Andolana originals

ʼದೀಪಾವಳಿ ಸಂಭ್ರಮ ಪರಿಸರಕ್ಕೆ ಮಾರಕ ಆಗದಿರಲಿ’

• ಸಂದರ್ಶನ: ಬಾ.ನಾ.ಸುಬ್ರಹ್ಮಣ್ಯ
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ತಮ್ಮ ಚೆಲುವು, ಮುಗ್ಧತೆ ಮತ್ತು ಅಭಿನಯದಿಂದ ಎಲ್ಲರಿಗೂ ಇಷ್ಟವಾದ ನಾಯಕನಟಿ ರುಕ್ಕಿಣಿ ವಸಂತ್, ಅಲ್ಪ ಕಾಲದಲ್ಲೇ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ. ‘ಬರ’ ಮತ್ತು ಭೈರತಿ ರಣಗಲ್ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಈ ಸಂದರ್ಭದಲ್ಲಿ “ಆಂದೋಲನ’ದ ಜೊತೆಗೆ ಮಾತ್ರನಾಡಿರುವ ರುಕ್ಕಿಣಿ, ದೀಪಾವಳಿಯ ನೆನಪುಗಳು, ಈ ಬಾರಿಯ ದೀಪಾವಳಿ ಆಚರಣೆ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ದೀಪಾವಳಿ ಎಂದರೆ ನಿಮ್ಮ ಪಾಲಿಗೆ ಏನು?
ರುಕ್ಕಿಣಿ ವಸಂತ್‌: ಸಂಭ್ರಮ. ಎಲ್ಲರೂ ಒಟ್ಟಿಗೆ ಸೇರಲು ಸಿಗುವ ಅವಕಾಶ, ಖುಷಿ,

• ಆಂದೋಲನ: ದೀಪಾವಳಿ ಹಬ್ಬದ ನಿಮ್ಮ ಬಾಲ್ಯದ ನೆನಪು ಗಳೇನು? ಹೇಗೆ ಆಚರಿಸುತ್ತಿದ್ದಿರಿ?
ರುಕ್ಕಿಣಿ ವಸಂತ್‌: ನನಗೆ ದೀಪಾವಳಿ ಕುರಿತಂತೆ ಜಾಸ್ತಿ ನೆನಪುಗಳಿಲ್ಲ. ಆ ಅನುಭವದ ನೆನಪು ಮಾತ್ರ. ವಿದೇಶದಲ್ಲಿರುವ ನಮ್ಮ ಸಂಬಂಧಿಕರೆಲ್ಲ ನಮ್ಮ ಅಜ್ಜಿ ಮನೆಗೆ ಬರುತ್ತಿದ್ದರು. ಬೆಂಗಳೂರಿನಲ್ಲಿದ್ದಾಗ ನಾವು ಅಜ್ಜಿ ಮನೆಯಲ್ಲೇ ಇದ್ದೆವು. ಉಳಿದಂತೆ ಸೇನೆಯಲ್ಲಿದ್ದ ಅಪ್ಪನ ಜೊತೆಯಲ್ಲಿ ಬೇರೆ ಊರುಗಳಲ್ಲಿ ಇರುತ್ತಿದ್ದೆವು.

ಉತ್ತರ ಭಾರತದಲ್ಲಿ, ಬೇರೆ ಬೇರೆ ಕಡೆ… ದೀಪಾವಳಿ ವೇಳೆ ನಾವೆಲ್ಲ ಸೇರಿಕೊಂಡು ಅಜ್ಜಿ ಮನೆಗೆ ಹೋಗ್ತಾ ಇದ್ವಿ. ಅಲ್ಲಿ ಹಬ್ಬದೂಟ, ಹೊಸಬಟ್ಟೆ… ಕೆಲವೊಬ್ರು ಪಟಾಕಿ ಹೊಡೀತಾ ಇದ್ರು… ನನಗೆ ಆ ಶಬ್ದಇಷ್ಟ ಆಗ್ತಿರಲಿಲ್ಲ… ನಾನು ಬರೀ ಸ್ಟಾರ್ಕ್ಟರ್ ಹಿಡ್ಕೊಂಡು ಓಡಾಡುತ್ತಿದ್ದೆ ಎಲ್ಲಾ ಕಡೆ, ನನಗೆ ಹೊಸ ಬಟ್ಟೆ, ಹಬ್ಬದೂಟ, ಎಲ್ಲ ಕಡೆ ದೀಪ ಹಚ್ಚೇದು ಆ ತರಹದ ನೆನಪುಗಳಿರೋದು.

ಕುಟುಂಬದ ಎಲ್ಲರೂ ಒಟ್ಟಿಗೆ ಸೇರುವ ಖುಷಿ ಮಾತ್ರ ಮರೆಯಲಾಗದ್ದು. ಕುಟುಂಬದ ಎಲ್ಲರೂ ಒಟ್ಟಿಗೆ ಸೇರುವ ಖುಷಿ ಮಾತ್ರ ಮರೆಯಲಾಗದ್ದು. ನಾವೆಲ್ಲ ಅಜ್ಜಿ ಮನೆಯಲ್ಲಿ ಸೇರ್ಕೊಂಡು, ಇಲ್ಲಿದ್ದರೆ ಆಂಟಿ, ಅಂಕಲ್ ಮನೇಲಿ ಸೇರ್ಕೊಂಡು ಒಟ್ಟಿಗೆ ಆಚರಿಸುತ್ತಿದ್ಬಿ. ಬಹಳ ದಿನಗಳ ನಂತರ ವರ್ಷದಲ್ಲೊಮ್ಮೆ ಕುಟುಂಬದವರೆಲ್ಲರ ಜೊತೆಗೆ ಸೇರುವ ಅವಕಾಶ; ಕಸಿನ್ಸ್ ಎಲ್ಲ ಒಟ್ಟಿಗೆ ಸೇರ್ಕೊಂಡು, ಓಡಾಡಿಕೊಂಡು ಹಬ್ಬ ಆಚರಿಸಿದ ಖುಷಿಯ ಅನುಭವ.

ಆಂದೋಲನ: ಈ ಬಾರಿ ದೀಪಾವಳಿ ಹೇಗೆ ಆಚರಿಸುತ್ತೀರಿ?
ರುಕ್ಕಿಣಿ ವಸಂತ್: ಈ ದೀಪಾವಳಿ ಸ್ವಲ್ಪ ಬೇರೆ ಥರ ಇರುತ್ತೆ. ಯಾಕೆಂದ್ರೆ ಬಘೀರ ಹಾಗೂ ಭೈರತಿ ರಣಗಲ್ ಈ ಎರಡು ಚಿತ್ರಗಳು ರಿಲೀಸ್ ಆಗ್ತಿವೆ. ಹಾಗಾಗಿ ಹಿಂದಿನಂತೆ ಆಚರಿಸಲಿಕ್ಕೆ ಸಮಯಸಿಗುತ್ತಿಲ್ಲ. ನಮ್ಮ ಕುಟುಂಬದವರು ಈಗಾಗಲೇ ಇಂಡಿಯಾಕ್ಕೆ ಬಂದಿದ್ದಾರೆ. ಅವರ ಜೊತೆ ಕಾಲಕಳೆಯೋಕೆ ತುಂಬಾ ಆಸೆ. ಆದರೆ ಆಗುತ್ತಿಲ್ಲ. ಚಿತ್ರಗಳ ಪ್ರೊಮೋಶನ್‌ ಗಾಗಿ ಎಲ್ಲ ಕಡೆ ಓಡಾಡ್ತಾ ಇದ್ದೀನಿ; ಹಾಗೂ ಕೆಲವೊಂದು ಚಿತ್ರಗಳ ಚಿತ್ರೀಕರಣ ಬೇರೆ ನಡೆಯುತ್ತಿದೆ ಮಧ್ಯದಲ್ಲಿ ಹಾಗಾಗಿ ಈ ಸಲ ಪ್ರೊಫೆಶನಲ್ ದೀಪಾವಳಿ ಆಗಿಹೋಗಿದೆ. ತುಂಬಾ ಖುಷಿಯ ವಿಷಯ. ಯಾಕೆಂದರೆ ಅದು ಒಂದು ಬೇರೆಯೇ ರೀತಿಯ ಅನುಭವ.

ಆಂದೋಲನ: ದೀಪಾವಳಿಯ ಸಂದರ್ಭದಲ್ಲಿ ನಿಮ್ಮ ಆಶಯಗಳೇನು?
ರುಕ್ಷಿಣಿ ವಸಂತ್: ನಾನು ಈ ದೀಪಾವಳಿಗೆ ಬರೀ ಸಿನಿಮಾ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ. ನನಗೆ ವೃತ್ತಿಪರ ನಿರೀಕ್ಷೆ ಮತ್ತು ಕನಸುಗಳಿವೆ. ಬಘೀರ ಮತ್ತು ಭೈರತಿ ರಣಗಲ್ ಚೆನ್ನಾಗಿ ಓಡಬೇಕು, ಜನರಿಗೆ ಇಷ್ಟ ಆಗಬೇಕು; ನನ್ನ ಪಾತ್ರಗಳು, ನಾನು ಪಾತ್ರಗಳನ್ನು ನಿಭಾಯಿಸಿದ ರೀತಿ ಎಲ್ಲರಿಗೂ ಇಷ್ಟ ಆಗಬೇಕು ಅಂತ ಆಶಿಸುತ್ತೀನಿ.

ಆಂದೋಲನ: ನಮ್ಮ ಓದುಗರಿಗೆ, ಕನ್ನಡಿಗರಿಗೆ, ಈ ಸಂದರ್ಭದಲ್ಲಿ ಏನು ಹೇಳಲು ಬಯಸುತ್ತೀರಿ?
ರುಕ್ಕಿಣಿ ವಸಂತ್: ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಎಲ್ಲರೂ ಈ ಹಬ್ಬಾನ ನಿಮ್ಮ ಕುಟುಂಬದ ಜೊತೆಗೆ, ಸ್ನೇಹಿತರ ಜೊತೆಗೆ ಆಚರಿಸಿ, ಸಂಭ್ರಮಿಸಿ ಪಟಾಕಿ ಹೊಡೆಯುವುದಾದರೆ ಹುಷಾರಾಗಿ ಹೊಡೆಯಿರಿ. ಹೆಚ್ಚು ಪರಿಸರ ಮಾಲಿನ್ಯ ಆಗಲು ಅವಕಾಶ ಕೊಡಬೇಡಿ ಅಂತ ಕೇಳಿಕೊಳ್ಳುತ್ತೇನೆ.

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

15 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

18 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

18 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

18 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

19 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

19 hours ago