Andolana originals

ಗ್ರಂಥಾಲಯ ಸ್ಥಾಪನೆ; ಶತಕ ಸಾಧನೆ

ಸರ್ಕಾರಿ ಶಾಲೆಯಲ್ಲಿ 100ನೇ ಲೈಬ್ರರಿ ಸ್ಥಾಪಿಸಿದ ಕಲಿಸು ಫೌಂಡೇಶನ್

ಮೈಸೂರು: ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌ಗಳಿರುವುದನ್ನೇ ಡಿಜಿಟಲ್ ಲೈಬ್ರರಿ ಎಂದು ಹೇಳುವುದಿತ್ತು. ಆದರೆ ಕಲಿಸು ಫೌಂಡೇಶನ್ ಸಂಸ್ಥೆ ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಆರಂಭಿಸಿರುವ ಮೊದಲ ಹಾಗೂ ಸಂಸ್ಥೆಯ 100ನೇ ಗ್ರಂಥಾ ಲಯ ಆಡಿಯೋ ಹಾಗೂ ವಿಷು ಯಲ್ ಸೌಲಭ್ಯಗಳನ್ನು ಹೊಂದಿರುವ ಮೊದಲ ಡಿಜಿಟಲ್ ಲೈಬ್ರರಿ ಆಗಿರುವುದು ವಿಶೇಷವಾಗಿದೆ.

ಈ ಸರ್ಕಾರಿ ಶಾಲೆಯ ಲೈಬ್ರರಿಯಲ್ಲಿ 3,500ಕ್ಕೂ ಹೆಚ್ಚು ಪುಸ್ತಕಗಳಿವೆ. ಓದುವ ಹವ್ಯಾಸ, ಜ್ಞಾನಾರ್ಜನೆಗಾಗಿ ಪುಸ್ತಕಗಳು ಹೆಚ್ಚು ಸಹಕಾರಿಯಾಗಿವೆ.

‌ಇದರ ಜೊತೆಗೆ 60 ಅಂಗುಲದ ಟಿವಿ ಪರದೆ ಮೂಲಕ ವಿದ್ಯಾರ್ಥಿಗಳಿಗೆ ಕಥೆಗಳನ್ನು ಹೇಳಲಾಗುತ್ತದೆ.

ಸದ್ಯಕ್ಕೆ 5ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ 30 ಕಥೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ ನೀತಿ ಕಥೆಗಳು, ಮೈಸೂರಿನ ಸಣ್ಣ ಕಥೆಗಳು, ಇತಿಹಾಸದ ಕಥೆಗಳು ಹಾಗೂ ಪಂಚತಂತ್ರ ಕಥೆಗಳು ಇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಆಡಿಯೋ ವಿಷುಯಲ್ ಕಾಠ್ಯಕ್ರಮಗಳನ್ನು ಅಳವಡಿಸುತ್ತೇವೆ ಎಂದು ಕಲಿಸು ಫೌಂಡೇಶನ್‌ನ ನಿಖಿಲೇಶ್ ಪತ್ರಿಕೆಗೆ ತಿಳಿಸಿದರು. ಈ ಗ್ರಂಥಾಲಯ ಅಂದಾಜು 850 ಚದರ ಅಡಿಗಳಿದ್ದು, 45 ಮಕ್ಕಳು ಕುಳಿತು ಓದಬಹುದಾಗಿದೆ. ಸಧ್ಯಕ್ಕೆ ಸಾಹಿತ್ಯ, ವಿಜ್ಞಾನ, ಇತಿಹಾಸ, ಜೀವಶಾಸ್ತ್ರ, ಗಣಿತ, ಆತ್ಮಚರಿತ್ರೆ ಹಾಗೂ ಪೌರಾಣಿಕ ಕಥೆಗಳಿರುವ ಪುಸ್ತಕಗಳು ಇವೆ. ಈ ಗ್ರಂಥಾ;ಯವನ್ನು 4.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ರಾಜ್ಯ ಸರ್ಕಾರ ಹೊಸದಾಗಿ ‘ಪುಸ್ತಕ ಓದು’ ಕಾರ್ಯಕ್ರಮ ವನ್ನು ರೂಪಿಸಿದೆ ಆದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗ್ರಂಥಾಲಯಗಳ ಕೊರತೆ ಇದೆ. ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಓದಲು ಆಸಕ್ತಿ ಮೂಡಿಸುವ ವಾತಾವರಣ ಇಲ್ಲ. ಮೊದಲು ಅಂತಹ ವಾತಾವರಣ ಸೃಷ್ಟಿಸಬೇಕು. ಈ ಕೆಲಸಕ್ಕೆ ಕಲಿಸು ಫೌಂಡೇಶನ್ ಮುಂದಾಗಿದೆ. ಇದು ನಮ್ಮ ಸಂಸ್ಥೆಯ ಮೊದಲ ಡಿಜಿಟಲ್ ಲೈಬ್ರರಿ ಆಗಿದೆ.

ಎಂ.ಎಂ.ನಿಖಿಲೇಶ್
ಸಂಸ್ಥಾಪಕರು, ಸಿಇಓ, ಕಲಿಸು ಫೌಂಡೇಶನ್

ಆಂದೋಲನ ಡೆಸ್ಕ್

Recent Posts

2ನೇ ಮದುವೆಗೆ ಸಜ್ಜಾಗಿದ್ದ ವರ : ಕಲ್ಯಾಣ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿದ ಮೊದಲ ಹೆಂಡತಿ!

ತುಮಕೂರು : ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದರೂ 2ನೇಯ ಮದುವೆಗೆ ತಯಾರಿ ನಡೆಸಿ ಕಲ್ಯಾಣ ಮಂಟಪದಲ್ಲಿ ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕು…

5 hours ago

ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ತಂಬಾಕು ಪ್ರಚಾರ : ತೆರವಿಗೆ ಫೆ.15 ಗಡವು

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಮೇಲಿನ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ…

5 hours ago

ಕೇಂದ್ರ ಸೂಚನೆ ಮೇರೆಗೆ ದರ ಏರಿಕೆ ಕೈಬಿಟ್ಟ ನಮ್ಮ ಮೆಟ್ರೋ

ಬೆಂಗಳೂರು : ಮೆಟ್ರೋ ದರ ಏರಿಕೆಗೆ ಬಿಎಂಆರ್‌ಸಿಎಲ್ ಬ್ರೇಕ್ ಹಾಕಿದೆ. ಸೋಮವಾರದಿಂದ ಶೇ.5ರಷ್ಟು ದರ ಏರಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ಆದರೆ…

6 hours ago

ಮೈಸೂರು | ಕೇಂದ್ರ ಕಾರಾಗೃಹಕ್ಕೆ ಭೇಟಿ, ಪರಿಶೀಲನೆ ನಡೆಸಿದ ಅಲೋಕ್‌ಕುಮಾರ್‌

ಮೈಸೂರು : ಸಜಾ ಬಂಧಿಗಳು ಕಾರಾಗೃಹದಿಂದ ಬಿಡುಗಡೆಯಾಗುವುದರೊಳಗೆ ಉತ್ತಮ ನಡತೆಯನ್ನು ಹೊಂದಿ ಹೊರಗೆ ಹೋದ ಬಳಿಕ ಸಮಾಜಮುಖಿ ಜೀವನ ಆರಂಭಿಸಬೇಕು…

6 hours ago

2028ಕ್ಕೆ ಮೈತ್ರಿ ಸರ್ಕಾರ | ಎಚ್‌ಡಿಕೆ ಸಿಎಂ ಎಂದ ಜಿ.ಟಿ.ಹರೀಶ್‌ಗೌಡ

ಹುಣಸೂರು : 2028ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ…

6 hours ago

ಪ್ರೀತಿ ಹೆಸರಿನಲ್ಲಿ ಬೆದರಿಕೆ : ತಾಯಿ-ಮಗಳ ಆತ್ಮಹತ್ಯೆ

ಮಳವಳ್ಳಿ : ತಾಯಿ ಮತ್ತು ಮಗಳು ಇಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ದಳವಾಯಿ ಕೋಡಿಹಳ್ಳಿ…

6 hours ago