Andolana originals

ಎಂಸಿಡಿಸಿಸಿಬಿ: ಅನಿಲ್ ಚಿಕ್ಕಮಾದು-ಪ್ರಕಾಶ್ ನಡುವೆ ಪೈಪೋಟಿ

ಮಂಜು ಕೋಟೆ

ಕೋಟೆ: ಎರಡೂ ಕಡೆಯವರಿಂದ ಕಾರ್ಯತಂತ್ರ; ಫಲಿತಾಂಶ ಕುರಿತು ಮೂಡಿದ ಕುತೂಹಲ

ಎಚ್.ಡಿ.ಕೋಟೆ: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹೆಚ್.ಡಿ.ಕೋಟೆ ಕ್ಷೇತ್ರದ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಶಾಸಕ ಅನಿಲ್ ಚಿಕ್ಕಮಾದು, ಜಾ.ದಳ-ಬಿಜೆಪಿ ಮೈತ್ರಿ ಬೆಂಬಲಿತರಾದ ರೈತ ಗುಂಡತ್ತೂರು ಪ್ರಕಾಶ್ ಲಕ್ಷ್ಮೀಪ್ರಸಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ತೀವ್ರ ಕುತೂಹಲ ಮೂಡಿಸಿದೆ.

ತಾಲ್ಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರು ಸ್ಪರ್ಧಿಸಿರುವುದರಿಂದ ಕ್ಷೇತ್ರದ ಜನರಲ್ಲಿ ಕುತೂಹಲ ಇಮ್ಮಡಿಸಿದೆ. ಶಾಸಕ ಅನಿಲ್ ಚಿಕ್ಕಮಾದು ಗೆಲ್ಲುವುದು ಖಚಿತ ಎಂಬ ಮಾತುಗಳೂ ಕೇಳಿಬರುತ್ತಿವೆ.

ನಾಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿರುವ ಅನಿಲ್ ಚಿಕ್ಕಮಾದು ಎಂಡಿಸಿಡಿಸಿಬಿಗೆ ಸ್ಪರ್ಧಿಸಿರುವುದರಿಂದ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಗೆಲ್ಲಲು ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ನಡೆಸುತ್ತಿದ್ದು, ಕ್ಷೇತ್ರದ ೧೭ ಬ್ಯಾಂಕುಗಳ ಡೆಲಿಕೇಟ್ ಪ್ರತಿನಿಧಿಗಳ ಪೈಕಿ ೧೨ ಮಂದಿ ಶಾಸಕರ ಬೆಂಬಲಕ್ಕೆ ನಿಂತಿದ್ದಾರೆ.

ಕ್ಷೇತ್ರದ ಶಾಸಕತ್ವದ ಅಧಿಕಾರದ ಜೊತೆಗೆ ಸಹಕಾರ ಕ್ಷೇತ್ರದ ಅಧಿಕಾರವನ್ನು ಅನಿಲ್ ಅವರಿಗೆ ನೀಡಲೇಬೇಕೆಂದು ಮುಖಂಡರಾದ ನಾಗನಹಳ್ಳಿ ಪ್ರದೀಪ, ಭಾಸ್ಕರ, ಈರೇಗೌಡ, ನರಸೀಪುರ ರವಿ, ಹಿರೇಹಳ್ಳಿ ಸೋಮೇಶ್, ಪರಶಿವ ಮೂರ್ತಿ, ಶಿವಮಲ್ಲಪ್ಪ, ಹೋಂಡಾ ನಯಾಜ್, ನರಸಿಂಹಮೂರ್ತಿ, ರಾಜು ವಿಶ್ವಕರ್ಮ, ಗಣೇಶಾಚಾರ್, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ವಡ್ಡರಗುಡಿ ರವಿ, ಚಂದ್ರು, ಸತೀಶ್‌ಗೌಡ ಮತ್ತಿತರ ಮುಖಂಡರು, ಡೆಲಿಕೇಟ್ಗಳು ಶ್ರಮಿಸುತ್ತಿದ್ದಾರೆ.

ಶಾಸಕರ ನಿರ್ದೇಶನದಂತೆ ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷದವರಾದ ಮನುಗನಹಳ್ಳಿ ಮಾದಪ್ಪ ಮತ್ತು ಬಡಗಲಪುರ ಶಿವನಂಜೇಗೌಡ ಇಬರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಇವರು ಕೂಡ ಶಾಸಕರಿಗೆ ಮತದಾನ ಮಾಡಲಿದ್ದಾರೆ ಎನ್ನಲಾಗಿದೆ. ಗುಂಡತ್ತೂರು ಪ್ರಕಾಶ್ ಲಕ್ಷ್ಮೀಪ್ರಸಾದ್ ಜಾ.ದಳ ಮತ್ತು ಬಿಜೆಪಿ ಮೈತ್ರಿ ಪಕ್ಷದ ಬೆಂಬಲಿತರಾಗಿ ಅಂತರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಡೆಲಿಕೇಟ್ ಆಗಿ ಪ್ರಪ್ರಥಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಚುನಾವಣೆಯಲ್ಲಿ ಶಾಸಕರಿಗೆ ಪೈಪೋಟಿ ನೀಡಲು ತಮ್ಮದೇ ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಅಧಿಕೃತವಾಗಿ ಐವರು ಡೆಲಿಗೇಟ್ ಗಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಂಡು ಮತ್ತೆ ಹಲವರನ್ನು ಸೆಳೆಯಲು ತೆರೆ ಮೆರೆಯಲ್ಲಿ ಪ್ರಯತ್ನಿಸುತಿದ್ದಾರೆ. ಹಲವು ವರ್ಷಗಳಿಂದ ಇವರ ಬಣದವರನ್ನೇ ತಾಲ್ಲೂಕಿನಲ್ಲಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡು ಬರುತ್ತಿದ್ದು, ಕ್ಷೇತ್ರವನ್ನು ಭದ್ರಕೋಟೆಯನ್ನಾಗಿ ಉಳಿಸಿಕೊಳ್ಳಬೇಕೆಂಬ ಛಲದಿಂದ ಶಾಸಕರಾದ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಮುಖಂಡರಾದ ಕೆ.ಎಸ್.ಗೌಡ್ರು, ಹರೀಶ್ ಗೌಡ, ಗುಂಡತ್ತೂರು ಮಹೇಶ, ಕರವೇ ನಟರಾಜ್, ಬೆಳಗನಹಳ್ಳಿ ಶಿವರಾಜ್, ಪ್ರಕಾಶ್, ಸಿರಿ ಹೊಸಮಾಳ, ಶಿವರಾಜ್, ವಕೀಲ ರವಿಕುಮಾರ್, ಮಟಕೆರೆ ರಾಜೇಶ್, ಯೋಗೇಶ್, ಸೋಮ ಶೇಖರ್, ಮಾಯಿ ಮತ್ತಿತರ ಮುಖಂಡರು, ಡೆಲಿಗೇಟ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ.

ಒ ಟ್ಟಾರೆ ಜೂ.೨೬ರಂದು ನಡೆಯುವ ಚುನಾವಣೆಯಲ್ಲಿ ಕೋಟೆ ಕ್ಷೇತ್ರದ ಮತದಾರರು ಯಾವ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

” ಜನತೆ ಈಗ ನನ್ನನ್ನು ಶಾಸಕನನ್ನಾಗಿ ಮಾಡಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ನೀಡಿದ್ದಾರೆ. ಅದೇ ರೀತಿ ರೈತರ ಅಭಿವೃದ್ಧಿಗಾಗಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದು ಅಗತ್ಯ ಸಹಕಾರ ನೀಡಿರುವುದರಿಂದ ಅಧಿಕ ಮತಗಳಿಂದ ಜಯ ಸಾಧಿಸುತ್ತೇನೆ.”

-ಅನಿಲ್ ಚಿಕ್ಕಮಾದು, ಶಾಸಕ

” ಕ್ಷೇತ್ರದ ಶಾಸಕರಿಗೆ ಪ್ರತಿಸ್ಪರ್ಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ರೈತನಾಗಿರುವುದರಿಂದ ನನಗೆ ಎಲ್ಲರ ಉತ್ತಮ ಬೆಂಬಲ ದೊರಕಿದೆ. ಗೆದ್ದೇ ಗೆಲ್ಲುತ್ತೇನೆ ಎಂಬ ಪೂರ್ಣ ವಿಶ್ವಾಸ ನನಗಿದೆ.”

-ಗುಂಡತ್ತೂರು ಪ್ರಕಾಶ್ ಲಕ್ಷ್ಮೀ ಪ್ರಸಾದ್

ಆಂದೋಲನ ಡೆಸ್ಕ್

Recent Posts

ಮೈಸೂರಿನ 2 ಹೋಟೆಲ್‌, ಚಾ.ನಗರ ಕೋರ್ಟ್‌ಗೆ ಬಾಂಬ್‌ ಬೆದರಿಕೆ ; ಒಬ್ಬ ವ್ಯಕ್ತಿಯಿಂದಲೇ ಇ-ಮೇಲ್

ಮೈಸೂರು‌ : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…

2 hours ago

ಸರಗೂರು | ಮತ್ತೆ ಹುಲಿ ದಾಳಿ ; ಬೋನು ಅಳವಡಿಸಲು ತೆರಳಿದ್ದ ಅರಣ್ಯ ಗಾರ್ಡ್‌ ಮೇಲೆ ಎರಗಿದ ಹುಲಿ

ಸರಗೂರು : ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಹುಲಿ ದಾಳಿ ಆತಂಕ ಮುಂದುವರಿದಿದ್ದು, ಹುಲಿ ಸೆರೆಹಿಡಿಯಲು ತೆರಳಿದ್ದ ಎಸ್‌ಟಿಎಫ್ ಸಿಬ್ಬಂದಿಯ ಮೇಲೆಯೇ…

3 hours ago

ಎಸ್‌ಐಆರ್‌ | ರಾಜ್ಯಾದ್ಯಂತ ಏಕಕಾಲಕ್ಕೆ ಆರಂಭ ; ನಾಳೆಯಿಂದ ಮನೆ ಮನೆಗೆ ಭೇಟಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮವು ಮಂಗಳವಾರ (ಜೂ.30)…

3 hours ago

ಮಾದಪ್ಪನ ದರ್ಶನ ಮುಗಿಸಿ ಬರುವಾಗ ಬಸ್‌ ಪಲ್ಟಿ : ಇಬ್ಬರು ಸಾವು ; ಹಲವರು ಗಂಭೀರ

ಕೊಳ್ಳೇಗಾಲ : ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ವಾಪಸ್ ಬರುವಾಗ ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿ, 10…

4 hours ago

ಮೈಸೂರು | ವ್ಯಕ್ತಿ ಅನುಮಾನಾಸ್ಪದ ಸಾವು ; ಹೆಂಡತಿಯಿಂದಲೇ ಕೊಲೆಯ ಶಂಕೆ

ಮೈಸೂರು : ಇಲ್ಲಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಕೊಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ…

7 hours ago

ಬಿಜೆಪಿ ವಕ್ತಾರ ಎಂ.ಜಿ.ಮಹೇಶ್‌ 6 ವರ್ಷ ಪಕ್ಷದಿಂದ ಉಚ್ಛಾಟನೆ

ಬೆಂಗಳೂರು : ಬಿಜೆಪಿ ಪಕ್ಷದ ರಾಷ್ಟೀಯ ಮತ್ತು ರಾಜ್ಯ ಮಟ್ಟದ ನಾಯಕರ ವಿರುದ್ಧ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿ…

8 hours ago