Andolana originals

ಉಮ್ಮತ್ತೂರು, ಸುತ್ತಲಿನ ಗ್ರಾಮಗಳ ಬಳಿ ಚಿರತೆಗಳ ಹಾವಳಿ

ಪ್ರಸಾದ್ ಲಕ್ಕೂರು

ಮೇಯುವ ಜಾನುವಾರು, ಮೇಕೆಗಳ ಮೇಲೆ ದಾಳಿ; ಜಮೀನುಗಳಿಗೆ ಹೋಗಲು ಗ್ರಾಮಸ್ಥರ ಆತಂಕ

ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ತಿಂಗಳಿನಿಂದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಉಮ್ಮತ್ತೂರು, ಲಿಂಗಣಾಪುರ, ತೊರವಳ್ಳಿ, ದೇಮಹಳ್ಳಿ, ಕುದೇರು, ದಾಸನೂರು, ಬಾಗಳಿ, ಜನ್ನೂರು, ಹಳ್ಳಿಕೆರೆಹುಂಡಿ ಗ್ರಾಮಗಳ ಜಮೀನುಗಳ ವ್ಯಾಪ್ತಿಯಲ್ಲಿ ಚಿರತೆಗಳ ಉಪಟಳ ಮಿತಿಮೀರಿದೆ. ಇದರಿಂದಾಗಿ ಈ ಗ್ರಾಮಗಳ ಜನರು ತಮ್ಮ ಜಮೀನುಗಳಿಗೆ ಹೋಗಿ ಬರಲು ಹಾಗೂ ಜಾನುವಾರುಗಳನ್ನು ಮೇಯಿಸಲು ಬರಡು ಭೂಮಿಗಳತ್ತ ತೆರಳಲು ಭಯಭೀತರಾಗಿದ್ದಾರೆ. ಉಮ್ಮತ್ತೂರು ಕೃಷ್ಣಮೃಗ ವನ್ಯಧಾಮಕ್ಕೆ ಹೊಂದಿಕೊಂಡಂತೆ ಇರುವ ಬಸವನ ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಆನೆ ಕೆಂಬರೆ (ಹಳ್ಳ)ಯಲ್ಲಿ ೩-೪ ಚಿರತೆಗಳು ವಾಸವಾಗಿವೆ. ಅವುಗಳು ಆಗಾಗ್ಗೆ ಜಮೀನುಗಳು, ಬಂಜರು ಬಿದ್ದಿರುವ ಭೂಮಿಯಲ್ಲಿ ಜಾನುವಾರುಗಳು ಮೇಯುವಾಗ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರಾತ್ರಿ ವೇಳೆ ಮತ್ತು ಬೆಳಗಿನ ಜಾವ ಈ ಗ್ರಾಮಗಳ ಜನರು ತಮ್ಮ ಪಂಪ್‌ಸೆಟ್ ನೀರಾವರಿ ಜಮೀನು ಹಾಗೂ ಮಳೆಯಾಶ್ರಿತ ಜಮೀನುಗಳಿಗೆ ಹೋಗಿ ಬರಲು ಭಯಪಡುತ್ತಿದ್ದಾರೆ. ಸಮೀಪವೇ ಇರುವ ಅರಣ್ಯವನ್ನು ಬಿಟ್ಟು ಆಹಾರ ಅರಸಿ ಅಡ್ಡಾಡುವ ಚಿರತೆಗಳು ದಾಳಿ ನಡೆಸಬಹುದೆಂಬ ಆತಂಕದಿಂದಲೇ ಓಡಾಡಬೇಕಿದೆ ಎಂದು ರೈತರಾದ ನಟೇಶ್ ಅಳಲು ತೋಡಿಕೊಂಡಿದ್ದಾರೆ.

ಕೊಟ್ಟಿಗೆಯಲ್ಲಿದ್ದ ಕರು ಹೊತ್ತೊಯ್ದ ಚಿರತೆ…” 

ಚಾ.ನಗರ: ಬುಧವಾರ ತಡರಾತ್ರಿ ಚಿರತೆಯೊಂದು ಲಿಂಗಣಾಪುರದ ಹೊರವಲಯದಲ್ಲಿರುವ ನಟೇಶ್ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳ ಪೈಕಿ ಒಂದು ಕರುವನ್ನು ಹೊತ್ತೊಯ್ದು ಪಕ್ಕದ ಪೊದೆಯಲ್ಲಿ ತಿಂದು ಹಾಕಿದೆ. ಮಂಗಳವಾರ ಸಂಜೆ ಇದೇ ಗ್ರಾಮದ ಪುಟ್ಟೇಗೌಡ ಎಂಬವರು ತಮ್ಮ ಜಮೀನಿನ ಬಳಿ ಜಾನುವಾರುಗಳು ಹಾಗೂ ಮೇಕೆಗಳನ್ನು ಮೇಯಿಸುತ್ತಿದ್ದಾಗ ಚಿರತೆಯು ೨ ಮೇಕೆಗಳನ್ನು ಎಳೆದೊಯ್ದು ತಿಂದು ಹಾಕಿದೆ. ಚಿರತೆಯ ಹಾವಳಿಯಿಂದ ನಟೇಶ್ ಮತ್ತು ಪುಟ್ಟೇಗೌಡ ಅವರು ಸಹಸ್ರಾರು ರೂ. ನಷ್ಟ ಅನುಭವಿಸಿದ್ದಾರೆ.

೨೦ ದಿನಗಳಲ್ಲಿ ೩ ಚಿರತೆಗಳು ಸೆರೆ” 

ಚಾ.ನಗರ: ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ ಕುದೇರು ಮತ್ತು ಉಮ್ಮತ್ತೂರು ಬಳಿಯ ಜಮೀನುಗಳಲ್ಲಿ ಬೋನುಗಳನ್ನು ಇರಿಸಿ ಮೇಕೆಗಳನ್ನು ಕಟ್ಟಿಹಾಕಿದ್ದರು. ೨೦ ದಿನಗಳ ಅಂತರದಲ್ಲಿ ಉಮ್ಮತ್ತೂರು-ದಾಸನೂರು ಮಾರ್ಗದ ಕ್ವಾರಿ ಸಮೀಪದ ಜಮೀನಿನ ಬಳಿ ಇಡಲಾಗಿದ್ದ ಬೋನಿಗೆ ೨ ಚಿರತೆಗಳು ಹಾಗೂ ಕಳೆದ ಶನಿವಾರ ಕುದೇರು-ತೊರವಳ್ಳಿ ರಸ್ತೆ ಬದಿಯ ಕರಿಕಲ್ಲು ಕ್ವಾರಿ ಬಳಿ ಇಟ್ಟಿದ್ದ ಬೋನಿಗೆ ಒಂದು ಚಿರತೆ ಸೆರೆಯಾಗಿದೆ.  ಇನ್ನೇನು ಚಿರತೆಗಳ ಕಾಟ ತಪ್ಪಿತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಡುತ್ತಿದ್ದಂತೆ ಬುಧವಾರ ರಾತ್ರಿ ಚಿರತೆಯೊಂದು ಕರುವೊಂದನ್ನು ಎಳೆದೊಯ್ದು ತಿಂದಿದೆ.

” ಲಿಂಗಣಾಪುರದ ಹೊರವಲಯದಲ್ಲಿ ರಾತ್ರಿ ಚಿರತೆ ದಾಳಿಗೆ ಕರು ಬಲಿಯಾಗಿರುವುದು ಗಮನಕ್ಕೆ ಬಂದಿದೆ. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಕರುವಿನ ಕಳೇಬರದ ಮರಣೋತ್ತರ ಪರೀಕ್ಷೆ ವರದಿ ಬಳಿಕ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಲಿಂಗಣಾಪುರ ಬಳಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಲಾಗುವುದು.”

-ಸಂದೀಪ್ ಕಮ್ಮಾರ್, ಪ್ರೊಬೆಷನರಿ ಎಸಿಎಫ್, ಚಾಮರಾಜನಗರ ವಲಯ

ಆಂದೋಲನ ಡೆಸ್ಕ್

Recent Posts

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ ; ವಿಪಕ್ಷಗಳ ವಿರೋಧ

ಬೆಂಗಳೂರು : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನ ಐತಿಹಾಸಿಕ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ…

5 hours ago

ಮೈಸೂರಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ

ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್ ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…

6 hours ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೆ ಅನುಮತಿ ಸುಳಿವು

ಕುನ್ಹಾ ಆಯೋಗದ ವರದಿ ಆಧರಿಸಿ ಕ್ರಮ : ಪರಮೇಶ್ವರ್ ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು…

6 hours ago

ಬಜೆಟ್‌ ದಿನಾಂಕ ಸದ್ಯದಲ್ಲೇ ನಿಗದಿ : ಸಿಎಂ

ಬೆಂಗಳೂರು : ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯದ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ…

6 hours ago

T20 World Cup : ಡಬಲ್‌ ಸೂಪರ್‌ ಓವರ್‌ : 2 ಬಾರಿ ಟೈ ಆದ ಪಂದ್ಯದಲ್ಲಿ ಹರಿಣಗಳ ಮೇಲುಗೈ

ಅಹಮದಾಬಾದ್ : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು…

7 hours ago

ಮುಂದುವರೆದ ಡ್ರಗ್ಸ್‌ ಸಮರ : ಮಾದಕ ವಸ್ತು ವಶಕ್ಕೆ ; ಐವರ ಬಂಧನ

ಮೈಸೂರು : ನಗರದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರಿಂದ…

8 hours ago