Andolana originals

ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆ?

ನವೀನ್ ಡಿಸೋಜ

ಗೊಂದಲಗಳಾಗದಂತೆ ಎಚ್ಚರ ವಹಿಸಲು ಸಮಿತಿ ನಿರ್ಧಾರ

ಅನುಭವದ ಆಧಾರದ ಮೇಲೆ ತೀರ್ಪುಗಾರರ ಆಯ್ಕೆ ಸಾಧ್ಯತೆ 

ಮಡಿಕೇರಿ: ಈ ಬಾರಿಯ ಮಡಿಕೇರಿ ದಸರಾ ಜನೋತ್ಸವದ ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ದಶಮಂಟಪ ಸಮಿತಿ ಮುಂದಾಗಿದ್ದು, ತೀರ್ಪಿನಲ್ಲಿ ಯಾವುದೇ ಗೊಂದಲಗಳಾಗದಂತೆ ಎಚ್ಚರ ವಹಿಸಲು ನಿರ್ಧರಿಸಲಾಗಿದೆ.

ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶ ಮಂಟಪಗಳ ಶೋಭಾಯಾತ್ರೆಯ ತೀರ್ಪುಗಾರಿಕೆ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಕೆಲ ಮಂಟಪ ಸಮಿತಿಗಳಿಂದ ಅಪಸ್ವರ ಕೇಳಿಬರುತ್ತಿದೆ. ಹಲವು ಸಂದರ್ಭಗಳಲ್ಲಿ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಂಟಪ ಸಮಿತಿಗಳು ವೇದಿಕೆಯಲ್ಲಿಯೇ ಪ್ರತಿಭಟಿಸಿದ ಉದಾಹರಣೆಗಳಿವೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷ ಒಂದಲ್ಲಾ ಒಂದು ಸಮಿತಿಗಳು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇವೆ. ಹೀಗಾಗಿ ಈ ಬಾರಿ ದಸರಾ ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ಶ್ರೀ ಕೋಟೆ ಮಹಾಗಣಪತಿ ದಸರಾ ದಶಮಂಟಪ ಸಮಿತಿ ಮುಂದಾಗಿದೆ. ಈ ಬಾರಿ ಒಟ್ಟು ನಾಲ್ಕು ಮಂದಿ ತೀರ್ಪುಗಾರರು ಇರಲಿದ್ದು, ಎಲ್ಲರಿಗೂ ಮಂಟಪಗಳಲ್ಲಿನ ಅನುಭವದ ಆಧಾರದ ಮೇಲೆಯೇ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ.

ದಸರಾ ಮಂಟಪಗಳ ವಿಚಾರದಲ್ಲಿ ಅನುಭವ ಇಲ್ಲದವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಅಸಮಾಧಾನ ಈ ಹಿಂದೆ ಕೆಲ ಸಮಿತಿಗಳಿಂದ ವ್ಯಕ್ತವಾಗಿದೆ. ತೀರ್ಪುಗಾರರನ್ನು ನೇಮಕ ಮಾಡುವ ಸಂಪೂರ್ಣ ಜವಾಬ್ದಾರಿ ದಶ ಮಂಟಪ ಸಮಿತಿಯನ್ನು ಮುನ್ನಡೆಸುವವರದ್ದೇ ಆಗಿರುವುದರಿಂದ ಅವರಿಗೆ ಬೇಕಾದಂತೆ ತೀರ್ಪುಗಾರರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಅಪಸ್ವರ ಕೇಳಿಬರುತ್ತಲೇ ಇದೆ. ಹೀಗಾಗಿ ಈ ಬಾರಿ ಅಂತಹ ಕಳಂಕ ಬಾರದಂತೆ ಜವಾಬ್ದಾರಿ ಹೊತ್ತಿರುವ ಕೋಟೆ ಶ್ರೀ ಮಹಾಗಣಪತಿ ದಸರಾ ಸಮಿತಿ ನೇತೃತ್ವದ ದಶ ಮಂಟಪ ಸಮಿತಿ ಎಚ್ಚರ ವಹಿಸುತ್ತಿದೆ.

ನಾಲ್ಕು ಮಂದಿ ತೀರ್ಪುಗಾರರ ಪೈಕಿ ಇಬ್ಬರು ಮಡಿಕೇರಿ ದಸರಾ ಹಿನ್ನೆಲೆ ಇರುವವರು, ಸಂಪ್ರದಾಯ ತಿಳಿದಿರುವ ಹಿರಿಯರು, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಅನುಭವ ಇರುವ ದಸರಾದಲ್ಲಿ ಕೆಲಸ ಮಾಡಿರುವ ಇಬ್ಬರು ಯುವ ತೀರ್ಪುಗಾರರನ್ನು ಆಯ್ಕೆ ಮಾಡಲಾಗುತ್ತಿದೆ. ಇದಕ್ಕಾಗಿ ಎಲ್ಲ ಸಮಿತಿಗಳಿಂದಲೂ ತೀರ್ಪುಗಾರರನ್ನು ಶೀಫಾರಸ್ಸು ಮಾಡಲು ದಶ ಮಂಟಪ ಸಮಿತಿ ಕೇಳಿಕೊಂಡಿದೆ. ಎಲ್ಲಾ ಸಮಿತಿಗಳಿಂದ ಬರುವ ಹೆಸರುಗಳ ಪೈಕಿ ನಾಲ್ವರ ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ. ಅಲ್ಲದೇ ತೀರ್ಪುಗಾರರಾಗಿ ಆಯ್ಕೆಯಾಗುವ ನಾಲ್ವರ ಹಿನ್ನೆಲೆ, ಅನುಭವದ ವಿವರವನ್ನು ಉತ್ಸವಕ್ಕೂ ಮೊದಲೇ ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುತ್ತದೆ ಎಂದು ದಶ ಮಂಟಪ ಸಮಿತಿ ಮೂಲಗಳಿಂದ ತಿಳಿದುಬಂದಿದೆ.

ಆಯಾ ದೇವಾಲಯಗಳ ಮಂಟಪ ಸಮಿತಿಗಳು ತಮಗೆ ನೀಡಲಾದ ಸಮಯಕ್ಕೆ ಸರಿಯಾಗಿ ತೀರ್ಪುಗಾರಿಕೆ ಪ್ರದರ್ಶನ ನೀಡಬೇಕೆಂದು ಸೂಚಿಸಲಾಗುತ್ತಿದೆ. ತೀರ್ಪುಗಾರರಿಗೂ ಮೊದಲೇ ದಶ ಮಂಟಪ ಸಮಿತಿಯ ತಂಡವೊಂದು ಪ್ರತಿ ಮಂಟಪದ ಬಳಿ ತೆರಳಿ ಮಂಟಪ ತಯಾರಿಸಿರುವುದು ನಿಯಮ ಬದ್ಧವಾಗಿದೆಯೇ? ಟ್ರಾಕ್ಟರ್ ಚಾಲನಾ ಸ್ಥಿತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ ತೀರ್ಪುಗಾರರಿಗೆ ಮಾಹಿತಿ ನೀಡುತ್ತಾರೆ. ತೀರ್ಪುಗಾರರು ಬಂದು ನಿಂತ ಕೂಡಲೇ ಹಿಂದಿನಂತೆ ಟ್ರಾಕ್ಟರ್ ಚಾಲಿಸಿ ತೋರಿಸುವುದು ಮತ್ತಿತರ ಯಾವುದೇ ಕ್ರಮಗಳಿಲ್ಲದೇ ನೇರವಾಗಿ ಕಥಾ ಸಾರಾಂಶವನ್ನು ಪ್ರಸ್ತುತಪಡಿಸಬಹುದಾಗಿದೆ. ಇದರಿಂದ ಸಮಯದ ಉಳಿತಾಯವಾಗಲಿದೆ ಎನ್ನುವುದು ದಸರಾ ದಶಮಂಟಪ ಸಮಿತಿ ಲೆಕ್ಕಾಚಾರವಾಗಿದೆ. ಬೆಳಗಿನ ಜಾವ ೪.೩೦ರ ವೇಳೆಗೆ ಎಲ್ಲಾ ೧೦ ಮಂಟಪಗಳ ಜಡ್ಜ್‌ಮೆಂಟ್ ಶೋ ಮುಗಿಸಲು ಚಿಂತಿಸಲಾಗುತ್ತಿದೆ.

ಸುಗಮ ಪ್ರದರ್ಶನಕ್ಕೆ ಅವಕಾಶ ಕೊಡುವ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನು ತರಲು ದಶಮಂಟಪ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಅದರಂತೆ ನಗರದ ಟೌನ್ ಹಾಲ್ ಮುಂಭಾಗದಲ್ಲಿ ಯಾವುದೇ ಮಂಟಪದ ಪ್ರದರ್ಶನ ಇರುವುದಿಲ್ಲ. ಕುಂದುರುಮೊಟ್ಟೆ ದೇವಾಲಯದ ಮಂಟಪಕ್ಕೆ ರಾಜ್ ದರ್ಶನ್ ಬಳಿ, ದೇಚೂರು ಮಂಟಪಕ್ಕೆ ಆಂಜನೇಯ ದೇವಾಲಯದ ಬಳಿ ಸ್ಥಳ ನೀಡುವ ಕುರಿತು ಚಿಂತನೆ ನಡೆದಿದೆ. ಇಂತಹ ಹಲವು ಬದಲಾವಣೆಗಳ ಮೂಲಕ ಜನದಟ್ಟಣೆ ನಿರ್ವಹಣೆಗೂ ಸಮಿತಿ ಸಿದ್ಧತೆ ನಡೆಸಿದೆ.

” ಈ ಬಾರಿ ದಸರಾ ದಶಮಂಟಪಗಳ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ತೀರ್ಮಾನಿಸಲಾಗಿದ್ದು, ದಶ ಮಂಟಪ ಸಭೆಯಲ್ಲಿ ಈ ವಿಚಾರವಾಗಿ ಎಲ್ಲಾ ೧೦ ಮಂಟಪ ಸಮಿತಿಗಳೊಂದಿಗೆ ಚರ್ಚಿಸಲಾಗುವುದು. ಒಮ್ಮತದ ತೀರ್ಮಾನ ತೆಗೆದುಕೊಂಡು ಬಳಿಕ ಹೊಸ ನಿಯಮಗಳು ಮತ್ತು ಕ್ರಮಗಳನ್ನು ಪ್ರಕಟಿಸಲಾಗುವುದು.”

-ಬಿ.ಎಂ. ರಾಜೇಶ್, ಗೌರವಾಧ್ಯಕ್ಷ, ದಸರಾ ದಶಮಂಟಪ ಸಮಿತಿ

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

1 hour ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

2 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

3 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

3 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

8 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

8 hours ago