Andolana originals

ಕಂಬಳಕ್ಕೆ ಸಿದ್ಧವಾದ ಮಹದೇವ ನಗರದ ರಸ್ತೆ!

ಎಸ್.ಎಸ್.ಭಟ್

ನಂಜನಗೂಡಿನ ಮಹದೇವ ನಗರದ ರಸ್ತೆ ಅವ್ಯವಸ್ಥೆ; ನಿವಾಸಿಗಳ ಆಕ್ರೋಶ 

ನಂಜನಗೂಡು: ತಾಲ್ಲೂಕಿನ ಕಾಡಂಚಿನ ಹೆಡಿಯಾಲ ಗ್ರಾಮ ಪಂಚಾಯಿತಿಗೆ ಸೇರಿದ ಮಹದೇವ ನಗರದ ರಸ್ತೆ ಕರಾವಳಿ ಭಾಗದ ಕಂಬಳಕ್ಕೆ ಸಿದ್ಧವಾದಂತಿದೆ.

ಹಿಂದೆ ಶಾಸಕರಾಗಿದ್ದ ಎಂ.ಮಹದೇವು ಇಲ್ಲಿ ರಸ್ತೆ, ಚರಂಡಿ ಸಹಿತವಾದ ಹೊಸ ಬಡಾವಣೆ ನಿರ್ಮಿಸಿ ೮೦ಕ್ಕೂ ಹೆಚ್ಚು ಬಡವರಿಗೆ ಸೂರು ಕಲ್ಪಿಸಿದ್ದರಿಂದ ಇದಕ್ಕೆ ಮಹದೇವ ನಗರ ಎಂದೇ ನಾಮಕರಣ ಮಾಡಲಾಗಿದೆ. ಆದರೆ, ಇಂದು ಬಡಾವಣೆಯ ರಸ್ತೆ ಹದಗೆಟ್ಟು ಮಳೆ ಬಂದರೆ ಚರಂಡಿ ಯಾವುದು, ರಸ್ತೆ ಯಾವುದು ಎಂದು ತಿಳಿಯಲಾರದ ಸ್ಥಿತಿ ನಿರ್ಮಾಣವಾಗಿದೆ.

ಬೇಗೂರು-ಸರಗೂರು ಮುಖ್ಯ ರಸ್ತೆಯಿಂದ ಮಹದೇವ ನಗರವನ್ನು ಹಾದು ನಾಗಣಾಪುರ ಕಾಲೋನಿಗೆ ಸಾಗುವ ಈ ರಸ್ತೆಯ ಸ್ಥಿತಿ ಜನಸಂಚಾರ ಮಾಡುವ ಬದಲಾಗಿ ಕರಾವಳಿ ಜಿಲ್ಲೆಗಳಲ್ಲಿ ಕೋಣಗಳನ್ನು ಓಡಿಸುವ ಪಂದ್ಯಕ್ಕೆ ಸಿದ್ಧಗೊಳಿಸಿದಂತಿರುವುದು ವಿಪರ್ಯಾಸ.

ಇದೇ ರಸ್ತೆಯಲ್ಲಿ ಶಾಲೆಗಳಿಗೆ ನಿತ್ಯ ತೆರಳುವ ಮಕ್ಕಳ ಸ್ಥಿತಿಯಂತೂ ಹೇಳಲು ಅಸಾಧ್ಯವಾಗಿದೆ. ಅವರು ರಸ್ತೆಯಲ್ಲಿ ನಡೆದು ಬರುವಾಗ ಕೆಲವೆಡೆ ಮೊಳಕಾಲಿನವರೆಗೂ ಕೆಸರು ಮೆತ್ತಿಕೊಂಡು ಅವರ ಸಮವಸ್ತ್ರಗಳು ನಿತ್ಯ ಕೊಳಕಾಗುತ್ತಿವೆ. ಅದೇ ಬಟ್ಟೆಯಲ್ಲಿ ಶಾಲೆಗೆ ತೆರಳುವ ಬಗೆ ಹೇಗೆ ಎಂದು ಯೋಚಿಸುವಂತಾಗಿದೆ.

ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಕೊಳಚೆ ನೀರು ಮುಂದಕ್ಕೆ ಹರಿಯದೆ ಅಲ್ಲಿ ಮಡು ಗಟ್ಟಿ ನಿಂತಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

ಕೆಲವೆಡೆ ರಸ್ತೆಗೆ ನುಗ್ಗಿದರೆ ಹಲವೆಡೆ ಮನೆಗಳಿಗೂ ನುಗ್ಗುತ್ತಿದ್ದು ನಿವಾಸಿಗಳು ಪರದಾಡುವಂತಾಗಿದೆ. ಚರಂಡಿ ಸ್ಚಚ್ಛಗೊಳಿಸುವುದಿರಲಿ ಚರಂಡಿಯಲ್ಲೇ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿರುವುದು ಗ್ರಾಪಂ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಪಂಚಾಯಿತಿ ಅಧಿಕಾರಿಗಳು ಈಗಲಾದರೂ ಇತ್ತ ಗಮನ ಹರಿಸಿ ಈ ಬಡಾವಣೆಯಲ್ಲಿನಾಗರಿಕರು ಉಳಿದುಕೊಳ್ಳುವ ವಾತಾವರಣ ನಿರ್ಮಿಸಲಿ ಎಂಬುದೇ ಮಹದೇವ ನಗರದ ನಿವಾಸಿಗಳ ಬಯಕೆಯಾಗಿದೆ.

” ಮಾಜಿ ಸಚಿವ ಎಂ.ಮಹದೇವು ಅವರು ಬಡಾವಣೆ ನಿರ್ಮಿಸಿ ನಮಗೆ ಸೂರು ಕಲ್ಪಿಸಿದ ನಂತರ ಮತ ಕೇಳಲು ಮಾತ್ರ ಬರು ಮುಖಂಡರ‍್ಯಾರೂ ಗೆದ್ದ ನಂತರ ನಮ್ಮ ಬಡಾವಣೆಯತ್ತ ತಿರುಗಿಯೂ ನೋಡುತ್ತಿಲ್ಲ. ನಮ್ಮ ಜೀವನ ನರಕ ಯಾತನೆಯಾಗಿದೆ. ”

-ಗೌರಮ್ಮ, ನಿವಾಸಿ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಲ್ಮನೆಯ ಗಾಂಭೀರ್ಯ ಹೆಚ್ಚಿಸುವಂತೆ ಕಾರ್ಯನಿರ್ವವಹಿಸಲಿ

ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ೫ ಹಾಗೂ ಬಿಜೆಪಿ…

2 hours ago

ಓದುಗರ ಪತ್ರ: ದೇವಿಯ ನೇರ ದರ್ಶನ ಭಾಗ್ಯ ಕಲ್ಪಿಸಿ

ಆಷಾಢ ಶುಕ್ರವಾರಗಳಂದು ( ಜುಲೈ ೧೭, ೨೪, ೩೧, ಆಗಸ್ಟ್ ೭ ರಂದು ಆಷಾಢ ಶುಕ್ರವಾರಗಳು) ಸಾವಿರಾರು ಭಕ್ತರು ಚಾಮುಂಡಿ…

2 hours ago

ಓದುಗರ ಪತ್ರ: ಕಾಲಾವಕಾಶ ನೀಡಬೇಕು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸದ್ಯ,ಪೊಲೀಸ್ ಇಲಾಖೆಯ ಮೂರು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ ಲಿಖಿತ ಪರೀಕ್ಷಾ ದಿನಾಂಕ…

2 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಿಜೆಪಿ ಷಡ್ಯಂತ್ರದಿಂದ ಹಲವು ಪಕ್ಷಗಳು ಒಡಕಿನತ್ತ?

ದೇಶದ ಹಲವು ಕಡೆ ಮತ್ತೆ ಪಕ್ಷಾಂತರದ ಹಾವಳಿ ಶುರುವಾಗಿದೆ. ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕೈವಾಡವಿಲ್ಲದೆ ಈ ಪಕ್ಷಾಂತರ…

2 hours ago

ಶಿವಸ್ವಾಮಿಯವರೊಳಗಿನ ಕನ್ನಡದ ಮೇಷ್ಟ್ರು ನಿವೃತ್ತರಾಗುವುದಿಲ್ಲ

ಸಿ.ಎಂ.ನರಸಿಂಹಮೂರ್ತಿ ಪಾಠ ಪ್ರವಚನಗಳ ಜೊತೆ ವಿದ್ಯಾರ್ಥಿಗಳ ನೋವು ನಲಿವುಗಳಿಗೂ ಸ್ಪಂದಿಸುತ್ತಿದ್ದ ಈ ಗುರುಗಳ ಗುಣ ದೊಡ್ಡದು ಶಿವಸ್ವಾಮಿ ಎಂಬ ಕನ್ನಡದ…

5 hours ago

ಸಸ್ಯಾಹಾರಿಗಳ ದುಃಸ್ವಪ್ನ ಮಕಾವ್ ಮತ್ತು ಹಾಂಗ್‌ಕಾಂಗ್…

ಸಿರಿ ಮೈಸೂರು ಮಾಂಸಾಹಾರಿಗಳಿಗೆ ಮಾತ್ರ ಇಲ್ಲಿ ಸಿಗುವಷ್ಟು ವೈವಿಧ್ಯದ ಆಹಾರಗಳು ಇನ್ನೆಲ್ಲೂ ಸಿಗಲಾರವು. ನೀವೂ ಮಾಂಸಾಹಾರಿ ಆಗಿದ್ದರೆ ಹಾಂಗ್‌ಕಾಂಗ್‌ಗೆ ಬಂದಾಗ…

5 hours ago