Andolana originals

ಬುಟ್ಟಿ ಹೆಣೆದು ಬದುಕು ಕಟ್ಟಿಕೊಳ್ಳಲು ಹೆಣಗಾಟ; ನೆಲ್ಲೂರಿನಿಂದ ಮೈಸೂರಿಗೆ ಬಂದಿರುವ ಐದು ಕುಟುಂಬಗಳ ಪಡಿಪಾಟಲು

ಮೈಸೂರು: ಕಷ್ಟ ಕಾರ್ಪಣ್ಯದ ಜೀವನ… ದುಡಿದರೆ ಮಾತ್ರ ಗಂಜಿ ಎಂಬಂತಹ ಸ್ಥಿತಿ… ಯಾವುದೋ ಊರಿಂದ ಬಂದು ಬಿಸಿಲು, ಮಳೆ, ಗಾಳಿಗೆ ಅಂಜದೆ, ಬದುಕಿನ ಬಂಡಿ ಎಳೆಯಲು ಪರಿಶ್ರಮಪಡುವ ಜೀವಿಗಳು… ಅವರ ಕೈಯಲ್ಲಿ ವರ್ಣರಂಜಿತವಾಗಿ ಅರಳುತ್ತವೆ ಬುಟ್ಟಿಗಳು, ಅವು ನೋಡುಗರನ್ನು ಮುದಗೊಳಿಸಿ, ಖರೀದಿಸಲು ಉತ್ತೇಜಿಸುತ್ತವೆ. ಹೌದು, ಆ ಬುಟ್ಟಿಗಳೇ ಅವರಿಗೆ ತುತ್ತಿನ ಬುತ್ತಿಯೊದಗಿಸುವ ಜೀವನಾಡಿಗಳು…

ಇದು ಪ್ಲಾಸ್ಟಿಕ್ ವೈರ್‌ನಿಂದ ಪೂಜಾ ಬುಟ್ಟಿಯನ್ನು ಹೆಣೆದು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ನೆರೆಯ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಿಂದ ಮೈಸೂರಿಗೆ ವಲಸೆ ಬಂದಿರುವ 5 ಅಲೆಮಾರಿ ಕುಟುಂಬಗಳ ಕಾಯಕ ಜೀವನಕ್ಕೆ ಕನ್ನಡಿ ಹಿಡಿಯುವ ಅಂಶ. ಇವರು ಮೈಸೂರು- ಊಟಿ ರಸ್ತೆ ಬದಿಯಲ್ಲಿರುವ ಗುಂಡೂರಾವ್ ನಗರದ ಖಾಲಿ ಜಾಗದಲ್ಲಿ ಗೂಡಿನಂತಹ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸ್ತವ್ಯ ಹೂಡಿದ್ದಾರೆ. ಇವರು ಎಲ್ಲೇ ಹೋಗಿ ಬಿಡಾರ ಹಾಕಿದರೂ ಚೆಂದದ ವೈರ್‌ಗಳನ್ನು ಬಳಸಿಕೊಂಡು ಪೂಜಾ ಬುಟ್ಟಿಗಳನ್ನು ತಯಾರಿಸುತ್ತಾರೆ. ಆಕರ್ಷಕ ಬಣ್ಣಗಳ ಈ ಬುಟ್ಟಿಗಳನ್ನು ಸಾಮಾನ್ಯವಾಗಿ ಜನರು ದೇವಾಲಯಕ್ಕೆ ಹಣ್ಣು, ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಬಳಸುತ್ತಾರೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಲ್ಲಿ ಪೂಜಾ ಬುಟ್ಟಿಗಳು ತಯಾರಾಗುತ್ತವೆ. ತಮಗೆ ಬೇಕಾದ ವಿನ್ಯಾಸವನ್ನು ಮೊದಲೇ ತಿಳಿಸಿದರೆ ಅವುಗಳನ್ನು ಇಲ್ಲಿನ ಬುಟ್ಟಿ ತಯಾರಕರು ಸಿದ್ಧಪಡಿಸುತ್ತಾರೆ.

ಹೀಗಿದೆ ಇವರ ದಿನಚರಿ…

ಬೆಳಿಗ್ಗೆ ಸಮಯದಲ್ಲಿ ಕುಟುಂಬದ ಮಹಿಳೆಯರು ಪೂಜಾ ಬುಟ್ಟಿಗಳನ್ನು ತಮ್ಮ ಕೈ ಚಳಕದಿಂದ ಹೆಣೆಯುತ್ತಾರೆ. ನಂತರ ಬಿಸಿಲು ಏರುತ್ತಿದ್ದಂತೆ, ಅಂದರೆ ಸುಮಾರು 10- 11 ಗಂಟೆ ವೇಳೆಗೆ ಬುಟ್ಟಿಗಳನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿಕೊಂಡು ಮಾರಾಟಕ್ಕೆ ಹೊರಡುತ್ತಾರೆ. ಸಂಜೆಯವರೆಗೂ ಮೈಸೂರಿನ ಸುತ್ತಮುತ್ತಲಿನ ಬಡಾವಣೆಗಳು, ಹಳ್ಳಿಗಳಲ್ಲಿ, ಜನಸಂದಣಿ ಇರುವ ಪ್ರದೇಶ ಹಾಗೂ ಜಾತ್ರೆಗಳಲ್ಲಿ ಮಹಿಳೆಯರು ಮತ್ತು ಪುರುಷರು ಹೋಗಿ ಮಾರಾಟ ಮಾಡುತ್ತಾರೆ.

ಬುಟ್ಟಿಯ ದರ ಎಷ್ಟು?
ವಿವಿಧ ಬಗೆಯ ಅಥವಾ ಗಾತ್ರದ ಪೂಜಾ ಬುಟ್ಟಿಗಳಿದ್ದು, ಚಿಕ್ಕ ಬುಟ್ಟಿಗೆ 100ರಿಂದ 200 ರೂ., ದೊಡ್ಡ ಬುಟ್ಟಿಗೆ 300 ರೂ. ಗಳವರೆಗೆ ಮಾರಾಟ ಮಾಡುತ್ತಾರೆ.

ಮಾರುಕಟ್ಟೆಯಿಂದ ಪ್ಲಾಸ್ಟಿಕ್ ವೈರ್ ಖರೀದಿ…

ಬುಟ್ಟಿ ತಯಾರಕರು ಪೂಜಾ ಬುಟ್ಟಿಗೆ ಬೇಕಾದ ನಾನಾ ರೀತಿಯ ಬಣ್ಣ ಬಣ್ಣದ ವೈರ್‌ಗಳನ್ನು ಮಾರುಕಟ್ಟೆಯಿಂದ ತಂದು ತಮ್ಮ ಶೆಡ್ ಬಳಿಯೇ ಚಿತ್ತಾಕರ್ಷಿಸುವಂತಹ ಬುಟ್ಟಿಗಳನ್ನು ತಯಾರಿಸುತ್ತಾರೆ.

ಸಮಸ್ಯೆಗಳಿಗೆ ಹೊಂದಿಕೊಂಡ ಜೀವನ…

ಮೈಸೂರು -ಊಟಿ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತವೆ. ಬುಟ್ಟಿ ತಯಾರಕರು ಈ ರಸ್ತೆ ಬದಿಯಲ್ಲಿ ವಾಸವಾಗಿರುವುದರಿಂದ ನಿತ್ಯ ವಾಹನಗಳ ಕಿರಿಕಿರಿ ಅನುಭವಿಸುತ್ತಿದ್ದಾರೆ. ಜತೆಗೆ, ಜೋರು ಮಳೆ ಬಂದರೆ ಶೆಡ್‌ಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಹೀಗೆ ಸಮಸ್ಯೆಗಳಿಗೆ ಹೊಂದಿಕೊಂಡೇ ಇವರು ಜೀವನ ನಡೆಸುವುದು ಅನಿವಾರ್ಯವಾಗಿದೆ.

ಕಳೆದ ಒಂದು ವರ್ಷದಿಂದ ಮೈಸೂರಿಗೆ ಹೆಣೆದು ಜೀವನ ಸಾಗಿಸುತ್ತಿದ್ದೇವೆ. ಬೆಳಿಗ್ಗೆ ಸಂಜೆಯವರೆಗೂ ಬುಟ್ಟಿಗಳನ್ನು ಹಳ್ಳಿಗಳಿಗೆ, ಕುಟುಂಬ ಸಮೇತ ಬಂದು, ಪೂಜಾ ಬುಟ್ಟಿಗಳನ್ನು ಹೊತ್ತು ಬುಟ್ಟಿ ಹೆಣೆಯುತ್ತೇವೆ. ಮಧ್ಯಾಹ್ನದಿಂದ ಜಾತ್ರೆ-ಉತ್ಸವ, ಜನಸಂದಣಿ ಇರುವ ಜಾಗಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ. ಒಂದು ಬುಟ್ಟಿ ಹೆಣೆಯಲು 1 ಗಂಟೆ ಸಮಯ ಬೇಕಾಗುತ್ತದೆ.
-ಜಯಮ್ಮ, ಬುಟ್ಟಿ ತಯಾರಕರು

ಜಿ ತಂಗಂ ಗೋಪಿನಾಥಂ

ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮದವನಾದ ನಾನು ಸದ್ಯ,‌ ಮೈಸೂರಿನಲ್ಲಿ ನೆಲೆಸಿದ್ದೇನೆ. 2019ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿಎ ( ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ ) ಪದವಿಯನ್ನು ಮುಗಿಸಿದ್ದೇನೆ. ನಂತರ 2021ರಲ್ಲಿ‌ ಮೈಸೂರು ವಿಶ್ವವಿದ್ಯಾನಿಲಯದ‌ಲ್ಲಿ ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ 2 ವರ್ಷಗಳ ‌ಕಾಲ ಅನುಭವ ಪಡೆದುಕೊಂಡಿದ್ದೇನೆ. ವಿಜಯವಾಣಿ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ಸಹಾಯಕ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಕಳೆದ 8 ತಿಂಗಳಿಂದ ಮೈಸೂರಿನ ಆಂದೋಲನ‌ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

4 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

4 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

5 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

5 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

5 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

5 hours ago