ಹನೂರು: ಇವರು ತಾಲ್ಲೂಕಿನ ಇಂಡಿಗನತ್ತ ಗ್ರಾಮದ ಹಿರಿಯ ಜೀವ, ಕಳೆದ ಆರು ತಿಂಗಳಿ ನಿಂದ ಹಾಸಿಗೆ ಹಿಡಿದಿರುವ ಇವರಿಗೆ ಮಲ ಮೂತ್ರಕ್ಕೆ ಹೋಗಲೂ ಆಗುತ್ತಿಲ್ಲ. ಎರಡು ವಾರಗಳ ಹಿಂದಿನವರೆಗೂ ಒಬ್ಬನೇ ಮಗ ತಾಯಿಯ ಸೇವೆ ಮಾಡಿಕೊಂಡಿದ್ದ. ಈಗ ಈಕೆಯನ್ನು ಹಾಸಿಗೆಯಿಂದ ಎಬ್ಬಿಸುವವರಿಲ್ಲ. ಈಗಾಗಿ ಮಲಮೂತ್ರವೂ ಚಾಪೆಯಲ್ಲಿಯೇ ನಡೆಯುತ್ತಿದೆ. ಮಗಳು ರಾಜಮ್ಮರವರಿಗೂ ವಯಸ್ಸಾಗಿರುವುದರಿಂದ ಇವರ ಪರಿಸ್ಥಿತಿಯನ್ನು ಗಮನಿಸುವವರಿಲ್ಲ. ಈ ದಾರುಣ ಸ್ಥಿತಿಗೆ ಕಾರಣವಾಗಿರುವುದು ಲೋಕಸಭಾ ಚುನಾವಣೆ.
ಏ.26ರಂದು ನಡೆದ ಮತದಾನದ ಅವಧಿ ಯಲ್ಲಿ ಇಂಡಿಗನತ್ತ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಊರಿನ 40ಕ್ಕೂ ಹೆಚ್ಚು ಮಂದಿ ಈಗ ಜೈಲಿನಲ್ಲಿದ್ದಾರೆ. ಇನ್ನೂ 200 ಕ್ಕೂ ಹೆಚ್ಚು ಮಂದಿ ತಲೆಮರೆಸಿಕೊಂಡಿದ್ದಾರೆ. ಅವರಲ್ಲಿ ಬಡಪಾಯಿ ಪುಟ್ಟಮ್ಮ ಅವರ ಮಗನೂ ಸೇರಿದ್ದಾರೆ. ಒಂದೆಡೆ ತನ್ನ ಅನಾರೋಗ್ಯ, ಇನ್ನೊಂದೆಡೆ ಮಗನಿಗೆ ಬಂದ ಆಪತ್ತಿನಿಂದ ಅವರು ಕಂಗಾಲಾಗಿದ್ದು, ಕೃಶವಾಗಿರುವ ಹಿರಿಯ ಜೀವವನ್ನು ನೋಡುವಾಗಲೇ ಕರುಳು ಚುರುಕ್ ಎನ್ನುತ್ತದೆ. ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಇಂಡಿಗನತ್ತ ಗ್ರಾಮದ 65 ವರ್ಷದ ಪುಟ್ಟಮರವರಿಗೆ ಕಳೆದ ಎರಡು ವರ್ಷಗಳ ಹಿಂದೆ ಹಸು ತಿವಿದ ಪರಿಣಾಮ ಮೂಳೆ ಮುರಿದು ಗಾಯಗೊಂಡಿದ್ದರು. ಇವರಿಗೆ ಚಿಕಿತ್ಸೆ ನೀಡಿದ್ದರೂ ಕೆಲವು ದಿನಗಳು ಮಾತ್ರ ಚೆನ್ನಾಗಿಯೇ ಇದ್ದರು. ಆದರೆ ಕಳೆದ 6 ತಿಂಗಳಿನಿಂದ ಹಾಸಿಗೆ ಹಿಡಿದಿದ್ದಾರೆ.
ಕಳೆದ ಏಪ್ರಿಲ್ 26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಪುಟ್ಟಮ್ಮನ ಮಗನ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ತಲೆಮರೆಸಿಕೊಂಡಿದ್ದಾರೆ. ಸಹೋದರ ಸ್ಥಳದಲ್ಲಿ ಇಲ್ಲದೇ ಇದ್ದರೂ ಆತನ ಮೇಲೆ ಕೇಸು ದಾಖಲಾಗಿದೆ ಎನ್ನುತ್ತಾರೆ ಅಕ್ಕ ರಾಜಮ್ಮ. ಈಗ ಹಾಸಿಗೆ ಹಿಡಿದಿರುವ ತಾಯಿ ಜೊತೆ ತಮ್ಮನ ನಾಲ್ಕು ಚಿಕ್ಕ ಮಕ್ಕಳನ್ನು ಇವರೇ ನೋಡಿಕೊಳ್ಳಬೇಕಾಗಿದೆ.
ಮತಗಟ್ಟೆ ಧ್ವಂಸ ಪ್ರಕರಣದ ನಂತರ ಗ್ರಾಮಕ್ಕೆ ಜೀಪ್ ಸಂಚಾರ ನಿಲ್ಲಿಸಲಾಗಿದೆ. ಡೋಲಿಯ ಮೂಲಕ ಆಸ್ಪತ್ರೆಗೆ ಒಯ್ಯಬೇಕೆಂದರೇ ಗ್ರಾಮದಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಹೊರತು ಪಡಿಸಿ ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಹಾಸಿಗೆ ಹಿಡಿದಿರುವ ಪುಟ್ಟಮರವರಿಗೆ ಜಿಲ್ಲಾಡಳಿತದ ವತಿಯಿಂದ ಚಿಕಿತ್ಸೆ ಕೊಡಿಸುವಂತೆ ಅಳಿಯ ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.
ಕುಟುಂಬಸ್ಥರ ನೆರವಿನಿಂದ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪುಟ್ಟಮ್ಮರವರನ್ನು ಕರೆತಂದು ಅವರಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಲು ಕ್ರಮ ಕೈಗೊಳ್ಳುತ್ತೇನೆ. -ಡಾ. ಪ್ರಕಾಶ್, ಟಿಎಚ್ ಒ, ಹನೂರು ತಾ.
ಚೆನ್ನೈ : ತಮಿಳುನಾಡು ರಾಜಕಾರಣದಲ್ಲಿ ತಮ್ಮದೇ ಆದ ಕ್ರೇಜ್ ಸೃಷ್ಟಿಸಿಕೊಂಡಿರುವ ಟಿವಿಕೆ ಪಕ್ಷದ ಅಧ್ಯಕ್ಷ, ನಟ ʼದಳಪತಿʼ ವಿಜಯ್ ಅವರನ್ನು…
ಮೈಸೂರು : ಜನರು ವಿಪರೀತ ಸೆಕೆಯಿಂದಾಗಿ ತತ್ತರಿಸಿ ಹೋಗಿರುವ ನಡುವೆ ಕೆಲ ಜಿಲ್ಲೆಗಳಲ್ಲಿ ಇಂದು(ಮಾರ್ಚ್.15) ಸಂಜೆ ಅಕಾಲಿಕವಾಗಿ ಮಳೆ ಸುರಿದು…
ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲಾಗಿದ್ದು, ಬಸರಾಳು ಭಾಗದ ಹೇಮಾವತಿ ನಾಲೆ ಅಭಿವೃದ್ಧಿಗೆ 350…
ಮಂಡ್ಯ : ನಾನು ಯಾವಾಗ ಮಾತನಾಡಿದರೂ ವಿವಾದ ಆಗುತ್ತೆ. ನನ್ನ ಮಾತಿನಿಂದ ನೋವಾಗಿದ್ದರೆ, ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಕ್ಷಮೆ ಯಾಚಿಸುತ್ತೇನೆ…
ಎಚ್.ಡಿ.ಕೋಟೆ : ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಹೆರಿಗೆ…
ಚಿತ್ರದುರ್ಗ : ಚಳ್ಳಕೆರೆ ಸಮೀಪದ ಹೆಗ್ಗೆರೆ ಗೇಟ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇಬ್ಬರು…