Andolana originals

ಇಂಡಿಗನತ್ತ: ಪುಟ್ಟಮ್ಮನಿಗೆ ಬೇಕಿದೆ ಚಿಕಿತ್ಸೆ; ಆಸ್ಪತ್ರೆಗೆ ಸೇರಿಸುವವರಿಲ್ಲ

ಹನೂರು: ಇವರು ತಾಲ್ಲೂಕಿನ ಇಂಡಿಗನತ್ತ ಗ್ರಾಮದ ಹಿರಿಯ ಜೀವ, ಕಳೆದ ಆರು ತಿಂಗಳಿ ನಿಂದ ಹಾಸಿಗೆ ಹಿಡಿದಿರುವ ಇವರಿಗೆ ಮಲ ಮೂತ್ರಕ್ಕೆ ಹೋಗಲೂ ಆಗುತ್ತಿಲ್ಲ. ಎರಡು ವಾರಗಳ ಹಿಂದಿನವರೆಗೂ ಒಬ್ಬನೇ ಮಗ ತಾಯಿಯ ಸೇವೆ ಮಾಡಿಕೊಂಡಿದ್ದ. ಈಗ ಈಕೆಯನ್ನು ಹಾಸಿಗೆಯಿಂದ ಎಬ್ಬಿಸುವವರಿಲ್ಲ. ಈಗಾಗಿ ಮಲಮೂತ್ರವೂ ಚಾಪೆಯಲ್ಲಿಯೇ ನಡೆಯುತ್ತಿದೆ. ಮಗಳು ರಾಜಮ್ಮರವರಿಗೂ ವಯಸ್ಸಾಗಿರುವುದರಿಂದ ಇವರ ಪರಿಸ್ಥಿತಿಯನ್ನು ಗಮನಿಸುವವರಿಲ್ಲ. ಈ ದಾರುಣ ಸ್ಥಿತಿಗೆ ಕಾರಣವಾಗಿರುವುದು ಲೋಕಸಭಾ ಚುನಾವಣೆ.

ಏ.26ರಂದು ನಡೆದ ಮತದಾನದ ಅವಧಿ ಯಲ್ಲಿ ಇಂಡಿಗನತ್ತ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಊರಿನ 40ಕ್ಕೂ ಹೆಚ್ಚು ಮಂದಿ ಈಗ ಜೈಲಿನಲ್ಲಿದ್ದಾರೆ. ಇನ್ನೂ 200 ಕ್ಕೂ ಹೆಚ್ಚು ಮಂದಿ ತಲೆಮರೆಸಿಕೊಂಡಿದ್ದಾರೆ. ಅವರಲ್ಲಿ ಬಡಪಾಯಿ ಪುಟ್ಟಮ್ಮ ಅವರ ಮಗನೂ ಸೇರಿದ್ದಾರೆ. ಒಂದೆಡೆ ತನ್ನ ಅನಾರೋಗ್ಯ, ಇನ್ನೊಂದೆಡೆ ಮಗನಿಗೆ ಬಂದ ಆಪತ್ತಿನಿಂದ ಅವರು ಕಂಗಾಲಾಗಿದ್ದು, ಕೃಶವಾಗಿರುವ ಹಿರಿಯ ಜೀವವನ್ನು ನೋಡುವಾಗಲೇ ಕರುಳು ಚುರುಕ್ ಎನ್ನುತ್ತದೆ. ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಇಂಡಿಗನತ್ತ ಗ್ರಾಮದ 65 ವರ್ಷದ ಪುಟ್ಟಮರವರಿಗೆ ಕಳೆದ ಎರಡು ವರ್ಷಗಳ ಹಿಂದೆ ಹಸು ತಿವಿದ ಪರಿಣಾಮ ಮೂಳೆ ಮುರಿದು ಗಾಯಗೊಂಡಿದ್ದರು. ಇವರಿಗೆ ಚಿಕಿತ್ಸೆ ನೀಡಿದ್ದರೂ ಕೆಲವು ದಿನಗಳು ಮಾತ್ರ ಚೆನ್ನಾಗಿಯೇ ಇದ್ದರು. ಆದರೆ ಕಳೆದ 6 ತಿಂಗಳಿನಿಂದ ಹಾಸಿಗೆ ಹಿಡಿದಿದ್ದಾರೆ.

ಕಳೆದ ಏಪ್ರಿಲ್ 26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಪುಟ್ಟಮ್ಮನ ಮಗನ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ತಲೆಮರೆಸಿಕೊಂಡಿದ್ದಾರೆ. ಸಹೋದರ ಸ್ಥಳದಲ್ಲಿ ಇಲ್ಲದೇ ಇದ್ದರೂ ಆತನ ಮೇಲೆ ಕೇಸು ದಾಖಲಾಗಿದೆ ಎನ್ನುತ್ತಾರೆ ಅಕ್ಕ ರಾಜಮ್ಮ. ಈಗ ಹಾಸಿಗೆ ಹಿಡಿದಿರುವ ತಾಯಿ ಜೊತೆ ತಮ್ಮನ ನಾಲ್ಕು ಚಿಕ್ಕ ಮಕ್ಕಳನ್ನು ಇವರೇ ನೋಡಿಕೊಳ್ಳಬೇಕಾಗಿದೆ.

ಮತಗಟ್ಟೆ ಧ್ವಂಸ ಪ್ರಕರಣದ ನಂತರ ಗ್ರಾಮಕ್ಕೆ ಜೀಪ್ ಸಂಚಾರ ನಿಲ್ಲಿಸಲಾಗಿದೆ. ಡೋಲಿಯ ಮೂಲಕ ಆಸ್ಪತ್ರೆಗೆ ಒಯ್ಯಬೇಕೆಂದರೇ ಗ್ರಾಮದಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಹೊರತು ಪಡಿಸಿ ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಹಾಸಿಗೆ ಹಿಡಿದಿರುವ ಪುಟ್ಟಮರವರಿಗೆ ಜಿಲ್ಲಾಡಳಿತದ ವತಿಯಿಂದ ಚಿಕಿತ್ಸೆ ಕೊಡಿಸುವಂತೆ ಅಳಿಯ ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.

ಕುಟುಂಬಸ್ಥರ ನೆರವಿನಿಂದ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪುಟ್ಟಮ್ಮರವರನ್ನು ಕರೆತಂದು ಅವರಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಲು ಕ್ರಮ ಕೈಗೊಳ್ಳುತ್ತೇನೆ. -ಡಾ. ಪ್ರಕಾಶ್, ಟಿಎಚ್‌ ಒ, ಹನೂರು ತಾ.

andolana

Recent Posts

ಸರಗೂರು ಸಾರಿಗೆ ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ

ದಾಸೇಗೌಡ  ಓವರ್‌ಹೆಡ್ ಟ್ಯಾಂಕ್‌ಗಳ ನಡುವೆ ತಪ್ಪಾದ ಸಂಪರ್ಕ; ಪೋಲಾಗುತ್ತಿರುವ ನೀರು; ಸಾರ್ವಜನಿಕರ ಆಕ್ರೋ ಸರಗೂರು : ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್…

2 hours ago

19 ಬೇಚರಾಕ್ ಹಳ್ಳಿಗಳು ಇನ್ಮುಂದೆ ಕಂದಾಯ ಗ್ರಾಮಗಳು

ಹುಣಸೂರು ತಾಲ್ಲೂಕಿನ ಜನರ ನಾಲ್ಕು ದಶಕಗಳ ಕನಸು ನನಸು; ಗ್ರಾಮಸ್ಥರು ಫುಲ್ ಖು ಹುಣಸೂರು: ತಾಲ್ಲೂಕಿನ ೧೯ ಬೇಚರಾಕ್ ಗ್ರಾಮಗಳನ್ನು…

2 hours ago

ಹೊಸ ವರ್ಷಕ್ಕೆ ಇಂದಿರಾ ಕಿಟ್

ಗಿರೀಶ್ ಹುಣಸೂರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪ್ರಯೋಜನ ಮೈಸೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸ ವರ್ಷಾರಂಭದ ಜನವರಿ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ…

2 hours ago

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…

13 hours ago

ಗೃಹ ಬಳಕೆ, ಕೈಗಾರಿಕೆಗೆ ದಿನದ 24 ಗಂಟೆಯೂ ವಿದ್ಯುತ್

ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…

13 hours ago