Andolana originals

ಗ್ರಂಥಾಲಯ ಸ್ಥಾಪನೆ; ಶತಕ ಸಾಧನೆ

ಸರ್ಕಾರಿ ಶಾಲೆಯಲ್ಲಿ 100ನೇ ಲೈಬ್ರರಿ ಸ್ಥಾಪಿಸಿದ ಕಲಿಸು ಫೌಂಡೇಶನ್

ಮೈಸೂರು: ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌ಗಳಿರುವುದನ್ನೇ ಡಿಜಿಟಲ್ ಲೈಬ್ರರಿ ಎಂದು ಹೇಳುವುದಿತ್ತು. ಆದರೆ ಕಲಿಸು ಫೌಂಡೇಶನ್ ಸಂಸ್ಥೆ ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಆರಂಭಿಸಿರುವ ಮೊದಲ ಹಾಗೂ ಸಂಸ್ಥೆಯ 100ನೇ ಗ್ರಂಥಾ ಲಯ ಆಡಿಯೋ ಹಾಗೂ ವಿಷು ಯಲ್ ಸೌಲಭ್ಯಗಳನ್ನು ಹೊಂದಿರುವ ಮೊದಲ ಡಿಜಿಟಲ್ ಲೈಬ್ರರಿ ಆಗಿರುವುದು ವಿಶೇಷವಾಗಿದೆ.

ಈ ಸರ್ಕಾರಿ ಶಾಲೆಯ ಲೈಬ್ರರಿಯಲ್ಲಿ 3,500ಕ್ಕೂ ಹೆಚ್ಚು ಪುಸ್ತಕಗಳಿವೆ. ಓದುವ ಹವ್ಯಾಸ, ಜ್ಞಾನಾರ್ಜನೆಗಾಗಿ ಪುಸ್ತಕಗಳು ಹೆಚ್ಚು ಸಹಕಾರಿಯಾಗಿವೆ.

‌ಇದರ ಜೊತೆಗೆ 60 ಅಂಗುಲದ ಟಿವಿ ಪರದೆ ಮೂಲಕ ವಿದ್ಯಾರ್ಥಿಗಳಿಗೆ ಕಥೆಗಳನ್ನು ಹೇಳಲಾಗುತ್ತದೆ.

ಸದ್ಯಕ್ಕೆ 5ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ 30 ಕಥೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ ನೀತಿ ಕಥೆಗಳು, ಮೈಸೂರಿನ ಸಣ್ಣ ಕಥೆಗಳು, ಇತಿಹಾಸದ ಕಥೆಗಳು ಹಾಗೂ ಪಂಚತಂತ್ರ ಕಥೆಗಳು ಇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಆಡಿಯೋ ವಿಷುಯಲ್ ಕಾಠ್ಯಕ್ರಮಗಳನ್ನು ಅಳವಡಿಸುತ್ತೇವೆ ಎಂದು ಕಲಿಸು ಫೌಂಡೇಶನ್‌ನ ನಿಖಿಲೇಶ್ ಪತ್ರಿಕೆಗೆ ತಿಳಿಸಿದರು. ಈ ಗ್ರಂಥಾಲಯ ಅಂದಾಜು 850 ಚದರ ಅಡಿಗಳಿದ್ದು, 45 ಮಕ್ಕಳು ಕುಳಿತು ಓದಬಹುದಾಗಿದೆ. ಸಧ್ಯಕ್ಕೆ ಸಾಹಿತ್ಯ, ವಿಜ್ಞಾನ, ಇತಿಹಾಸ, ಜೀವಶಾಸ್ತ್ರ, ಗಣಿತ, ಆತ್ಮಚರಿತ್ರೆ ಹಾಗೂ ಪೌರಾಣಿಕ ಕಥೆಗಳಿರುವ ಪುಸ್ತಕಗಳು ಇವೆ. ಈ ಗ್ರಂಥಾ;ಯವನ್ನು 4.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ರಾಜ್ಯ ಸರ್ಕಾರ ಹೊಸದಾಗಿ ‘ಪುಸ್ತಕ ಓದು’ ಕಾರ್ಯಕ್ರಮ ವನ್ನು ರೂಪಿಸಿದೆ ಆದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗ್ರಂಥಾಲಯಗಳ ಕೊರತೆ ಇದೆ. ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಓದಲು ಆಸಕ್ತಿ ಮೂಡಿಸುವ ವಾತಾವರಣ ಇಲ್ಲ. ಮೊದಲು ಅಂತಹ ವಾತಾವರಣ ಸೃಷ್ಟಿಸಬೇಕು. ಈ ಕೆಲಸಕ್ಕೆ ಕಲಿಸು ಫೌಂಡೇಶನ್ ಮುಂದಾಗಿದೆ. ಇದು ನಮ್ಮ ಸಂಸ್ಥೆಯ ಮೊದಲ ಡಿಜಿಟಲ್ ಲೈಬ್ರರಿ ಆಗಿದೆ.

ಎಂ.ಎಂ.ನಿಖಿಲೇಶ್
ಸಂಸ್ಥಾಪಕರು, ಸಿಇಓ, ಕಲಿಸು ಫೌಂಡೇಶನ್

ಆಂದೋಲನ ಡೆಸ್ಕ್

Recent Posts

‘ಶಕ್ತಿ’ ಸ್ಕೀಮ್‌ನಿಂದ ಸಾರಿಗೆ ನಿಗಮಗಳಿಗೆ ನಿಶ್ಶಕ್ತಿ!

ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…

2 mins ago

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…

5 hours ago

ಮರುಳಯ್ಯನ ಕೊಪ್ಪಲು ಕೊಂತನಾಯಕರಿಗೆ ಬೇಡರ ಕಣ್ಣಪ್ಪನೇ ದೇವರು

ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…

5 hours ago

ಮೈಸೂರಲ್ಲಿ ಎಸ್.ಎಲ್. ಭೈರಪ್ಪನವರ ಸ್ಮಾರಕ ಹೇಗಿರಬೇಕು?

ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…

5 hours ago

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

14 hours ago