Andolana originals

ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆ?

ನವೀನ್ ಡಿಸೋಜ

ಗೊಂದಲಗಳಾಗದಂತೆ ಎಚ್ಚರ ವಹಿಸಲು ಸಮಿತಿ ನಿರ್ಧಾರ

ಅನುಭವದ ಆಧಾರದ ಮೇಲೆ ತೀರ್ಪುಗಾರರ ಆಯ್ಕೆ ಸಾಧ್ಯತೆ 

ಮಡಿಕೇರಿ: ಈ ಬಾರಿಯ ಮಡಿಕೇರಿ ದಸರಾ ಜನೋತ್ಸವದ ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ದಶಮಂಟಪ ಸಮಿತಿ ಮುಂದಾಗಿದ್ದು, ತೀರ್ಪಿನಲ್ಲಿ ಯಾವುದೇ ಗೊಂದಲಗಳಾಗದಂತೆ ಎಚ್ಚರ ವಹಿಸಲು ನಿರ್ಧರಿಸಲಾಗಿದೆ.

ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶ ಮಂಟಪಗಳ ಶೋಭಾಯಾತ್ರೆಯ ತೀರ್ಪುಗಾರಿಕೆ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಕೆಲ ಮಂಟಪ ಸಮಿತಿಗಳಿಂದ ಅಪಸ್ವರ ಕೇಳಿಬರುತ್ತಿದೆ. ಹಲವು ಸಂದರ್ಭಗಳಲ್ಲಿ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಂಟಪ ಸಮಿತಿಗಳು ವೇದಿಕೆಯಲ್ಲಿಯೇ ಪ್ರತಿಭಟಿಸಿದ ಉದಾಹರಣೆಗಳಿವೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷ ಒಂದಲ್ಲಾ ಒಂದು ಸಮಿತಿಗಳು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇವೆ. ಹೀಗಾಗಿ ಈ ಬಾರಿ ದಸರಾ ದಶಮಂಟಪ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ಶ್ರೀ ಕೋಟೆ ಮಹಾಗಣಪತಿ ದಸರಾ ದಶಮಂಟಪ ಸಮಿತಿ ಮುಂದಾಗಿದೆ. ಈ ಬಾರಿ ಒಟ್ಟು ನಾಲ್ಕು ಮಂದಿ ತೀರ್ಪುಗಾರರು ಇರಲಿದ್ದು, ಎಲ್ಲರಿಗೂ ಮಂಟಪಗಳಲ್ಲಿನ ಅನುಭವದ ಆಧಾರದ ಮೇಲೆಯೇ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ.

ದಸರಾ ಮಂಟಪಗಳ ವಿಚಾರದಲ್ಲಿ ಅನುಭವ ಇಲ್ಲದವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಅಸಮಾಧಾನ ಈ ಹಿಂದೆ ಕೆಲ ಸಮಿತಿಗಳಿಂದ ವ್ಯಕ್ತವಾಗಿದೆ. ತೀರ್ಪುಗಾರರನ್ನು ನೇಮಕ ಮಾಡುವ ಸಂಪೂರ್ಣ ಜವಾಬ್ದಾರಿ ದಶ ಮಂಟಪ ಸಮಿತಿಯನ್ನು ಮುನ್ನಡೆಸುವವರದ್ದೇ ಆಗಿರುವುದರಿಂದ ಅವರಿಗೆ ಬೇಕಾದಂತೆ ತೀರ್ಪುಗಾರರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಅಪಸ್ವರ ಕೇಳಿಬರುತ್ತಲೇ ಇದೆ. ಹೀಗಾಗಿ ಈ ಬಾರಿ ಅಂತಹ ಕಳಂಕ ಬಾರದಂತೆ ಜವಾಬ್ದಾರಿ ಹೊತ್ತಿರುವ ಕೋಟೆ ಶ್ರೀ ಮಹಾಗಣಪತಿ ದಸರಾ ಸಮಿತಿ ನೇತೃತ್ವದ ದಶ ಮಂಟಪ ಸಮಿತಿ ಎಚ್ಚರ ವಹಿಸುತ್ತಿದೆ.

ನಾಲ್ಕು ಮಂದಿ ತೀರ್ಪುಗಾರರ ಪೈಕಿ ಇಬ್ಬರು ಮಡಿಕೇರಿ ದಸರಾ ಹಿನ್ನೆಲೆ ಇರುವವರು, ಸಂಪ್ರದಾಯ ತಿಳಿದಿರುವ ಹಿರಿಯರು, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಅನುಭವ ಇರುವ ದಸರಾದಲ್ಲಿ ಕೆಲಸ ಮಾಡಿರುವ ಇಬ್ಬರು ಯುವ ತೀರ್ಪುಗಾರರನ್ನು ಆಯ್ಕೆ ಮಾಡಲಾಗುತ್ತಿದೆ. ಇದಕ್ಕಾಗಿ ಎಲ್ಲ ಸಮಿತಿಗಳಿಂದಲೂ ತೀರ್ಪುಗಾರರನ್ನು ಶೀಫಾರಸ್ಸು ಮಾಡಲು ದಶ ಮಂಟಪ ಸಮಿತಿ ಕೇಳಿಕೊಂಡಿದೆ. ಎಲ್ಲಾ ಸಮಿತಿಗಳಿಂದ ಬರುವ ಹೆಸರುಗಳ ಪೈಕಿ ನಾಲ್ವರ ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ. ಅಲ್ಲದೇ ತೀರ್ಪುಗಾರರಾಗಿ ಆಯ್ಕೆಯಾಗುವ ನಾಲ್ವರ ಹಿನ್ನೆಲೆ, ಅನುಭವದ ವಿವರವನ್ನು ಉತ್ಸವಕ್ಕೂ ಮೊದಲೇ ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುತ್ತದೆ ಎಂದು ದಶ ಮಂಟಪ ಸಮಿತಿ ಮೂಲಗಳಿಂದ ತಿಳಿದುಬಂದಿದೆ.

ಆಯಾ ದೇವಾಲಯಗಳ ಮಂಟಪ ಸಮಿತಿಗಳು ತಮಗೆ ನೀಡಲಾದ ಸಮಯಕ್ಕೆ ಸರಿಯಾಗಿ ತೀರ್ಪುಗಾರಿಕೆ ಪ್ರದರ್ಶನ ನೀಡಬೇಕೆಂದು ಸೂಚಿಸಲಾಗುತ್ತಿದೆ. ತೀರ್ಪುಗಾರರಿಗೂ ಮೊದಲೇ ದಶ ಮಂಟಪ ಸಮಿತಿಯ ತಂಡವೊಂದು ಪ್ರತಿ ಮಂಟಪದ ಬಳಿ ತೆರಳಿ ಮಂಟಪ ತಯಾರಿಸಿರುವುದು ನಿಯಮ ಬದ್ಧವಾಗಿದೆಯೇ? ಟ್ರಾಕ್ಟರ್ ಚಾಲನಾ ಸ್ಥಿತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ ತೀರ್ಪುಗಾರರಿಗೆ ಮಾಹಿತಿ ನೀಡುತ್ತಾರೆ. ತೀರ್ಪುಗಾರರು ಬಂದು ನಿಂತ ಕೂಡಲೇ ಹಿಂದಿನಂತೆ ಟ್ರಾಕ್ಟರ್ ಚಾಲಿಸಿ ತೋರಿಸುವುದು ಮತ್ತಿತರ ಯಾವುದೇ ಕ್ರಮಗಳಿಲ್ಲದೇ ನೇರವಾಗಿ ಕಥಾ ಸಾರಾಂಶವನ್ನು ಪ್ರಸ್ತುತಪಡಿಸಬಹುದಾಗಿದೆ. ಇದರಿಂದ ಸಮಯದ ಉಳಿತಾಯವಾಗಲಿದೆ ಎನ್ನುವುದು ದಸರಾ ದಶಮಂಟಪ ಸಮಿತಿ ಲೆಕ್ಕಾಚಾರವಾಗಿದೆ. ಬೆಳಗಿನ ಜಾವ ೪.೩೦ರ ವೇಳೆಗೆ ಎಲ್ಲಾ ೧೦ ಮಂಟಪಗಳ ಜಡ್ಜ್‌ಮೆಂಟ್ ಶೋ ಮುಗಿಸಲು ಚಿಂತಿಸಲಾಗುತ್ತಿದೆ.

ಸುಗಮ ಪ್ರದರ್ಶನಕ್ಕೆ ಅವಕಾಶ ಕೊಡುವ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನು ತರಲು ದಶಮಂಟಪ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಅದರಂತೆ ನಗರದ ಟೌನ್ ಹಾಲ್ ಮುಂಭಾಗದಲ್ಲಿ ಯಾವುದೇ ಮಂಟಪದ ಪ್ರದರ್ಶನ ಇರುವುದಿಲ್ಲ. ಕುಂದುರುಮೊಟ್ಟೆ ದೇವಾಲಯದ ಮಂಟಪಕ್ಕೆ ರಾಜ್ ದರ್ಶನ್ ಬಳಿ, ದೇಚೂರು ಮಂಟಪಕ್ಕೆ ಆಂಜನೇಯ ದೇವಾಲಯದ ಬಳಿ ಸ್ಥಳ ನೀಡುವ ಕುರಿತು ಚಿಂತನೆ ನಡೆದಿದೆ. ಇಂತಹ ಹಲವು ಬದಲಾವಣೆಗಳ ಮೂಲಕ ಜನದಟ್ಟಣೆ ನಿರ್ವಹಣೆಗೂ ಸಮಿತಿ ಸಿದ್ಧತೆ ನಡೆಸಿದೆ.

” ಈ ಬಾರಿ ದಸರಾ ದಶಮಂಟಪಗಳ ತೀರ್ಪುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತರಲು ತೀರ್ಮಾನಿಸಲಾಗಿದ್ದು, ದಶ ಮಂಟಪ ಸಭೆಯಲ್ಲಿ ಈ ವಿಚಾರವಾಗಿ ಎಲ್ಲಾ ೧೦ ಮಂಟಪ ಸಮಿತಿಗಳೊಂದಿಗೆ ಚರ್ಚಿಸಲಾಗುವುದು. ಒಮ್ಮತದ ತೀರ್ಮಾನ ತೆಗೆದುಕೊಂಡು ಬಳಿಕ ಹೊಸ ನಿಯಮಗಳು ಮತ್ತು ಕ್ರಮಗಳನ್ನು ಪ್ರಕಟಿಸಲಾಗುವುದು.”

-ಬಿ.ಎಂ. ರಾಜೇಶ್, ಗೌರವಾಧ್ಯಕ್ಷ, ದಸರಾ ದಶಮಂಟಪ ಸಮಿತಿ

ಆಂದೋಲನ ಡೆಸ್ಕ್

Recent Posts

ವಾಹನ ಸವಾರರು ಹೆಲ್ಮೆಟ್‌ ಬಳಸುತ್ತಿದ್ದಾರೇ? : ಜಾಗೃತಿ ಮೂಡಿಸಲು ಬಂದ ಯಮಧರ್ಮ

ಮೈಸೂರು : ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ…

24 mins ago

ಬಳ್ಳಾರಿ ಗಲಭೆ | ಪಾದಯಾತ್ರೆಗೆ ಬಿಜೆಪಿಯಲ್ಲಿ ಭಿನ್ನಮತ

ಬೆಂಗಳೂರು : ಬ್ಯಾನರ್ ಅಳವಡಿಕೆ ಸಂಬಂಧಪಟ್ಟ ಬಳ್ಳಾರಿಯಲ್ಲಿ ನಡೆದ ಗಲಭೆ ಖಂಡಿಸಿ ಪಾದಯಾತ್ರೆ ನಡೆಸುವ ವಿಷಯದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.…

53 mins ago

ವರ್ಕ್ ಫ್ರಮ್ ಹೋಮ್ ಕೆಲಸ | ಮಹಿಳೆಗೆ 9.7 ಲಕ್ಷ ರೂ. ವಂಚನೆ

ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ…

57 mins ago

ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

ಮೈಸೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ. ಮೊದಲನೇ…

1 hour ago

ಸಂಕ್ರಾಂತಿಗೆ ಸಾಂಸ್ಕೃತಿಕ ನಗರಿ ಸಜ್ಜು : ಎಲ್ಲೆಲ್ಲೂ ಶಾಪಿಂಗ್ ಸಡಗರ

ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…

2 hours ago

ಬೆಳೆಗೆ ನೀರು ಹಾಯಿಸುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ : ರೈತ ಗಂಭೀರ

ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ…

3 hours ago