Andolana originals

ಇಂಡಿಗನತ್ತ: ಪುಟ್ಟಮ್ಮನಿಗೆ ಬೇಕಿದೆ ಚಿಕಿತ್ಸೆ; ಆಸ್ಪತ್ರೆಗೆ ಸೇರಿಸುವವರಿಲ್ಲ

ಹನೂರು: ಇವರು ತಾಲ್ಲೂಕಿನ ಇಂಡಿಗನತ್ತ ಗ್ರಾಮದ ಹಿರಿಯ ಜೀವ, ಕಳೆದ ಆರು ತಿಂಗಳಿ ನಿಂದ ಹಾಸಿಗೆ ಹಿಡಿದಿರುವ ಇವರಿಗೆ ಮಲ ಮೂತ್ರಕ್ಕೆ ಹೋಗಲೂ ಆಗುತ್ತಿಲ್ಲ. ಎರಡು ವಾರಗಳ ಹಿಂದಿನವರೆಗೂ ಒಬ್ಬನೇ ಮಗ ತಾಯಿಯ ಸೇವೆ ಮಾಡಿಕೊಂಡಿದ್ದ. ಈಗ ಈಕೆಯನ್ನು ಹಾಸಿಗೆಯಿಂದ ಎಬ್ಬಿಸುವವರಿಲ್ಲ. ಈಗಾಗಿ ಮಲಮೂತ್ರವೂ ಚಾಪೆಯಲ್ಲಿಯೇ ನಡೆಯುತ್ತಿದೆ. ಮಗಳು ರಾಜಮ್ಮರವರಿಗೂ ವಯಸ್ಸಾಗಿರುವುದರಿಂದ ಇವರ ಪರಿಸ್ಥಿತಿಯನ್ನು ಗಮನಿಸುವವರಿಲ್ಲ. ಈ ದಾರುಣ ಸ್ಥಿತಿಗೆ ಕಾರಣವಾಗಿರುವುದು ಲೋಕಸಭಾ ಚುನಾವಣೆ.

ಏ.26ರಂದು ನಡೆದ ಮತದಾನದ ಅವಧಿ ಯಲ್ಲಿ ಇಂಡಿಗನತ್ತ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಊರಿನ 40ಕ್ಕೂ ಹೆಚ್ಚು ಮಂದಿ ಈಗ ಜೈಲಿನಲ್ಲಿದ್ದಾರೆ. ಇನ್ನೂ 200 ಕ್ಕೂ ಹೆಚ್ಚು ಮಂದಿ ತಲೆಮರೆಸಿಕೊಂಡಿದ್ದಾರೆ. ಅವರಲ್ಲಿ ಬಡಪಾಯಿ ಪುಟ್ಟಮ್ಮ ಅವರ ಮಗನೂ ಸೇರಿದ್ದಾರೆ. ಒಂದೆಡೆ ತನ್ನ ಅನಾರೋಗ್ಯ, ಇನ್ನೊಂದೆಡೆ ಮಗನಿಗೆ ಬಂದ ಆಪತ್ತಿನಿಂದ ಅವರು ಕಂಗಾಲಾಗಿದ್ದು, ಕೃಶವಾಗಿರುವ ಹಿರಿಯ ಜೀವವನ್ನು ನೋಡುವಾಗಲೇ ಕರುಳು ಚುರುಕ್ ಎನ್ನುತ್ತದೆ. ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಇಂಡಿಗನತ್ತ ಗ್ರಾಮದ 65 ವರ್ಷದ ಪುಟ್ಟಮರವರಿಗೆ ಕಳೆದ ಎರಡು ವರ್ಷಗಳ ಹಿಂದೆ ಹಸು ತಿವಿದ ಪರಿಣಾಮ ಮೂಳೆ ಮುರಿದು ಗಾಯಗೊಂಡಿದ್ದರು. ಇವರಿಗೆ ಚಿಕಿತ್ಸೆ ನೀಡಿದ್ದರೂ ಕೆಲವು ದಿನಗಳು ಮಾತ್ರ ಚೆನ್ನಾಗಿಯೇ ಇದ್ದರು. ಆದರೆ ಕಳೆದ 6 ತಿಂಗಳಿನಿಂದ ಹಾಸಿಗೆ ಹಿಡಿದಿದ್ದಾರೆ.

ಕಳೆದ ಏಪ್ರಿಲ್ 26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಪುಟ್ಟಮ್ಮನ ಮಗನ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ತಲೆಮರೆಸಿಕೊಂಡಿದ್ದಾರೆ. ಸಹೋದರ ಸ್ಥಳದಲ್ಲಿ ಇಲ್ಲದೇ ಇದ್ದರೂ ಆತನ ಮೇಲೆ ಕೇಸು ದಾಖಲಾಗಿದೆ ಎನ್ನುತ್ತಾರೆ ಅಕ್ಕ ರಾಜಮ್ಮ. ಈಗ ಹಾಸಿಗೆ ಹಿಡಿದಿರುವ ತಾಯಿ ಜೊತೆ ತಮ್ಮನ ನಾಲ್ಕು ಚಿಕ್ಕ ಮಕ್ಕಳನ್ನು ಇವರೇ ನೋಡಿಕೊಳ್ಳಬೇಕಾಗಿದೆ.

ಮತಗಟ್ಟೆ ಧ್ವಂಸ ಪ್ರಕರಣದ ನಂತರ ಗ್ರಾಮಕ್ಕೆ ಜೀಪ್ ಸಂಚಾರ ನಿಲ್ಲಿಸಲಾಗಿದೆ. ಡೋಲಿಯ ಮೂಲಕ ಆಸ್ಪತ್ರೆಗೆ ಒಯ್ಯಬೇಕೆಂದರೇ ಗ್ರಾಮದಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಹೊರತು ಪಡಿಸಿ ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಹಾಸಿಗೆ ಹಿಡಿದಿರುವ ಪುಟ್ಟಮರವರಿಗೆ ಜಿಲ್ಲಾಡಳಿತದ ವತಿಯಿಂದ ಚಿಕಿತ್ಸೆ ಕೊಡಿಸುವಂತೆ ಅಳಿಯ ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.

ಕುಟುಂಬಸ್ಥರ ನೆರವಿನಿಂದ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪುಟ್ಟಮ್ಮರವರನ್ನು ಕರೆತಂದು ಅವರಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಲು ಕ್ರಮ ಕೈಗೊಳ್ಳುತ್ತೇನೆ. -ಡಾ. ಪ್ರಕಾಶ್, ಟಿಎಚ್‌ ಒ, ಹನೂರು ತಾ.

andolana

Recent Posts

ಹಾರ್ಮುಜ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ; ಟ್ರಂಪ್ ಹೇಳಿಕೆಯಿಂದ ವಾಸ್ತವ ಬದಲಾಗಲ್ಲ : ಇರಾನ್ ತಿರುಗೇಟು

ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…

3 hours ago

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

5 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

6 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

8 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

14 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

20 hours ago