Andolana originals

ಬುಟ್ಟಿ ಹೆಣೆದು ಬದುಕು ಕಟ್ಟಿಕೊಳ್ಳಲು ಹೆಣಗಾಟ; ನೆಲ್ಲೂರಿನಿಂದ ಮೈಸೂರಿಗೆ ಬಂದಿರುವ ಐದು ಕುಟುಂಬಗಳ ಪಡಿಪಾಟಲು

ಮೈಸೂರು: ಕಷ್ಟ ಕಾರ್ಪಣ್ಯದ ಜೀವನ… ದುಡಿದರೆ ಮಾತ್ರ ಗಂಜಿ ಎಂಬಂತಹ ಸ್ಥಿತಿ… ಯಾವುದೋ ಊರಿಂದ ಬಂದು ಬಿಸಿಲು, ಮಳೆ, ಗಾಳಿಗೆ ಅಂಜದೆ, ಬದುಕಿನ ಬಂಡಿ ಎಳೆಯಲು ಪರಿಶ್ರಮಪಡುವ ಜೀವಿಗಳು… ಅವರ ಕೈಯಲ್ಲಿ ವರ್ಣರಂಜಿತವಾಗಿ ಅರಳುತ್ತವೆ ಬುಟ್ಟಿಗಳು, ಅವು ನೋಡುಗರನ್ನು ಮುದಗೊಳಿಸಿ, ಖರೀದಿಸಲು ಉತ್ತೇಜಿಸುತ್ತವೆ. ಹೌದು, ಆ ಬುಟ್ಟಿಗಳೇ ಅವರಿಗೆ ತುತ್ತಿನ ಬುತ್ತಿಯೊದಗಿಸುವ ಜೀವನಾಡಿಗಳು…

ಇದು ಪ್ಲಾಸ್ಟಿಕ್ ವೈರ್‌ನಿಂದ ಪೂಜಾ ಬುಟ್ಟಿಯನ್ನು ಹೆಣೆದು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ನೆರೆಯ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಿಂದ ಮೈಸೂರಿಗೆ ವಲಸೆ ಬಂದಿರುವ 5 ಅಲೆಮಾರಿ ಕುಟುಂಬಗಳ ಕಾಯಕ ಜೀವನಕ್ಕೆ ಕನ್ನಡಿ ಹಿಡಿಯುವ ಅಂಶ. ಇವರು ಮೈಸೂರು- ಊಟಿ ರಸ್ತೆ ಬದಿಯಲ್ಲಿರುವ ಗುಂಡೂರಾವ್ ನಗರದ ಖಾಲಿ ಜಾಗದಲ್ಲಿ ಗೂಡಿನಂತಹ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸ್ತವ್ಯ ಹೂಡಿದ್ದಾರೆ. ಇವರು ಎಲ್ಲೇ ಹೋಗಿ ಬಿಡಾರ ಹಾಕಿದರೂ ಚೆಂದದ ವೈರ್‌ಗಳನ್ನು ಬಳಸಿಕೊಂಡು ಪೂಜಾ ಬುಟ್ಟಿಗಳನ್ನು ತಯಾರಿಸುತ್ತಾರೆ. ಆಕರ್ಷಕ ಬಣ್ಣಗಳ ಈ ಬುಟ್ಟಿಗಳನ್ನು ಸಾಮಾನ್ಯವಾಗಿ ಜನರು ದೇವಾಲಯಕ್ಕೆ ಹಣ್ಣು, ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಬಳಸುತ್ತಾರೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಲ್ಲಿ ಪೂಜಾ ಬುಟ್ಟಿಗಳು ತಯಾರಾಗುತ್ತವೆ. ತಮಗೆ ಬೇಕಾದ ವಿನ್ಯಾಸವನ್ನು ಮೊದಲೇ ತಿಳಿಸಿದರೆ ಅವುಗಳನ್ನು ಇಲ್ಲಿನ ಬುಟ್ಟಿ ತಯಾರಕರು ಸಿದ್ಧಪಡಿಸುತ್ತಾರೆ.

ಹೀಗಿದೆ ಇವರ ದಿನಚರಿ…

ಬೆಳಿಗ್ಗೆ ಸಮಯದಲ್ಲಿ ಕುಟುಂಬದ ಮಹಿಳೆಯರು ಪೂಜಾ ಬುಟ್ಟಿಗಳನ್ನು ತಮ್ಮ ಕೈ ಚಳಕದಿಂದ ಹೆಣೆಯುತ್ತಾರೆ. ನಂತರ ಬಿಸಿಲು ಏರುತ್ತಿದ್ದಂತೆ, ಅಂದರೆ ಸುಮಾರು 10- 11 ಗಂಟೆ ವೇಳೆಗೆ ಬುಟ್ಟಿಗಳನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿಕೊಂಡು ಮಾರಾಟಕ್ಕೆ ಹೊರಡುತ್ತಾರೆ. ಸಂಜೆಯವರೆಗೂ ಮೈಸೂರಿನ ಸುತ್ತಮುತ್ತಲಿನ ಬಡಾವಣೆಗಳು, ಹಳ್ಳಿಗಳಲ್ಲಿ, ಜನಸಂದಣಿ ಇರುವ ಪ್ರದೇಶ ಹಾಗೂ ಜಾತ್ರೆಗಳಲ್ಲಿ ಮಹಿಳೆಯರು ಮತ್ತು ಪುರುಷರು ಹೋಗಿ ಮಾರಾಟ ಮಾಡುತ್ತಾರೆ.

ಬುಟ್ಟಿಯ ದರ ಎಷ್ಟು?
ವಿವಿಧ ಬಗೆಯ ಅಥವಾ ಗಾತ್ರದ ಪೂಜಾ ಬುಟ್ಟಿಗಳಿದ್ದು, ಚಿಕ್ಕ ಬುಟ್ಟಿಗೆ 100ರಿಂದ 200 ರೂ., ದೊಡ್ಡ ಬುಟ್ಟಿಗೆ 300 ರೂ. ಗಳವರೆಗೆ ಮಾರಾಟ ಮಾಡುತ್ತಾರೆ.

ಮಾರುಕಟ್ಟೆಯಿಂದ ಪ್ಲಾಸ್ಟಿಕ್ ವೈರ್ ಖರೀದಿ…

ಬುಟ್ಟಿ ತಯಾರಕರು ಪೂಜಾ ಬುಟ್ಟಿಗೆ ಬೇಕಾದ ನಾನಾ ರೀತಿಯ ಬಣ್ಣ ಬಣ್ಣದ ವೈರ್‌ಗಳನ್ನು ಮಾರುಕಟ್ಟೆಯಿಂದ ತಂದು ತಮ್ಮ ಶೆಡ್ ಬಳಿಯೇ ಚಿತ್ತಾಕರ್ಷಿಸುವಂತಹ ಬುಟ್ಟಿಗಳನ್ನು ತಯಾರಿಸುತ್ತಾರೆ.

ಸಮಸ್ಯೆಗಳಿಗೆ ಹೊಂದಿಕೊಂಡ ಜೀವನ…

ಮೈಸೂರು -ಊಟಿ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತವೆ. ಬುಟ್ಟಿ ತಯಾರಕರು ಈ ರಸ್ತೆ ಬದಿಯಲ್ಲಿ ವಾಸವಾಗಿರುವುದರಿಂದ ನಿತ್ಯ ವಾಹನಗಳ ಕಿರಿಕಿರಿ ಅನುಭವಿಸುತ್ತಿದ್ದಾರೆ. ಜತೆಗೆ, ಜೋರು ಮಳೆ ಬಂದರೆ ಶೆಡ್‌ಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಹೀಗೆ ಸಮಸ್ಯೆಗಳಿಗೆ ಹೊಂದಿಕೊಂಡೇ ಇವರು ಜೀವನ ನಡೆಸುವುದು ಅನಿವಾರ್ಯವಾಗಿದೆ.

ಕಳೆದ ಒಂದು ವರ್ಷದಿಂದ ಮೈಸೂರಿಗೆ ಹೆಣೆದು ಜೀವನ ಸಾಗಿಸುತ್ತಿದ್ದೇವೆ. ಬೆಳಿಗ್ಗೆ ಸಂಜೆಯವರೆಗೂ ಬುಟ್ಟಿಗಳನ್ನು ಹಳ್ಳಿಗಳಿಗೆ, ಕುಟುಂಬ ಸಮೇತ ಬಂದು, ಪೂಜಾ ಬುಟ್ಟಿಗಳನ್ನು ಹೊತ್ತು ಬುಟ್ಟಿ ಹೆಣೆಯುತ್ತೇವೆ. ಮಧ್ಯಾಹ್ನದಿಂದ ಜಾತ್ರೆ-ಉತ್ಸವ, ಜನಸಂದಣಿ ಇರುವ ಜಾಗಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ. ಒಂದು ಬುಟ್ಟಿ ಹೆಣೆಯಲು 1 ಗಂಟೆ ಸಮಯ ಬೇಕಾಗುತ್ತದೆ.
-ಜಯಮ್ಮ, ಬುಟ್ಟಿ ತಯಾರಕರು

ಜಿ ತಂಗಂ ಗೋಪಿನಾಥಂ

ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮದವನಾದ ನಾನು ಸದ್ಯ,‌ ಮೈಸೂರಿನಲ್ಲಿ ನೆಲೆಸಿದ್ದೇನೆ. 2019ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿಎ ( ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ ) ಪದವಿಯನ್ನು ಮುಗಿಸಿದ್ದೇನೆ. ನಂತರ 2021ರಲ್ಲಿ‌ ಮೈಸೂರು ವಿಶ್ವವಿದ್ಯಾನಿಲಯದ‌ಲ್ಲಿ ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ 2 ವರ್ಷಗಳ ‌ಕಾಲ ಅನುಭವ ಪಡೆದುಕೊಂಡಿದ್ದೇನೆ. ವಿಜಯವಾಣಿ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ಸಹಾಯಕ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಕಳೆದ 8 ತಿಂಗಳಿಂದ ಮೈಸೂರಿನ ಆಂದೋಲನ‌ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಯತೀಂದ್ರ ಸಿದ್ಧರಾಮಯ್ಯ ಅವಹೇಳನ ಪ್ರಕರಣ: ಪ್ರತಾಪ್ ಸಿಂಹ ಹಾಗೂ ಬಿಜೆಪಿ ಐಟಿ ಸೆಲ್ ವಿರುದ್ಧ ದೂರು ದಾಖಲು

ಮೈಸೂರು: ಎಂಎಲ್‌ಸಿ ಯತಿಂದ್ರ ಸಿದ್ದರಾಮಯ್ಯ ವಿರುದ್ಧ ಅವಹೇಳನ ಪೋಸ್ಟ್‌ ಮಾಡಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಐಟಿ…

20 mins ago

ಫೆಬ್ರವರಿ.13ರಿಂದ ಹಂಪಿ ಉತ್ಸವ-2026

ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪು ಮಾಡಿಕೊಡುವ ಹಂಪಿ ಉತ್ಸವದ ತಯಾರಿ ನಡೆಯುತ್ತಿದೆ. ಫೆಬ್ರವರಿ.13, 14 ಹಾಗೂ 15ರಂದು ಹಂಪಿ…

28 mins ago

ಹನೂರು ಕ್ಷೇತ್ರದಲ್ಲಿ 15 ವರ್ಷಗಳಿಂದ ಆಗದೇ ಇದ್ದ ಅಭಿವೃದ್ಧಿ ಕಾರ್ಯ ನಾನು ಮಾಡಿ ತೋರಿಸಿದ್ದೇನೆ: ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ವಿಧಾನಸಭಾ ಕ್ಷೇತ್ರದ ಮತದಾರರ ಋಣದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಚುನಾವಣಾ ಪೂರ್ವದಲ್ಲಿ…

38 mins ago

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 3.39 ಕೋಟಿ ಮೌಲ್ಯದ ಗಾಂಜಾ ಸೀಜ್‌

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 3.39 ಕೋಟಿ ರೂ…

1 hour ago

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ ಮ್ಯಾಚ್‌ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಮ್ಯಾಚ್‌ ಆಡಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರ ನಿರ್ಧಾರ ಪ್ರಕಟಿಸುತ್ತೇವೆ ಎಂದು…

2 hours ago

ಹೋಗೇನಕಲ್‌ ಫಾಲ್ಸ್‌ಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ 50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ: ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಗೆನಕಲ್ ಫಾಲ್ಸ್ ಗೆ ಬರುವ ಪ್ರವಾಸಿಗರ…

2 hours ago