Andolana originals

ಕಂಬಳಕ್ಕೆ ಸಿದ್ಧವಾದ ಮಹದೇವ ನಗರದ ರಸ್ತೆ!

ಎಸ್.ಎಸ್.ಭಟ್

ನಂಜನಗೂಡಿನ ಮಹದೇವ ನಗರದ ರಸ್ತೆ ಅವ್ಯವಸ್ಥೆ; ನಿವಾಸಿಗಳ ಆಕ್ರೋಶ 

ನಂಜನಗೂಡು: ತಾಲ್ಲೂಕಿನ ಕಾಡಂಚಿನ ಹೆಡಿಯಾಲ ಗ್ರಾಮ ಪಂಚಾಯಿತಿಗೆ ಸೇರಿದ ಮಹದೇವ ನಗರದ ರಸ್ತೆ ಕರಾವಳಿ ಭಾಗದ ಕಂಬಳಕ್ಕೆ ಸಿದ್ಧವಾದಂತಿದೆ.

ಹಿಂದೆ ಶಾಸಕರಾಗಿದ್ದ ಎಂ.ಮಹದೇವು ಇಲ್ಲಿ ರಸ್ತೆ, ಚರಂಡಿ ಸಹಿತವಾದ ಹೊಸ ಬಡಾವಣೆ ನಿರ್ಮಿಸಿ ೮೦ಕ್ಕೂ ಹೆಚ್ಚು ಬಡವರಿಗೆ ಸೂರು ಕಲ್ಪಿಸಿದ್ದರಿಂದ ಇದಕ್ಕೆ ಮಹದೇವ ನಗರ ಎಂದೇ ನಾಮಕರಣ ಮಾಡಲಾಗಿದೆ. ಆದರೆ, ಇಂದು ಬಡಾವಣೆಯ ರಸ್ತೆ ಹದಗೆಟ್ಟು ಮಳೆ ಬಂದರೆ ಚರಂಡಿ ಯಾವುದು, ರಸ್ತೆ ಯಾವುದು ಎಂದು ತಿಳಿಯಲಾರದ ಸ್ಥಿತಿ ನಿರ್ಮಾಣವಾಗಿದೆ.

ಬೇಗೂರು-ಸರಗೂರು ಮುಖ್ಯ ರಸ್ತೆಯಿಂದ ಮಹದೇವ ನಗರವನ್ನು ಹಾದು ನಾಗಣಾಪುರ ಕಾಲೋನಿಗೆ ಸಾಗುವ ಈ ರಸ್ತೆಯ ಸ್ಥಿತಿ ಜನಸಂಚಾರ ಮಾಡುವ ಬದಲಾಗಿ ಕರಾವಳಿ ಜಿಲ್ಲೆಗಳಲ್ಲಿ ಕೋಣಗಳನ್ನು ಓಡಿಸುವ ಪಂದ್ಯಕ್ಕೆ ಸಿದ್ಧಗೊಳಿಸಿದಂತಿರುವುದು ವಿಪರ್ಯಾಸ.

ಇದೇ ರಸ್ತೆಯಲ್ಲಿ ಶಾಲೆಗಳಿಗೆ ನಿತ್ಯ ತೆರಳುವ ಮಕ್ಕಳ ಸ್ಥಿತಿಯಂತೂ ಹೇಳಲು ಅಸಾಧ್ಯವಾಗಿದೆ. ಅವರು ರಸ್ತೆಯಲ್ಲಿ ನಡೆದು ಬರುವಾಗ ಕೆಲವೆಡೆ ಮೊಳಕಾಲಿನವರೆಗೂ ಕೆಸರು ಮೆತ್ತಿಕೊಂಡು ಅವರ ಸಮವಸ್ತ್ರಗಳು ನಿತ್ಯ ಕೊಳಕಾಗುತ್ತಿವೆ. ಅದೇ ಬಟ್ಟೆಯಲ್ಲಿ ಶಾಲೆಗೆ ತೆರಳುವ ಬಗೆ ಹೇಗೆ ಎಂದು ಯೋಚಿಸುವಂತಾಗಿದೆ.

ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಕೊಳಚೆ ನೀರು ಮುಂದಕ್ಕೆ ಹರಿಯದೆ ಅಲ್ಲಿ ಮಡು ಗಟ್ಟಿ ನಿಂತಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

ಕೆಲವೆಡೆ ರಸ್ತೆಗೆ ನುಗ್ಗಿದರೆ ಹಲವೆಡೆ ಮನೆಗಳಿಗೂ ನುಗ್ಗುತ್ತಿದ್ದು ನಿವಾಸಿಗಳು ಪರದಾಡುವಂತಾಗಿದೆ. ಚರಂಡಿ ಸ್ಚಚ್ಛಗೊಳಿಸುವುದಿರಲಿ ಚರಂಡಿಯಲ್ಲೇ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿರುವುದು ಗ್ರಾಪಂ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಪಂಚಾಯಿತಿ ಅಧಿಕಾರಿಗಳು ಈಗಲಾದರೂ ಇತ್ತ ಗಮನ ಹರಿಸಿ ಈ ಬಡಾವಣೆಯಲ್ಲಿನಾಗರಿಕರು ಉಳಿದುಕೊಳ್ಳುವ ವಾತಾವರಣ ನಿರ್ಮಿಸಲಿ ಎಂಬುದೇ ಮಹದೇವ ನಗರದ ನಿವಾಸಿಗಳ ಬಯಕೆಯಾಗಿದೆ.

” ಮಾಜಿ ಸಚಿವ ಎಂ.ಮಹದೇವು ಅವರು ಬಡಾವಣೆ ನಿರ್ಮಿಸಿ ನಮಗೆ ಸೂರು ಕಲ್ಪಿಸಿದ ನಂತರ ಮತ ಕೇಳಲು ಮಾತ್ರ ಬರು ಮುಖಂಡರ‍್ಯಾರೂ ಗೆದ್ದ ನಂತರ ನಮ್ಮ ಬಡಾವಣೆಯತ್ತ ತಿರುಗಿಯೂ ನೋಡುತ್ತಿಲ್ಲ. ನಮ್ಮ ಜೀವನ ನರಕ ಯಾತನೆಯಾಗಿದೆ. ”

-ಗೌರಮ್ಮ, ನಿವಾಸಿ

ಆಂದೋಲನ ಡೆಸ್ಕ್

Recent Posts

ವಿರೋಧ ಪಕ್ಷ ಇರೋದೆ ಪ್ರತಿಭಟನೆ ಮಾಡೋಕೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು: ವಿರೋಧ ಪಕ್ಷ ಇರೋದೆ ಪ್ರತಿಭಟನೆ ಮಾಡೋಕೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಸಿದ…

2 hours ago

ಹನೂರು| ಉಪಟಳ ನೀಡುತ್ತಿರುವ ಕಾಡಾನೆ ಸೆರೆ ಹಿಡಿಯಿರಿ: ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರ ಮನವಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಕಾಡಾನೆ ಬೆಳೆ ಹಾನಿ ಮಾಡುವುದರ ಜೊತೆಗೆ ಮನುಷ್ಯರ ಜೀವದ ಜೊತೆ…

6 hours ago

ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ: ಟಿ.ನರಸೀಪುರ ಬಂದ್‌ ಮಾಡಲು ಚಿಂತನೆ

ಟಿ.ನರಸೀಪುರ: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೀವ್ರ ತೆರನಾದ…

6 hours ago

ಹನೂರು ಪಟ್ಟಣದಲ್ಲಿ 50 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣ: ಶಾಸಕರಿಂದ ಕಾಮಗಾರಿ ಪರಿಶೀಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ 50 ಹಾಸಿಗೆಗಳ ನೂತನ ಆಸ್ಪತ್ರೆಯು ಸಾರ್ವಜನಿಕರಿಗೆ…

7 hours ago

ಹನೂರು| ಪ್ರತಿನಿತ್ಯ ಒಂಟಿಸಲಗ ದಾಳಿ: ಕಂಗಾಲಾದ ರೈತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ-ಒಡೆಯರಪಾಳ್ಯ ಮಾರ್ಗ ಮಧ್ಯದ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ…

7 hours ago

ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ: ಅಜ್ಜೀಪುರ ಗ್ರಾಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲೂಕಿನ ಕುಡಿಯುವ ನೀರಿನ ದಾಹ ಇಂಗಿಸಲು ಕೆರೆಕಟ್ಟೆಗಳು, ಜನಜಾನುವಾರುಗಳಿಗೆ ಸಮರ್ಪಕ…

7 hours ago