Andolana originals

ಕಂಬಳಕ್ಕೆ ಸಿದ್ಧವಾದ ಮಹದೇವ ನಗರದ ರಸ್ತೆ!

ಎಸ್.ಎಸ್.ಭಟ್

ನಂಜನಗೂಡಿನ ಮಹದೇವ ನಗರದ ರಸ್ತೆ ಅವ್ಯವಸ್ಥೆ; ನಿವಾಸಿಗಳ ಆಕ್ರೋಶ 

ನಂಜನಗೂಡು: ತಾಲ್ಲೂಕಿನ ಕಾಡಂಚಿನ ಹೆಡಿಯಾಲ ಗ್ರಾಮ ಪಂಚಾಯಿತಿಗೆ ಸೇರಿದ ಮಹದೇವ ನಗರದ ರಸ್ತೆ ಕರಾವಳಿ ಭಾಗದ ಕಂಬಳಕ್ಕೆ ಸಿದ್ಧವಾದಂತಿದೆ.

ಹಿಂದೆ ಶಾಸಕರಾಗಿದ್ದ ಎಂ.ಮಹದೇವು ಇಲ್ಲಿ ರಸ್ತೆ, ಚರಂಡಿ ಸಹಿತವಾದ ಹೊಸ ಬಡಾವಣೆ ನಿರ್ಮಿಸಿ ೮೦ಕ್ಕೂ ಹೆಚ್ಚು ಬಡವರಿಗೆ ಸೂರು ಕಲ್ಪಿಸಿದ್ದರಿಂದ ಇದಕ್ಕೆ ಮಹದೇವ ನಗರ ಎಂದೇ ನಾಮಕರಣ ಮಾಡಲಾಗಿದೆ. ಆದರೆ, ಇಂದು ಬಡಾವಣೆಯ ರಸ್ತೆ ಹದಗೆಟ್ಟು ಮಳೆ ಬಂದರೆ ಚರಂಡಿ ಯಾವುದು, ರಸ್ತೆ ಯಾವುದು ಎಂದು ತಿಳಿಯಲಾರದ ಸ್ಥಿತಿ ನಿರ್ಮಾಣವಾಗಿದೆ.

ಬೇಗೂರು-ಸರಗೂರು ಮುಖ್ಯ ರಸ್ತೆಯಿಂದ ಮಹದೇವ ನಗರವನ್ನು ಹಾದು ನಾಗಣಾಪುರ ಕಾಲೋನಿಗೆ ಸಾಗುವ ಈ ರಸ್ತೆಯ ಸ್ಥಿತಿ ಜನಸಂಚಾರ ಮಾಡುವ ಬದಲಾಗಿ ಕರಾವಳಿ ಜಿಲ್ಲೆಗಳಲ್ಲಿ ಕೋಣಗಳನ್ನು ಓಡಿಸುವ ಪಂದ್ಯಕ್ಕೆ ಸಿದ್ಧಗೊಳಿಸಿದಂತಿರುವುದು ವಿಪರ್ಯಾಸ.

ಇದೇ ರಸ್ತೆಯಲ್ಲಿ ಶಾಲೆಗಳಿಗೆ ನಿತ್ಯ ತೆರಳುವ ಮಕ್ಕಳ ಸ್ಥಿತಿಯಂತೂ ಹೇಳಲು ಅಸಾಧ್ಯವಾಗಿದೆ. ಅವರು ರಸ್ತೆಯಲ್ಲಿ ನಡೆದು ಬರುವಾಗ ಕೆಲವೆಡೆ ಮೊಳಕಾಲಿನವರೆಗೂ ಕೆಸರು ಮೆತ್ತಿಕೊಂಡು ಅವರ ಸಮವಸ್ತ್ರಗಳು ನಿತ್ಯ ಕೊಳಕಾಗುತ್ತಿವೆ. ಅದೇ ಬಟ್ಟೆಯಲ್ಲಿ ಶಾಲೆಗೆ ತೆರಳುವ ಬಗೆ ಹೇಗೆ ಎಂದು ಯೋಚಿಸುವಂತಾಗಿದೆ.

ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಕೊಳಚೆ ನೀರು ಮುಂದಕ್ಕೆ ಹರಿಯದೆ ಅಲ್ಲಿ ಮಡು ಗಟ್ಟಿ ನಿಂತಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

ಕೆಲವೆಡೆ ರಸ್ತೆಗೆ ನುಗ್ಗಿದರೆ ಹಲವೆಡೆ ಮನೆಗಳಿಗೂ ನುಗ್ಗುತ್ತಿದ್ದು ನಿವಾಸಿಗಳು ಪರದಾಡುವಂತಾಗಿದೆ. ಚರಂಡಿ ಸ್ಚಚ್ಛಗೊಳಿಸುವುದಿರಲಿ ಚರಂಡಿಯಲ್ಲೇ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿರುವುದು ಗ್ರಾಪಂ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಪಂಚಾಯಿತಿ ಅಧಿಕಾರಿಗಳು ಈಗಲಾದರೂ ಇತ್ತ ಗಮನ ಹರಿಸಿ ಈ ಬಡಾವಣೆಯಲ್ಲಿನಾಗರಿಕರು ಉಳಿದುಕೊಳ್ಳುವ ವಾತಾವರಣ ನಿರ್ಮಿಸಲಿ ಎಂಬುದೇ ಮಹದೇವ ನಗರದ ನಿವಾಸಿಗಳ ಬಯಕೆಯಾಗಿದೆ.

” ಮಾಜಿ ಸಚಿವ ಎಂ.ಮಹದೇವು ಅವರು ಬಡಾವಣೆ ನಿರ್ಮಿಸಿ ನಮಗೆ ಸೂರು ಕಲ್ಪಿಸಿದ ನಂತರ ಮತ ಕೇಳಲು ಮಾತ್ರ ಬರು ಮುಖಂಡರ‍್ಯಾರೂ ಗೆದ್ದ ನಂತರ ನಮ್ಮ ಬಡಾವಣೆಯತ್ತ ತಿರುಗಿಯೂ ನೋಡುತ್ತಿಲ್ಲ. ನಮ್ಮ ಜೀವನ ನರಕ ಯಾತನೆಯಾಗಿದೆ. ”

-ಗೌರಮ್ಮ, ನಿವಾಸಿ

ಆಂದೋಲನ ಡೆಸ್ಕ್

Recent Posts

ಶೂಟೌಟ್ ಪ್ರಕರಣ | ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ : ಸಿಎಂ ಡಿ.ಕೆ.ಶಿವಕುಮಾರ್

ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯ ಬೆಂಗಳೂರು : ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ…

6 hours ago

ಮುಂದಿನ ಆಗಸ್ಟ್‌ ಒಳಗೆ ಮೇಕೆದಾಟುಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಠಿಯ ಮೇಕೆದಾಟು ಯೋಜನೆಗೆ 2027ರ ಸ್ವಾತಂತ್ರ ದಿನಾಚರಣೆ ವೇಳೆಗೆ ಶಂಕುಸ್ಥಾಪನೆ ನೆರವೇರಿಸಿ ಅಣೆಕಟ್ಟು…

11 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ

ಮೈಸೂರು: ಮೂವರು ಬೇಟೆಗಾರರ ಎನ್‌ಕೌಂಟರ್‌ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…

12 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…

12 hours ago

ಕಾಡಿನಲ್ಲಿ ಗುಂಡಿನ ಮೊರೆತ: ಮೂವರು ಸ್ಥಳದಲ್ಲೇ ಸಾವು- ಉದ್ರಿಕ್ತರಿಂದ ಕಚೇರಿ ಪೀಠೋಪಕರಣ ಧ್ವಂಸ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ…

13 hours ago

ಕಾವೇರಿ ಅಭಯಾರಣ್ಯದಲ್ಲಿ ಎನ್‌ಕೌಂಟರ್: ಅಕ್ರಮ ಬೇಟೆ ವೇಳೆ ಗುಂಡಿನ ದಾಳಿ, 3 ಮಂದಿ ಮೃತ್ಯು

ಮಹಾದೇಶ್‌ ಎಂ ಗೌಡ; ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕಾವೇರವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ…

13 hours ago