳಿಯಿಂದ ಜಾನುವಾರುಗಳನ್ನು ರಕ್ಷಿಸಿ
ಚಳಿಯ ವಾತಾವರಣ ಇರುವ ಹಿನ್ನೆಲೆಯಲ್ಲಿ ಜಾನುವಾರು ಮತ್ತು ಕೋಳಿಗಳಿಗೆ ರಾತ್ರಿ ಮತ್ತು ಮುಂಜಾನೆ ಬೆಚ್ಚಗಿನ ಮತ್ತು ಒಣ ಆಶ್ರಯಗಳನ್ನು ಒದಗಿಸಬೇಕು. ಕೊಟ್ಟಿಗೆಗಳಿಗೆ ಶೀತ ಗಾಳಿ ಪ್ರವೇಶಿಸುವುದನ್ನು ತಪ್ಪಿಸಬೇಕು. ರೇಷ್ಮೆ ಹುಳು ಸಾಕುವ ಮನೆಗಳಲ್ಲಿ ಸೂಕ್ತವಾದ ಉಷ್ಣಾಂಶ ಮತ್ತು ತೇವಾಂಶವನ್ನು ಕಾಪಾಡಿ ಕೊಳ್ಳಬೇಕು. ರೇಷ್ಮೆ ಹುಳುಗಳು ಬೆಳಗಿನ ತಂಪಾದ ಗಾಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಹಗಲಿನ ವೇಳೆಯಲ್ಲಿ ಸಾಕಷ್ಟು ಗಾಳಿ ಬೀಸುವುದನ್ನು ಖಚಿತಪಡಿಸಿ ಕೊಳ್ಳಬೇಕು.

ಜಿಲ್ಲೆಯಲ್ಲಿ ತಾಪಮಾನ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳು ಹಾಗೂ ಬೆಳೆಗಳ ರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕು. ಬೆಳಗಿನ ತಾಪಮಾನ ಕಡಿಮೆ ಇರುವ ಹಿನ್ನೆಲೆಯಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು. ಜಾನುವಾರುಗಳಿಗೆ ಬೆಚ್ಚನೆಯ ಆಶ್ರಯ ಒದಗಿಸಿ ಅವುಗಳನ್ನು ಚಳಿಯಿಂದ ರಕ್ಷಿಸಬೇಕು. -ಡಾ. ಎನ್. ಉಮಾಶಂಕರ್, ಹಿರಿಯ ಕ್ಷೇತ್ರ ಅಧಿಕ್ಷಕ, ಕೃಷಿ ಹವಾಮಾನ ಕ್ಷೇತ್ರ ವಿಭಾಗ

ಆಂದೋಲನ ಡೆಸ್ಕ್

Recent Posts

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು: ಸೆ.5ರ ಪ್ರತಿಭಟನೆ ಹಿಂಪಡೆದ ಸಿಜೆಪಿ

ನವದೆಹಲಿ: ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್‌ಗೆ…

1 hour ago

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಜುಲೈನಲ್ಲಿ…

2 hours ago

ನೇಪಾಳ ಪ್ರವಾಹ | ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…

3 hours ago

ಮಡಿಕೇರಿ: ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

4 hours ago

ಮಡಿಕೇರಿ: ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ!

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…

4 hours ago

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

11 hours ago